ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಅಗಸಬಾಳ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ವೃತ್ತದಲ್ಲಿ ಕಟ್ಟಿದ್ದ ನೀಲಿ ಧ್ವಜವನ್ನು ಕಿತ್ತು ಗಲೀಜು ಸ್ಥಳದಲ್ಲಿ ಎಸೆದು ಅಪಮಾನ ಮಾಡಿದ್ದು ತಪ್ಪಿತಸ್ಥರ ಮೇಲೆ ರಾಜ್ಯದಿಂದ ಗಡಿಪಾರು ಮಾಡುವ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಡಿಎಸ್ಎಸ್ ಮುಖಂಡ ಬಸವರಾಜ ಸಿದ್ದಾಪೂರ ಆಗ್ರಹಿಸಿದರು.
ವೃತ್ತದ ಬಳಿ ನಿಂತು ಘಟನೆಯನ್ನು ಖಂಡಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಜಯಂತಿಯ ತಿಂಗಳು ಇನ್ನೂ ಮುಗಿದಿಲ್ಲ. ಈ ವೇಳೆ ಇಂತಹ ಕೃತ್ಯ ಎಸಗಿ ಅಪಮಾನ ಮಾಡಿದ್ದು ಈ ಬಗ್ಗೆ ಪೊಲೀಸರು ವಿಶೇಶ ಕಾಳಜಿವಹಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದರು.
ಈ ವೇಳೆ ರಮೇಶ ದೊಡಮನಿ, ಶಿವಪುತ್ರ ಪೂಜಾರಿ, ಹಣಮಂತ ಅಬ್ಬಿಹಾಳ, ದುರಗಪ್ಪ ಮಾದರ, ದುರಗಪ್ಪ ಕವಡಿಮಟ್ಟಿ, ಕುಂಟಪ್ಪ ಜೋಗಿನ, ರಾಮಪ್ಪ ಕವಡಿಮಟ್ಟಿ, ಪರಶುರಾಮ ಫಿರಂಗಿ, ಮುದಕಪ್ಪ ಫಿರಂಗಿ, ರಾಮಪ್ಪ ಕವಡಿಮಟ್ಟಿ, ಹಣಮಂತ ಕವಡಿಮಟ್ಟಿ ಸೇರಿದಂತೆ ಮತ್ತೀತರರು ಇದ್ದರು.

