ಸಿಂದಗಿಯ ಎಸ್ ಎಮ್.ಮಣೂರ ಎಸ್ ಬಿ ಮಾಡೆಲ್ ಪಬ್ಲಿಕ್ ಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಎಸ್ ಎಮ್.ಮಣೂರ ಎಸ್ ಬಿ ಮಾಡಲ ಪಬ್ಲಿಕ್ ಸ್ಕೂಲ್ ನಲ್ಲಿ ಇತ್ತೀಚೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಿತು.
ಸಿಂದಗಿ ಶಾಸಕರಾದ ಅಶೋಕ್ ಮನಗೂಳಿಯವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮುಖಾಂತರ ಹೆಮ್ಮರವಾಗಿ ಬೆಳೆದ ಈ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಸುಂದರ ಪರಿಸರದ ಶೈಕ್ಷಣಿಕ ವಾತಾವರಣ ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪ್ರೊ.ರವಿ ಗೋಲಾ ಮಾತನಾಡಿ, ಈ ಸಂಸ್ಥೆಯು ಶಿಕ್ಷಣ ಹಾಗೂ ಸಮಾಜಸೇವೆಗಾಗಿ ಮುಡುಪಾಗಿಟ್ಟಿರುವುದು ಶ್ಲಾಘನೀಯ ಎಂದರು.
ನಗರ ಸಭೆಯ ಉಪಾಧ್ಯಕ್ಷ ಸಂದೀಪ್ ಚೌರ, ಬಿಜೆಪಿ ಮುಖಂಡ ರಾಜು ಪೂಜಾರಿ, ಅಶೋಕ ಕಮರಡ್ಡಿ ಹಾಗೂ ಇತರ ಗಣ್ಯರು ವೇದಿಕೆ ಮೇಲಿದ್ದರು.
ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಮಣೂರ ಸರ್ವರಿಗೂ ಸ್ವಾಗತ ಕೋರಿದರು.
ಶಾಲಾ ಆಡಳಿತ ಅಧಿಕಾರಿ ಎಸ್ ಎನ್ ಹೊಳಿ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ನೀಡುವ ವಿದ್ಯಾಲಯಗಳಿಗೆ ಕಳಿಸುವ ಮುಖಾಂತರ ನಿಶ್ಚಿತ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಶಾಲಾ ಮುಖ್ಯ ಗುರುಮಾತೆ ಶ್ರೀಮತಿ ಪಿ.ವಿ.ಮುರಗೋಡ ವರದಿ ವಾಚನ ಮಾಡಿದರು.
ಸಂಸ್ಥೆಯ ಕಾರ್ಯದರ್ಶಿ ವಿಜಯಲಕ್ಷ್ಮಿ ಕಮರಡ್ಡಿ, ಪಾಲಕ ಪ್ರತಿನಿಧಿ ಶಿವು ಬಸ್ತಿಹಾಳ, ವಿದ್ಯಾರ್ಥಿನಿ ಪ್ರತಿನಿಧಿ ಆರತಿ ಮೂಲಿ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಎಲ್ಲ ಶಿಕ್ಷಕ/ ಶಿಕ್ಷಕಿಯರು, ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ ಎಸ್ ಎಲ್ ಗೊಲಗೇರಿ ವಂದಿಸಿದರು.
ಸಮಾರಂಭದ ಬಳಿಕ ಶಾಲಾ ಮಕ್ಕಳಿಂದ ನಡೆದ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

