Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬುಧವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ನಡೆದ ಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಅಧ್ವೈತ ಅಂದರೇ ಏಕತ್ವದ ಸಿದ್ದಾಂತವನ್ನು ಪ್ರತಿಪಾದಿಸಿದವರು ಶಂಕರಾಚಾರ್ಯರು, ಮನುಕುಲಕ್ಕೆ ಅವರು ಸಾರಿದ ತತ್ವಾದರ್ಶಗಳು ದಾರಿದೀಪವಾಗಿವೆ ಎಂದು ತಿಳಿಸಿದರು.ಅಂದಕಾರದಲ್ಲಿದ್ದ ಸಮಾಜವನ್ನು ಸನ್ಮಾರ್ಗ ತೊರಿಸುವ ಕಾರ್ಯವನ್ನು ಶಂಕರಾಚಾರ್ಯರು ಮಾಡಿದರು. ಅವರ ಆದರ್ಶ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯಗಳಾಗಬೇಕು ಎಂದು ಅವರು ಹೇಳಿದರು. ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಶಂಕರಾಚಾರ್ಯರು ತಮ್ಮ ಸಿದ್ಧಾಂತಗಳನ್ನು ಮನುಕುಲ ಉದ್ದಾರಕ್ಕೆ ಪ್ರತಿಪಾದಿಸಿದರು. ಅದ್ವೆöÊತ ವೇದಾಂತವು ಭಾರತೀಯ ಆಧ್ಯಾತ್ಮಿಕತೆ, ಯೋಗ ಮತ್ತು ಧ್ಯಾನದ ಮೇಲೆ ಗಾಢವಾದ ಪ್ರಭಾವ ಬೀರಿವೆ ಎಂದು ಅವರು ತಿಳಿಸಿದರು.ವೇದಾಂತದ ಬಗ್ಗೆ ತಮ್ಮ ಸಿದ್ಧಾಂತದಲ್ಲಿ ತಿಳಿಸಿದ ಶಂಕರಾಚಾರ್ಯರು ಜ್ಞಾನದ ಅರಿವಿನ ಅಂತಿಮ ಗುರಿಯನ್ನು ತಿಳಿಸಿಕೊಡುವುದೇ ವೇದಾಂತ ಎಂದು ಸಾರಿದರು.ಶಂಕರಾಚಾರ್ಯರ ಸಿದ್ದಾಂತದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಅಭಿವೃದ್ಧಿಯಲ್ಲಿ ಜೈನ್ ಸಮುದಾಯದ ಕೊಡುಗೆ ಮೆಚ್ಚುವಂತದ್ದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.ಇಲ್ಲಿಯ ಪಾರ್ಶ್ವ ಹೀರಾ ಧಾಮದಲ್ಲಿ ಮಾತೋಶ್ರೀ ಹೀರಾಬೆನ್ ಚೋಗಾಲಾಲ್ ಜೀ ಪಾಲರೇಚಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ೧೦೦೮ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪಂಚ ಕಲ್ಯಾಣಕ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜೈನ್ ಸಮುದಾಯ ತನು ಮನದಿಂದ ಅನೇಕ ಜೀವಗಳನ್ನು ಉಳಿಸಿದ ಸಮುದಾಯವಾಗಿದೆ. ಏನೇ ಮಾಡಿದರೂ ಮೊದಲಿಗೆ ಹಿಂದೂ ಸಮುದಾಯದವರಿಗೆ ಆದ್ಯತೆ ನೀಡುತ್ತಾರೆ. ನಿರಂತರವಾಗಿ ಈ ಸಮುದಾಯ ನಮ್ಮನ್ನು ಬೆಂಬಲಿಸಿದ್ದರಿಂದ ವಿಜಯಪುರ ನಗರದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ತಿಳಿಸಿದರು.ಇದೇ ವೇಳೆ ನಿತ್ಯಸೂರೂಜಿ ಗುರು ಮಹಾರಾಜರ ಆಶೀರ್ವಾದ ಪಡೆದುಕೊಂಡರು. ಜೈನ್ ಸಮಾಜದ ಗಣ್ಯರಾದ ಶಾಂತಿಲಾಲ ಓಸ್ವಾಲ, ಡಾ.ಕಿರಣ್ ಓಸ್ವಾಲ, ಲಾಲಾಜಿ ಶೆಟ್ ವಗತಾವರ ಪಾರಿಕ, ಸಂಜಯ ಪೋರವಾಲ, ಮಹಾವೀರ ಪೋರವಾಲ, ನೀಲೇಶ ಷಹಾ, ಮಹಾನಗರ ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಶೀತಲ ಓಗಿ, ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಏ೨೮ ರಂದು ಕಾಣೆಯಾಗಿದ್ದ ತಾಲೂಕಿನ ಕುಂಟೋಜಿ ಗ್ರಾಮದ ನಿವಾಸಿ, ಹೆಸ್ಕಾಂ ನೌಕರ ಶಿವಪ್ಪ ಆರೇಶಂಕರ(೪೫) ಎರಡು ದಿನಗಳ ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಶಿವಪ್ಪಳ ಪತ್ನಿ ಗೌರಮ್ಮ ಆರೇಶಂಕರ ೪ ಜನರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.ಸಂಗಮೇಶ ಅಂಗಡಿ, ಶರಣಪ್ಪ ಬಳೂತಿ, ಶಿವಪ್ಪ ಮುಳವಾಡ ಮತ್ತು ರಾಜು ಕುಂಬಾರ ಎನ್ನುವವರ ಮೇಲೆ ಪ್ರಕರಣ ದಾಖಲಾಗಿದ್ದು ಸರಕಾರಿ ಜಾಗೆಯನ್ನು ಪ್ರಭಲ ವ್ಯಕ್ತಿಗಳು ತಮ್ಮ ವಶಕ್ಕೆ ಪಡೆದುಕೊಳ್ಳುವ ತವಕದಲ್ಲಿದ್ದಾಗ ಮೃತ ಶಿವಪ್ಪ ಆರೇಶಂಕರ ಇತನು ನಮ್ಮೂರ(ಕುಂಟೋಜಿ) ಇತರೆ ಗ್ರಾಮಸ್ಥರೊಂದಿಗೆ ಕೂಡಿ ತನ್ನ ಮುಂದಾಳತ್ವದಲ್ಲಿ ರಾಮ ಮಂದಿರ ಕಟ್ಟೆಯನ್ನು ಕಟ್ಟಿದ್ದರಿಂದ ಅವನ ಮೇಲೆ ಸಿಟ್ಟಾಗಿ ಚಿತ್ರಹಿಂಸೆ ನೀಡಿ ಬಸವ ಇಂಟರ್‌ನ್ಯಾಶನಲ್ ಶಾಲೆಯ ಬಳಿಯ ಒಂದು ಹೊಲದಲ್ಲಿರುವ ಬೇವಿನ ಗಿಡದಲ್ಲಿ ಹಳದಿ ಬಣ್ಣದ ವಾಯರ್ ಹಗ್ಗದಿಂದ ಉರುಲು ಹಾಕಿ ಕೊಲೆ ಮಾಡಿದ್ದಾರೆ ಎಂದು ಮತ್ತು ಸಾವಿಗೂ ಮೊದಲು ಶಿವಪ್ಪ, ಆರೋಪಿ ಸ್ಥಾನದಲ್ಲಿರುವವರಲ್ಲಿ…

Read More

2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಫಲಿತಾಂಶ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಪ್ರಸಕ್ತ 2024-25 ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ.ವಾಷಿ೯ಕ ಪರೀಕ್ಷೆ-1 ರ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು ಇಲ್ಲಿನ ಶ್ರೀಮದ್ ವೀರಶೈವ ವಿದ್ಖಾಲಯ ಅಸೋಸಿಯೇಷನ್ ಸಂಸ್ಥೆಯ ರಾವಬಹದ್ದೂರ ಡಾ,ಫ.ಗು.ಹಳಕಟ್ಟಿ (ಆರ್. ಬಿ.ಪಿ.ಜಿ) ಪ್ರೌಢಶಾಲೆಗೆ ಅತ್ಯುತ್ತಮ ಫಲಿತಾಂಶ ಲಭಿಸಿದ್ದು ಬಾಲಕಿಯರೇ ಟಾಪರ್ ಅಗಿ ಮಿಂಚಿದ್ದಾರೆ.ಪರೀಕ್ಷೆಯಲ್ಲಿ ಗಮನಾರ್ಹ ಫಲಿತಾಂಶ ಪಡೆಯುವದರೊಂದಿಗೆ ಬಾಲಕಿಯರು ಅಮೋಘ ಮೇಲುಗೈ ಸಾಧಿಸಿ ಮಿನುಗಿದ್ದು ಇಲ್ಲಿ ವಿಶೇಷ. ಕುಮಾರಿ, ಸುಷ್ಮಿತಾ ವಸಂತ ರಾಠೋಡ 571 (ಶೇ,91.36) ಅಂಕ ಪಡೆಯುವ ಮೂಲಕ ಶಾಲೆಗೆ ಟಾಪರ್ ಅಗಿ ಮೊದಲ ಸ್ಥಾನ ಪಡೆದಿದ್ದಾಳೆ. ಕುಮಾರಿ ಸೌಮ್ಯಾ ಕೆ.ನಲವಡೆ 566 (ಶೇ,90.56) ಅಂಕದೊಂದಿಗೆ ಪಾಸಾಗಿ ದ್ವೀತಿಯ ಸ್ಥಾನ ಪಡೆದರೆ ಕುಮಾರಿ ಸಂಗೀತಾ ಸಾರವಾಡ 544 (ಶೇ,87.04 ) ಅಂಕಗಳಿಸುವ ಮೂಲಕ ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾಳೆ.ಕುಮಾರಿ ಸಿಂಚನಾ ಆಲಮಟ್ಟಿ 521(ಶೇ, 83.36) 4 ನೇ ಸ್ಥಾನ, ಕುಮಾರ ಹರೀಷ ಕೆ.ವಡ್ಡರ. 503 (ಶೇ,80.48 ) 5 ನೇ ಸ್ಥಾನ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನಲ್ಲಿ ಒಟ್ಟು ೪೭೩೪ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಅದರಲ್ಲಿ ೨೪೪೩ ವಿದ್ಯಾರ್ಥಿಗಳು ಪಾಸಾಗಿದ್ದು ಶೇ ೫೨. ೬೮ ಪ್ರತಿಶತ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಪ್ರಭಾರಿ ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಆರ್.ನಡಗಡ್ಡಿ , ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್ ಅಧಿಕಾರಿ ಎ.ಓ. ಹೂಗಾರ ತಿಳಿಸಿದ್ದಾರೆ೨೪೨೪ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ೧೦೨೧ ವಿದ್ಯಾರ್ಥಿಗಳು ಮತ್ತು೨೩೧೦ ವಿದ್ಯಾರ್ಥಿನಿಯರಲ್ಲಿ ೧೪೨೨ ವಿದ್ಯಾರ್ಥಿನಿಯರು ಪಾಸಾಗಿದ್ದಾರೆ.ಸಾಯಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಕೊಡಹೊನ್ನ ತಾಲೂಕಿಗೆ ಪ್ರಥಮ, ಬಂಥನಾಳ ಮುರಾರಜಿ ಶಾಲೆಯ ಶ್ರೇಯಾ ರಾಜಶೇಖರ ಶಿರಶ್ಯಾಡ ತಾಲೂಕಿಗೆ ದ್ವೀತಿಯ ಮತ್ತುಬಂಥನಾಳದ ಮುರಾರಜಿ ಶಾಲೆ ಯುವರಾಜ ಹಿಟ್ಟಿನಹಳ್ಳಿ ಮತ್ತು ಸಾಯಿ ಪಬ್ಲಿಕ್ ಶಾಲೆಯ ಸುಶ್ಮಿತಾ ಮಾಶ್ಯಾಳ ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ.ತಾಲೂಕಿನಲ್ಲಿ ಕನ್ನಡ ಪ್ರಥಮ ಬಾಷೆಗೆ ೧೨೫ ಕ್ಕೆ ೧೨೫ ಅಂಕಗಳನ್ನು ೩೪ ವಿದ್ಯಾರ್ಥಿಗಳು, ದ್ವೀತಿಯ ಭಾಷೆ ಇಂಗ್ಲೀಷ್ ಗೆ ೧೦೦ ಕ್ಕೆ ೧೦೦ ಅಂಕಗಳನ್ನು ೬ ಅಂಕಗಳನ್ನು ದ್ವೀತಿಯ ಭಾಷೆ ಕನ್ನಡ ೧೦೦ ಕ್ಕೆ ೧೦೦ ಅಂಕಗಳನ್ನು ೨೭ ಮತ್ತು ತೃತೀಯ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಹೊರವಲಯದ ಆಲಮೇಲ ರಸ್ತೆಯಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ-೧ರಲ್ಲಿ ೯೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ೫೮, ಪ್ರಥಮ ಶ್ರೇಣಿ೧೧, ದ್ವಿತೀಯ ಶ್ರೇಣಿ ೧೨ ಹಾಗೂ ತೃತೀಯ ಶ್ರೇಣಿಯಲ್ಲಿ ೦೬ ವಿದ್ಯಾರ್ಥಿಗಳು ಪಾಸಾಗಿದ್ದು, ಶಾಲೆಯ ಒಟ್ಟು ಫಲಿತಾಂಶ ಶೇ.೮೫ಕ್ಕೂ ಅಧಿಕದಷ್ಟಾಗಿದೆ.ಗಂಗಾ ಭತ್ತಗೌಡರ ೬೨೫ ಅಂಕಗಳಿಗೆ ೬೨೩ (ಶೇ.೯೯.೬೮%) ಅಂಕಗಳು ಪಡೆದು ಪ್ರಥಮ ಸ್ಥಾನ, ಮಹ್ಮದಯೂನುಸ್ ಅಳ್ಳೋಳ್ಳಿ ೬೧೭ (೯೮.೭೨%) ದ್ವಿತೀಯ, ವಿಜಯಲಕ್ಷ್ಮಿ ವಸ್ತ್ರದ ೬೧೫ (ಶೇ.೯೮.೪೦%) ತೃತೀಯ, ಶರಣಗೌಡ ಬಗಲಿ ೬೧೨(ಶೇ.೯೭.೯೨%), ರೋಹಿತ ಕಲ್ಯಾಣಿ ೬೧೦ (ಶೇ.೯೭.೬೦%), ಅನನ್ಯ ದೇವಣಗಾಂವ ೬೦೯ (ಶೇ.೯೭.೪೪%), ಯಶೋಧಾ ಹಂಚಿನಾಳ ೬೦೭ (ಶೇ.೯೭.೧೨%) ಅಭಿಷೇಕ ಕಾಮಣ್ಣನವರ ೬೦೬ (ಶೇ.೯೬.೯೬%), ಭವಾನಿ ಹಣಮಶೆಟ್ಟಿ ೬೦೪ (ಶೇ.೯೬.೬೪%), ನಂದಿನಿ ಚವ್ಹಾಣ ೬೦೪ (ಶೇ.೯೬.೬೪%), ಸ್ವಾತಿ ಪತ್ತಾರ ೬೦೪ (ಶೇ.೯೬.೬೪%), ಲಕ್ಷ್ಮಿ ಅರ್ಜುಣಗಿ ೬೦೧ (ಶೇ.೯೬.೧೬%)…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಶ್ರೀಗುರುಕೃಪಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ-೧ರಲ್ಲಿ ೧೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ೧೦, ಪ್ರಥಮ ಶ್ರೇಣಿಯಲ್ಲಿ ೦೬ ಪಾಸಾಗಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಶೀರಿನ ಸಿತನೂರ ೬೨೫ ಅಂಕಗಳಿಗೆ ೬೦೭ (ಶೇ.೯೭.೧೨%) ಅಂಕಗಳು ಪಡೆದು ಪ್ರಥಮ ಸ್ಥಾನ, ಅಪೂರ್ವ ಹೊಸಮನಿ ೬೦೪ (೯೬.೭೪%) ದ್ವಿತೀಯ, ಗಂಗಪ್ಪ ರೆನಿನಾಳ ೫೯೯ (ಶೇ.೯೫.೮೪%) ತೃತೀಯ, ನಿಶಾನ ಕುಲಕರ್ಣಿ ೫೮೮ (ಶೇ.೯೪.೦೮%), ಸಂರ್ಪಿತ ಚೌಧರಿ ೫೮೫ (ಶೇ.೯೩.೧೨%), ವೀರುಪಾಕ್ಷಿ ಈಳಗೇರ ೫೬೬ (ಶೇ.೯೦.೫೬%), ತುಳಸಿ ಪವಾರ ೫೫೩(ಶೇ.೮೮.೪೮%) ಶರಣಬಸು ಭಟ್ಟ (ಶೇ.೮೮.೨೩%), ನಿಂಗನಗೌಡ ಬಿರಾದಾರ ೫೪೮ (ಶೇ.೮೭.೬೫೮%), ಸ್ಫೂರ್ತಿ ೫೩೬ (ಶೇ.೮೫.೭೬%) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಹೆಚ್.ಟಿ.ಕುಲಕರ್ಣಿ, ಕಾರ್ಯದರ್ಶಿ ಎಚ್.ಜಿ.ಪೊದ್ದಾರ, ಸೇರಿದಂತೆ ಮುಖ್ಯಗುರುಮಾತೆ ಶಾಲೆಯ ಆಡಳಿತ ಮಂಡಳಿ ಸದಸ್ಯರು,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸನಾತನ ಧರ್ಮದ ಸ್ಥಾಪನೆಗಾಗಿ ಶಂಕರಾಚಾರ್ಯರ ಕೊಡುಗೆ ಅಪಾರವಾದದ್ದು ಎಂದು ಸದ್ಗುರು ಭೀಮಾಶಂಕರ ಮಠದ ಪೀಠಾಧಿಪತಿ ದತ್ತಪ್ಪಯ್ಯ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಸಂಗಮೇಶ್ವರ ದೇವಸ್ಥಾನದಿಂದ ಸದ್ಗುರು ಭೀಮಾಶಂಕರ ಮಠದವರೆಗೆ ಅದ್ವೈತ ಸಿದ್ದಾಂತದ ಮಹಾಗುರು ಶಂಕರಾಚಾರ್ಯರ ಬೃಹತ್ ಶೋಭಾ ಯಾತ್ರೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶಂಕರಾಚಾರ್ಯ ಜಯಂತಿ ನಿಮಿತ್ತವಾಗಿ ಹಲವಾರು ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಹಮ್ಮಿಕೊಂಡಿದ್ದು ತಾವೆಲ್ಲರೂ ಆಗಮಿಸಿದ್ದಕ್ಕೆ ಸಂತಸ ತಂದಿದೆ. ಆದಿಗುರು ಶಂಕರಾಚಾರ್ಯರು ನಾಲ್ಕು ಪೀಠಗಳನ್ನು ಸ್ಥಾಪಿಸಿ ಸನಾತನ ಧರ್ಮದ ಮಹತ್ವವನ್ನು ಸಾರಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಗುರು ಶಂಕರಾಚಾರ್ಯರು ನಾಲ್ಕು ಪೀಠಗಳಲ್ಲಿ ಒಂದಾದ ಶೃಂಗೇರಿ ಶಾರದಾ ಪೀಠವು ನಮ್ಮಲ್ಲೇ ಇದೆಯೆಂದರು. ಶಂಕರಾಚಾರ್ಯರು ಸನಾತನ ಧರ್ಮ ರಕ್ಷಣೆಗಾಗಿ ತಮ್ಮ ಬದುಕನ್ನು ಅರ್ಪಿಸಿದ್ದಾರೆ ಎಂದರು.ಅದ್ವೈತ ಸಿದ್ದಾಂತದ ಮಹಾಗುರು ಎಂದೇ ಖ್ಯಾತರಾದ ಶ್ರೀ ಶಂಕರಾಚಾರ್ಯರ ಜಯಂತಿ ನಿಮಿತ್ತವಾಗಿ ಇಂದು ಪಟ್ಟಣದಲ್ಲಿ ಸಂಗಮೇಶ್ವರ ದೇವಸ್ಥಾನದಿಂದ ಸದ್ಗುರು ಭೀಮಾಶಂಕರ ಮಠದವರೆಗೆ ಬೃಹತ್ ಶೋಭಾ ಯಾತ್ರೆಯನ್ನು ಸಮುದಾಯದ ಮುಖಂಡರೆಲ್ಲರೂ ಸೇರಿ ಯಶಸ್ವಿಗೊಳಿಸಿದ್ದೀರಿ ಎಂದು ಹೇಳಿದರು.ಈ ವೇಳೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪಗರಿ ಅವರ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ ಅವರ ಅನುಮೋದನೆ ಹಾಗೂ ಆದೇಶದ ಮೇರೆಗೆ ಪಟ್ಟಣದ ನಿವಾಸಿ ಸಮಾಜ ಸೇವಕ ಸಲೀಮ್ ಪಟೇಲ್ ಮರ್ತೂರ ಅವರನ್ನು ತಾಲೂಕ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಅಧ್ಯಕ್ಷರನ್ನಾಗಿ ನೇಮಿಸಿ ಜಿಲ್ಲಾಧ್ಯಕ್ಷ ಶಕೀಲ್ ಅಹ್ಮದ ಬಾಗಮಾರೆ ಅವರು ಆದೇಶ ಹೊರಡಿಸಿದ್ದಾರೆ.ಸಮಾಜಮುಖಿ ಕಾರ್ಯ, ಪಕ್ಷ ನಿಷ್ಠೆಯ ಕಾರ್ಯವನ್ನು ಗುರುತಿಸಿ ಸ್ಥಳೀಯ ಶಾಸಕ ಅಶೋಕ ಮನಗೂಳಿ ಅವರ ಆದೇಶದ ಮೇರೆಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ತಾಲೂಕು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಚರಿಸಿ ಸಮಾಜದ ಹಿರಿಯ ಹಾಗೂ ಯುವಕರನ್ನು ಭೇಟಿ ನೀಡಿ ಪಕ್ಷದ ಹಾಗೂ ಸ್ಥಳೀಯ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಅವರಿಗೆ ತಿಳಿಸಿ ಪಕ್ಷದ ಜೊತೆಗೆ ಸಂಘಟನೆಯನ್ನು ಬೆಳೆಸುವ ಕಾರ್ಯ ನಿಮ್ಮಿಂದಾಗಬೇಕು ಎಂದು ತಿಳಿಸಿದ್ದಾರೆ. ತಾವುಗಳು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಎಸ್.ಡಿ.ಕೆ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಅಕ್ಷತಾ ಹಿರೇಮಠ ಶೇ೯೮.೭೨ ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ, ವಿನಯ ಮಾಮನಿ ಮತ್ತು ಪ್ರಗತಿ ಮೇತ್ರಿ ತಲಾ ಶೇ೯೮.೫೬ ಅಂಕಗಳನ್ನು ಪಡೆದು ದ್ವಿತೀಯ, ಬನಶ್ರೀ ವಡವಡಗಿ ಮತ್ತು ಸಿದ್ಧಲಿಂಗ ಬಂಗಿ ತಲಾ ಶೇ೯೮.೨೪ ಅಂಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಶಾಲೆಯ ಒಟ್ಟು ಫಲಿತಾಂಶ ಶೇ೯೫ ರಷ್ಟಾಗಿದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಜಿ.ಮಠ ಅಭಿನಂದಿಸಿದ್ದಾರೆ.

Read More