ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ತಾರಾಪೂರ ಗ್ರಾಮವು ಭೀಮಾ ನದಿಯ ದಂಡದಲ್ಲಿರುವ ಈ ತಾರಾಪೂರ ಗ್ರಾಮವು ಕಾಶಿಯ ಕಡಿಯ ಬಾಗಿಲ ಎಂದು ಹೆಸರುವಾಸಿಯಾಗಿರುವ ಈ ತಾರಾಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ತಾರಕೇಶ್ವರ ದೇವಸ್ಥಾನ ಅವರಣದಲ್ಲಿ ಸಮಸ್ತ ತಾರಾಪುರ ಗ್ರಾಮದ ಮಹಿಳೆಯರು ಮಕ್ಕಳು ಯಾವುದೇ ಜಾತಿ ಭೇದವಿಲ್ಲದೆ ಕರೆ ಕಟ್ಟುವ ಪದ್ಧತಿ ಹಿಂದಿನಿಂದ ಬಂದ ಸಂಪ್ರದಾಯವನ್ನು ಇನ್ನು ನಮ್ಮ ಹಳ್ಳಿಗಳಲ್ಲಿ ಉಳಿಸಿಕೊಂಡು ಬಂದಿದ್ದಾರೆ.
ನಮ್ಮ ಉತ್ತರ ಕರ್ನಾಟಕದ ಸಿವಿ ಸಿವಿ ಊಟವಾದ ಚಜ್ಜೆ ರೊಟ್ಟಿ ಪುಂಡಿ ಪಲ್ಲೆ ಬದನೆಕಾಯಿ ಪಲ್ಲೆ ಶೃಂಗಾದ ಚಟ್ನಿ ಶೇಂಗಾ ಹೋಳಿಗಿ ಹಾಗೂ ನಾನು ತರದ ಸಿಹಿ ತಿನಿಸುಗಳನ್ನು ಸಿವಿದ ನಂತರ ಮಹಿಳರಿಂದ ಸರಬಿ ಆಟ ಆಡಿದರು.
ಐದು ಜನ ಮುತ್ತೈದೆಯರು ಐದು ಕಳಸವನ್ನು ಭೀಮಾ ನದಿಯಲ್ಲಿ ತುಂಬಿಕೊಂಡು ಬಂದು ನಂತರ ಸಂಪ್ರದಾಯ ಪ್ರಕಾರ ಪೂಜ ಪುನಸ್ಕಾರವನ್ನು ಮಾಡಿ ಎಲ್ಲಾ ಮಹಿಳೆಯರು ಕೂಡಿಕೊಂಡು ಕರೆ ಕಟ್ಟಿ ಹೊಡೆದು ಸಾಮೂಹಿಕವಾಗಿ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು .

