Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಹಿಪ್ಪರಗಿ ಗ್ರಾಮದ ಪೂಜ್ಯಶ್ರೀ ಡಾ.ಸಿದ್ಧರಾಮ ಶಿವಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿ, ಕುಮಾರಿ ಆರಾಧ್ಯಾ ಸಿದ್ದು ಗಾಳಿ ಇವಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಶೇ 97 ಅಂಕ ಪಡೆದು ರಾಜ್ಯಕ್ಕೆ ಎರಡನೇಯ ರ್ಯಾಂಕ ಪಡೆದು ಹಿಪ್ಪರಗಿ ಗ್ರಾಮಕ್ಕೆ ಹಾಗೂ ಶಾಲೆಗೆ ಕೀರ್ತಿ ತಂದಿರುತ್ತಾಳೆ.ಸಂಸ್ಥೆಯ ಅಧ್ಯಕ್ಷ ಬಸವರಾಜ ಮ. ಕುಲ್ಹಳ್ಳಿ ಹಾಗೂ ಆಢಳಿತ ಮಂಡಳಿಯ ಸದಸ್ಯರು, ಮುಖ್ಯಗುರುಗಳು ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿರುತ್ತಾರೆ.
ಹಿಂದು-ಮುಸ್ಲಿಂ ಸಮಾಜದ ಧರ್ಮಗುರುಗಳ ಸಮ್ಮುಖದಲ್ಲಿ ರಂಜಾನ ಹಬ್ಬದ ಪ್ರಯುಕ್ತ ಮುಸ್ಲಿಂ ಸಮಾಜದ ಕುಟುಂಬಗಳಿಗೆ ದಿನಸಿ ಮತ್ತು ನಗದು ಸಹಾಯ ಉದಯರಶ್ಮಿ ದಿನಪತ್ರಿಕೆ ವರದಿ: ಚೇತನ ಶಿವಶಿಂಪಿಮುದ್ದೇಬಿಹಾಳ: ೩೦ ಫೂಟಿನ ರಸ್ತೆ. ಅಲ್ಲಿ ಚಿಕ್ಕದೊಂದು ಪೆಂಡಾಲ್. ಎದುರಿಗೆ ವೇದಿಕೆ. ವೇದಿಕೆಯ ಸಾನಿಧ್ಯ ವಹಿಸಿಕೊಂಡವರು ಹಿಂದು-ಮುಸ್ಲಿಂ ಸಮಾಜದ ಸ್ವಾಮೀಜಿಗಳು. ಅತಿಥಿಗಳಾಗಿದ್ದವರಲ್ಲೊಬ್ಬರು ವಕೀಲರು ಮತ್ತು ಇನ್ನೀತರರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯ ವ್ಯಕ್ತಿಗಳು. ಮುಂಭಾಗದಲ್ಲಿ ಅಂದಾಜು ೬೦೦ ಕ್ಕೂ ಹೆಚ್ಚು ಜನ ಬಡ ಮುಸ್ಲಿಂ ಸಮಾಜದ ಮಹಿಳೆಯರು. ಅಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿತ್ತು ಪವಿತ್ರ ರಂಜಾನ ಹಬ್ಬ.ಇಂಥದ್ದೊಂದು ಸೌಹಾರ್ಧಯುತ, ಬಡ ಜನರ ಸೇವೆಯ ಕಾರ್ಯಕ್ರಮ ನಡೆದಿದ್ದು ಇಲ್ಲಿನ ಹುಡಕೋ ಬಡಾವಣೆಯಲ್ಲಿ. ಈ ಕಾರ್ಯಕ್ರಮದ ರುವಾರಿ ಸಮಾಜ ಸೇವಕ ಅಯೂಬ ಮನಿಯಾರ. ರಂಜಾನ ಹಬ್ಬವನ್ನು ನಾನೊಬ್ಬನೇ ಆಚರಿಸಿದರೆ ಸಾಲದು ನನ್ನ ಜೊತೆಗೆ ಎಲ್ಲ ಬಡವರೂ ಹಬ್ಬವನ್ನು ಖುಷಿಯಾಗಿ ಆಚರಿಸಬೇಕು ಎಂದು ಅಂದಕೊಂಡ ಇವರು ಕಳೆದ ೨೮ ವರ್ಷಗಳಂತೆ ಈ ವರ್ಷವೂ ಕೂಡ ಹಬ್ಬದ ಅಂಗವಾಗಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಎಲ್.ಟಿ- 4 ಮತ್ತು ಎಲ್.ಟಿ- 5ರ ನಿವಾಸಿಗಳ ಅಳಲಿಗೆ ಸ್ಪಂದಿಸಿದ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಾಂಡಾ ನಿವಾಸಿಗಳ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಇಟ್ಟಂಗಿಹಾಳ ಎಲ್.ಟಿ- 4 ಮತ್ತು ಎಲ್.ಟಿ- 5ರ ಬಳಿ ಬಹಳ ವರ್ಷಗಳಿಂದ ಹಲವು ಕುಟುಂಬಗಳು ಸರಕಾರಿ ಜಾಗದಲ್ಲಿ ವಾಸಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿ ಸರಕಾರಿ ಜಮೀನು ಅತೀಕ್ರಮಣ ತೆರವುಗೊಳಿಸಲು ಕ್ರಮ ಕೈಗೊಂಡಿದ್ದರು. ಇದರಿಂದ ಸಂತ್ರಸ್ತರಾದ ತಾಂಡಾಗಳ ನಿವಾಸಿಗಳು ಶಾಸಕರನ್ನು ಭೇಟಿ ಮಾಡಿ ತಮ್ಮನ್ನು ತೆರವುಗೊಳಿಸದೇ ಹಿತ ಕಾಪಾಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಈ ಸಮಸ್ಯೆ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದರು. ಅಲ್ಲದೇ, ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ತಿಕೋಟಾ ತಹಸೀಲ್ದಾರ ಸುರೇಶ ಚವಲರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ ಸೌದಾಗರ ಅವರೊಂದಿಗೆ ತಾಂಡಾಗಳ ನಿವಾಸಿಗಳ ಸಮ್ಮುಖದಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುಗಾದಿ, ರಂಜಾನ್ ಹಬ್ಬಗಳು ಹಾಗೂ ಆರ್ಥಿಕ ವರ್ಷಾಂತ್ಯ ಹಿನ್ನೆಲೆ 2025ರ ಫೆಬ್ರವರಿ-ಮಾರ್ಚ್ ತಿಂಗಳ ವೇತನವನ್ನು ಮಾ.28-29 ರಂದು ಪಾವತಿಸುವಂತೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಮನವಿಗೆ ಸ್ಪಂದಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಮಾ. 27 ರಂದೇ ವೇತನ ಪಾವತಿಸಿರುವ ಕಾರಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಸಾರಿಗೆ ಸಚಿವರಿಗೆ ಫೆಡರೇಷನ್ ಮುಖಂಡರು, ಸದಸ್ಯರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.ಕೆಕೆಆರ್ಟಿಸಿ ನಿಗಮದ ಅಧಿಕಾರಿಗಳು, ನೌಕರರಿಗೆ ಪ್ರತಿ ತಿಂಗಳು 01 ನೇ ತಾರೀಖು ವೇತನ ಪಾವತಿಯಾಗುತ್ತಿದೆ. ಆದರೆ ಮಾರ್ಚ್ 30 ರಂದು ಚಂದ್ರಮಾನ ಯುಗಾದಿ ಹಬ್ಬದ ರಜೆ, ಮಾರ್ಚ್ 31 ರಂದು ರಂಜಾನ್ ಹಬ್ಬದ ರಜೆ ಹಾಗೂ ಏ.01 ರಂದು ಬ್ಯಾಂಕ್ ರಜೆ ಇರುವ ಕಾರಣ ಏ.02 ರ ನಂತರ ವೇತನ ಪಾವತಿಯಾದರೆ ನೌಕರರಿಗೆ ಹಬ್ಬಗಳಿಗೆ ಆಚರಣೆ ಕಷ್ಟಕರವಾಗಲಿದೆ. ಹಾಗಾಗಿ ಫೆಬ್ರವರಿ-ಮಾರ್ಚ್ ತಿಂಗಳ ನೌಕರರ ವೇತನವನ್ನು ಮಾ.28 ಅಥವಾ ಮಾ.29 ರಂದು ಪಾವತಿಸುವಂತೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್…
ರಂಜಾನ್ ಮಾಸಾಚರಣೆಗಾಗಿ ನಡೆದ ಇಫ್ತಿಹಾರ ಕೂಟದಲ್ಲಿ ಎಂಎಲ್ಸಿ ಸುನೀಲಗೌಡ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಗುರುವಾರ ಮುಸ್ಸಂಜೆ ನಗರದ ಲಾಲ ಬಹದ್ದೂರ ಶಾಸ್ತ್ರೀ ಮಾರುಕಟ್ಟೆಯಲ್ಲಿ ರಂಜಾನ್ ಮಾಶಾಚರಣೆ ಅಂಗವಾಗಿ ಆಯೋಜಿಸಲಾದ ಇಫ್ತಿಹಾರ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಹಿಂದೂ, ಮುಸ್ಲಿಂ, ಕೈಸ್ತ ಸೇರಿದಂತೆ ಎಲ್ಲ ಧರ್ಮದವರು ವಿಜಯಪುರ ಜಿಲ್ಲೆಯಲ್ಲಿ ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಜಾತ್ರೆ ಮತ್ತು ಉರುಸುಗಳಲ್ಲಿ ಎಲ್ಲರು ಪಾಲ್ಗೊಳ್ಳುತ್ತಾರೆ. ತಿಕೋಟಾ ಹಾಜಿಮಸ್ತಾನ ದರ್ಗಾಕ್ಕೆ ಹಿಂದೂಗಳ ಮನೆಯಿಂದ ಮಾದಲಿ ನೈವೇದ್ಯ ಅರ್ಪಿಸಲಾಗುತ್ತದೆ. ತಿಗಣಿಬಿದರಿಯಲ್ಲಿ ಲಾಲಸಾಬ ಜಾತ್ರೆಯಲ್ಲಿ ಎಲ್ಲರೂ ಸೇರಿ ಜಾತ್ರೆ ಮಾಡುತ್ತಾರೆ. ಉಪ್ಪಲದಿನ್ನಿಯಲ್ಲಿ ಸಂಗಮನಾಥ ಜಾತ್ರೆಯಲ್ಲಿ ಮುಸ್ಮಿಮರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಜಿಲ್ಲೆಯಲ್ಲಿ ಇಂಥ ಹಲವಾರು ಜಾತ್ರೆಗಳಲ್ಲಿ ಯಾವುದೇ ಧರ್ಮ ಭೇದವಿಲ್ಲದೆ ಎಲ್ಲರೂ ಭ್ರಾತೃತ್ವದಿಂದ ಪಾಲ್ಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.ರಂಜಾನ್ ಪವಿತ್ರ ಮಾಸವಾಗಿದೆ. ಈ ಅವಧಿಯಲ್ಲಿ ಮನಃಪೂರ್ವಕವಾಗಿ ಉಪವಾಸ ಮಾಡುವುದರಿಂದ, ಉಪವಾಸ ಮಾಡುವವರಿಗೆ ಅಹಾರ ನೀಡುವುದರಿಂದ…
ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗಾಗಿ ಕೃಷ್ಣಾ ನದಿಯಿಂದ ನೀರೆತ್ತಿ ಕೊಲ್ಹಾರದಿಂದ ಮುಳವಾಡ, ಹೊನಗನಹಳ್ಳಿ, ವಿಜಯಪುರ ಮಾರ್ಗದಲ್ಲಿ ಅಳವಡಿಸಿರುವ ಪಿ.ಎಸ್.ಸಿ ಕೊಳವೆ ಮಾರ್ಗ ಪದೇ ಪದೇ ಒಡೆದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಈ ಸಮಸ್ಯೆಯನ್ನು ಸರಿಪಡಿಸಲು ಪಿ.ಎಸ್.ಸಿ ಕೊಳವೆ ಮಾರ್ಗ ಬದಲಾಯಿಸಿ, ಎಂ.ಎಸ್. ಪೈಪ್ ಅಳವಡಿಸುವ 50 ಕೋಟಿ ಮೊತ್ತದ ಕಾಮಗಾರಿಗೆ ನಿನ್ನೆಯ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.2011ರ ಜನಗಣತಿಯಂತೆ ವಿಜಯಪುರ ನಗರದ ಜನಸಂಖ್ಯೆ 3,26,360 ಇದ್ದು, ಪ್ರಸ್ತುತ ಅಂದಾಜು 4,80,000 ಇರುತ್ತದೆ. ವಿಜಯಪುರ ನಗರಕ್ಕೆ ಯೋಜನೆಗಾಗಿ ಕೃಷ್ಣಾ ನದಿ ಆಲಮಟ್ಟಿ ಹಿನ್ನಿರಿನಿಂದ 1ನೇ ಹಂತ, 2ನೇ ಹಂತ ಹಾಗೂ ಭೂತನಾಳ ಕೆರೆ ಮೂಲದಿಂದ ದಿನಂಪ್ರತಿ 83.32ದಶಲಕ್ಷ ಲೀಟರ್ ನೀರು ಪೂರೈಕೆ ಮಾಡುವ ಯೋಜನೆಗಳನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿಯೊಬ್ಬ ಮಹಿಳೆ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಂಡು ಸ್ವಸ್ಥ ಸಮಾಜದ ನಿರ್ಮಾಣ ಮಾಡುವತ್ತ ಯೋಚಿಸಬೇಕು. ಕುಟುಂಬದ ಆಧಾರ ಸ್ತಂಭವೇ ಸ್ತ್ರೀಯಾಗಿದ್ದಾಳೆ ಎಂದು ರಾಷ್ಟ್ರ ಸೇವಿಕಾ ಸಮಿತಿ ವಿಜಯಪುರ ವಿಭಾಗದ ವಿಭಾಗ ಕಾರ್ಯವಾಹಿಕಾಭುವನೇಶ್ವರಿ ಕೋರವಾರ ಹೇಳಿದರು.ನಗರದ ಶ್ರೀ ಐಶ್ವರ್ಯ ವಿಕಲಚೇತನ ಮಹಿಳಾ ವಸತಿ ನಿಲಯದಲ್ಲಿ ಸೇವಾ ದಿನ ನಿಮಿತ್ತ ಜರುಗಿದ ಮಹಿಳೆಯರ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ರೋಗ ಬರುವ ಮುಂಚೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಇರಬೇಕು. ಇಂದು ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿ ಹಾಗೂ ಸ್ವಾಭಿಮಾನಿಯಾಗಿ ಬದುಕು ನಡೆಸಲು ಶಿಕ್ಷಣ, ಜಾಗೃತಿ ಜೊತೆಗೆ ಸಂಘಟಿತವಾಗಿ ಇರುವುದು ತುಂಬಾ ಮುಖ್ಯ ವಾಗಿದೆ ಎಂದರು.ಡಾ. ಸವಿತಾ ಬಿರಾದಾರ ಅವರು ವಸತಿ ನಿಲಯದ ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ವೈದ್ಯಕೀಯ ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಿದರು.ವಸತಿ ನಿಲಯದ ಅಧ್ಯಕ್ಷೆ ಡಾ. ರಶ್ಮಿ ಚಿತ್ತವಾಡಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ನಗರ ಕಾರ್ಯವಾಹಿಕಾ ದಾಕ್ಷಾಯಿಣಿ ಹೀರಾಪೂರ ಸೇವಾ ಗೀತೆ ಹಾಡಿ ವಂದಿಸಿದರು.
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ (ಬೆಳಗಾವಿ)ಇಂಗ್ಲೀಷ್ ಉಪನ್ಯಾಸಕರುಸ ಪ ಪೂ ಕಾಲೇಜು ಹಿರೇಬಾಗೇವಾಡಿತಾ: ಜಿ: ಬೆಳಗಾವಿಮೊ: 9449234142 ಉದಯರಶ್ಮಿ ದಿನಪತ್ರಿಕೆ ಭಯ ಎಂದರೇನು?ನಮ್ಮ ಶಕ್ತಿಗೆ ಮೀರಿದ ಅಸಾಂಭವ್ಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಕೊಳ್ಳತೊಡುಗುತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ.ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಭಾವನಾತ್ಮಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ, ಭಾವನಾತ್ಮಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ. ಇಲ್ಲವಾದಲ್ಲಿ ಮಾನಸಿಕ ವ್ಯಾಧಿಯಾಗಿ ಕಾಡುತ್ತದೆ.ಭಯ ಉಂಟಾಗೋದು ಯಾವಾಗ?ನಾಳೆ ಏನಾಗುತ್ತದೆಯೋ ಏನೊ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಪುರಸಭೆಯಲ್ಲಿ ದಿನಗೂಲಿ ಮೇಲೆ ನೇಮಕವಾಗಿರುವ ಶಮಶುದ್ಧಿನ್ ಮೂಲಿಮನಿ ಇವರ ನೇಮಕದಲ್ಲಿ ಅವ್ಯವಹಾರವಾಗಿದ್ದು ಇಲಾಖಾ ಅಧಿಕಾರಿಗಳು ಭಾಗಿಯಾಗಿ ಉಚ್ಛ ನ್ಯಾಯಾಲಯದ ಆದೇಶವನ್ನೇ ತಿರುಚಿದ್ದಾರೆ. ಈ ನೇಮಕದ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಲ್ಲಿನ ಪುರಸಭೆ ಸದಸ್ಯ ಶಿವು ಶಿವಪೂರ ಅವರು ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯಕ್ಕೆ, ಲೋಕಾಯುಕ್ತರಿಗೆ, ಯೋಜನಾ ನಿರ್ದೇಶಕರಿಗೆ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ದೂರಿದ್ದಾರೆ.ದೂರಿನ ಪ್ರತಿಯನ್ನು ಪತ್ರಿಕೆಗೆ ನೀಡಿ ಮಾತನಾಡಿದ ಶಿವಪುರ ಅವರು ಮೂಲಿಮನಿ ಅವರು ಪುರಸಭೆಯಲ್ಲಿ ಬೇ ಕಾಯ್ದೇಶಿರವಾಗಿ ನೇಮಕವಾಗಿದ್ದಾರೆ. ನಿಯಮಗಳ ಪ್ರಕಾರ ಇವರನ್ನು ನೇಮಕ ಮಾಡಿಕೊಳ್ಳಲು ಬರುವದಿಲ್ಲ. ನೇಮಕದ ವೇಳೆ ಇಲಾಖಾ ಅಧಿಕಾರಿಗಳು ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಹೇಗಾದರೂ ಮಾಡಿ ಸರಕಾರದಿಂದ ಅಕ್ರಮವಾಗಿ ಕೆಲಸ ಪಡೆದುಕೊಳ್ಳುವ ದುರುದ್ದೇಶವನ್ನು ಹೊಂದಿರುವ ಬಗ್ಗೆ ದಾಖಲೆಗಳ ಪರೀಶಿಲಿಸಲಾಗಿ ಕಂಡುಬಂದಿದೆ. ಇವರ ನೇಮಕದಿಂದ ಸರ್ಕಾರದ ಖಜಾನೆಗೆ ಲುಕ್ಸಾನು ಆಗಿದೆ. ಅಲ್ಲದೇ ಇವರು ಸೇವೆಗೆ ಹಾಜರಾದಾಗಿನಿಂದ ನಕಲಿ ಬಿಲ್ಗಳನ್ನು ಪಾವತಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಿಂದಗಿ ಪುರಸಭೆಯ ೨೦೨೫-೨೬ನೇ ಸಾಲಿನ ಬಜೆಟ್ ಅನುಮೋದನೆ ನೀಡುವ ಕುರಿತು ತುರ್ತು ಸಾಮಾನ್ಯ ಸಭೆಯನ್ನು ಮಾ.೨೭ರಂದು ಕರೆಯಲಾಗಿತ್ತು. ಏಕಾಏಕಿ ಸಭೆಯನ್ನು ರದ್ದು ಮಾಡಿರುತ್ತಾರೆ. ಆದರೆ ರದ್ದು ಮಾಡುವ ಅಧಿಕಾರ ಏನಿದ್ದರೂ ಅಧ್ಯಕ್ಷರಿಗಿರುತ್ತದೆ. ಆದರೆ ಇವರೇಕೆ ಮಾಡಿದರು.ಸುಮಾರು ಒಂದು ತಿಂಗಳಿಂದ ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ ನನ್ನ ಗಮನಕ್ಕೆ ಬಾರದೇ ಪುರಸಭೆಯಲ್ಲಿ ಹಾಜರಾತಿಯಿಲ್ಲದೇ ಅನೇಕ ಅಭಿವೃದ್ಧಿ ಕಾರ್ಯಗಳು ಕುಠಿಂತಗೊಂಡಿರುತ್ತವೆ. ಬಳಿಕ ಯಾರಿಗಾದರೂ ಮುಖ್ಯಾಧಿಕಾರಿಯಾಗಿ ವಿನಂತಿಸಿಕೊಂಡಿರುವ ಪ್ರಕಾರ ದತ್ತಾತ್ರೆಯ ಹಳ್ಳಿ ಅವರನ್ನು ತಾತ್ಕಾಲಿಕವಾಗಿ ನೇಮಿಸಲಾಗಿತ್ತು.ಮಾ.೨೬ರಂದು ನನ್ನ ಅಧ್ಯಕ್ಷತೆಯಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಬೇಸಿಗೆ ನೀರಿನ ಸಮಸ್ಯೆ ಬಾರದೇ ಹಾಗೆ ಅತಿಮುಖ್ಯವಾದ ಸಭೆ ಕರೆದಿದ್ದು, ಸಭೆಗೆ ಗೈರಾಗಿ ಮಧ್ಯಾಹ್ನದ ಮೇಲೆ ಪುರಸಭೆಗೆ ಬಂದು ನೇರವಾಗಿ ಕರೆದಿರುವ ಬಜೆಟ ಸಭೆ ರದ್ದುಮಾಡಿ ಆದೇಶಿಸಿರುತ್ತಾರೆ. ಆದರೆ ಇದರ ಪರಿಣಾಮವಾಗಿ ಮುಂಬರುವ ವಾರ್ಷಿಕ ಹಣಕಾಸಿನಲ್ಲಿ ಸಾಕಷ್ಟು ಸಮಸ್ಯೆಗಳಾಗಲಿದ್ದು, ಪುರಸಭೆಯ ಯಾವುದೇ ಅಭಿವೃದ್ಧಿ ಮಾಡಲು ಸಾದ್ಯವಾಗಿರುವುದಿಲ್ಲ. ಇದರ ಹಿಂದೆ ಯಾವುದೋ ಕಾಣದ ಕೈಗಳು ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅದು ಅಲ್ಲದೆ…
