Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವ್ಹಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಗದತಂತ್ರ ವಿಭಾಗದ ವತಿಯಿಂದ ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದ ರೋಗಗಳಿಗಾಗಿ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.ಶಿಬಿರದಲ್ಲಿ ತಪಾಸಣೆ ಮಾಡಲಾಗುವ ಸಮಸ್ಯೆಗಳು:ಕೂದಲಿನ ಸಮಸ್ಯೆಗಳು: ಕೂದಲು ಉದುರುವಿಕೆ, ಕೂದಲು ಗಡಸುತನ, ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದು, ಅಲ್ಲಲ್ಲಿ ವರ್ತುಲಾಕಾರದಲ್ಲಿ ಕೂದಲು ಉದುರುವಿಕೆ (Alopecia) ಮತ್ತು ತಲೆಹೊಟ್ಟು.ಚರ್ಮದ ಸಮಸ್ಯೆಗಳು: ಭಂಗು (Pigmentation), ದೀರ್ಘಕಾಲದ ಮೊಡವೆ ಮತ್ತು ಕಲೆಗಳು, ಚರ್ಮ ಸುಕ್ಕುಗಟ್ಟುವಿಕೆ ಹಾಗೂ ಅಕಾಲಿಕ ನೆರಿಗೆಗಳು.ಈ ಶಿಬಿರವು ಜುಲೈ 22, 23 ಮತ್ತು 24 ರಂದು ನಡೆಯಲಿದೆ. ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಬಿ.ಎಲ್.ಡಿ.ಇ ಸಂಸ್ಥೆಯ ಎ.ವ್ಹಿ.ಎಸ್ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾ. ಸಂಜಯ ಕಡ್ಲಿಮಟ್ಟಿ ಈ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: ಡಾ. ದಾಮೋದರ ನಾಯಕ: 8792121755 ಹಾಗೂ ಆಸ್ಪತ್ರೆಯ ಸಂಖ್ಯೆ: 9513397413 ಸಂಪರ್ಕಿಸಬಹುದಾಗಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (KSCST),ಬೆಂಗಳೂರು ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ತಾಂತ್ರಿಕ ಸಂಸ್ಥೆ ಬಿ.ಜಿ. ನಗರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 49ನೇ ಸರಣಿ ವಿದ್ಯಾರ್ಥಿ ಯೋಜನಾ ಕಾರ್ಯಕ್ರಮ (SPP-2026) ಅಡಿಯಲ್ಲಿ 2026ರ ಜುಲೈ 17 ಮತ್ತು 18ರಂದು ನಡೆದ ರಾಜ್ಯಮಟ್ಟದ ಪೋಸ್ಟರ್ ಪ್ರಸ್ತುತಿ ಹಾಗೂ ಯೋಜನಾ ಪ್ರದರ್ಶನದಲ್ಲಿ ಬಿಎಲ್ಡಿಇ (ಡೀಮ್ಡ್ ವಿಶ್ವವಿದ್ಯಾಲಯ)ದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮಜೀವಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರಾದ ಸುಪ್ರೀತಾ ಆಸ್ಕಿ ಮತ್ತು ರುಚಿತಾ ಕುಂದರಗಿ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ ಲಭಿಸಿದೆ.ವಿದ್ಯಾರ್ಥಿನಿಯರು “Assessment of Vitamin D Receptor Gene Expression in Gestational Diabetes Mellitus (GDM) Patient from North Karnataka” ಎಂಬ ಸಂಶೋಧನಾ ಯೋಜನೆಯನ್ನು ಡಾ. ಜಿ. ಎಸ್. ಕಡಕೋಳ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು. ರಾಜ್ಯದ ನಾನಾ ವಿಶ್ವವಿದ್ಯಾಲಯಗಳಿಂದ ಆಯ್ಕೆಯಾದ ಸಂಶೋಧನಾ ಯೋಜನೆಗಳ ನಡುವೆ ಇವರ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಪ್ರೀತಿಯ ಐಶ್ವರ್ಯತಂಗಾಳಿ ತೀಡುತ್ತಿದ್ದ ಚೆಂದದ ಮುಸ್ಸಂಜೆಯಲ್ಲಿ ಕಾಲೇಜಿನ ಸಾಂಸ್ಕೃತಿಕ ಸಮಾರಂಭದಲ್ಲಿ ನಿನ್ನಂದದ ವರ್ಷಧಾರೆ ಕಣ್ಣು ತುಂಬುತ್ತಿತ್ತು. ಶರತ್ಕಾಲದ ಪೂರ್ಣಚಂದಿರನ ನಾಚಿಸುವ ಮೊಗ, ಕೆಂದುಟಿಯಂಚಿನ ನಗು, ಶಿಲ್ಪಿ ಕೆತ್ತಿದ ಮೈಮಾಟ, ಕವಿಯ ಕಲ್ಪನೆಗೂ ಸಿಗದ ಅಪರೂಪದ ರೂಪ ರಾಶಿ ಅತ್ತಿಂದಿತ್ತ ಇತ್ತಿಂದಿತ್ತ ಓಡಾಡುತ್ತಿತ್ತು. ಬಂಗಾರದ ಮೈಬಣ್ಣಕ್ಕೆ ನವಿಲು ರಂಗಿನ ಮೈಸೂರು ಸಿಲ್ಕ್ ಸೀರೆಯುಟ್ಟು, ಬೆನ್ನಿಗೆ ತೋಳಿಗೆ ಡಿಸೈನ್ ಮಾಡಿಸಿದ ನೀಲಿಬಣ್ಣದ ರವಿಕೆ ತೊಟ್ಟಿದ್ದೆ. ಕೂದಲಿಗೆ ಫ್ರೆಂಚ್ ಜಡೆ ಹೆಣೆದು ಅಲ್ಲಲ್ಲಿಗೆ ಬೀಟ್ಸ್ ಹಾಕಿದ್ದೆ. ಕೈಯಲ್ಲಿ ಹಸಿರು ಚುಕ್ಕಿಯ ಬಳೆಗಳ ಕೊನೆಯಲ್ಲಿ ಹೊಳೆಯುವ ಬಂಗಾರ ಬಳೆಗಳ ಸದ್ದಿನೊಂದಿಗೆ ಬರುತ್ತಿದ್ದ ನಿನ್ನ ಕಂಡಾಗ ಒಂದು ಕ್ಷಣ ಮೈಮರೆತೆ. ಝುಳು ಝುಳು ಹರಿಯುವ ನದಿಯ ನಾದಕೆ, ನವಿಲು ಗರಿ ಬಿಚ್ಚಿ ಆಡುವ ಚೆಂದ ಕಣ್ಣಿಗೆ ಬೀಳುತ್ತಿತ್ತು. ಪ್ರೀತಿಗಾಗಿ ಕಾದ ನನ್ನ ಮನದ ಕುಲುಮೆಯಲ್ಲಿ ಬಗೆಬಗೆಯ ಬಯಕೆಗಳ ಚಿತ್ತಾರ ಮೂಡಿಸಿತ್ತು. ತುಟಿಯಂಚಿನ ಸವಿಯನ್ನು ಸವಿಯುತ್ತ ಕೈಬೆರಳು ಹಿಡಿದು ಜೊತೆಯಾಗಿ…
೫೦೦ ಕ್ಕೂ ಹೆಚ್ಚು ಅಂಕಗಳಿಸಿದ ೬೩ ವಿದ್ಯಾರ್ಥಿಗಳು | ಚನ್ನವಿರೇಶ ಕುಂಬಾರವರ ಗೆ ೬೫೧ ಅಂಕಗಳು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಲವು ಅಡ್ಡಿ ಆತಂಕಗಳ ಕರಗಿ ಬಹು ನಿರೀಕ್ಷಿತ ೨೦೨೬ನೇ ಸಾಲಿನ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಎಕ್ಸಲಂಟ್ ವಿಜ್ಞಾನ ಪದವಿಪೂರ್ವ ಕಾಲೇಜು ಮತ್ತೊಮ್ಮೆ ಐತಿಹಾಸಿಕ ಫಲಿತಾಂಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ.೭೨೦ ಅಂಕಗಳಿಗೆ ಚನ್ನವಿರೇಶ ಕುಂಬಾರವರ ೬೫೧ ಅಂಕಗಳಿಸಿದರೆ ಸಲ್ಮಾನ ಗೋಡಿಹಾಳ ೬೩೧, ಗಂಗಾಧರ ಮುತ್ತಗಿ ೬೧೩, ಮಹೇಶ ಉಳ್ಳಾಗಡ್ಡಿ ೬೧೨, ರುಮೇಜ್ ಶೇಖ್ ೬೦೦ ಸೇರಿದಂತೆ ೫ ವಿದ್ಯಾರ್ಥಿಗಳು ೬೦೦ ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುತ್ತಾರೆ.ಅದರಂತೆ ಬಸನಗೌಡ ಎ ಬೈರವಾಡಗಿ (೫೮೨), ಪವಿತ್ರಾ ಹೆಚ್ ಹನಗಂಡಿ (೫೮೦), ಅನುಷ್ಕಾ ಎ ಮಹಿಶಾಳೆ(೫೭೯), ಸ್ನೇಹಾ ಎಂ ಪಟ್ಟಣಶೆಟ್ಟಿ(೫೭೭), ಪ್ರಜ್ವಲ್ ಅವಟಿ(೫೭೬), ದೃಶ್ಯಾ ವಿರೇಶ ಶೆಟ್ಟಿ(೫೭೪), ಪ್ರತೀಕ್ ಪಿ. ಚವ್ಹಾಣ (೫೭೧), ಭೂಮಿಕಾ ಎಸ್ ಹಳ್ಳಿ (೫೭೧), ಸಾಗರ ಮಲ್ಲಪ್ಪ ಬನಹಟ್ಟಿ (೫೭೧), ಆಕಾಶ ಎಸ್ ಸತ್ತಿಗೇರಿ (೫೭೦), ವಿನಾಯಕ ಎಸ್ ಪಾಯಣ್ಣವರ(೫೬೮), ಸೃಷ್ಠಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕಂದಗಲ್ ಹಣಮಂತ್ರಾಯ ರಂಗಮಂದಿರದಲ್ಲಿ ಜುಲೈ ೧೯ ರವಿವಾರ ಬೆಳಿಗ್ಗೆ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ.ಪ್ರಸಕ್ತ ಸಾಲಿನ ಹಣಕಾಸು ವಹಿವಾಟು (ಜಮಾ-ಖರ್ಚು) ಮತ್ತು ಭವಿಷ್ಯದ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.ಕಾರಣ ಜಿಲ್ಲೆಯ ಎಲ್ಲ ಕಾನಿಪ ಸಂಘದ ಸದಸ್ಯರು ಸಕಾಲಕ್ಕೆ ಆಗಮಿಸಿ ಅಗತ್ಯ ಸಲಹೆ – ಸೂಚನೆಗಳನ್ನು ನೀಡಬೇಕೆಂದು ಸಂಘದ ಜಿಲ್ಲಾ ಅಧ್ಯಕ್ಷ ಅಶೋಕ ಯಡಳ್ಳಿ, ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಮತ್ತು ರಾಜ್ಯ ಕಾರ್ಯಕಾರಿ ಸದಸ್ಯ ಪ್ರಕಾಶ ಬೆಣ್ಣೂರ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹಿರಿಯ ಪತ್ರಕರ್ತರಾದ ಫಿರೋಜ ರೋಜಿನದಾರ, ದಾನಪ್ಪ ಸೂರಗೊಂಡ, ರಶ್ಮಿ ಪಾಟೀಲ, ಚಿದಂಬರ ಕುಲಕರ್ಣಿ, ಸಂಜಯಕುಮಾರ ಕೊಂಡಗೂಳಿ, ಬಾಬು ತಡ್ಲಗಿ ಡಾ.ಸಂತೋಷ ನವಲಗುಂದ ಸೇರಿದಂತೆ ೨೦ ಸಾಧಕರಿಗೆ ಪ್ರಶಸ್ತಿಯ ಗರಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೬ ನೇ ಸಾಲಿನವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಜಿಲ್ಲೆಯ ಒಟ್ಟು ೧೬ ಜನ ಪತ್ರಕರ್ತರು ಮತ್ತು ಇತರೆ ವಿಭಾಗದಿಂದ ನಾಲ್ವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.ವಾರ್ಷಿಕ ಪ್ರಶಸ್ತಿ ಪುರಸ್ಕೃತರುವಿಜಯಪುರದ ಫಿರೋಜ ರೋಜಿನದಾರ (ಇಂಡಿಯನ್ ಎಕ್ಸ್ಪ್ರೆಸ್), ದಾನಪ್ಪ ಸೂರಗೊಂಡ (ಕ್ರಾಂತಿಧ್ವನಿ), ರಶ್ಮಿ ಪಾಟೀಲ (ಕನ್ನಡ ಕಹಳೆ), ಚಿದಂಬರ ಕುಲಕರ್ಣಿ (ಕರ್ನಾಟಕ ಹೆರಾಲ್ಡ್), ಸಂಜಯಕುಮಾರ ಕೊಂಡಗೂಳಿ (ಸಂಜಯ ವಾಣಿ), ಬಾಬು ತಡ್ಲಗಿ (ಇಂಡಿಯಾ ಟುಡೆ & ಆಜ್ ತಕ್), ಸಿಂದಗಿಯ ವಿವೇಕಾನಂದ ಶಾಬಾದಿ (ಪ್ರಜಾ ಪ್ರಗತಿ), ತಿಕೋಟಾದ ಡಾ.ಸಂತೋಷ ನವಲಗುಂದ (ಉದಯರಶ್ಮಿ), ಬಸವನ ಬಾಗೇವಾಡಿಯ ವಾಸುದೇವ ಮ್ಯಾಗೇರಿ (ಉದಯಕಾಲ), ಚಡಚಣದ ಸುಬ್ರಹ್ಮಣ್ಯ ಸಂಗಮ (ಉದಯವಾಣಿ), ಮುದ್ದೇಬಿಹಾಳದ ಸಿದ್ದಪ್ಪ ಚಲವಾದಿ (ವಿಜಯವಾಣಿ), ಆಲಮೇಲದ ಅಬ್ದುಗನಿ ದೇವರಮನಿ (ವಾರ್ತಾ ಭಾರತಿ), ಕಲಕೇರಿಯ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ತೆಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ಮುಕ್ತ ಭಾರತ ಅಭಿಯಾನದಡಿ 100 ದಿನಗಳ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಅಭಿಯಾನದ ಅಂಗವಾಗಿ ಸಂಶಯಾಸ್ಪದ ಕ್ಷಯರೋಗಿಗಳಿಗೆ ಎ.ಐ ಆಧಾರಿತ ಎಕ್ಸ್-ರೇ ಯಂತ್ರದ ಮೂಲಕ ಸ್ಥಳದಲ್ಲೇ ತಪಾಸಣೆ ನಡೆಸಿ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.ಆಡಳಿತ ವೈದ್ಯಾಧಿಕಾರಿಗಳಾದ ಡಾ.ನಂದಿನಿ.ಡಿ, ಈ ವೇಳೆ ಮಾತನಾಡಿ, ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ಜ್ವರ, ತೂಕ ಇಳಿಕೆಯಾಗುವುದು, ಹಸಿವು ಕಡಿಮೆಯಾಗುವುದು ಕ್ಷಯರೋಗದ ಪ್ರಮುಖ ಲಕ್ಷಣಗಳು. ಸಕ್ಕರೆ ಕಾಯಿಲೆ ಇರುವವರು ಮತ್ತು ಧೂಮಪಾನ ಮಾಡುವವರು ಹೆಚ್ಚಿನ ಜಾಗ್ರತೆ ವಹಿಸಬೇಕು. ಟಿಬಿ ರೋಗವು ಕೇವಲ ಶ್ವಾಸಕೋಶಕ್ಕೆ ಮಾತ್ರ ಸೀಮಿತವಲ್ಲದೆ ದೇಹದ ಇತರೆ ಭಾಗಗಳಿಗೂ ಹರಡಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಇದರ ಸಂಪೂರ್ಣ ಚಿಕಿತ್ಸೆ ಉಚಿತವಾಗಿ ಲಭ್ಯವಿದೆ” ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕ್ಷಯರೋಗ ಘಟಕದಿಂದ ತರಿಸಲಾದ ಮೊಬೈಲ್ ಎಕ್ಸ್-ರೇ ಯಂತ್ರದ ಮೂಲಕ ಉಚಿತ ತಪಾಸಣೆ ಮಾಡಿಸಲಾಯಿತು. ಸಂಶಯಾಸ್ಪದ ರೋಗಿಗಳಿಗೆ ಕಫ ಪರೀಕ್ಷೆ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರ (ಐ.ಸಿ.ಟಿ.ಸಿ.) ಅನ್ನು ತಕ್ಷಣ ಮರುಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ರವಿ ಗೊಳಸಂಗಿ ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಅವರ ಮುಖಾಂತರ ವಿಜಯಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಕೊಲ್ಹಾರ ಹೊಸ ತಾಲೂಕು ಕೇಂದ್ರವಾಗಿದ್ದು, ರೋಣಿಹಾಳ, ತೆಲಗಿ, ಕೂಡಗಿ, ಮುಳವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಆರೋಗ್ಯ ಸೇವೆಗಾಗಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐ.ಸಿ.ಟಿ.ಸಿ. ಕೇಂದ್ರದ ಮೂಲಕ ಎಚ್ಐವಿ ಪರೀಕ್ಷೆ, ಆಪ್ತ ಸಮಾಲೋಚನೆ ಹಾಗೂ ಜಾಗೃತಿ ಸೇವೆಗಳು ಪರಿಣಾಮಕಾರಿಯಾಗಿ ದೊರೆಯುತ್ತಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿತ್ತು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಯಾವುದೇ ಸಮರ್ಪಕ ಕಾರಣವಿಲ್ಲದೆ ಐ.ಸಿ.ಟಿ.ಸಿ. ಕೇಂದ್ರವನ್ನು ಸ್ಥಗಿತಗೊಳಿಸಿರುವುದರಿಂದ ಸುಮಾರು 28 ರಿಂದ 30 ಸಾವಿರ ಜನಸಂಖ್ಯೆ ಹೊಂದಿರುವ ಕೊಲ್ಹಾರ ತಾಲೂಕಿನ ಜನರು ಅಗತ್ಯ ಆರೋಗ್ಯ ಸೇವೆಯಿಂದ…
ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ದಪ್ಪ ಹೂಗಾರಆಲಮಟ್ಟಿ: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಅರಳದಿನ್ನಿ ಗ್ರಾಮದ ಗ್ರಾಮಸ್ಥರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ಚಂದ್ರಮ್ಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ, ಸಾಂಪ್ರದಾಯಿಕ ಗುರ್ಜಿ ಸೇವೆಯ ಮೂಲಕ ಮಳೆಗಾಗಿ ಪ್ರಾರ್ಥಿಸಲಾಯಿತು.ಶುಕ್ರವಾರ ಬೆಳಿಗ್ಗೆ ಗ್ರಾಮದ ಮಹಿಳೆಯರು ಹಾಗೂ ಹಿರಿಯರು ದೇವಸ್ಥಾನದಲ್ಲಿ ಒಟ್ಟುಗೂಡಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತಿ ಪೂರ್ವಕವಾಗಿ ಮೆರವಣಿಗೆ ನಡೆಸಲಾಯಿತು.ಈ ವೇಳೆ ಮಹಿಳೆಯರು ತಲೆಯ ಮೇಲೆ ಗುರ್ಜಿ ಹೊತ್ತು, ಮನೆ ಮನೆಗೆ ಭೇಟಿ ನೀಡಿದರು. ಮನೆಗಳ ಮುಂದೆ ನೀರು ಹಾಕಿಸಿಕೊಂಡು, ಭಕ್ತಿಗೀತೆಗಳು ಮತ್ತು ಸಾಂಪ್ರದಾಯಿಕ ಪದಗಳನ್ನು ಹಾಡುತ್ತಾ ಮಳೆಗಾಗಿ ಬೇಡಿಕೊಂಡರು.ಮೆರವಣಿಗೆಯ ಸಂದರ್ಭದಲ್ಲಿ ಗ್ರಾಮಸ್ಥರಿಂದ ರೊಟ್ಟಿ, ಅಕ್ಕಿ, ಬೇಳೆ ಮತ್ತು ದುಡ್ಡನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಸಾಮಗ್ರಿಗಳಿಂದ ಇಡೀ ಊರಿಗೆ ಸಾಮೂಹಿಕವಾಗಿ ಪ್ರಸಾದವನ್ನು ತಯಾರಿಸಿ ಗ್ರಾಮ ದೇವತೆಯಾದ ಕೊಣಮ್ಮದೇವಿ ದೇವಸ್ಥಾನದಲ್ಲಿ ವಿತರಿಸಲಾಯಿತು.”ಮಳೆ ಬಾರದೆ ಬೆಳೆಗಳು ಒಣಗುತ್ತಿವೆ. ದೇವರಲ್ಲಿ ಪ್ರಾರ್ಥಿಸಿದರೆ…
