ಕನ್ನಡದ ಅನನ್ಯ ಕೈಂಕರ್ಯ ಗೈಯುತ್ತಿರುವ ತೊದಲಬಾಗಿ ಶಿಕ್ಷಕ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಕರುನಾಡು ಕನ್ನಡ ಕಲಾ ಸಿರಿ ಬಳಗ(ರಿ), ಎ.ಜಿ.ಎಸ್.ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರು ಕೊಡಮಾಡುವ “ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ” ಕನ್ನಡ ಪಂಡಿತ ಕ್ರಿಯಾಶೀಲ ಶಿಕ್ಷಕ ಶಿವಾನಂದ ಡಿ.ತೇಲಿ ಅವರಿಗೆ ಲಭಿಸಿದೆ.
ಪ್ರಶಸ್ತಿ ಪುರಸ್ಕೃತ ಶಿವಾನಂದ ತೇಲಿ ಸಮೀಪದ ತೊದಲಬಾಗಿಯ ಶ್ರೀ ಮಲ್ಲಿಕಾರ್ಜುನ ಪದವಿಪೂರ್ವ ಮಹಾವಿದ್ಯಾಲಯ (ಪ್ರೌಢಶಾಲಾ ವಿಭಾಗ) ದಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಭಾಷೆಯ ಉಳಿವನ್ನೇ ತಮ್ಮ ಉಸಿರಾಗಿಸಿಕೊಂಡು ಹಾಗೂ ಕನ್ನಡ ಶಿಕ್ಷಕರ ಪರವಾಗಿ ಹಲವಾರು ಕನ್ನಡಪರ ಅಭಿವೃದ್ಧಿ ಕೈಂಕರ್ಯಗಳನ್ನು ಗೈಯುತ್ತಾ ಬಂದಿರುವ ಇವರು ಕನ್ನಡ ಕ್ರಿಯಾಶೀಲ ಶಿಕ್ಷಕರಾಗಿ ಮಿನುಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡತನದ ಸವಿರಸಗವಳವನ್ನು ಸೃಜಿಸಿದ್ದಾರೆ. ಶಿವಾನಂದ ತೇಲಿ ಅವರು ಅನನ್ಯತೆಯಿಂದ ಸಲ್ಲಿಸಿರುವ ಅಮೋಘಯುತ ಅನುಪಮ ಸೇವೆಯನ್ನು ಸಂಘಟನೆ ಗುರುತಿಸಿ ಗೌರವಪೂರ್ವಕವಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.
ಈಚೆಗೆ ಕರುನಾಡು ಕನ್ನಡ ಕಲಾಸಿರಿ ಬಳಗ, ಎ.ಜಿ.ಎಸ್.ಚಾರಿಟೇಬಲ್ ಟ್ರಸ್ಟಿನ ನಾಲ್ಕನೇ ವರ್ಷದ ವಾಷಿ೯ಕೋತ್ಸವ ಸಮಾರಂಭದಲ್ಲಿ ಹಲ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ 2024-25 ನೇ ಸಾಲಿನ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿಗೆ ಭಾಜನರಾದ ಸಾಧಕರು ಅಭಿಮಾನದಿಂದ ಸನ್ಮಾನ, ಪ್ರಶಸ್ತಿ ಬಿನ್ನವತ್ತಳೆಯೊಂದಿಗೆ ಸ್ವೀಕರಿಸಿ ತಮ್ಮ ಕಾಯಕ ಬದ್ದತೆಗೆ ಮತ್ತಿಷ್ಟು ವಿಶೇಷತೆ ಸ್ಪರ್ಶ ಮೂಡಿಸಿದ್ದಾರೆ. ಅದರದ ಗೌರವಕ್ಕೆ ಪಾತ್ರರಾಗಿದ್ದಾರೆ. ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಆಯೋಜನೆಗೊಂಡಿದ್ದ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ, ಅಂಬರೀಷ್ ಸಿ.ಎಂ, ರಾಜ್ಯ ಗೌರವಾಧ್ಯಕ್ಷ ಡಾ, ಟಿ ಯಲ್ಲಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನಕುಮಾರ ಟಿ ಸೇರಿದಂತೆ ಪ್ರಮುಖರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಅಭಿನಂದನೆ-ಶುಭ ಹಾರೈಕೆ
ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪಡೆದಿರುವ ಶಿವಾನಂದ ತೇಲಿ ಅವರಿಗೆ ತೊದಲಬಾಗಿ ಶ್ರೀ ಮಲ್ಲಿಕಾರ್ಜುನ ಪ.ಪೂ.ಕಾಲೇಜು (ಪ್ರೌಢಶಾಲಾ ವಿಭಾಗ) ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಸಪ್ಪ ಹೆಗ್ಗೊಂಡ ಸೇರಿದಂತೆ ಸದಸ್ಯರು, ಪ್ರಾಚಾರ್ಯರಾದ ಆರ್.ಎಚ್.ಚಿನಗುಂಡಿ, ಹಿರಿಯ ಉಪನ್ಯಾಸಕರಾದ ವಿ.ಆರ್.ಸೋಲಾಪುರ, ಎಸ್.ಬಿ.ನಾಯ್ಕ್, ದೈಹಿಕ ಶಿಕ್ಷಕರಾದ ಬಿ.ಕೆ.ನೇಮಗೌಡ, ಎಸ್.ಎಂ.ಕೊಳಲಗಿ, ಸಿ.ಎಮ್.ಬರಾಡಿ, ಬಾಬುಗೌಡ ಪಾಟೀಲ, ಎಸ್.ಎ.ನಾಯಕ, ಪಿ.ವಾಯ್.ಕರಿಹೊಳಿ, ಮಹಾದೇವ ಪೂಜಾರಿ, ಎಂ.ಬಿ.ಹಿರೇಮಠ, ಧರೆಪ್ಪ ದಾನಗೌಡ, ಮಾಂತೇಶ ಸೂರಗೊಂಡ, ಶ್ರೀಮತಿ ವಿಜಯಲಕ್ಷ್ಮೀ ಪಂಚಗಾರ, ಶ್ರೀಮತಿ ರಾಧಿಕಾ ಶೇಗುಣಸಿ ಮೊದಲಾದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ

