Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗುರು ಸಾರ್ವಭೌಮರ 354 ನೇ ಆರಾಧನಾ ಮಹೋತ್ಸವದ ಅಂಗವಾಗಿ ಇಲ್ಲಿನ ದಿವಟಗೇರಿ ಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ಗುರು ರಾಯರ ಆರಾಧನಾ ಮಹೋತ್ಸವವು ಮಂಗಳವಾರ ಉತ್ತಾರಾರಾಧನೆ ಮೂಲಕ ಸಂಪನ್ನಗೊಂಡಿತು.ಬೆಳಗ್ಗೆ ಸುಪ್ರಭಾತ, ವಿವಿಧ ಅರ್ಚಕರ ನೇತೃತ್ವದಲ್ಲಿ ರಥಾಂಗ ಹವನ, ಶ್ರೀಹರಿ-ವಾಯುಸ್ತುತಿ ಪುನಶ್ಚರಣ, ಶ್ರೀಗುರುಸ್ತೋತ್ರ ಅಷ್ಟೋತ್ತರ ಶತಃಪಠಣಪೂರ್ವಕ ಶ್ರೀಗುರುಸಾರ್ವಭೌಮರಿಗೆ 108 ಕಲಶದಿಂದ ವಿವಿಧ ಹಣ್ಣು ಹಂಪಲಗಳ ಕ್ಷೀರಾಭಿಷೇಕ ಹಾಗೂ ಮಹಾಪಂಚಾಮೃತಾಭಿಷೇಕ ನೆರವೇರಿಸಲಾಯಿತು.ನಂತರ ಶ್ರೀಮಠದ ಪ್ರಾಂಗಣದಲ್ಲಿ ಪಲ್ಲಕ್ಕಿ ಸೇವೆ ಜತೆಗೆ ವಿವಿಧ ಫಲ ಪುಷ್ಪಗಳಿಂದ ಅಲಂಕರಿಸಿದ ರಜತ ರಥೋತ್ಸವ ಸಂಭ್ರಮದಿಂದ ನಡೆಯಿತು. ವಿವಿಧ ಭಜನಾ ತಂಡಗಳು ಗುರು ರಾಯರ ಸ್ಮರಣೆಯ ಹಾಡುಗಳನ್ನು ಹಾಡಿದರು. ಬಡಾವಣೆಯ ಮಹಿಳೆಯರು ಸಾಂಪ್ರಾದಾಯಿಕ ಉಡುಗೆಯಲ್ಲಿ ಕೋಲಾಟ ಆಡಿ ಗಮನ ಸೆಳೆದರು.ಆರಾಧನಾ ಮಹೋತ್ಸವದ ಕೊನೆಯ ದಿನದ ಹಿನ್ನೆಲೆಯಲ್ಲಿ ಅಪಾರ ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದು ಪುನೀತರಾದರು.ಗಣ್ಯರಾದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನೂತನ ಮೇಯರ್ ಎಂ.ಎಸ್.…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಜಾಗತಿಕ ಜಿನಿವಾ ಸಮಾವೇಶ ದಿನಾಚರಣೆಯಲ್ಲಿ ಪ್ರೊ.ಎಸ್.ಪ್ರದೀಪ್ ಕುಮಾರ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿನೀವಾ ಒಪ್ಪಂದಗಳು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಹೃದಯವಾಗಿದ್ದು, ಸಶಸ್ತ್ರ ಸಂಘರ್ಷಗಳ ನಡವಳಿಕೆಯನ್ನು ನಿಯಂತ್ರಿಸಿ, ಅದರ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತವೆ ಎಂದು ಅಂಜುಮನ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಎಸ್.ಪ್ರದೀಪ್ ಕುಮಾರ್ ಹೇಳಿದರು.ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ರೆಡ್ ಕ್ರಾಸ್ ಸೆಲ್ ಸಹಯೋಗದಲ್ಲಿ ಮಂಗಳವಾರ ದಿನಾಂಕ ೧೨-೮-೨೦೨೫ ರಂದು ಅಯೋಜಿಸಲಾದ ಜಾಗತಿಕ ಜಿನಿವಾ ಸಮಾವೇಶ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ವಿಶ್ವ ಜಿನೀವಾ ಒಪ್ಪಂದ ದಿನವನ್ನು ಪ್ರತಿವರ್ಷ ಆಗಸ್ಟ್ ೧೨ ರಂದು ಆಚರಿಸಲಾಗುತ್ತದೆ. ಇದು ೧೯೪೯ರಲ್ಲಿ ಅಂಗೀಕರಿಸಲ್ಪಟ್ಟ ಜಿನೀವಾ ಒಪ್ಪಂದಗಳ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. ಇವು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಮೂಲಭೂತ ಒಪ್ಪಂದಗಳಾಗಿದ್ದು, ಸಶಸ್ತ್ರ ಸಂಘರ್ಷದ ಸಮಯದಲ್ಲಿ ಹೋರಾಟದಲ್ಲಿ ಭಾಗವಹಿಸದ ಜನರನ್ನು ರಕ್ಷಿಸುವ ಉದ್ದೇಶ ಹೊಂದಿವೆ…

Read More

ಉದಯರಶ್ಮಿ ದಿನಪತ್ರಿಕೆ ನಾನು ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿದ್ದಾಗ ಐಚ್ಚಿಕ ಹಿಂದಿ ವಿಷಯವನ್ನು ತೆಗೆದು ಕೊಂಡಿದ್ದರೂ ನನ್ನ ಸಾಹಿತಿಕ ಅಭಿರುಚಿ ಗುರುತಿಸಿ ಬರೆಯಲು ಬೆನ್ನು ತಟ್ಟಿದ ನನ್ನ ಗುರುಗಳು. ಅವರೊಬ್ಬ ಭವ್ಯ ಮಾನವ ವಿದ್ಯಾರ್ಥಿಗಳನ್ನು ಅತಿಯಾಗಿ ಪ್ರೀತಿಸಿ ಪ್ರೋತ್ಸಾಹಿಸಿದ ಶಿಸ್ತಿನ ಶಿಪಾಯಿ. ಮೃತರ ಕುಟುಂಬಕ್ಕೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ರಾಮದುರ್ಗದ ವತಿಯಿಂದ ಭಕ್ತಿಪೂರ್ವಕ ಶೋಕದ ನಮನಗಳು.- ಡಾ ಶಶಿಕಾಂತ ಪಟ್ಟಣರಾಮದುರ್ಗ ಗುರುವಿಗೆ ಕಂಬನಿ ಕರುನಾಡ ನೆಲದಲ್ಲಿಹುಲುಸು ಧಾರವಾಡದ ಪುರವುಕರ್ನಾಟಕ ಕಾಲೇಜಿನಲ್ಲಿಇದ್ದರೊಬ್ಬರು ಗುರು ಇಲ್ಲದಂತೆಅತಿ ಶಿಸ್ತಿನ ಶಿಕ್ಷಕಸಮಯ ಪಾಲಕಗಂಭೀರ ನಡೆ ಸೌಮ್ಯ ನುಡಿಪಾಠ ಮಾಡುವ ಕಾರ್ಯಜಪ ತಪ ಪೂಜೆಮಂದಹಾಸದ ನಗೆವಿದ್ಯಾರ್ಥಿಗಳ ಚಿಲುಮೆಬರಹ ಓದು ಕವನನಾಟಕಗಳ ಗೀಳುಅದೆಷ್ಟೋ ಮಕ್ಕಳಿಗೆ ಮಾರ್ಗದರ್ಶಿಸ್ನೇಹ ಸಮತೆಯ ಪ್ರೇಮದರ್ಶಿಚೆಲುವಾಯಿತು ಕನ್ನಡವುಗೋಕಾಕ ಚಳುವಳಿಯುವಿದ್ಯಾವರ್ಧಕ ಭವನದಹೊನ್ನ ಗುಡಿಯುಭರತೇಶನ ಭೋಗವೈಭವಕಾವ್ಯ ಕುಸುಮವು ನಿಮಗೆಯಾರಿಲ್ಲದ ಹಾದಿಯಲಿಸದ್ದಿಲ್ಲದೇ ಹೋದಿರಿಬಿಕ್ಕುತಿಹೆವು ನಾವುನಿಮ್ಮ ಕರುಣೆ ಕುಡಿಗಳುಹೋಗಿ ಬನ್ನಿರಿ ಗುರುಗಳೇನಿಮಗಿಂದು ವಿದಾಯನಾನು ಏಕಲವ್ಯನಾದೆ ಗುರುವೇಆಗಲಿಲ್ಲ ನೀವು ದ್ರೋಣರುನಿಮ್ಮ ನೆನಪಿನಲಿ ನಡೆಯುವೆವುಬಿ ವಿ ಗುಂಜೇಟ್ಟಿಯವರೇನಿಮಗೆ ನಮ್ಮ ಶೋಕದನೋವಿನ…

Read More

ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಗೌರವಧನ ಹೆಚ್ಚಿಸುವ ಕುರಿತು ಅರ್ಧ ಗಂಟೆ ಚರ್ಚೆಗೆ ಅವಕಾಶಕ್ಕೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಸ್ಥಳೀಯ ಸಂಸ್ಥೆಗಳ ಮೇಯರ್, ಉಪಮೇಯರ್, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗೌರವಧನ ಹೆಚ್ಚಿಸುವ ಕುರಿತು ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಮಾಡಿದ ಮನವಿಗೆ ಸಭಾಪತಿ ಬಸವರಾಜ ಹೊರಟ್ಟಿ ಒಪ್ಪಿಗೆ ನೀಡಿದ್ದಾರೆ.ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಪರಿಷತ ಅಧಿವೇಶನದಲ್ಲಿ ಮಂಗಳವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಸುನೀಲಗೌಡ ಪಾಟೀಲ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಲಿಖಿತ ಉತ್ತರ ನೀಡಿದ್ದರು. ಈ ಉತ್ತರಕ್ಕೆ ತೃಪ್ತರಾಗದ ಶಾಸಕರು, ಕೇರಳ, ಹರಿಯಾಣ, ತಮಿಳನಾಡು, ತೆಲಗಾಂಣ ಹಾಗೂ ಮದ್ಯಪ್ರದೇಶ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನೀಡಲಾಗುತ್ತಿರುವ ಗೌರವಧನ ಅತೀ ಕಡಿಮೆ ಇದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಸಚಿವರು, ಶಾಸಕರು ಹಾಗೂ ಸರಕಾರಿ ನೌಕರರ ವೇತನ ಹೆಚ್ಚಿಸಲಾಗಿದೆ. ಆದರೆ, ನಗರಸಭೆ, ಪುರಸಭೆ, ಪಟ್ಟಣ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಇಂದು ಮಂಗಳವಾರ ಹರ್ ಘರ್ ತಿರಂಗಾ ರ‍್ಯಾಲಿ ನಡೆಯಿತು.ಡೀಮ್ಡ್ ವಿವಿ‌ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಅವರು ತಿರಂಗಾ ರ‍್ಯಾಲಿಗೆ ಚಾಲನೆ ನೀಡಿದರು.ಈ ರ‍್ಯಾಲಿಯು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಮುಂಭಾಗದ ಸೋಲಾಪೂರ ರಸ್ತೆಯಿಂದ 770 ಲಿಂಗದ ದೇವಸ್ಥಾನ, ಸಂಗನಬಸವ ಕಲ್ಯಾಣ ಮಂಟಪ ಮಾರ್ಗವಾಗಿ ಬಿ.ಎಲ್.ಡಿ.ಇ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಏನ್.ಆರ್.ಐ ಹಾಸ್ಟೇಲ್ ಮಾರ್ಗವಾಗಿ ಮರಳಿ ವಿಶ್ವವಿದ್ಯಾಲಯದಲ್ಲಿ ಮುಕ್ತಾಯವಾಯಿತು.ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳು, ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸಾಯಿನ್ಸಸ್, ಭೌತಚಿಕಿತ್ಸೆ ಶಾಲೆ ಹಾಗೂ ಕಾನೂನು ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸ್ಥಳೀಯ ಶ್ರೀ ಸಂಗಮೇಶ್ವರ ಬಾಲಕ, ಬಾಲಕಿಯರ ಮಾಧ್ಯಮಿಕ ಶಾಲೆಯಲ್ಲಿ ರಕ್ಷಾ ಬಂಧನದ ಹಬ್ಬವನ್ನು ಗಿಡಗಳಿಗೆ ರಾಖಿ ಕಟ್ಟುವುದರ ಮೂಲಕ ವಿಶೇಷವಾಗಿ ಆಚರಿಸಲಾಯಿತು.ಇದೆ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಗುರು ಎಚ್ ಆರ್ ಬಗಲಿ, ಪ್ರತಿಯೊಬ್ಬ ಸಹೋದರ ಸಹೋದರಿಯರು ಇದೆ ರೀತಿ ಒಂದೊಂದು ಗಿಡಗಳಿಗೆ ರಾಖಿ ಕಟ್ಟಿ ದತ್ತು ತೆಗೆದುಕೊಂಡು ಸರಿಯಾಗಿ ಬೆಳೆಸಿದರೆ, ಪರಿಸರ ಸಂರಕ್ಷಣೆ ಆಗುತ್ತದೆ ಅಲ್ಲದೆ ಮಾಲಿನ್ಯ ನಿಯಂತ್ರಣ ಸಹ ಆಗುತ್ತದೆ. ಇಂತಹ ಕಾರ್ಯಕ್ರಮಗಳು ನಡೆದರೆ ಪ್ರತಿಯೊಬ್ಬರಿಗೂ ಪರಿಸರ ಸಂರಕ್ಷಣೆಯ ಅರಿವು ಮೂಡುತ್ತದೆ. ರಾಖಿ ಕಟ್ಟಿದ ಸಹೋದರಿಯ ಸಂರಕ್ಷಣೆಯ ಜವಾಬ್ದಾರಿ ಸಹೋದರ ಹೇಗೆ ತೆಗೆದುಕೊಳ್ಳುತ್ತಾನೆ ಹಾಗೆ ಗಿಡಗಳಿಗೆ ರಾಖಿ ಕಟ್ಟಿ ಅವುಗಳ ಸಂರಕ್ಷಣೆ ಹೊಣೆಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು ಅಂದಾಗ ಮಾತ್ರ ನಮ್ಮ ಪರಿಸರ ಸಂರಕ್ಷಣೆಯೂ ಆಗುತ್ತದೆ ಮತ್ತು ಮಾಲಿನ್ಯ ಆಗುವುದಿಲ್ಲ ಅಲ್ಲದೆ ಮಳೆಯೂ ಚೆನ್ನಾಗಿ ಆಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಶಿವಶರಣ ನೂಲಿಚೆಂದಯ್ಯನವರ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ನೂಲಿ ಚೆಂದಯ್ಯನವರ ಕುರಿತು ಅನೇಕ ಮಕ್ಕಳು ಮಾತನಾಡಿದರು.ಸಹ ಶಿಕ್ಷಕ ಎಸ್…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಕಲಿಯುಗದ ಕಾಮಧೇನು ಕಲ್ಪವೃಕ್ಷರಾದ ಶ್ರೀ ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವದ ಪ್ರಥಮಾರಾಧನೆ ಪಟ್ಟಣದ ರಾಯರ ಮಠದಲ್ಲಿ ಬೆಳ್ಳಿಗೆ ಸುಪ್ರಭಾತ, ಅಷ್ಟೋತ್ತರ, ರಥೋತ್ಸವ, ಪಲ್ಲಕ್ಕಿ ಉತ್ಸವ, ಭಜನೆ, ತೀರ್ಥ-ಪ್ರಸಾದ ಭಕ್ತಿಭಾವದೊಂದಿಗೆ ಜರುಗಿತ್ತು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಆರ್.ವ್ಹಿ. ದೇಶಪಾಂಡೆ, ಉಪಾಧ್ಯಕ್ಷ ಆನಂದ ಕುಲಕರ್ಣಿ,ಖಜಾಂಚಿ ಡಿ.ಎಸ್.ಜೋಶಿ, ಪ್ರಸನ್ನ ದೇಶಪಾಂಡೆ, ವೇಂಕಟೇಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ,ಜೆ.ವ್ಹಿ.ಪಾಟೀಲ, ಎನ್.ಕೆ. ನಾಡಪುರೋಹಿತ, ದತ್ತಾ ಕುಲಕರ್ಣಿ, ಮಹೇಶ ಜೋಶಿ, ರವಿ ನಾಯಿಕ,ಕೃಷ್ಣ ಚಟ್ಟರಕಿ, ಸಂಜೀವ ಚಟ್ಟರಕಿ, ಜಿ.ಎಸ್.ಜೋಶಿ,ರಾಜು ಕುಲಕರ್ಣಿ, ಅರ್ಚಕ ಜಗನಾಥ ಜಾಗೀರದಾರ ಸೇರಿದಂತೆ ನೂರಾರು ಜನ ಭಾಗವಹಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: “ಎರಡು ನಕ್ಷತ್ರಗಳು ಕೃತಿ “ಸರ್ವೇ ಜನ ಸುಖಿನೋ ಭವಂತು ಎಂಬ ತತ್ವ, ಈ ಕೃತಿ ಒಳಗೊಂಡಿದೆ. ಮನುಷ್ಯ ಮನುಷ್ಯರನ್ನಾಗಿ ಕಾಣಬೇಕು. ಹಿರಿಯರಿಗೆ ಗೌರವಿಸಬೇಕು, ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಆಶಯ ಈ ಕೃತಿಯಲ್ಲಿ ಮೂಡಿಬಂದಿದೆ ಎಂದು ಕೃತಿ ಬಿಡುಗಡೆಗೊಳಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಹೇಳಿದರು.ಪಟ್ಟಣದ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ ಸಹಯೋಗ ಶ್ರೀ ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಹಾಗೂ ಶ್ರೀ ಅರವಿಂದೊ ಸೊಸೈಟಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ 96ನೇ ಹುಣ್ಣಿಮೆ ಬೆಳಕು ಶರಣರ ಸಂದೇಶ ಕಾರ್ಯಕ್ರಮದಲ್ಲಿ ಕೈಲಾಸವಾಸಿ ಶ್ರೀ ಶಂಕರ್ ರಾವ್ ಕುಲಕರ್ಣಿ ಹಾಗೂ ಉಪನ್ಯಾಸಕ ಸದಾನಂದ ಎಸ್ ಈರನಕೇರಿ‌ ಅವರ ವಿರಚಿತ ಎರಡು ನಕ್ಷತ್ರಗಳು ಎಂಬ ವ್ಯಕ್ತಿ ಚಿತ್ರಣ ಪುಸ್ತಕ ಲೋಕಾರ್ಪಣೆಯಗೊಳಿಸಿ‌‌ದರು.ಎಸ್ ಆರ್ ಮಾಸ್ತರ್ ಎಂದು ಹೆಸರುವಾಸಿಯಾದ ಸಂಗಮೇಶ್ವರ ರೇವಣ್ಣವರ್ ಹಾಗೂ ಶರಣಬಸವ ಈರನಕೇರಿ ಇವರು ಬಾಳಿ ಬದುಕಿದ ವ್ಯಕ್ತಿ ಚಿತ್ರಣ ಇದಾಗಿದೆ. ಇರ್ವರು ಶರಣ ತತ್ವವನ್ನು…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಚಿಕ್ಕಂದಿನಲ್ಲಿ ತನ್ನ ಮಗುವಿಗೆ.. ಅಯ್ಯೋ ಸಣ್ಣ ಮಕ್ಕಳು ಅವರಿಗೇನು ಗೊತ್ತಾಗುತ್ತೆ ಎಂದು ಹೇಳಿ ಮಗುವಿನ ಎಲ್ಲ ಕೆಲಸ ಕಾರ್ಯಗಳನ್ನು ತಾನೇ ಮಾಡುತ್ತಿದ್ದ ತಾಯಿ ಇದೀಗ ಮಗ ಮದುವೆಯ ವಯಸ್ಸಿಗೆ ಬಂದಿದ್ದರೂ ಕೂಡ ಆತನ ಕೆಲಸಗಳನ್ನು ತಾನೇ ಮಾಡುತ್ತಿದ್ದಾರೆ.ಇನ್ನೊಂದೆಡೆ ಪ್ರಚಲಿತದಲ್ಲಿರುವ ಜೋಕು ಹೀಗಿದೆ.. ದೈಹಿಕವಾಗಿ ಬೆಳೆದಿರುವ ತನ್ನ ಮಗನನ್ನು ನಿರ್ವಹಿಸಲು ಸಾಧ್ಯವಿಲ್ಲದೆ ಆತನಿಗೆ ತಾಯಿ ಮದುವೆ ಮಾಡಿ ಮತ್ತೊಂದು ಹೆಣ್ಣುಮಗಳ ಕೈಗೆ ಇಡುತ್ತಾರೆ ಎಂದು.ನಮ್ಮ ಸ್ವಂತ ಮಕ್ಕಳನ್ನು ನಾವು ಸಂಭಾಳಿಸಬಹುದು.. ಆದರೆ ನಮ್ಮ ಅತ್ತೆಯ ಮಗನನ್ನು ಅಲ್ಲ ಎಂಬ ಜೋಕು ಸೊಸೆಯಂದಿರಲ್ಲಿ ಕೇಳಬಹುದು.ಮೇಲಿನ ಘಟನೆಗಳು ನೋಡಲು ಕೇಳಲು ಹೇಳಲು ತಮಾಷೆ ಎಂದೆನಿಸಿದರೂ ಕೂಡ ನಮ್ಮ ಮಕ್ಕಳನ್ನು ನಾವು ಯಾವ ರೀತಿ ಬೆಳೆಸಬಾರದು ಎಂಬುದಕ್ಕೆ ಸೂಕ್ತ ಉದಾಹರಣೆಗಳಾಗುತ್ತವೆ. ಕೆಲವೊಮ್ಮೆ ಅತಿಯಾದಾಗ ಸಂಬಂಧಪಟ್ಟವರ ಬೇಸರಕ್ಕೂ ಕಾರಣವಾಗುತ್ತದೆ.ಇಂದಿನ ಮಕ್ಕಳೇ ಮುಂದಿನ ನಾಗರಿಕರು.. ತಮ್ಮ ವೈಯುಕ್ತಿಕ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಾಧ್ಯವಾಗದವರು ಬೇರೇನು ಮಾಡಲು ಸಾಧ್ಯ ಎಂಬ…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 19 ನೆಯ ದಿನದ ಶರಣಮಾಸದ ಮಾಲಿಕೆಯಲ್ಲಿಡಾ. ಎಂ.ಎಸ್.ಮದಭಾವಿ ಅವರು ವಚನ ಪಿತಾಮಹ ಫ. ಗು. ಹಳಕಟ್ಟಿ ಅವರ ಬಗೆಗೆ ಅತ್ಯಂತ ಭಾವುಕರಾಗಿ ಅವರ ಜೀವನ ಚಿತ್ರಣವನ್ನು ಮನ ಮುಟ್ಟುವಂತೆ ಕಟ್ಟಿಕೊಟ್ಟರು.ಫ. ಗು.ಹಳಕಟ್ಟಿ ಅವರು 60 ವರ್ಷ ಸಂಗ್ರಹಿಸಿ ಪ್ರಕಟಿಸಿದ ಶರಣ ಸಾಹಿತ್ಯವನ್ನು ಓದಲು ನಮಗೆಲ್ಲರಿಗೂ ಆರು ದಶಕಗಳು ಬೇಕು, ಅವುಗಳನ್ನು ಅರ್ಥ ಮಾಡಿಕೊಳ್ಳಲು ಆರು ನೂರು ವರ್ಷಗಳು ಬೇಕು, ದೇವರೇ ಅವರನ್ನು ಶರಣತತ್ವದ ಕಾರ್ಯದ ಸಲುವಾಗಿ ಭೂಲೋಕಕ್ಕೆ ಕಳಿಸಿರಬೇಕು, 20 ನೆಯ ಶತಮಾನದ 771 ನೆಯ ಅಮರಗಣoಗಳು, 65 ನೆಯ ಪುರಾತನರು ಎಂದು ಅತ್ಯಂತ ಮಾರ್ಮಿಕವಾಗಿ ಹಂಚಿಕೊಂಡರು.ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆ ಮತ್ತು ಅಜ್ಜಿಯ ಸಂಸ್ಕಾರದಲ್ಲಿ ಬೆಳೆದದ್ದು, ಹಾನಗಲ್ ಕುಮಾರ ಸ್ವಾಮಿಗಳ ಭಕ್ತರೆನ್ನುವುದು, ಪ್ರಾಥಮಿಕ, ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿ, ಮುಂಬೈ ನ ಸಂತ. ಝೆವಿಯರ್ ನಲ್ಲಿ ವಿಜ್ಞಾನದ ವಿಷಯದಲ್ಲಿ ಡಿಗ್ರಿ ಮುಗಿಸಿ ನಂತರ ಕನ್ನಡ ಎಂ. ಎ…

Read More