Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬೆನಕಟ್ಟಿ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿ.ಯು. ಫಲಿತಾಂಶದಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದ್ದಾರೆ.ಪರೀಕ್ಷೆಗೆ ಹಾಜರಾದ ಒಟ್ಟು ೨೬೪ ವಿದ್ಯಾರ್ಥಿಗಳಲ್ಲಿ ೯೪ ಡಿಸ್ಟಿಂಕ್ಷನ್, ೧೫೦ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ. ರಕ್ಷಿತಾ ಸಿಕೇದ್(ಶೇ ೯೭.೬೬) ಕಾಲೇಜಿಗೆ ಪ್ರಥಮ ಮತ್ತು ಜಿಲ್ಲೆಗೆ ತೃತೀಯ, ಶ್ರಾವಣಿ ಬಿರಾದಾರ(ಶೇ.೯೭.೫) ದ್ವಿತೀಯ ಮತ್ತು ಜಿಲ್ಲೆಗೆ ನಾಲ್ಕನೇ ಸ್ಥಾನ, ಸನ್ಮತಿ ತುಪ್ಪದ (ಶೇ ೯೬.೫)ತೃತೀಯ, ಪೂಜಾ ಪವಾರ (ಶೇ ೯೬.೧೬) ನಾಲ್ಕನೇಯ ಸ್ಥಾನ ಹಾಗೂ ಕೀರ್ತಿ ಗಾಯಕವಾಡ (ಶೇ ೯೬) ಐದನೇ ಸ್ಥಾನ ಗಳಿಸಿದ್ದಾರೆ.ಕಾಲೇಜಿನ ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ ಮೂವರು, ರಸಾಯನ ಶಾಸ್ತ್ರದಲ್ಲಿ ಇಬ್ಬರು, ಗಣಿತದಲ್ಲಿ ಹನ್ನೆರಡು, ಜೀವಶಾಸ್ತ್ರದಲ್ಲಿ ನಾಲ್ವರು, ಗಣಕಶಾಸ್ತ್ರದಲ್ಲಿ ಮೂವರು, ಕನ್ನಡದಲ್ಲಿ ಎಂಟು ಹಾಗೂ ಸಂಸ್ಕೃತ ವಿಷÀಯದಲ್ಲಿ ಐವರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಈ ಸಾಧನೆಗೆ ಕಾಲೇಜಿನ ಅಧ್ಯಕ್ಷ ಆರ್.ವಿ.ಬೆನಕಟ್ಟಿ, ಕಾರ್ಯದರ್ಶಿ ಹೇಮಲತಾ ಬೆನಕಟ್ಟಿ, ಪ್ರಾಚಾರ್ಯ ಸೂರಜ್ ಉಮದಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮೇ.೧೮ ರಂದು ಪಟ್ಟಣದ ಅಭ್ಯುದಯ ಕಾಲೇಜು ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ ಆಸಕ್ತರು ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ತಿಳಿಸಿದರು.ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನನ್ನ ಜೇಷ್ಠ ಸುಪುತ್ರ ಕಿರಣ ಮದರಿ ಕಲ್ಯಾಣೋತ್ಸವದ ಅಂಗವಾಗಿ ಈ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡಿದ್ದೇನೆ. ವರನಿಗೆ ೨೧ ವರ್ಷ ಮತ್ತು ವಧುವಿಗೆ ೧೮ ವರ್ಷ ಪೂರ್ಣಗೊಂಡಿದ್ದು ಸಾಮೂಹಿಕವಾಗಿ ಮದುವೆಯಾಗಲು ಇಚ್ಛಿಸುವವರು ವಧು-ವರರ ೩ ಭಾವಚಿತ್ರಗಳು, ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ, ಶಾಲಾ ದೃಢೀಕರಣ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಮತ್ತು ಗುರುತಿನ ಚೀಟಿಯೊಂದಿಗೆ ಎ.೩೦ ರ ಒಳಗಾಗಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಮೊ: ೯೯೮೦೫೨೯೭೭೨, ೯೯೮೦೩೯೪೭೧೦, ೯೯೦೨೨೬೩೫೪೮, ೮೯೦೪೦೧೦೦೭೮, ೯೯೪೫೩೬೬೬೩೦, ೯೪೮೧೦೮೧೫೮೮ ಮತ್ತು ೭೪೧೧೭೭೩೪೧೪

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.ಈ ವೇಳೆ ಕಾಲೇಜಿನ ಪ್ರಾಚಾರ್ಯ ಎ.ಕೆ.ಹುನಗುಂದ, ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ, ಆಂಗ್ಲಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಭಟ್ಟ, ಬೋಧಕರಾದ ಅಂಜನಾ ದೇಶಪಾಂಡೆ, ವಿ.ವಿ.ಪಾಟೀಲ್, ಎಸ್.ಎಸ್.ಹೂಗಾರ, ರಮಾದೇವಿ ಮುತಾಲೀಕ್, ಪ್ರಿಯಾಂಕ ಕುಲಕರ್ಣಿ, ಅನ್ನಪೂರ್ಣ ಹೊಸಮನಿ, ಶೋಭಾ ನಾಗೂರ, ಪ್ರದೀಪ ಜಗ್ಗಲ್, ರೂಪಾ ನಾಟೇಕರ್ ಸೇರಿದಂತೆ ಹಲವರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಅರಿಹಂತ ಚಾರಿಟೇಬಲ್ ಟ್ರಸ್ಟ್ಟಿನ ಪಿ.ಯು.ಸಿ. & ಬಿ.ಎಸ್.ಡಬ್ಲೂö್ಯ ಕಾಲೇಜು ಹಾಗೂ ಎಂ.ಬಿ.ಎಸ್. ಕಲಾ ಪ್ರಥಮ ದರ್ಜೆ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಭಗವಾನ ಗೋಮ್ಮಟೇಶ ಬಾಹುಬಲಿ ಸ್ವಾಮಿಯ ಸನ್ನಿದಾನದ ಅರಿಹಂತಗಿರಿಯಲ್ಲಿ ೨೬೨೩ ನೇ ಮಹಾವೀರ ತೀರ್ಥಂಕರರ ಜನ್ಮಕಲ್ಯಾಣೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಈ ವೇಳೆ ಟ್ರಸ್ಟಿನ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿ, ಮಹಾವೀರ ಸ್ವಾಮಿಯ ದಿವ್ಯ ಸಂದೇಶಗಳಾದ ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಅನೇಕಾಂತವಾದ, ಶಾಧ್ವಾದ ಮೂಲ ತತ್ವಗಳು ಅಹಿಂಸೆಯಿAದ ಜೀವಿಗಳ ರಕ್ಷಣೆಯಾಗುತ್ತದೆ, “ಅಹಿಂಸಾ ಪರಮೋ ಧರ್ಮ” ಎಂದು ಸಾರಿದ ಭನವಾನ ಮಹಾವೀರರ ತತ್ವಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪರಿಶುದ್ಧದ ಜೊತೆಗೆ ಸನ್ಮಾರ್ಗದ ಕಡೆಗೆ ನಡೆದಂತಾಗುತ್ತದೆ ಎಂದರು.ಮಹಾವೀರ ಭಗವಾನರು ಆದಿನಾಥ ತೀರ್ಥಂಕರರ ಮೊಮ್ಮಗನಾಗಿದ್ದು ದಿಗಂಬರ ಮುನಿಯಾಗಿ ಅವರು ಮೋಕ್ಷಗಾಮಿಯಾಗಲು ೨೩ ಬವಗಳು ಬೇಕಾಯಿತು. ೨೪ ನೇ ತೀರ್ಥಂಕರಾಗಿ ತಾಯಿ ತ್ರಿಶಲಾದೇವಿ ತಂದೆ ಸಿದ್ದಾರ್ಥ ಪುತ್ರನಾಗಿ ಬಿಹಾರ ರಾಜ್ಯದ ಕುಂಡಲಪುರದಲ್ಲಿ ಜನಿಸಿ ರಾಜ್ಯವೈಭವವಿದ್ದರು ಅದೆಲ್ಲವನ್ನು ತ್ಯಾಗಮಾಡಿ ದೀರ್ಘ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸರಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಿತು.ಮುದ್ದೇಬಿಹಾಳ: ಬುಧವಾರ ನಿಡಗುಂದಿ ಹೈವೇ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಕಾಳಗಿ ತಾಂಡಾದ ಬಿಎಸ್‌ಎಫ್ ಯೋಧ ಮೌನೇಶ ರಾಠೋಡ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು.ಮಹಾರಾಷ್ಟ್ರದ ಲಾತೂರ ಬಟಾಲಿಯನ್ ಇನ್ಸಪೆಕ್ಟರ್ ಜಿತೇಂದ್ರ ಸಿಂಗ ಹಾಗೂ ಕಾನ್ಸ್ಟೇಬಲ್ ವೇಣುಗೋಪಾಲ ನೇತೃತ್ವದ ೧೧ ಜನ ಯೋಧರ ತಂಡ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಸಿಪಿಆಯ್ ಮಹಮ್ಮದ ಫಸಿಯುದ್ಧಿನ್, ಪಿಎಸ್‌ಐ ಸಂಜಯ ತಿಪರೆಡ್ಡಿ, ನಿವೃತ್ತ ಸೈನಿಕರು ಪುಷ್ಪಗುಚ್ಚ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.ಯೋಧನ ಪತ್ನಿ ನಿರ್ಮಲಾ, ಮಕ್ಕಳಾದ ಆರುಷಿ, ಆದರ್ಶ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನ ಪಾರ್ಥೀವ ಶರೀರದ ಮೇಲಿದ್ದ ರಾಷ್ಟ್ರಧ್ವಜವನ್ನು ಸೇನೆಯ ಅಧಿಕಾರಿಗಳು ಕುಟುಂಬಕ್ಕೆ ಹಸ್ತಾಂತರಿಸಿದರು. ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷ ಬಿ.ಕೆ.ಬಿರಾದಾರ, ಮುಖಂಡ ಸಂತೋಷ ಚವ್ಹಾಣ, ಗ್ರಾ.ಪಂ ಸದಸ್ಯ ಶಿವಾನಂದ ಲಮಾಣಿ, ಸತೀಶ ರಾಠೋಡ,…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ಆರಾಧ್ಯ ದೇವ ದಿಗಂಬರೇಶ್ವರ ಜಾತ್ರಾ ಮಹೋತ್ಸವವು ದವನದ ಹುಣ್ಣಿಮೆಯ ದಿನವಾದ ಏ. ೧೨ ಶನಿವಾರದಿಂದ ೧೬ ಬುಧವಾರದವರೆಗೆ ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಜರಗುವದು.ದಿನಾಂಕ ೧೨ ಶನಿವಾರ ಬೆಳಿಗ್ಗೆ ೬ ಘಂಟೆಗೆ ಜಗದ್ಗುರು ದಿಗಂಬರೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನೂರಾರು ಭಕ್ತರು ದೀರ್ಘದಂಡ ನಮಸ್ಕಾರ ಹಾಕುವರು, ಮದ್ಯಾಹ್ನ ಸಕಲವಾದ್ಯ ವೈಭವದೊಂದಿಗೆÀ ಬಿರುದಾವಳಿಗಳೊಂದಿಗೆ ಪಲ್ಲಕ್ಕಿ ಉತ್ಸವ ಬೀಳಗಿ ತಾಲೂಕಿನ ಢವಳೇಶ್ವರ ಗ್ರಾಮದ ಭಕ್ತರು ತರುವ ರಥೋತ್ಸವದ ಹಗ್ಗದ ಮೆರವಣಿಗೆ ಮಠಕ್ಕೆ ಆಗಮಿಸಿದಾಗ ಸಾಯಂಕಾಲ ೫.೩೦ಕ್ಕೆ ರಥೋತ್ಸವ ಜರುಗುವದು. ಗೀಗಿ ಪದಗಳು ಪ್ರತಿ ದಿನ ಸಾಯಂಕಾಲ ೭ ರಿಂದ ೯ರ ವರೆಗೆ ಮಠದ ಆವರಣದಲ್ಲಿ ನಡೆಯುವವವು.ದಿನಾಂಕ ೧೩ ರವಿವಾರ ಮದ್ಯಾಹ್ನ ೧೨ ಘಂಟೆಗೆ ಶ್ರೀಶೈಲ ಶಿವಶಂಕ್ರೆಪ್ಪ ನೀಲವಾಣಿ ಇವರ ಮನೆಯಲ್ಲಿ ಕಲ್ಲಿನಾಥ ದೇವರ ಬಿನ್ನಹ ಹಾಗೂ ಪಲ್ಲಕ್ಕಿ ಉತ್ಸವ ನಡೆದು ಮಹಾಪ್ರಸಾದ ಪಂತಿ ಜರುಗುವದು. ಸಾಯಂಕಾಲ ೪.೩೦ಕ್ಕೆ ಯುವಕರಿಗಾಗಿ ಹಾಲೋಕಳಿ ಸ್ಪರ್ದೆಯು ಇರುವದು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತೊಗರಿ ಬೆಳೆಗೆ ಪರಿಹಾರ ಮತ್ತು ಕೃಷ್ಣಾ ಮುಖ್ಯ ಕಾಲುವೆಯಿಂದ ಕೃಷಿಗೆ ನೀರು ಬಿಡುವ ಕುರಿತು ಅಹೋರಾತ್ರಿ ಧರಣಿ ನಾಲ್ಕನೆಯ ದಿನ ಕಂದಾಯ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಮತ್ತು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಬೇಟಿ ನೀಡಿ ಭರವಸೆ ನೀಡಿದ ನಿಮಿತ್ಯ ಹೋರಾಟ ಅಂತ್ಯ ಗೊಂಡಿದೆ ಎಂದು ಕರವೇ ಅಧ್ಯಕ್ಷ ಬಾಳು ಮುಳಜಿ ಹೇಳಿದರು.ಎಸಿ ಅನುರಾಧಾ ವಸ್ತ್ರದ ಮಾತನಾಡಿ, ನೀವು ಮನವಿ ಕೊಡಿ ನಾವು ಅದನ್ನು ಜಿಲ್ಲಾಧಿಕಾರಿಗಳಿಗೆ ಮುಟ್ಟಿಸುತ್ತೇವೆ ಮತ್ತು ಜಿಲ್ಲಾಧಿಕಾರಿ ಮೇಲಾಧಿಕರ ಮಾಹಿತಿ ನೀಡುವರು. ಮತ್ತು ಶಾಸಕರಿಗೂ ಈ ವಿಷಯದ ಕುರಿತು ಮಾಹಿತಿ ನೀಡುತ್ತೆವೆ. ಪ್ರಾಮಾಣಿಕವಾಗಿ ರೈತರಿಗೆ ನ್ಯಾಯ ಒದಗಿಸಿ ಕೊಡುತ್ತೇವೆ ಎಂಬ ಭರವಸೆ ನಿಮಿತ್ಯ ರೈತರು ಮತ್ತು ಕರವೇ ಹೋರಾಟಗಾರರು ಧರಣಿ ಹಿಂದೆ ಪಡೆದರು.ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರವರು ಮಾತನಾಡಿ ಕಾನೂನು ಚೌಕಟ್ಟಿನಲ್ಲಿ ಇದ್ದರೆ ಮಾತ್ರ ಪರಿಹಾರ ಬರುತ್ತದೆ. ಸರಕಾರ ಮಾರ್ಗಸೂಚಿ ಪ್ರಕಾರವೇ ನಾವು ಹೇಳಬೇಕಾಗುತ್ತದೆ. ನಿಮ್ಮ ಮನವಿಯನ್ನು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಮಹಾವೀರ ಜಯಂತಿಯಂಗವಾಗಿ ತಾಲೂಕಾಡಳಿತದಿಂದ ಗುರುವಾರ ಮಹಾವೀರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.ಪೂಜೆಯನ್ನು ಉಪತಹಸೀಲ್ದಾರ ಎಂ.ಎಸ್.ಜಾಗೀರದಾರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಎ.ಎ.ಉಪಾಧ್ಯೆ ಅವರು ಮಹಾವೀರ ಜೀವನ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಶಿರಸ್ತೇದಾರ ಎ.ಎಚ್.ಬಳೂರಗಿ, ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಗುರುರಾಜ ಗಡಗಿ, ಮಂಜು ಹಳ್ಳೂರ, ರಾಮಚಂದ್ರ ಘಾಟಗೆ, ವಿಲಾಸ ಜಾಡರ, ಕ್ಷೇತ್ರಸಮನ್ವಾಯಾಧಿಕಾರಿ ಸುನೀಲ ನಾಯಕ,ಸಿಆರ್ಪಿ ಮಹೇಶ ಪೂಜಾರಿ, ಹಿಂದುಳಿತ ವರ್ಗಗಳ ಇಲಾಖೆಯ ಸಿ.ಜಿ.ಬಿರಾದಾರ, ತಾಲೂಕು ಪಂಚಾಯಿತಿಯ ಸಿಬ್ಬಂದಿ ರಾಜೇಶ್ವರಿ ಆಸಂಗಿ, ಜೈನ ಸಮುದಾಯ ಬಾಂಧವರಾದ ಅಪ್ಪು ದಂಡಾವತಿ, ಬಾಹುಬಲಿ ದಂಡಾವತಿ, ಮಹಾವೀರ ಹೊಸಮನಿ, ಪಾರೀಷ ಹೊಸಮನಿ, ವಿದ್ಯಾಧರ ಉಪಾಧ್ಯೆ, ಪ್ರವೀಣ ದಂಡಾವತಿ, ಪ್ರಮೋದ ದಂಡಾವತಿ, ದಯಾಸಾಗರ ಉಪಾಧ್ಯೆ, ಸಂಜೀವ ಬೋಗಾರ, ಡಿಎಸ್ಎಸ್ ಮುಖಂಡರಾದ ಮಹಾಂತೇಸ ಸಾಸಾಬಾಳ, ಪರಶುರಾಮ ದಿಂಡವಾರ, ಗುರುರಾಜ ಗುಡಿಮನಿ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಬರುವ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಂಕನಾಳ ಎಲ್ಟಿ ಗ್ರಾಮದಲ್ಲಿ ೨೦೨೪-೨೫ನೇ ಸಾಲಿನ ಪ್ರಗತಿ ಕಾಲನಿ ಯೋಜನೆಯಡಿಯಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂದು ಹುಣಶ್ಯಾಳ ಪಿಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪು ವಿಠ್ಠಲ ನಾಯಕ ಆರೋಪಿಸಿದ್ದಾರೆ.ತಾಲೂಕಿನ ಸಂಕನಾಳ ಎಲ್ಟಿ ಗ್ರಾಮದಲ್ಲಿ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಚೆಗೆ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ರೂರಲ್ ಇನ್ಪ್ರಾಸ್ಪ್ರಕ್ಟರ್ ಡೆವಲಪಮೆಂಟ್ ಲಿಮಿಟೆಡ್ ಇಲಾಖೆಯಡಿ ರೂ. ೫೦ ಲಕ್ಷ ಅನುದಾನದಲ್ಲಿ ಸಂಕನಾಳ ಗ್ರಾಮದ ಎಲ್ಟಿ ಕಾಲನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ರಸ್ತೆ ಕಾಮಗಾರಿಯ ಗುತ್ತಿಗೆದಾರರು ಕೆಲಸ ಆರಂಭಿಸಿದರೂ ಕಾಮಗಾರಿಯ ಅಂದಾಜು ಪತ್ರಿಕೆಯಂತೆ ಆರು ಇಂಚು ದಪ್ಪ ರಸ್ತೆ ನಿರ್ಮಾಣ ಮಾಡದೇ ರಸ್ತೆ ಎರಡು ಬದಿ ಮಾತ್ರ ಆರು ಇಂಚು ಕಾಣುವಂತೆ ಮಾಡಿ ನಡುವೆ ಇದರ ಪ್ರಮಾಣ ಕಡಿಮೆ ಮಾಡಿರುವದರಿಂದಾಗಿ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ. ಇದರ ಬಗ್ಗೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಹೊರವಲಯದ ಆಲಮೇಲ ರಸ್ತೆಯಲ್ಲಿರುವ ಪಿ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದ ಗಂಗಾಧರ ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪ.ಪೂ. ಮಹಾವಿದ್ಯಾಲಯದ ೨೦೨೪-೨೫ ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಕಲಾ ವಿಭಾಗವೀರೇಶ ಕುಳೇಕುಮಟಗಿ ಪ್ರಥಮ ೬೦೦ ಅಂಕಗಳಿಗೆ ೫೭೨ (ಶೇ.೯೫.೩೩) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಗೌರಾಬಾಯಿ ಸುಣಗಾರ ೫೭೦ (ಶೇ.೯೫) ಅಂಕ ಪಡೆದು ದ್ವಿತೀಯ ಸ್ಥಾನ, ಮಲ್ಲಿಕಾರ್ಜುನ ಮಾದರ ೫೬೪ (ಶೇ.೯೪) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ವಾಣಿಜ್ಯ ವಿಭಾಗಸ್ವಾತಿ ಬಿರಾದಾರ ೬೦೦ ಅಂಕಗಳಿಗೆ ೫೭೯ (ಶೇ.೯೬.೫) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಭಾವನಾ ಕಡಣಿ ೫೬೯ (ಶೇ.೯೪.೮೩) ಅಂಕ ಪಡೆದು ದ್ವಿತೀಯ ಸ್ಥಾನ, ರತ್ನಾಬಾಯಿ ಕಲ್ಲೂರ ೫೬೪ (ಶೇ.೯೪) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ವಿಜ್ಞಾನ ವಿಭಾಗಜಯಶ್ರೀ ಜಾಲವಾದಿ ೬೦೦ ಅಂಕಗಳಿಗೆ ೫೩೯ (ಶೇ.೮೯.೮೩) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ…

Read More