Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನವು ಕೊಡಮಾಡುವ ಉತ್ತಮ ಪುಸ್ತಕ ಪ್ರಶಸ್ತಿಗೆ ಗಗೋಚ ಖ್ಯಾತಿಯ ಸಾಹಿತಿ ಗಣಪತಿ ಗೋ ಚಲವಾದಿ ಯವರ ಕಥಾಸಂಕಲನ “ಎದ್ಯಾಗಿನ ಬ್ಯಾನಿ” ಆಯ್ಕೆಯಾಗಿದೆ. 2025ರ ಮೇ 11 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಭಾವಸಂಗಮ ಹನ್ನೊಂದನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ ಎಂದು ಪ್ರತಿಷ್ಠಾನದ ಸಂಚಾಲಕ ರಾಜೇಂದ್ರ ಪಾಟೀಲ್ ತಿಳಿಸಿದ್ದಾರೆ.
ರಚನೆ- ಸುಧಾ ಪಾಟೀಲಬೆಳಗಾವಿ ಉದಯರಶ್ಮಿ ದಿನಪತ್ರಿಕೆ ನೆನಪಾದ ಬಸವಣ್ಣಅಡಿಗಡಿಗೆಅವರಿವರ ಆಚಾರವಿಚಾರಅಜ್ಞಾನದ ಪರಮಾವಧಿಕಂಡುಎತ್ತ ಸಾಗಿದೆ ಜನರಜೀವನ ಸಿದ್ಧಾಂತವೈಚಾರಿಕ ನಿಲುವುಎಂಬ ಕಳವಳವಹೊತ್ತು ನೆನಪಾದಬಸವಣ್ಣ ಅಡಿಗಡಿಗೆ ಕಂಡ ಕಂಡಲ್ಲಿ ಮುಳುಗುವವರದೇವರ ಹೆಸರಲ್ಲಿಉಪವಾಸ ಮಾಡುವವರಅಭಿಷೇಕ ಮಾಡಿಸಿಗುಡಿಯ ಸುತ್ತುವವರಅಂಧಕಾರದ ಮನವ ಕಂಡುನೆನಪಾದ ಬಸವಣ್ಣಅಡಿಗಡಿಗೆ ತನ್ನೊಳಗಿನ ಪ್ರಜ್ವಲಿಸುವಜ್ಯೋತಿಯ ಕಾಣದೆತನ್ನ ಕೆಲಸವನ್ನು ತಾನು ಮಾಡದೆಹಗಲಿರುಳು ಜಪ ಮಾಡುವಭಂಡ ಭಕ್ತರ ನೋಡಿನೆನಪಾದ ಬಸವಣ್ಣಅಡಿಗಡಿಗೆ ಸಮಾನತೆಯ ಮೆರೆಯದೆಭೇದ -ಭಾವ ಅರಸುವವ್ಯಾಮೋಹದಲ್ಲಿ ಮಿಂದುಸ್ವಾರ್ಥಿಯಾಗುವಗೊಡ್ಡು ಸಂಪ್ರದಾಯಗಳಿಗೆಮೊರೆಹೋಗುವ ವೈದಿಕಮನಸುಗಳ ಕಂಡುನೆನಪಾದ ಬಸವಣ್ಣಅಡಿಗಡಿಗೆ
ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಈ ಪ್ರಪಂಚವೇ ಒಂದು ಅದ್ಭುತಗಳ ತವರೂರು ಈ ಭೂಮಿಯಲ್ಲಿ ಹಲವಾರು ವೈವಿಧ್ಯಮಯ ಪ್ರಾಣಿ ಪಕ್ಷಿಗಳು ಸ್ವಚ್ಛಂದವಾಗಿ ಜೀವಿಸುತ್ತಿವೆ. ಕೆಲವೊಂದು ಹೊರ ಜಗತ್ತಿನ ಪರಿಚಯಕ್ಕೆ ಬಂದರೆ ಕೆಲವೊಂದು ಪ್ರಾಣಿ ಪಕ್ಷಿಗಳು ಹಾಗೂ ಅವುಗಳ ವೈಶಿಷ್ಟ್ಯತೆಗಳು ಹೊರ ಪ್ರಪಂಚಕ್ಕೆ ಗೋಚರಿಸುವುದೇ ಇಲ್ಲ. ಅಂತಹ ಪಕ್ಷಿಗಳ ಪೈಕಿ ‘ಅನ್ನಾಸ್ ಹಮ್ಮಿಂಗ್ ಬರ್ಡ್’ ಪಕ್ಷಿಯೂ ಒಂದು. ಹಮ್ಮಿಂಗ್ ಬರ್ಡ್ ಪಕ್ಷಿಗಳ ಮೂಲ ಉತ್ತರ ಅಮೆರಿಕದ ಪಶ್ಚಿಮ ಕರಾವಳಿ ತೀರಗಳು. ಈ ಪಕ್ಷಿಗಳು ತಮ್ಮ ಸಂತಾನಾಭಿವೃದ್ಧಿಯನ್ನು ಕೇವಲ ಉತ್ತರ ಬಾಜಾ ಕ್ಯಾಲಿಫೋರ್ನಿಯಾ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಗಳಲ್ಲಷ್ಟೇ ಮಾಡುತ್ತವೆ. ‘ಅನ್ನಾಸ್ ಹಮ್ಮಿಂಗ್ ಬರ್ಡ್’ (‘ಕ್ಯಾಲಿಪ್ಟೆ ಅನ್ನಾ’) ಉತ್ತರ ಅಮೆರಿಕಾದ ಹಮ್ಮಿಂಗ್ ಬರ್ಡ್ ಜಾತಿಯಾಗಿದ್ದು, ‘ರಿವೋಲಿಯ ಡಚೆಸ್ ಅನ್ನಾ ಮಸೆನಾ’ ಅವರ ಹೆಸರನ್ನು ಈ ಪಕ್ಷಿಗೆ ಇಡಲಾಗಿದೆ.ಜೀವಿ ವರ್ಗೀಕರಣಅನ್ನಾ ಹಮ್ಮಿಂಗ್ ಬರ್ಡ್ ಬಗ್ಗೆ ಔಪಚಾರಿಕವಾಗಿ ೧೮೨೯ರಲ್ಲಿ ಫ್ರೆಂಚ್ ಪರಿಸರವಾದಿ ‘ರೆನೆ ಲೆಸನ್’…
ಎಪಿಎಂಸಿ ಕಾಮಗಾರಿ ಪರಿಶೀಲಿಸಿದ ಸಚಿವ ಶಿವಾನಂದ ಪಾಟೀಲ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದಲ್ಲಿನ ವಾಣಿಜ್ಯಿಕ ಮಳಿಗೆತ ಮೇಲೆ ಮೊದಲ ಅಂತಸ್ತಿನಲ್ಲಿ ಅಂಗಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೃಷಿ ಮಾರುಕಟ್ಟೆ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಬುಧವಾರ ಬಸವನಬಾಗೇವಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ 950 ಮೆ.ಟ. ಸಾಮರ್ಥ್ಯದ ಶೈತ್ಯಲೀಕರಣ ಸಂಗ್ರಹಾಗಾರ, 1 ಸಾವಿರ ಮೆ.ಟ. ಸಾಮರ್ಥ್ಯದ ಗೋದಾಮು, ಸಿ.ಸಿ. ರಸ್ತೆ ಕಾಮಗಾರಿ ವೀಕ್ಷಿಸಿದ ಅವರು, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯಲ್ಲಿನ ಬಸವನಬಾಗೇವಾಡಿ, ಮನಗೂಳಿ ಎಪಿಎಂಸಿ ಪ್ರಾಂಗಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸೂಚಿದರು.ಬಸವನ ಬಾಗೇವಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದಲ್ಲಿ ಈಗಾಗಲೇ ಇರುವ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ಮೊದಲ ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.ಇದಲ್ಲದೆ ಮನಗೂಳಿ ಪಟ್ಟಣದಲ್ಲಿ ರಸ್ತೆ ಬದಿ ವ್ಯಾಪ್ತಿಯಲ್ಲಿ ಮಾಡುತ್ತಿದ್ದ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸಮಾಜದ ಪ್ರತಿಯೊಬ್ಬರು ವಚನಗಳ ಸಾರ ಅರಿತು ಜೀವನದಲ್ಲಿ ಅಳವಡಿಸಿಕೊಂಡು ಕಾಯಕ ತತ್ವ ಪಾಲಿಸಿದರೆ ಬಸವಣ್ಣನವರ ಆಶಯ ಈಡೇರಿಸಿದಂತೆ ಎಂದು ಬಿಜೆಪಿ ಮುಖಂಡರಾದ ಟಿ.ಟಿ. ಹಗೇದಾಳ ಹೇಳಿದರು.ಬುಧವಾರ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ವಿಶ್ವಗುರು ಬಸವಣ್ಣನವರ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಸಮ ಸಮಾಜದ ನಿರ್ಮಾಣಕ್ಕೆ ಸಾಮಾಜಿಕ ಕ್ರಾಂತಿಯನ್ನು ನಡೆಸಿದ್ದಾರೆ. ವಚನಗಳ ಮೂಲಕ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ನೀಡಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿ ತಹಶೀಲ್ದಾರ ಎಸ್.ಎಸ್. ನಾಯಕಲಮಠ ಮಾತನಾಡಿ ಬಸವಣ್ಣನವರು ಸಮಾನತೆಯ ಹರಿಕಾರರಾಗಿ, ಮಹಾ ಮಾನವತಾವಾದಿಗಳಾಗಿ ಉತ್ತಮ ಸಮಾಜ ಕಟ್ಟಲು ತಮ್ಮ ಬದುಕಿನ ಉದ್ದಕ್ಕೂ ವಚನಗಳ ಮೂಲಕ ಜನಜಾಗೃತಿ ಕೆಲಸ ಮಾಡಿ, ಕಾಯಕದ ಮಹತ್ವವನ್ನು ಸಾರಿದ್ದಾರೆ ಎಂದು ಹೇಳಿದರು.ಶಿಕ್ಷಕ ಎನ್.ಎ. ಬನಸೋಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಜನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಪ್ಪ ಈ ಗಣಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಬಾಲಗೊಂಡ, ಸಂಗಮೇಶ ಬಿಜಾಪುರ, ಪಟ್ಟಣ ಪಂಚಾಯಿತಿ ಸದಸ್ಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾನವ ಸಂಕಟ ಮತ್ತು ದುಃಖಗಳಿಗೆ ಬಸವಣ್ಣನವರ ವಚನಗಳಲ್ಲಿ ಪರಿಹಾರ ಸಿಗುತ್ತದೆ ಎಂದು ಸಾಹಿತಿ ಮತ್ತು ಸಿಂಡಿಕೇಟ್ ಸದಸ್ಯ ಡಾ.ಎಸ್.ನಟರಾಜ ಬೂದಾಳು ಅಭಿಪ್ರಾಯಪಟ್ಟರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಮತ್ತು ವಿಶ್ವಗುರು ಶ್ರೀ ಬಸವೇಶ್ವರರ ೮೯೨ ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಚಿಂತನೆ ಮುಖ್ಯ ಉದ್ದೇಶವಾಗಿತ್ತು. ಈ ಉದಾತ್ತ ಉದ್ದೇಶವನ್ನು ಬುದ್ಧನಲ್ಲಿಯೂ ಹಾಗೂ ಡಾ. ಅಂಬೇಡ್ಕರ್ ಅವರಲ್ಲಿಯೂ ಕಾಣಬಹುದು. ಬಸವಣ್ಣ ಕೇವಲ ಶರಣನಲ್ಲ, ವ್ಯಕ್ತಿಯಲ್ಲ, ಅವರು ಒಂದು ವಿದ್ಯಮಾನ. ಅವರು ಹೆಣ್ಣು ಮಕ್ಕಳ ಧಾರ್ಮಿಕ ಕ್ಷೇತ್ರದ ನಿರಾಕರಣೆ, ಜಾತಿ-ಲಿಂಗ ಭೇದದ ವಿರುದ್ಧ ಹೋರಾಟ, ಅಸ್ಪೃಶ್ಯತೆಯ ನಿರಾಕರಣೆ ಮತ್ತು ಬಾಹ್ಯಾಚಾರದ ತಿರಸ್ಕಾರಕ್ಕೆ ಒತ್ತಡ ಕೊಟ್ಟು ಒಂದು ಶ್ರೇಷ್ಠ ಸಾಮಾಜಿಕ ಚಳವಳಿಗೆ ಉತ್ತೇಜನ ನೀಡಿದರು ಎಂದರು.ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಸಮಾಜದ ವೈದ್ಯ, ವಚನಗಳ ಲಿಖಿತ ಸಂವಿಧಾನದ ಶಿಲ್ಪಿ ಬಸವಣ್ಣ. ಸಂಕೋಲೆಗಳನ್ನು ಸೃಷ್ಟಿ ಮಾಡುವ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜಗಜ್ಜೋತಿ ಬಸವೇಶ್ವರರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯನ್ನು ಹಿಂದೂ ಮುಸ್ಲಿಂ ಎನ್ನದೇ ಸರ್ವ ಸಮಾಜದ ಬಾಂಧವರು ಭಾಗಿಯಾಗಿ ಅದ್ಧೂರಿಯಿಂದ ನಡೆಸಿದರು.ಪಟ್ಟಣದ ಕಿಲ್ಲಾಗಲ್ಲಿಯ ಹೊಸಮಠದಿಂದ ಶುರುವಾದ ಮೆರವಣಿಗೆ, ಸರಾಫ ಬಜಾರ, ದ್ಯಾಮವ್ವದೇವಿ ದೇವಸ್ಥಾನ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ರಾಘವೇಂದ್ರ ಮಠ, ವಾಲ್ಮೀಕಿ ವೃತ್ತ ಮಾರ್ಗವಾಗಿ ಸಾಗಿ ಬೊಮ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸಮಾರೋಪಗೊಂಡಿತು.ಪ್ರಮುಖರಾದ ದಾನಯ್ಯ ಹಿರೇಮಠ ಅವರು ಬಸವೇಶ್ವರಾಗಿದ್ದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ನಿವೃತ್ತ ಸೈನಿಕ ಆರ್.ಐ.ಹಿರೇಮಠ, ಪುರಸಭೆ ಸದಸ್ಯರಾದ ವಿರೇಶ ಹಡಲಗೇರಿ, ಶಿವು ಶಿವಪೂರ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪ್ರಮುಖರಾದ ರಾಜು ಕರಡ್ಡಿ, ಸಂಗಣ್ಣ ಬಿರಾದಾರ(ಜಿಟಿಸಿ), ಸುಧೀರ ನಾವದಗಿ, ಬಿ.ಎ.ಚಿನಿವಾರ ವಕೀಲರು, ಭರತ ಭೋಸಲೆ, ಡಿಎಸ್ಎಸ್ ಮುಖಂಡ ಹರೀಶ ನಾಟೆಕಾರ, ಚಂದ್ರಶೇಖರ ಶಿವಯೋಗಿಮಠ, ಜಗದೀಶ ಲಕ್ಷಟ್ಟಿ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಅಗಸಬಾಳ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ವೃತ್ತದಲ್ಲಿ ಕಟ್ಟಿದ್ದ ನೀಲಿ ಧ್ವಜವನ್ನು ಕಿತ್ತು ಗಲೀಜು ಸ್ಥಳದಲ್ಲಿ ಎಸೆದು ಅಪಮಾನ ಮಾಡಿದ್ದು ತಪ್ಪಿತಸ್ಥರ ಮೇಲೆ ರಾಜ್ಯದಿಂದ ಗಡಿಪಾರು ಮಾಡುವ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಡಿಎಸ್ಎಸ್ ಮುಖಂಡ ಬಸವರಾಜ ಸಿದ್ದಾಪೂರ ಆಗ್ರಹಿಸಿದರು.ವೃತ್ತದ ಬಳಿ ನಿಂತು ಘಟನೆಯನ್ನು ಖಂಡಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಜಯಂತಿಯ ತಿಂಗಳು ಇನ್ನೂ ಮುಗಿದಿಲ್ಲ. ಈ ವೇಳೆ ಇಂತಹ ಕೃತ್ಯ ಎಸಗಿ ಅಪಮಾನ ಮಾಡಿದ್ದು ಈ ಬಗ್ಗೆ ಪೊಲೀಸರು ವಿಶೇಶ ಕಾಳಜಿವಹಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದರು.ಈ ವೇಳೆ ರಮೇಶ ದೊಡಮನಿ, ಶಿವಪುತ್ರ ಪೂಜಾರಿ, ಹಣಮಂತ ಅಬ್ಬಿಹಾಳ, ದುರಗಪ್ಪ ಮಾದರ, ದುರಗಪ್ಪ ಕವಡಿಮಟ್ಟಿ, ಕುಂಟಪ್ಪ ಜೋಗಿನ, ರಾಮಪ್ಪ ಕವಡಿಮಟ್ಟಿ, ಪರಶುರಾಮ ಫಿರಂಗಿ, ಮುದಕಪ್ಪ ಫಿರಂಗಿ, ರಾಮಪ್ಪ ಕವಡಿಮಟ್ಟಿ, ಹಣಮಂತ ಕವಡಿಮಟ್ಟಿ ಸೇರಿದಂತೆ ಮತ್ತೀತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವವೊಂದು ಪಟ್ಟಣದ ಕುಂಟೋಜಿ ರಸ್ತೆಯ ಬಳಿಯ ಬಸವ ಇಟರ್ನ್ಯಾಶನಲ್ ಶಾಲೆಯ ಬಳಿ ಪತ್ತೆಯಾಗಿದೆ.ಮೃತ ದುರ್ದೈವಿಯನ್ನು ಶಿವಪ್ಪ ಆರೇಶಂಕರ(೪೫) ಎಂದು ಗುರುತಿಸಲಾಗಿದೆ. ಮೃತರು ಹೆಸ್ಕಾಂ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದು ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಾಯಿ, ಪತ್ನಿ, ಪುತ್ರ, ಈರ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ಐ ಸಂಜಯ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಏ೨೮ ರಂದು ಈತ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಅಂಕಿ ಸಂಖ್ಯೆಗಳ ಆಧಾರದಿಂದ ರೂಪಾಯಿಗೆ ೮೦ ರೂಪಾಯಿ ಕೊಡುವ ಕರಾರಿನ ಮೇಲೆ ಓಸಿ ಮಟಗಾ ಜೂಜಾಟವಾಡುತ್ತಿದ್ದ ಪಟ್ಟಣದ ಗೊಲ್ಲರ ಓಣಿಯ ರಾಮಣ್ಣ ಕೂಡಗಿ ಮೇಲೆ ಇಲ್ಲಿನ ಪಿಎಸ್ಐ ಸಂಜಯ ತಿಪರೆಡ್ಡಿ ಪ್ರಕರಣ ದಾಖಲಿಸಿ ಈತನಿಂದ ಕೆಲವಷ್ಟು ಹಣ, ಓಸಿ ಚೀಟಿ ಮತ್ತು ಬಾಲಪೆನ್ನನ್ನು ಜಪ್ತುಪಡಿಸಿಕೊಂಡಿದ್ದಾರೆ.
