Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ | ದೇಶದ ಇತಿಹಾಸದಲ್ಲಿಯೇ ಅಪರೂಪದ ಪ್ರಕರಣ | ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಆರೋಪ ಬೆಂಗಳೂರು: ನಟಿ ರನ್ಯಾ ರಾವ್ ಭಾಗಿಯಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣವು ದೇಶದ ಇತಿಹಾಸದಲ್ಲಿಯೇ ಅತ್ಯಂತ ಅಪರೂಪದ ಪ್ರಕರಣವಾಗಿದ್ದು, ಈ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಇಬ್ಬರು ಸಚಿವರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಸೋಮವಾರ ಹೇಳಿದ್ದಾರೆ.ದುಬೈನಿಂದ 14.80 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ರನ್ಯಾ ರಾವ್ ಅವರನ್ನು ಮಾರ್ಚ್ 3 ರಂದು ಬಂಧಿಸಿತ್ತು.ಬೆಂಗಳೂರಿನ ಸುತ್ತಲೂ ಕೇಂದ್ರೀಕೃತವಾಗಿರುವ ಈ ಪ್ರಕರಣವು ರಾಜ್ಯ ಸರ್ಕಾರದ ಪ್ರಭಾವಿ ವ್ಯಕ್ತಿಗಳ ಸುತ್ತ ಅನುಮಾನ ಹುಟ್ಟುಹಾಕಿದೆ. ಪ್ರಕರಣದಲ್ಲಿ ಇಬ್ಬರು ಸಚಿವರು ಭಾಗಿಯಾಗಿರುವ ಕುರಿತು ವರದಿಯಾಗಿದ್ದು, ಇದು ತುಂಬಾ ಕಳವಳಕಾರಿ ಬೆಳವಣಿಗೆ. ಇದು ಹವಾಲಾ ವಹಿವಾಟುಗಳಿಗೆ ಸಂಬಂಧಿಸಿದೆ ಎಂದು ತನಿಖೆ ಬಹಿರಂಗಪಡಿಸಿದೆ. ತಮ್ಮ ಬಂಧನವಾದ ವೇಳೆ ರನ್ಯಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೆಕೆಆರ್ಟಿಸಿಗೆ ಕಲ್ಯಾಣ ರಥ ಹಾಗೂ ಅಮೋಘವರ್ಷ ಬ್ರ್ಯಾಂಡಿಂಗ್ ಹಾಗೂ ವರ್ಚಸ್ಸು ಅಭಿವೃದ್ಧಿ, ಉಪಕ್ರಮಗಳಿಗಾಗಿ ೨೦೨೩-೨೪ನೇ ಸಾಲಿನ ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿ ( ನ್ಯಾಶನಲ್ ಟ್ರಾನ್ಸಫೋರ್ಟ್ ಎಕ್ಸಲೆನ್ಸ ಅವಾರ್ಡ್) ಲಭಿಸಿದೆ.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ವತಿಯಿಂದ ನವದೆಹಲಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ.ಕಿರಣ್ ಬೇಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗ, ಮುಖ್ಯ ಯಾಂತ್ರಿಕ ಶಿಲ್ಪಿ ಸಂತೋಷ್ ಗೋಗೇರಿ, ಕೆಕೆಆರ್ಟಿಸಿ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ವಿಜಯಪುರ ನಗರದಲ್ಲಿ ವಿಜಯಪುರ ಜಿಲ್ಲಾ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಮಾಡಲು ಸ್ಥಳಾವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಗ್ರೇಡ್-೨ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ ಅವರಿಗೆ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ, ನ್ಯಾಯವಾದಿ ಬಸವರಾಜ್ ಬಡದಾಳ ಮಾತನಾಡಿ, ಸಂಘದ ವತಿಯಿಂದ ಫೆಬ್ರುವರಿ ೨೩ರಂದು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಆಚರಿಸಲು ನಿರ್ಧರಿಸಲಾಗಿದೆ. ಸಮಾಜದ ಅವಿಭಾಜ್ಯ ಅಂಗವಾಗಿರುವ ಹನುಮಂತ ದೇವರು ಪೊಲೀಸ್ ಪರೇಡ ಗ್ರೌಂಡ್ ಹತ್ತಿರವಿರುವ ಗುಡಿ ಮತ್ತು ಸಮಾಜದ ಸಮುದಾಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಟ್ರಸ್ಟ್ನವರು ಕಾರ್ಯಕ್ರಮ ಮಾಡಲು ಸ್ಥಳ ಕೊಡುವುದಿಲ್ಲ ಎಂದು ನಿರ್ಧಾರ ಪ್ರಕಟಿಸಿಸಿದ್ದಾರೆ. ನಮ್ಮ ಸಮಾಜವು ಟ್ರಸ್ಟ್ ಪದಾಧಿಕಾರಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರವರಿಗೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಭಾಕರ್ ಮಂಡೋಲಿ, ಅನುಸೂಯ ಮದರಿ, ಚೇತನಕುಮಾರ್ ಮದರಿ ಸೇರಿದಂತೆ ಇನ್ನಿತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲ್ಲೂಕಿನ ಇಂಗಳಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಭು ಹೊಸಮನಿ, ಉಪಾಧ್ಯಕ್ಷರಾಗಿ ಶ್ರೀಮಂತ ಗುಂದವಾನ ಅವರು ಅವಿರೋಧ ಆಯ್ಕೆಯಾದರೆಂದು ಚುನಾವಣಾಧಿಕಾರಿ ಜಯರಾಮ ಚೌಹಾಣ ಘೋಷಿಸಿದರು.ಸೋಮವಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು.ನಿರ್ದೇಶಕರಾದ ಮಹಿಬೂಬ ಜಮಾದಾರ, ಉಮೇಶ ಚೌಹಾಣ, ಪ್ರಭು ವಾಲಿಕಾರ, ಪಾಂಡುರಂಗ ಜಾಧವ್, ವಿಠ್ಠಲ ಬನಸೋಡೆ, ಸಿದ್ದಪ್ಪ ಹಂದರಾಳ, ಶೀಲವಂತಿ ಪೂಜಾರಿ, ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಣ್ಣಪ್ಪ ಅಹಿರಸಂಗ, ಸುಭಾಸ ಥೋರಾತ, ಉಮೇಶ ಬಳಬಟ್ಟಿ, ಜಕ್ಕಪ್ಪಾ ಪೂಜಾರಿ, ಹುಸೇನಸಾಬ ಅಹಿರಸಂಗ, ಭೀಮ ಹೊಸಮನಿ, ಚಿಮ್ಮಾಜಿ ಥೋರಾತ, ಮಹಿಬೂಬ ಪಟೇಲ, ಹಸನ ಮುಜಾವರ, ವಿಠ್ಠಲ ಹೊಸಮನಿ, ಬಾಬು ಅತ್ತಾರ, ಹುಸೇನ ನರವೇ, ತುಕಾರಾಮ ಹೊಸಮನಿ, ಪುಂಡಲೀಕ ಹೊಸಮನಿ, ಸೇರಿದಂತೆ ಅನೇಕರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬಲಿಷ್ಠ ರಾಷ್ಟ್ರ ನಿರ್ಮಾಣವಾಗಬೇಕಾದರೆ ಮಹಿಳಾ ಸಬಲೀಕರಣ ಸಂಪೂರ್ಣವಾಗಿ ಸಾಧಿಸಲೇಬೇಕಾಗಿರುವ ಅನಿವಾರ್ಯತೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ಬಸಂತಿ ಮಠ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಾತೃ ಭಾರತಿ ಪರಿಷತ್ತಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅತಥಿಯಾಗಿ ಅವರು ಮಾತನಾಡಿದರು.ಮಹಿಳಾ ಸಬಲೀಕರಣವೇ ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಮಹಿಳಾ ಸಬಲೀಕರಣವನ್ನು ಸಾಧಿಸಬೇಕಾದರೆ ಮಹಿಳೆ ಮೊದಲು ಶಿಕ್ಷಣ ಪಡೆದಿರಬೇಕು. ಬಾಲ್ಯ ವಿವಾಹ, ಹೆಣ್ಣು ಶಿಶು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ ಇತ್ಯಾದಿ ಅನಿಷ್ಟ ಪದ್ಧತಿಗಳಿಗೆ ಮಹಿಳೆಯರು ಸೊಪ್ಪು ಹಾಕಬಾರದು. ಈ ರೀತಿಯ ಸಾಮಾಜಿಕ ಪಿಡುಗು ಹೆಣ್ಣಿನ ಮೇಲೆ ನಡೆಯುತ್ತಿದ್ದಲ್ಲಿ ಸಂಘಟಿತರಾಗಿ ಮಹಿಳೆಯರು ಖಂಡಿಸಬೇಕು. ಸರಕಾರ ಸದಾ ಮಹಿಳೆಯ ಮಾನ, ಪ್ರಾಣ, ಸ್ವಾಸ್ಥ್ಯ ಗಳ ರಕ್ಷಣೆ ಮಾಡುತ್ತದೆ. ಧಾರವಾಹಿ, ಚಲನಚಿತ್ರ ಇತ್ಯಾದಿ ದೃಶ್ಯ ಮಾಧ್ಯಮಗಳಲ್ಲಿ ಬರುವ ಸಮಾಜ ಘಾತಕ ವಿಷಯಗಳಿಗೆ ಮನಸ್ಸು ಉದ್ರೇಕಗೊಳ್ಳ ಬಾರದು. ನೈಜ ಜೀವನಕ್ಕೆ ಬೇಕಾದ ಉತ್ತಮ ಅಂಶಗಳ ಚಿಂತನೆ ಮನಸ್ಸಿನಲ್ಲಿ ಇರಬೇಕು.…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಮಕ್ಕಾ ಮಸೀದ ನ ಹಾಲ್ ನಲ್ಲಿ ಮಾ೧೨ ರಂದು ಸಂಜೆ ಇಫ್ತಿಯಾರ ಕೂಟವನ್ನು ಹಮ್ಮಿಕೊಳ್ಳಲಾಗಿದ್ದು ಮುಸ್ಲಿಂ ಸಮಾಜದ ಎಲ್ಲ ಬಾಂಧವರು, ಪುರಸಭೆಯ ಆಡಳಿತ ಮಂಡಳಿಯ ಸದಸ್ಯರು, ದಿ ಕರ್ನಾಟಕ ಕೋ ಅಪ್ ಬ್ಯಾಂಕಿನ ನಿರ್ದೇಶಕರುಗಳು ಹಾಗೂ ಪಟ್ಟಣದ ಎಲ್ಲ ಪ್ರಮುಖರು ಭಾಗಿಯಾಗುವಂತೆ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮನವಿ ಮಾಡಿಕೊಂಡರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಅಸ್ಕಿ ಫೌಂಡೇಶನ್ ವತಿಯಿಂದ ವಿವಿಧ ಸೇವಾ ಕಾರ್ಯವನ್ನು ಮಾಡುತ್ತಿದ್ದೇವೆ. ಕೊಣ್ಣೂರು, ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡಗಳಲ್ಲಿ ಪ್ರತೀ ವರ್ಷ ಇಫ್ತಿಯಾರ ಕೂಟವನ್ನು ಏರ್ಪಡಿಸುತ್ತ ಬಂದಿದ್ದೇವೆ. ನಾವು ಹೇಗೆ ದೇವರ ಸೇವೆ ಮಾಡುತ್ತಿದ್ದೇವೆ ಅದರಂತೆ ನಮಗೆ ಹೆಚ್ಚಿನ ಸಂಪತ್ತನ್ನು ಭಗವಂತ ಕರುಣಿಸುತ್ತಿದ್ದಾನೆ. ಹಾಗಾಗಿ ಈ ವರ್ಷವೂ ಕೂಡ ಇಫ್ತಿಯಾರ ಕೂಟವನ್ನು ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ತಿಳಿಸಿದರು.ಮೌಲಾನಾ ಅಲ್ಲಾಭಕ್ಷ ಖಾಜಿ, ಮೌಲಾನಾ ಖಾರಿ ಮೊಹಮ್ಮದ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಇಲ್ಲಿನ ಆರೂಡ ಸಂಗನ ಬಸವೇಶ್ವರ ಮಠ ಆಲಮಮೇಲ ದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಲಮೇಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಪೌರ ಕಾರ್ಮಿಕರಿಗೆ ಶ್ರೀಮಠದ ವತಿಯಿಂದ ಸತ್ಕಾರ ಕಾರ್ಯಕ್ರಮ ಹೂ ಹಣ್ಣು ಶಾಲು ಮುತ್ತನಹಾರ ನೀಡಿ ಸತ್ಕರಿಸಿಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ಕಸ್ತೂರಬಾಯಿ ಕೊಳಾರಿ ವಹಿಸಿದ್ದರು.ಡಾ|| ಮಂಜುಷಾ, ಪಾಟೀಲ ಉದ್ಘಾಟಿಸಿದರು.ಡಾII ಶಾರದಾ ರಾ.ಪಾಟೀಲ ಇಂದು ಪ್ರತಿಷ್ಠಿತ ಪುರುಷರ ಹಿಂದೆ ಓರ್ವ ತ್ಯಾಗಮಯಿ ತಾಯಿಯ ಪ್ರೀತಿ ಕರುಣೆ ಮಾರ್ಗದರ್ಶನವಿದೆ ಅವರೆಂದರೆ ಗಾಂಧೀಜಿ ಹಿಂದೆ ತಾಯಿ ಪ್ರತಳಿ ಬಾಯಿ ಶಿವಾಜಿಯ ಹಿಂದೆ ತಾಯಿ ಜೀಜಾಬಾಯಿ ಸ್ವಾಮಿ ವಿವೇಕಾನಂದರ ಹಿಂದೆ ಅವರ ತಾಯಿಯ ತ್ಯಾಗ ರಾಮಕೃಷ್ಣ ಪರಮಹಂಸರ ಹಿಂದೆ ಮಡದಿ ಶಾರದಾ ಮಾತೆಯ ಪ್ರಭಾವ ಅಷ್ಟೇ ಏಕೆ ಇಂದಿನ ದೇಶದ ಪ್ರಧಾನಿ ಹಿಂದೆ ಅವರ ತಾಯಿ ಹಿರಾ ಬೇನ್ ಅವರ ಪರಿಶ್ರಮವಿದೆ ಎಂದು ಹೇಳಿದರು. 11 ವರ್ಷದ ಮಗು ಕುಮಾರಿ ನಮ್ರತಾ ರಮೇಶ ಕತ್ತಿ ಅವರನ್ನು “ಕಾಶ್ಮೀರಕ್ಕೆ ಹೋಗಿದ್ದೆ” ಮಕ್ಕಳ ಪ್ರವಾಸ ಕಥನ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಕೇವಲ ದಲಿತರಿಂದ ಮಾತ್ರವಲ್ಲದೇ ಸರ್ವ ಸಮಾಜದ ಸರ್ವ ಜನರಿಂದ ಆಚರಿಸುವಂತಾಗಬೇಕು ಎಂಬುದು ಸಿಂದಗಿ ಜನತೆಯ ಆಶಯವಾಗಿದೆ ಎಂದು ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ವೈಭವೋಪೇರಿತವಾಗಿ ಅರ್ಥಪೂರ್ಣವಾಗಿ ಯಾರೋಬ್ಬರ ನೇತೃತ್ವದಲ್ಲಿ ಮಾಡದೇ ಸಾಮೂಹಿಕ ನಾಯಕತ್ವದಲ್ಲಿ ಆಚರಿಸಲಾಗುವುದು. ಇಲ್ಲಿ ಯಾರೊಬ್ಬರ ವೈಯಕ್ತಿಕ ಹಿತಾಸಕ್ತಿಗೆ ಮಣಿಯದೇ ಅಂಬೇಡ್ಕರ್ ಅವರ ತತ್ವ ಸಿದ್ದಾಂತಕ್ಕೆ ಮಾತ್ರ ಅವಕಾಶವಿದೆ. ಅಂಬೇಡ್ಕರ್ ಅವರ ಜಯಂತಿ ಆಚರಣೆಗಷ್ಟೇ ಸೀಮಿತವಾಗಿರದೆ ಪ್ರತಿ ಹಳ್ಳಿಗಳ ದಲಿತರ ಮತ್ತು ಸವರ್ಣಿಯರ ನಡುವಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದು ಈ ಜಯಂತಿಯ ಮೂಲ ಆಶಯವಾಗಿದೆ. ಎಲ್ಲ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜ್ಯಾತ್ಯಾತೀತವಾಗಿ, ಧರ್ಮಾತೀತವಾಗಿ ಜನರಿಗೆ ಸಂವಿಧಾನದ ಆಶಯ ತಿಳಿಸುವುದಾಗಿದೆ ಎಂದರು.ಇದೇ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತ ಸೋಮಜ್ಯಾಳ, ಶರಣು ಶಿಂಧೆ, ಚಂದ್ರಕಾಂತ ಸಿಂಗೆ ಮಾತನಾಡಿ, ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೆ ಮುನಿಕೊಂಡಿರುವ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆಯ ಪಾತ್ರ ಇದ್ದೇ ಇರುತ್ತದೆ. ಹಲವು ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕುಟುಂಬವನ್ನು ಸುಂದರವಾಗಿ ಮುನ್ನಡೆಸುವ ಶಕ್ತಿ ಮಹಿಳೆಗಿದೆ ಎಂದು ನ್ಯಾಯವಾದಿ ರಾಜಶೇಖರ ಚೌರ ಹೇಳಿದರು.ಸಿಂದಗಿ ಪಟ್ಟಣದ ಗ್ಲೋಬಲ್ ಸ್ಮಾರ್ಟ್ ಕಿಡ್ಸ್ ಪೂರ್ವ ಪ್ರಾಥಮಿಕ ಹಾಗೂ ಇಂದಿರಾಗಾಂಧಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳೆಯರಿಗಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ವಿವಿಧ ರೀತಿಯ ಚಟುವಟಿಕ ಆಟಗಳನ್ನು ಆಡಿಸಿ ಬಹುಮಾನ ವಿತರಣೆ ಮಾಡಿ ಮಾತನಾಡಿದ ಅವರು, ಕುಟುಂಬ ನಿರ್ವಹಣೆಯ ಜವಾಬ್ದಾರಿ ನಿಭಾಯಿಸುವ ಭರದಲ್ಲಿ ತಮ್ಮ ಆರೋಗ್ಯದ ಬಗ್ಗೆಯೇ ಮಹಿಳೆಯರು ನಿರ್ಲಕ್ಷಿಸುತ್ತಿದ್ದಾರೆ. ಶೇ.೭೦ರಷ್ಟು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮಹಿಳೆಯರು ಸಹ ಕುಟುಂಬ ನಿರ್ಹಣೆಯ ಜೊತೆ ಜೊತೆಗೆ ತಮ್ಮ ಆರೋಗ್ಯ ನಿಭಾಯಿಸಲು ಸಮಯ ಮೀಸಲಿಡಬೇಕು. ನಿತ್ಯ ದೈಹಿಕ ವ್ಯಾಯಾಮ ಮಾಡುವುದು, ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದರ ಬಗ್ಗೆ ಗಮನವಹಿಸಬೇಕು ಎಂದರು.ಈ ವೇಳೆ ವಿಜೇತರಾದ ಮಹಿಳೆಯರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಗುರುಮಾತೆ ರೇಖಾ ಕಟಕೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪರಸ್ಥರಿಗೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅಗಲವಾದ ಕೊಡೆಗಳನ್ನು ವಿತರಣೆ ಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದಲ್ಲಿ ಎಂ.ಸಿ.ಮನಗೂಳಿ ಪ್ರತಿಷ್ಠಾನದ ವತಿಯಿಂದ ಬೀದಿ ವ್ಯಾಪಾರಸ್ಥರಿಗೆ ಕೊಡೆಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಬಿಸಿಲಿನ ಬೇಗೆಗೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ವ್ಯಾಪಾರ ಮಾಡುವುದು ಕಷ್ಟಕರ. ಅವರ ಬವಣೆ ನೋಡಲು ಅಸಾಧ್ಯ. ಈ ಬೇಸಿಗೆಯ ಬಿಸಿಲಿನ ಬೇಗೆಯಿಂದ ಸ್ವಲ್ಪವಾದರೂ ತಡೆದುಕೊಳ್ಳಲು ನೆರಳಿನ ಅವಶ್ಯಕತೆ ಬಹಳಷ್ಟಿದೆ. ಇದನ್ನು ಮನಗಂಡು ನೆರಳಿಗಾಗಿ ಕೊಡೆಗಳನ್ನು ಬೀದಿ ಬದಿ ವ್ಯಾಪಾರ ಮಾಡುವವರಿಗೆ ವಿತರಣೆ ಮಾಡಲಾಗಿದೆ ಎಂದರು.ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಮಾತನಾಡಿ, ಶಾಸಕರು ಸಾಕಷ್ಟು ಜನಹಿತ ಕಾರ್ಯಗಳನ್ನು ರೂಪಿಸುತ್ತಿದ್ದು, ಬಡ ಜನರ ಹಿತಕಾಯುವ ಕಾರ್ಯಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸುನಂದಾ ಯಂಪೂರೆ, ಎಂ.ಎ.ಖತೀಬ, ವರ್ಷಾ ಪಾಟೀಲ, ಬಸವರಾಜ ಕಾಂಬಳೆ, ಪ್ರವೀಣ ಕಂಠಿಗೊಂಡ, ರಜತ ತಾಂಬೆ, ಶಾರದಾ ಬೇಟಗೇರಿ ಸೇರಿದಂತೆ ಪಕ್ಷದ…
