ಲೇಖನ
– ಶಶಿಕಾಂತ ಪಟ್ಟಣ
ರಾಮದುರ್ಗ
ಉದಯರಶ್ಮಿ ದಿನಪತ್ರಿಕೆ
ಗುರುತಿಸಿಕೊಳ್ಳುತ್ತೇವೆ ನಾವು
ನಮ್ಮನ್ನು ಮಂತ್ರಿ ಜೊತೆಗೆ
ಕಂತ್ರಿ ತಂತ್ರಿಗಳ ಜೊತೆಗೆ
ಹಸ್ತ ನೋಡಿ ಸುಳ್ಳು ಹೇಳುವವರ
ಮನೆ ಮುರಿಯುವ ವಾಸ್ತುಗಾರರ
ಹವನ ಹೋಮ ಯಜ್ಞದಲಿ
ಪ್ರಾಣಿ ಕೊಂದು ಸೀರೆ ಸುಡುವವರ
ಗುರುತಿಸಿಕೊಳ್ಳುತ್ತೇವೆ ನಾವು
ವಚನ ತಿದ್ದುವವರ ಜೊತೆ
ಗ್ರಂಥ ಕದಿಯುವವರ ಜೊತೆ
ಮೇಜು ಗುದ್ಧಿ ಕಿರುಚುವ
ಪ್ರವಚನಕಾರರ ಜೊತೆ
ಬುದ್ಧ ಬಸವನ ಹೆಸರು ಹೇಳಿ
ಸೋಗು ಹಾಕುವವರ ಜೊತೆ
ಗುರುತಿಸಿಕೊಳ್ಳುತ್ತೇವೆ ನಾವು
ನೆಲ ಜಲ ನುಂಗುವವರ ಜೊತೆ
ಗಣಿ ಧಣಿ ಧ್ವನಿಯ ಜೊತೆಗೆ
ಮಠ ಹರಾಜು ಹಾಕಿದವರ ಜೊತೆ
ದಲಿತರ ರಕ್ತ ಹೀರಿದವರ
ಜೊತೆ
ಗುರುತಿಸುವುದಿಲ್ಲ ಸತ್ಯ ನ್ಯಾಯದ ಜೊತೆ
ಮೌನದಿ ಮರಗುವ ಆತ್ಮದ ಜೊತೆ
