Author: editor.udayarashmi@gmail.com

ಆಲಮೇಲ ಪಪಂ ಸಾಮಾನ್ಯ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಪ್ರಶ್ನೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಅಭಿವೃದ್ದಿಗೆ ಮಂಜುರಾಗಿರುವ ಅನುದಾನ ಸಮಯಕ್ಕೆ ಸರಿಯಾಗಿ ಬಳಕೆ ಮಾಡಿಕೊಳ್ಳದಿದ್ದರೆ ಅಭಿವೃದ್ದಿ ಆಗಲು ಹೇಗೆ ಸಾದ್ಯ? ಎಂದು ಶಾಸಕ ಅಶೋಕ ಮನಗೂಳಿ ಪ.ಪಂ ಮುಖ್ಯಾಧಿಕಾರಿ, ಅಧ್ಯಕ್ಷ ಸದಸ್ಯರೆಲ್ಲರನ್ನು ತರಾಟೆಗೆ ತಗೆದುಕೊಂಡರು.ಸೋಮವಾರ ಆಲಮೇಲ ಪಟ್ಟಣ ಪಂಚಾಯಿತಿ ೨೦೧೮-೧೯ನೇ ಸಾಲಿನ ಎಸ್‌ಎಪ್‌ಸಿ ವಿಶೇಷ ಅನುದಾನದ ಕಾಮಗಾರಿ ಪ್ರಗತಿ ಕುರಿತು ಚರ್ಚಿಸಲು ಕರೆದಿರುವ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ ಹೇಳಿದರು.ಪಟ್ಟಣದ ಅಭಿವೃದ್ದಿಗೆ ೨೦೧೮-೧೯ನೇ ಸಾಲಿನ ಎಸ್‌ಎಪ್‌ಸಿ ವಿಶೇಷ ಅನುದಾನದ ಕಾಮಗಾರಿಗಳು ಬಹುದಿನಗಳಿಂದ ನೆನಗುದಿಗೆ ಬಿದ್ದಿವೆ ಪ್ರಗತಿಯಲ್ಲಿರುವ ಕಾಮಗಾರಿಗಳು ಒಂದು ತಿಂಗಳಲ್ಲಿ ಪೂರ್ಣಗೊಳಿಸಿ ಇನ್ನು ಬಹುತೇಕ ಕಾಮಗಾರಿಗಳು ಪ್ರಾರಂಭವೇ ಆಗಿಲ್ಲ. ಒಂದು ವಾರ ಕಾಲಾವಕಾಶದಲ್ಲಿ ಕಾಮಗಾರಿ ಪ್ರಾರಂಭಿಸದಿದ್ದರೆ ಕಾಮಗಾರಿ ರದ್ದುಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಹಳೆಯ ಠರಾವು ಪೂರ್ಣಗೊಳಿಸದೆ ಹೊಸದಾಗಿ ಸಾಮಾನ್ಯ ಸಭೆ ಕರೆದಿರುವುದು ಮತ್ತು ಪ್ರಸ್ತುತ ಬೇಸಿಗೆಯಲ್ಲಿ ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ಯಾವ ಮೂಲಗಳು ಅವಲಂಬಿಸಿದ್ದೀರಿ ಎಂದು ಕೇಳಿದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೆಹಲಿ ಕಾಶ್ಮೀರ ಗೇಟ್ ಬಳಿ ಇದ್ದ ಶ್ರೀ ವೀರಮಹಾರಾಣಾ ಪ್ರತಾಪ್‌ಸಿಂಹ ಅವರ ಪುಸ್ಥ್ತಳಿಯನ್ನು ದುಷ್ಕರ್ಮಿಗಳು ವಿಕೃತಗೊಳಿಸಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸಿ ಜಿಲ್ಲಾ ರಜಪೂತ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆನ್ನೂರ ಮೂಲಕ ದೆಹಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಪರಶುರಾಮಸಿಂಗ್ ರಜಪೂತ ಮಾತನಾಡಿ, ದೆಹಲಿಯಲ್ಲಿ ಇದ್ದ ಶ್ರೀ ವೀರ ಮಹಾರಾಣಾ ಪ್ರತಾಪಸಿಂಹ ಪುತ್ಥಳಿ ವಿಕೃತಗೊಳಿಸಿದ್ದು ಖಂಡನೀಯ. ಅಲ್ಲಿ ಪುತ್ಥಳಿಯನ್ನು ಪುನಃ ಸ್ಥಾಪಿಸಬೇಕು. ಹಾಗೂ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಹತ್ತಿರವಿರುವ ವೀರ ಮಹಾರಾಣಾ ಪ್ರತಾಪಸಿಂಹ ಪುತ್ಥಳಿ ಸುರಕ್ಷತೆಗೆ ಸಿ.ಸಿ. ಕ್ಯಾಮೆರಾ ಅಳವಡಿಸಬೇಕುಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರಮೇಶಸಿಂಗ್ ಹಜೇರಿ, ದಿಲೀಪ್ ಹಜೇರಿ, ಸಿದ್ದುಸಿಂಗ ರಜಪೂತ, ಪ್ರಶಾಂತ್ ತೇಲಿ, ಪ್ರತಾಪಸಿಂಗ ರಜಪೂತ, ಎಸ್ ಆರ್ ಹಜೇರಿ, ಸುನಿಲಸಿಂಗ ಸಾದಿವಾಲೆ ಮತ್ತಿತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಗೌರವಧನ ಆಧಾರದ ಮೇಲೆ ಅತಿಥಿ ಸಹಾಯಕ ಗ್ರಂಥಪಾಲಕರು ( Guest Assistant Librarian)) (ತಾತ್ಕಾಲಿಕ) ಹಾಗೂ ಅತಿಥಿ ಗ್ರಂಥಾಲಯ ಸಹಾಯಕರು ((Library Assistant))(ತಾತ್ಕಾಲಿಕ) ಹುದ್ದೆಗೆ ಇದೇ ೨೯ ರಂದು ಬೆಳಿಗ್ಗೆ ೧೧:೩೦ ಗಂಟೆಗೆ ನೇರ ಸಂದರ್ಶನ ಏರ್ಪಡಿಸಲಾಗಿತ್ತು, ಕಾರಣಾಂತರದಿAದ ಸದರಿ ಸಂದರ್ಶನವನ್ನು ಮುಂದೂಡಲಾಗಿದೆ. ಸಂದರ್ಶನದ ದಿನಾಂಕ ಮತ್ತು ಸಮಯವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಅಣ್ಣ ಬಸವಣ್ಣನವರ ಚಿಂತನೆಗಳು ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿಯಲ್ಲಿ ವಿಶ್ವರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಮಾಡಿ ಅವರು ಮಾತನಾಡಿದರು.ಅಂಬೇಡ್ಕರ್ ಮತ್ತು ಬಸವಣ್ಣನರು ಅಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತರಾಗಿದ್ದಾರೆ. ಮಹನೀಯರ ಚಿಂತನೆಗಳನ್ನು ನಾವೇಲ್ಲರೂ ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಎಲ್ಲರೂ ಭವ್ಯ ಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಬಸವಣ್ಣ ಮತ್ತು ಬಸವಾದಿ ಶರಣರು ಜಗತ್ತಿನ ಪ್ರಥಮ ಸಂಸತ್ತು ಅನುಭವ ಮಂಟಪ ಸ್ಥಾಪಿಸಿ ಮಾನವೀಯತೆ ಮತ್ತು ಸಮಾನತೆ ಸಾರಿದರು. ಅಲ್ಲದೇ, ಅಸ್ಪಷ್ಯತೆ, ಮೂಢನಂಬಿಕೆ, ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಶ್ರಮಿಸಿದರು. ಅಂದು ತಮ್ಮ ಚಿಂತನೆಗಳನ್ನು ಕನ್ನಡ ಭಾಷೆಯಲ್ಲಿ ವಚನಗಳ ಮೂಲಕ ಜನರಿಗೆ ಮನದಟ್ಟು…

Read More

ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ ಜಾಕವಲ್ ನಿಂದ ನೀರು ಹರಿಸಲು ಅಡ್ಡಪಡಿಸುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯ ಮೂಲಕ ತಿಕೋಟಾ ಭಾಗಕ್ಕೆ ನೀರು ಪೂರೈಸಬೇಕು, ಜಾಕವಲ್ ನಿಂದ ನೀರು ಹರಿಸಲು ಪದೇ ಪದೇ ಅಡ್ಡಪಡಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಪವಾಸ ಸತ್ಯಗ್ರಹ ಸೇರಿದಂತೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.ತಿಕೋಟಾ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಿದ ರೈತರು ತುಬಚಿ-ಬಬಲೇಶ್ವರ ಜಾಕವೆಲ್ ನಿಂದ ನೀರು ಬಿಡುಗಡೆಗೆ ಅಡ್ಡಿಪಡಿಸಿದ ರೈತರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡ ರೈತ ಮುಖಂಡ ಯಾಕೂಬ್ ಜತ್ತಿ, ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯಲ್ಲಿ ನಮಗೆ ಹಂಚಿಕೆಯಾದ ನಮ್ಮ ಪಾಲಿನ ಹಕ್ಕನ್ನು ಕೇಳುತ್ತಿದ್ದೇವೆ ಹೊರತು ಭಿಕ್ಷೆಯನ್ನು ಬೇಡುತ್ತಿಲ್ಲ. ಆದರೆ, ಜಮಖಂಡಿ ತಾಲೂಕಿನ ಕೆಲವು ದುಷ್ಟಶಕ್ತಿಗಳು ಈ ಭಾಗಕ್ಕೆ ನೀರು ಹರಿಸದಂತೆ ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ. ಇಂಥ ದುಷ್ಟ ಶಕ್ತಿಗಳು ಜಮಖಂಡಿ, ಅಥಣಿ ಹಾಗೂ…

Read More

ರಚನೆ- ಡಾ.ಶಶಿಕಾಂತ ಪಟ್ಟಣಪುಣೆ ಉದಯರಶ್ಮಿ ದಿನಪತ್ರಿಕೆ ಚೆಂದುಳ್ಳ ಚೆಲುವೆಯಅಂದುಳ್ಳ ಮುಖದಾಗಹಾಲ ಚೆಲ್ಲುವ ಚೆಲುವಮೂಡಿ ಬರುವ . ಬೆಳ್ಳಿಯ ಬಿಂದಿಗಿಹುಣ್ಣಿಮೆಯ ತಂಬಿಗಿಬೆಣ್ಣಿ ತುಂಬಿದ ಮೋಡಚದುರಿದವು ಮುಗಿಲಾಗ ಪಡುವಲ ದಿಕ್ಕಿಗೆಸೂರ್ಯನು ಮುಳಗ್ಯಾನಹಕ್ಕಿ ಪಕ್ಷಿಗಳುಗೂಡೊಳಗ ಮಲಗ್ಯಾವ ಚುಕ್ಕಿ ತಾರೆಯರೆಲ್ಲತವರಿಗೆ ಹೋಗ್ಯಾರಕತ್ತಲ ಕಡೆಗಣಿಸಿಚೆಂದಿರನು ಬಂದಾನ ಹಸಿರು ಭೂಸಿರಿಯುಸೂಸುವಾ ತಂಗಾಳಿಕನಸುಗಳ ಖನಿಜಬಿಚ್ಯಾವೋ ಎದೆಯಾಗ ಬಿಳಿ ಸೀರಿ ಬಾಲೆಯರುಆರತಿ ಎತ್ತ್ಯಾರೋಸೋಬಾನ ಹಾಡ್ಯಾರೋಶರಣರ ನೆನೆಯುತ ಚೆಂದುಳ್ಳ ಚೆಲುವೆಯಅಂದುಳ್ಳ ಮುಖದಾಗಹಾಲ ಚೆಲ್ಲುವ ಚೆಲುವಮೂಡಿ ಬರುವ

Read More

ಲೇಖನ- ಜಯಶ್ರೀ .ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬದುಕು ಬದಲಾಗುತ್ತಲೇ ಇರುತ್ತದೆ ನಿನ್ನೆಯಂತೆ ಇಂದು ಇಲ್ಲ. ಇಂದಿನಂತೆ ನಾಳೆ ಇರುವುದಿಲ್ಲ. ನಮಗೆ ಇಷ್ಟವಿರಲಿ ಬಿಡಲಿ ಅದು ಬದಲಾಗುತ್ತಲೇ ಇರುತ್ತದೆ. ನಮ್ಮ ಭಾವ ಬಂಧ ಸಂಬಂಧಗಳು ಬದಲಾಗುತ್ತಲೇ ಇರುತ್ತವೆ. ಬದುಕಲು ಬೇಕಾಗಿರುವುದು ಉತ್ತಮ ಆರೋಗ್ಯ, ತಲೆ ಮೇಲೊಂದು ಸೂರು, ತುಂಬಿದ ಜೇಬು. ಇವೆಲ್ಲ ಇದ್ದರೂ ಒಂದಿಷ್ಟು ಪ್ರೀತಿ ತುಂಬುವ ಜೀವವೊಂದು ಜತೆಗೆ ಇರದಿದ್ದರೆ, ಇವೆಲ್ಲವು ಇದ್ದೂ ಉಪಯೋಗವಿಲ್ಲ. ಕೋಟಿ ಕೋಟಿ ರೂಪಾಯಿ, ಅಪರೂಪದ ರೂಪ ಕೊಡದ ಆನಂದ ಒಂದು ಹಿಡಿ ಪ್ರೀತಿ ನೀಡಬಲ್ಲದು. ಮನದೊಡಲಲ್ಲಿ ಸಂತಸ ಸಂತೃಪ್ತಿ ತುಂಬಬಲ್ಲದು. ಪ್ರೀತಿಸುವ ಜೀವಗಳು ಜತೆಗಿದ್ದರೆ ಜತೆಗೆ ಆನಂದದ ಸಾಗರವೇ ಇದ್ದಂತೆ. ಸೊಗಸಿಗೆ ನೆಲೆಯಿದ್ದಂತೆ. ಸಿಹಿಗೆ ಸವಿಯಿದ್ದಂತೆ ಚೆಂದದ ಚೆಲುವೆಗೆ ಚೆಲುವಿದ್ದಂತೆ.ಜೀವನವೆಂಬುದು ನಿತ್ಯ ನೂತನ. ಕಣ್ಮನ ಸೆಳೆಯುವ ನಿಸರ್ಗ, ನದಿವನಗಳ ಸುಂದರ ವಿಹಂಗಮ ನೋಟ ಪ್ರಕೃತಿಯಲ್ಲಿಯ ಪ್ರತಿಯೊಂದನ್ನು ಖುಷಿಯಿಂದ ನೋಡಲು, ಆಸ್ವಾದಿಸಲು ಸಾಧ್ಯವಾಗುವುದು ಮನದಲ್ಲಿ ಪ್ರೀತಿಯ ಮಡಿಲು ಭರಪೂರ ತುಂಬಿದಾಗ ಮಾತ್ರ. ಪ್ರೀತಿಯ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಅಭಿವೃದ್ದಿ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ವ್ಯಕ್ತಿಯ ವೈಯಕ್ತಿಕ, ಕೌಟುಂಬಿಕ, ಮತ್ತು ಸಾಮಾಜಿಕ ಜೀವನ ಸಾಧಾರಣದಿಂದ ಅಸಾಧಾರಣ ಮಟ್ಟಕ್ಕೆ ಕೊಂಡೆೊಯುತ್ತಿದೆ. ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಹಳಗುಣಕಿ ಗ್ರಾಮದ ಸರಕಾರಿ ಕರ್ನಾಟಕ ಪಬ್ಲಿಕ ಶಾಲೆ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಶಾಲೆಯಲ್ಲಿ ಒಂದನೆಯ ತರಗತಿಯಿಂದ ಹನ್ನೆರಡನೆಯ ತರಗತಿ ವರೆಗೆ ಇಂಗ್ಲೀಷ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವದು ಎಂದರು.ಶೈಕ್ಷಣಿಕ ಅಭಿವೃದ್ದಿ ಮಾಡುವ ಉದ್ದೇಶದಿಂದ ಹಳಗುಣಕಿ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆ ಹಾಗೂ ವಸತಿ ನಿಲಯ ಅತ್ಯಂತ ಗುಣಮಟ್ಟದಾಗಿದೆ. ಈ ಹಿಂದೆ ಡಾ.ಬಿ.ಆರ್ ಅಂಬೇಡ್ಕರವರ ಪ್ರತಿಮೆ ಆನಾವರಣಗೊಳಿಸಿ ಅನೇಕ ಸಚಿವರನ್ನು ಕರೆಯಿಸಿ ಈ ಭಾಗದ ಜ್ವಲಂತ ಸಮಸ್ಯಗಳನ್ನು ಮನವರಿಕೆ ಮಾಡಲಾಗಿದೆ. ಇಂಡಿ ಪಟ್ಟಣದಲ್ಲಿ ಶೈಕ್ಷಣಿಕ ಕಾಶಿ ಮಾಡಿ ಈ ಭಾಗದ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.ಅಭಿನವ ಸಿದ್ದಾರೂಢ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ಸುಂಗಟ್ಯಾಳ ಗುರುಗಳು ಮಾತನಾಡಿದರು.ಶಾಲೆ ಮುಖ್ಯಗುರು ಆರ್.ಆರ್ ಬಗಲಿ, ಗ್ರಾ.ಪಂ ಅಧ್ಯಕ್ಷ ಸಿದರಾಯಗೌಡ ಬಿರಾದಾರ, ಉಪಾಧ್ಯಕ್ಷೆ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಿಕೋಟಾ ನೂತನ ಕಲಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಸಂತೋಷ ಬಿ.ನವಲಗುಂದ ಅವರು ರಚಿಸಿದ “ಮುಂಜಾನೆಗೊಂದು ಚೈತನ್ಯ ಬಿಂದು'(ಚಿಂತನಗಳ ವಿಚಾರ ಲಹರಿ) ಎಂಬ ಕಿರು ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ, ಸಮ್ಮೇಳನದ ಸರ್ವಾಧ್ಯಕ್ಷ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ವಿರಕ್ತಮಠ ತಿಕೋಟಾ, ಹಿರೇಮಠದ ಶಿವಬಸವ ಶಿವಾಚಾರ್ಯ ಮಹಾಸ್ವಾಮಿಗಳು ತಿಕೋಟಾ, ಹೊನವಾಡದ ಬಾಬುರಾವ ಮಹಾರಾಜರು, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ತಿಕೋಟಾ ತಾಲೂಕು ಕಸಾಪ ಅಧ್ಯಕ್ಷ ಸಿದ್ದರಾಮಯ್ಯ ಲಕ್ಕುಂಡಿಮಠ, ತಹಸೀಲ್ದಾರ್ ಸುರೇಶ ಚವಲರ, ಮುಖಂಡರಾದ ಬಸಯ್ಯ ವಿಭೂತಿ, ಆರ್.ಬಿ.ದೇಸಾಯಿ, ಸೋಮಶೇಖರ ಜತ್ತಿ, ಅಡಿವೆಪ್ಪ ಸಾಲಗಲ್, ಕೆಪಿಸಿಸಿ ಸದಸ್ಯ ಪೀರ್ ಪಟೇಲ್, ಮಾಜಿ ಜಿಪಂ ಸದಸ್ಯೆ ಶೋಭಾ ಹುಲ್ಯಾಳ, ಮಾಜಿ ಪಿಕೆಪಿಎಸ್ ಅಧ್ಯಕ್ಷೆ ಭಾಗೀರಥಿ ತೇಲಿ, ಆರ್.ಜಿ.ಯರನಾಳ, ವಿಜುಗೌಡ ಪಾಟೀಲ, ಎಸ್.ಪಿ.ಪಾಟೀಲ, ಗ್ರಾಮದ ಮುಖಂಡರು, ಕಸಾಪದ ಪದಾಧಿಕಾರಿಗಳು ಇದ್ದರು. ಕನ್ನಡಾಭಿಮಾನಿಗಳು, ಶಾಲಾ ಕಾಲೇಜು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಿಕೋಟಾ ನೂತನ ಕಲಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಸಂತೋಷ ಬಿ.ನವಲಗುಂದ ಅವರು ರಚಿಸಿದ “ಮುಂಜಾನೆಗೊಂದು ಚೈತನ್ಯ ಬಿಂದು'(ಚಿಂತನಗಳ ವಿಚಾರ ಲಹರಿ) ಎಂಬ ಕಿರು ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ, ಸಮ್ಮೇಳನದ ಸರ್ವಾಧ್ಯಕ್ಷ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ವಿರಕ್ತಮಠ ತಿಕೋಟಾ, ಹಿರೇಮಠದ ಶಿವಬಸವ ಶಿವಾಚಾರ್ಯ ಮಹಾಸ್ವಾಮಿಗಳು ತಿಕೋಟಾ, ಹೊನವಾಡದ ಬಾಬುರಾವ ಮಹಾರಾಜರು, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ತಿಕೋಟಾ ತಾಲೂಕು ಕಸಾಪ ಅಧ್ಯಕ್ಷ ಸಿದ್ದರಾಮಯ್ಯ ಲಕ್ಕುಂಡಿಮಠ, ತಹಸೀಲ್ದಾರ್ ಸುರೇಶ ಚವಲರ, ಮುಖಂಡರಾದ ಬಸಯ್ಯ ವಿಭೂತಿ, ಆರ್.ಬಿ.ದೇಸಾಯಿ, ಸೋಮಶೇಖರ ಜತ್ತಿ, ಅಡಿವೆಪ್ಪ ಸಾಲಗಲ್, ಕೆಪಿಸಿಸಿ ಸದಸ್ಯ ಪೀರ್ ಪಟೇಲ್, ಮಾಜಿ ಜಿಪಂ ಸದಸ್ಯೆ ಶೋಭಾ ಹುಲ್ಯಾಳ, ಮಾಜಿ ಪಿಕೆಪಿಎಸ್ ಅಧ್ಯಕ್ಷೆ ಭಾಗೀರಥಿ ತೇಲಿ, ಆರ್.ಜಿ.ಯರನಾಳ, ವಿಜುಗೌಡ ಪಾಟೀಲ, ಎಸ್.ಪಿ.ಪಾಟೀಲ, ಗ್ರಾಮದ ಮುಖಂಡರು, ಕಸಾಪದ ಪದಾಧಿಕಾರಿಗಳು ಇದ್ದರು. ಕನ್ನಡಾಭಿಮಾನಿಗಳು, ಶಾಲಾ ಕಾಲೇಜು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Read More