Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವಬಾಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ನವಬಾಗದಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮೇ.೦೯ರ ಬೆಳಿಗ್ಗೆ ೧೦ಗಂಟೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ೨೦ಕ್ಕೂ ಹೆಚ್ಚು ಸ್ಥಳೀಯ ಹಾಗೂ ವಿವಿಧ ಎಂ.ಎನ್.ಸಿ ಕಂಪನಿಗಳು ಭಾಗವಹಿಸಲಿವೆ.ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐಟಿಐ, ಡಿ.ಇಡಿ, ಬಿ.ಇಡಿ ಹಾಗೂ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರುವ ೩೫ ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲಾತಿ ಸಹಿತ ಸ್ವ-ವಿವರ (ಬಯೋಡೆಟಾ)ದ ಕನಿಷ್ಟ ೧೦ ಪ್ರತಿಗಳನ್ನು ಅಗತ್ಯದಾಖಲೆಯೊಂದಿಗೆ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ಮೊ.ಸಂ: ೮೭೨೨೭೮೦೭೬೭ ಹಾಗೂ ೯೯೪೫೦೦೦೭೯೩ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ವ್ಯಾಪ್ತಿಯಲ್ಲಿನ ಒಟ್ಟು 7771 ವಿದ್ಯಾರ್ಥಿಗಳಲ್ಲಿ 3779 ವಿದ್ಯಾರ್ಥಿಗಳು, 3992 ವಿದ್ಯಾರ್ಥಿನಿಯರು ಉತ್ತಿರ್ಣರಾಗಿದ್ದಾರೆ ಎಂದು ಬಿಇಓ ಎ.ಕೆ.ಬಸಣ್ಣವರ ತಿಳಿಸಿದ್ದಾರೆ.ಜಮಖಂಡಿ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.70.34ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ ಉತ್ತಮ ಫಲಿತಾಂಶ ಒದಗಿಸಿಕೊಟ್ಟ ಪ್ರೌಢಶಾಲೆಯ ಸಹ ಶಿಕ್ಷಕರಿಗೆ ಹಾಗೂ ಮುಖ್ಯೋಪಾಧ್ಯಾಯರಿಗೆ ಇಲಾಖೆಯಿಂದ ಅಭಿನಂದಿಸಿದ್ದಾರೆ.ಬನಹಟ್ಟಿಯ ಎಸ್‌ಆರ್‌ಎ ಕಾಲೇಜಿನ ಲಕ್ಷ ಸುನೀಲ ಹಿರಕಾಳೆ 623, ಮಧುರಖಂಡಿಯ ಸಾಯಿ ಸಂಕಲ್ಪ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಸಿಂಚನಾ ಶರಣಪ್ಪಾ ಪರುತಿ 623, ಬನಹಟ್ಟಿ ಎಸ್‌ಆರ್‌ಎ ಕಾಲೇಜಿನ ಅನಯಾ ಸಂಗಪ್ಪಾ ನಂದ್ಯಾಳ 622, ಯಲ್ಲಟ್ಟಿಯ ಆರ್‌ಎಂಎಸ್‌ಎ ನಿರ್ಮಲಾ ಮಲ್ಲಿಕಾರ್ಜುನ ಸಂತಿ 622, ತೊದಲಬಾಗಿ ಕಿತ್ತೂರ ರಾಣಿ ಚನ್ನಮ್ಮ ರೆಸಿಡೆನ್ಸಿಯಲ್ ಶಾಲೆಯ ಸಹನಾ ಸಂಗಮೇಶ ತಿಪರಡ್ಡಿ 622, ಹನಗಂಡಿಯ ಮೋರಾರ್ಜಿ ದೇಸಾಯಿ ಶಾಲೆಯ ಭಾಗ್ಯಶ್ರೀ ಬಸನಗೌಡಾ ಬಿಪಾಟೀಲ 622, ತೊದಲಬಾಗಿ ಕಿತ್ತೂರ ರಾಣಿ ಚನ್ನಮ್ಮ ರೆಸಿಡೆನ್ಸಿಯಲ್ ಶಾಲೆಯ ಪ್ರೀತಿ ರಮೇಶ ಭಾವಿಕಟ್ಟಿ 621,…

Read More

ಸಚಿವ ಶಿವಾನಂದ್ ಪಾಟೀಲ್’ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸವಾಲು ಬೆಂಗಳೂರು: ನಿಜಕ್ಕೂ ತಾಕತ್ತಿದ್ದರೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಕೊಟ್ಟು ಅಸಲಿ ಹೋರಾಟಕ್ಕೆ ಸಜ್ಜಾಗಲಿ ಎಂದು ಸಚಿವ ಶಿವಾನಂದ ಪಾಟೀಲ್ ಅವರಿಗೆ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸವಾಲು ಹಾಕಿದ್ದಾರೆ.ಶಿವಾನಂದ ಪಾಟೀಲ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಶಿವಾನಂದ ಪಾಟೀಲ್ ರಾಜೀನಾಮೆ ಕೊಡುವುದು, ಸಭಾಧ್ಯಕ್ಷರು ತಿರಸ್ಕರಿಸುವ ಬೃಹನ್ನಾಟಕ ಸಂಪನ್ನವಾಯಿತು, ಸಂಪುಟದ ಹಿರಿಯ ಸಚಿವರೊಬ್ಬರು ಈ ರೀತಿಯಾದ ರಾಜಕೀಯ ನಾಟಕವಾಡುತ್ತಿರುವುದು ಹಾಸ್ಯಾಸ್ಪದ ಎಂದು ಕಿಡಿಕಾರಿದರು.ಉತ್ತರನ ಪೌರುಷ ಒಲೆಯ ಮುಂದೆ ಎಂಬಂತಿದೆ. ರಾಜೀನಾಮೆ ಅಂಗೀಕಾರ ಆಗೋದಿಲ್ಲ ಅಂತ ಗೊತ್ತಿದ್ದರೂ ಪುಕ್ಕಟೆ ಪ್ರಚಾರಕ್ಕೆ ರಾಜೀನಾಮೆ ಕೊಟ್ಟು ರಾಜೀನಾಮೆಯನ್ನು ತಿರಸ್ಕೃತವಾಗುವಂತ ಪ್ರಭೃತಿಗಳು ಇದ್ದಾರೆ ಎಂಬುದೇ ಸೋಜಿಗದ ಸಂಗತಿ. ಶಾಸಕರು ರಾಜೀನಾಮೆ ಕೊಡುವುದಕ್ಕೆ ರೀತಿ ರಿವಾಜು ಇರುತ್ತೆ ಎಂಬುದು ಇವರಿಗೆ ಗೊತ್ತಿಲ್ಲವೇ.ಇವರು ರಾಜೀನಾಮೆ ಕೊಡುವುದು, ಸಭಾಧ್ಯಕ್ಷರು ತಿರಸ್ಕರಿಸುವ ಬೃಹನ್ನಾಟಕ ಸಂಪನ್ನವಾಯಿತು. ಸಭಾಧ್ಯಕ್ಷರಾದ ಖಾದರ್ ಅವರು ಈ ರೀತಿಯಾದ ರಾಜೀನಾಮೆ ಸ್ವೀಕೃತವಾಗುವುದಿಲ್ಲ ಎಂಬುದನ್ನು ಅವರಿಗೆ ತಿಳಿಸಬೇಕಾಗಿತ್ತು.…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಮೇಲೆ ಮಾರಾಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ 6 ಜನರು ಪರಾರಿಯಾದ ಘಟನೆ ಬನಹಟ್ಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.ಮಂಗಳವಾರ ಮಧ್ಯಾಹ್ನ ಬನಹಟ್ಟಿ ಕಡೆಯಿಂದ ಮುಧೋಳಗೆ ಬಸ್‌ ಸಂಚರಿಸುತ್ತಿದ್ದಾಗ ಜಗದಾಳ ಕೆಇಬಿ ಸಮೀಪ ಕಾರೊಂದು ಎದುರಿಗೆ ಬಂದಿದ್ದರಿಂದ ಬೈಕ್ ಸವಾರ ವೇಗವಾಗಿ ವಾಹನ ಚಲಾಯಿಸಿದ್ದು, ಚಾಲಕ ಬಸ್ ನಿಯಂತ್ರಿಸಿ ಸಂಭಾವ್ಯ ಅಪಘಾತ ತಪ್ಪಿಸಿದ್ದಾರೆ. ಸರಿಯಾಗಿ ಬೈಕ್‌ ಓಡಿಸುವಂತೆ ಬೈಕ್‌ ಸವಾರನಿಗೆ ಬುದ್ಧಿಹೇಳಿದ್ದು, ಇದಕ್ಕೆ ಕೋಪಗೊಂಡು ತೆರಳಿದ ಬೈಕ್‌ ಚಾಲಕ ಬೊಲೆರೋ ವಾಹನದಲ್ಲಿ 6 ಜನರೊಂದಿಗೆ ಬಂದು ಬಸ್ ಅಡ್ಡಗಟ್ಟಿ ಚಾಲಕ ಸಂಗಪ್ಪನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆರೋಪಿಗಳಾದ ಮುತ್ತಪ್ಪ ಗಾಜ್ಯಾಗೋಳ, ಶಿವಾನಂದ ಗಾಜ್ಯಾಗೋಳ, ವೆಂಕಟೇಶ ಗಾಜ್ಯಾಗೋಳ, ಸಂದೇಶ ಗಾಜ್ಯಾಗೋಳ, ಶ್ರೀಕಾಂತ ಗಿಡನ್ನವರ, ಸಾಗರ ಬಡಿಗೇರ ವಿರುದ್ಧ ಬನಹಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪಿಎಸ್‌ಐ ಶಾಂತಾ ಹಳ್ಳಿ ನೇತೃತ್ವದಲ್ಲಿ ಶೋಧ ನಡೆಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದ ಶಲ್ಯತಂತ್ರ ವಿಭಾಗದ ವತಿಯಿಂದ ಮೇ 5 ರಿಂದ ಮೇ 10ರ ವರೆಗೆ ಆರು ದಿನಗಳ ಕಾಲ ಉರುಪು ಮೂಲವ್ಯಾಧಿ ಉಚಿತ ತಪಾಸಣೆ ಮತ್ತು ಉಚಿತ ಚಿಕಿತ್ಸಾ ಶಿಬಿರ ನಡೆಯಲಿದೆ.ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೋಬೈಲ್ ಸಂಖ್ಯೆ: 7019656245 ಸಂಪರ್ಕಿಸಬಹುದಾಗಿದೆ.

Read More

ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪುತ್ಥಳಿ ಮತ್ತು ವೃತ್ತ ನಿರ್ಮಾಣ ಹಾಗೂ ಪ್ರಮುಖ‌ ಸ್ಥಳಗಳಿಗೆ ಮಹನೀಯರ ಹೆಸರುಗಳನ್ನು ನಾಮಕರಣ ಮಾಡುವುದರಿಂದ ರಾಷ್ಟ್ರ ನಾಯಕರು ದೇಶ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸಲು ಸಾಧ್ಯ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಶನಿವಾರ ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಕಂಚಿನ ಪುತ್ಹಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ದೇಶ ಮತ್ತು ಸಮಾಜಕ್ಕಾಗಿ ಹೋರಾಟ ನಡೆಸಿದ ರಾಷ್ಟ್ರ ನಾಯಕರ ಕಾರ್ಯಗಳನ್ನು ಸ್ಮರಿಸಲು ಪುತ್ಹಳಿ ಅನಾವರಣ ಮತ್ತು ರಾಷ್ಟ್ರ ನಾಯಕರ ಹೆಸರುಗಳನ್ನು ನಾನಾ ಸ್ಥಳಗಳಿಗೆ ನಾಮಕರಣ ಮಾಡುತ್ತಿರುವುದು ಉತ್ತಮ ಸಂಪ್ರದಾಯವಾಗಿದೆ. ಹಿಟ್ಟಿನಹಳ್ಳಿ ಗ್ರಾಮದಲ್ಲಿ ಶಿವಾಜಿ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣರ ಕಂಚಿನ ಪುತ್ಹಳಿ ಅನಾವರಣ ಮಾಡಲಾಗಿದೆ. ಸಚಿವ ಎಂ. ಬಿ. ಪಾಟೀಲ ಅವರ ಪ್ರಯತ್ನದಿಂದಾಗಿ ವಿಜಯಪುರ ಕೇಂದ್ರ ಬಸ್…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ೨೦೨೪-೨೦೨೫ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಚಡಚಣ ತಾಲೂಕಿನ ನಿವರಗಿಯ ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಶಾಲೆಯ ವಿದ್ಯಾರ್ಥಿನಿ ಕುಮಾರಿ ಶುಭಲಕ್ಷ್ಮೀ ರಾ.ವಾಲಿಕಾರ ೯೫.೫೨% ಪ್ರಥಮ ಸ್ಥಾನ, ಕುಮಾರಿ ಸಾಕ್ಷೀ.ರಾ.ತೇಲಿ ೯೨.೨೬% ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ, ಕುಮಾರಿ ಶೃಷ್ಠಿ .ಸಂ.ಕಟಗೇರಿ ೯೦.೨೪% ತೃತೀಯ ಸ್ಥಾನವನ್ನು ಪಡೆದುಕೊಂಡು ಅತ್ಯುತ್ತಮ ಸಾಧನೆ ಮಾಡಿದ್ದಾರೆ.ರಾಜಶ್ರೀ.ಮ.ಚೌಧರಿ ೮೭.೩೬%, ರವಿಶಂಕರ.ಮ.ಪೋಲಾದಿ ೮೭.೨೦%, ಸನ್ನಿಧಿ.ಸು.ಶಹಾ ೮೩.೮೪%, ರವಿಕಾಂತ.ಶಿ.ಜಾಲಗೇರಿ ೮೩.೫೨%, ಶ್ರಾವಣಿ.ಅ.ರಾಜಮಾನ್ಯ ೮೧.೧೨%, ಸ್ನೇಹಲ್.ಶ.ಮಠಪತಿ ೭೮.೪೦%, ಭಾಗ್ಯಶ್ರೀ.ಸಿ.ಬಿರಾದಾರ ೭೭.೬೦%, ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಪಾಲಕರಿಗೆ ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ ಗೌಡ ಅಣ್ಣಾರಾಯ ಪಾಟೀಲ, ಮುಖ್ಯಗುರುಗಳಾದ ರವಿಕುಮಾರ ನಾಯಕ್ ಬಿ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡೆಸಿದ್ದಾರೆ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.

Read More

ಒಳಮೀಸಲಾತಿಯಿಂದ ಸಣ್ಣ ಜಾತಿಗಳಿಗೂ ಅನುಕೂಲ :ಆಲಗೂರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೇ ೫ರಿಂದ ಸರ್ವೇ ಕಾರ್ಯ ನಡೆಯಲಿದ್ದು, ಸಮುದಾಯದ ಜನತೆ ತಮ್ಮ ಜಾತಿಯನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಬೇಕು. ಈ ಸರ್ವೇ ಕಾರ್ಯದಿಂದ ಯಾವ ಕುಟುಂಬವು ಹೊರಗುಳಿಯಬಾರದು ಎಂದು ಮಾಜಿ ಶಾಸಕ ರಾಜು ಆಲಗೂರ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಸಂಬಂಧ ಎಸ್.ಎಂ.ಕೃಷ್ಣ ಕಾಲದಿಂದಲೂ ಪ್ರಯತ್ನ ನಡೆಯುತ್ತಿದೆ. ಈಗ ಅದರ ಸಮಯ ಕೂಡಿಬಂದಿದೆ. ಪರಿಶಿಷ್ಟ ಜಾತಿಯಲ್ಲಿ ೧೦೧ ಜಾತಿಗಳು ಇದ್ದು, ಒಳಮೀಸಲಾತಿಯಿಂದ ಸಣ್ಣ ಜಾತಿಗಳಿಗೂ ಅನುಕೂಲವಾಗಲಿದೆ. ಎಲ್ಲ ಜನಾಂಗದವರು ಜಾತಿಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದರು.ಒಳ ಮೀಸಲಾತಿ ಜಾರಿ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಸಹ ಆದೇಶಿಸಿದೆ. ರಾಜ್ಯ ಸರ್ಕಾರ ಸರ್ವೇಗೆ ನ್ಯಾ.ನಾಗಮೋಹನ್ ದಾಸ ಆಯೋಗ ನೇಮಕ ಮಾಡಿದೆ. ಮೇ ೫ರಿಂದ ಮೂರು ಹಂತದಲ್ಲಿ ಸರ್ವೇ ನಡೆಯಲಿದೆ. ಆರಂಭಿಕ ಹಂತದಲ್ಲಿ ಮನೆ ಮನೆಗೆ ಶಿಕ್ಷಕರ ಮೂಲಕ ಸಮೀಕ್ಷೆ ಜರುಗಲಿದೆ. ಹೊರಗುಳಿದವರಿಗಾಗಿ ಎರಡನೇ ಹಂತದಲ್ಲಿ…

Read More

ಸಾಸಕ ಯತ್ನಾಳ ರಿಗೆ ಕೆಪಿಸಿಸಿ ಸದಸ್ಯ ಎಸ್.ಎಂ. ಪಾಟೀಲ ಗಣಿಹಾರ ಟಾಂಗ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿರೇಬೇವನೂರ ಸಕ್ಕರೆ ಕಾರ್ಖಾನೆ ವಿಷಯವಾಗಿ ಶಾಸಕ ಯತ್ನಾಳ ದೊಡ್ಡ ಸಮಸ್ಯೆಯಲ್ಲಿದ್ದರು, ಆಗ ಇದೇ ಸಚಿವ ಶಿವಾನಂದ ಪಾಟೀಲರು ಮುತುವರ್ಜಿ ವಹಿಸಿ ಸಕ್ಕರೆ ಕಾರ್ಖಾನೆ ಸಮಸ್ಯೆ ಪರಿಹರಿಸಿದರು, ಆಗ ಯತ್ನಾಳರಿಗೆ ಮರು ಜೀವ ಬಂತು, ಅದೇ ತೆರನಾಗಿ ಪಕ್ಷೇತರರಾಗಿ ವಿಧಾನ ಪರಿಷತ್ ಚುನಾವಣೆ ಸ್ಪರ್ಧೆ ಮಾಡಿದಾಗ ಇದೇ ಶಿವಾನಂದ ಪಾಟೀಲರಿಗೆ ನೀವು ಕಾಲು ಹಿಡಿದಿಲ್ಲವೇ? ಅವರ ಉಪಕಾರವನ್ನು ನೀವು ಮರೆತಿದ್ದೀರಾ ಎಂದು ಕೆಪಿಸಿಸಿ ಸದಸ್ಯ ಎಸ್.ಎಂ. ಪಾಟೀಲ ಗಣಿಹಾರ ನಗರ ಶಾಸಕ ಯತ್ನಾಳರನ್ನು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ಲಕ್ಷಾಂತರ ರೂ. ಸಾಲ ಪಡೆದಿದ್ದ ಶಾಸಕ ಯತ್ನಾಳರು ನಂತರ ಪಡೆದ ಲಾಭದಲ್ಲಿ ಒಂದೇ ಒಂದು ರೂ. ಲಾಭವನ್ನು ರೈತರಿಗೆ ನೀಡಲಿಲ್ಲ ಎಂದರು.ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲರ ಮನೆಗೆ ನೀವು ಹೋಗಿಲ್ಲವೇ? ಎಂದರು.ಸಚಿವ ಪಾಟೀಲರ ಸವಾಲು ಸ್ವೀಕರಿಸದೇ ಹೋದರೆ ಹಿಂದೂ ಇಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲೆˌ ಸಾಹಿತ್ಯ ಮತ್ತು ˌ ಸಂಸ್ಕೃತಿ ಸಂಸ್ಥೆಯಾದ “ಸಾಹಿತ್ಯ ಸಂಗಮ” ವೇದಿಕೆ ವಿನೂತನ ಕಾರ್ಯಕ್ರಮ ಆಯೋಜಿಸಿದೆ.ವಿಷಯ: ‘ಬಸವನಬಾಗೇವಾಡಿಯ ಬಸವ ಜನ್ಮಸ್ಥಳ ಸ್ಮಾರಕದ ಐತಿಹಾಸಿಕತೆ’ನೀವು ಮಾಡಬೇಕಾಗಿರುವುದಿಷ್ಟೆ..ನಿಯಮಗಳು1) ಬಸವ ಜನ್ಮಸ್ಥಳ ಸ್ಮಾರಕ ಕುರಿತಾಗಿಯೆ ಕವನ ರಚಿಸಬೇಕು. ಸ್ಮಾರಕದ ಪರಿಚಯ ಬೇಕಾದಲ್ಲಿ ನನ್ನ ವಾಟ್ಸಪ್ ಸಂಖ್ಯೆ ಸಂಪರ್ಕಿಸಬಹುದು.2) ಕವನ ಸ್ಪರ್ಧೆ ಆಗಿರುವುದರಿಂದ ಹಿರಿಯ ಸಾಹಿತಿಗಳೊಬ್ಬರು ನಿರ್ಣಾಯಕರಾಗಿರುತ್ತಾರೆ3) ಪ್ರಥಮˌ ದ್ವಿತೀಯˌ ತೃತೀಯ ಹಾಗೂ ಮೆಚ್ಚುಗೆ ಪಡೆದ ಕವನಗಳೆಂದು ಐದು ಜನರಿಗೆ ಪುಸ್ತಕ ಬಹುಮಾನದ ಜೊತೆಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.4) ಭಾಗವಹಿಸಿದ ಎಲ್ಲ ಕವಿಗಳಿಗೆ ಕವಿತೆ ವಾಚಿಸಲು ಅವಕಾಶವಿದ್ದುˌ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ಸಾಹಿತ್ಯಾಸಕ್ತರೊಬ್ಬರು ಕವನ ಸಂಕಲನ ಪ್ರಕಟಿಸಲು ಮುಂದೆ ಬಂದಿರುವುದು ಹರ್ಷದ ಸಂಗತಿ.5) ‘ಸಾಹಿತ್ಯ ಸಂಗಮ’ ಕವನ ಸ್ಪರ್ಧೆ ಎಂದು ಬರೆಯುವುದು ಕಡ್ಡಾಯ.ಕವನಗಳನ್ನು ಗ್ರುಪ್ಪಿನಲ್ಲಿ ಹಾಕುವಂತಿಲ್ಲ.6) ಕವನಗಳನ್ನು ನಿಗದಿತ ದಿನಾಂಕದೊಳಗೆ ನನ್ನ ವೈಯಕ್ತಿಕ ವಾಟ್ಸಪ್ ಸಂಖ್ಯೆಗೆ ಕಳುಹಿಸಬೇಕು.7) ಕವಿಗಳು ತಮ್ಮ ಹೆಸರು ವಿಳಾಸˌ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೇ…

Read More