Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಡಚಣ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಆ.೦೬ ಬುಧವಾರ ರಂದು ಬೆಂಗಳೂರಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರದಲ್ಲಿ, ಚಡಚಣ ತಾಲೂಕಿನ ಹಾಲಹಳ್ಳಿ ಅಲ್ಪಸಂಖ್ಯಾತರ ವಸತಿ ಶಾಲೆಯ ವಿದ್ಯಾರ್ಥಿನಿ ಸ್ವಾಲೇಹಾ ರಜಾಕ್ ನದಾಫ ಅವರು ೨೦೨೪–೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೦೬ ಅಂಕಗಳನ್ನು ಹಾಗೂ 96.96% ಗಳಿಸುವ ಮೂಲಕ ಪ್ರಭಾವಶಾಲಿ ಸಾಧನೆ ತೋರಿದ್ದಾರೆ.ಗಣಿತ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕಗಳನ್ನು ಗಳಿಸಿರುವ ಇವಳ ಸಾಧನೆಗೆ ಮಾನ್ಯ ವಸತಿ ಮತ್ತು ವಕ್ಫ್ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರ ಸಮ್ಮುಖದಲ್ಲಿ ಒಂದು ಲ್ಯಾಪ್‌ಟಾಪ್ ಹಾಗೂ ₹೧೦,೦೦೦ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.ಈ ಸಾಧನೆಯಿಂದ ಹಾಲಹಳ್ಳಿ ವಸತಿ ಶಾಲೆಗೆ ಹೆಮ್ಮೆ ತಂದಿದ್ದು, ವಿದ್ಯಾರ್ಥಿನಿ ಸ್ವಾಲೇಹಾ ನದಾಫ ಅವರಿಗೆ ವಿಜಯಪುರ ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿಗಳು,ಹಾಲಹಳ್ಳಿ ವಸತಿ ಶಾಲೆಯ ಪ್ರಾಂಶುಪಾಲರಾದ ರವಿಕುಮಾರ ಕಾಂಬಳೆ,ನಿಲಯ ಪಾಲಕ ಮಲ್ಲಿಕಾರ್ಜುನ ಹುಬ್ಬಳ್ಳಿ, ಮೋಹನಕುಮಾರ ದಿಬ್ಬದಳ್ಳಿ, ಜಿ.ಎಸ್. ಬನಸೋಡೆ, ಅಪ್ಪಾಸಾಹೇಬ ಅಂಕುಶ, ಸುನೀಲ ಅಗಸರ, ಸಂಗಮೇಶ ಹಿಟ್ನಳ್ಳಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಲ್ಲಿನ ಐಶ್ವರ್ಯ ನಗರದ ಭಾಗ್ಯಶ್ರೀ ಡೊಣಗಿ ರಾಜ್ಯ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇವರು ಕೊಡಮಾಡುವ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ನಗರದ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ಪ್ರತಿಭಾವಂತ ವಿದ್ಯಾರ್ಥಿನಿ ಭಾಗ್ಯಶ್ರೀ ಡೊಣಗಿ ಆಯ್ಕೆಯಾಗಿದ್ದು ಶ್ಲಾಘನೀಯ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ ೯೪.೪ ಅಂಕ ಪಡೆದ ಭಾಗ್ಯಶ್ರೀ ಉತ್ತಮ ಸಾಧನೆ ಮಾಡಿದ್ದು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಾರೆ.ಬಾಗಲಕೋಟೆ ನವನಗರದ ಕಲಾಭವನದಲ್ಲಿ ಜರುಗುವ ಸಮಾರಂಭವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವೆಂಕಪ್ಪ ಸುಗತೇಕರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ರಾಜ್ಯಧ್ಯಕ್ಷ ಸಿ ಎಸ್ ಷಡಾಕ್ಷರಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ಜಿ ಪಂ ಸಿ ಇ ಓ ಶಶಿಧರ ಕುರೇರ, ಜಿಲ್ಲಾ ಎಸ್ ಪಿ ಸಿದ್ಧಾರ್ಥ ಗೋಯಲ್ ಆಗಮಿಸಲಿದ್ದಾರೆ.ಸಸ್ಯ ಅಧ್ಯಯನ, ಚಿತ್ರಕಲೆ, ಯೋಗ, ಭಾಷಣ, ಕ್ವಿಜ್ ನಲ್ಲಿ ಪ್ರಶಸ್ತಿ ಪಡೆದ ಭಾಗ್ಯಶ್ರೀ ಕೊರೋನಾ ಅರಿವು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಶತಮಾನ ಕಂಡ ಸರ್ಕಾರಿ ಉರ್ದು ಶಾಲೆಯ ಸ್ಥಳಾಂತರವನ್ನು ವಿರೋಧಿಸಿ ರಾಜ್ಯ ಮುಸ್ಲಿಂ ಕೌನ್ಸಿಲ್ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಧರಣಿ ಉಪವಾಸ ಸತ್ಯಾಗ್ರಹ ಶಿಕ್ಷಣ ಇಲಾಖೆಯ ಭರವಸೆಯ ಮೇರೆಗೆ ತಾತ್ಕಾಲಿಕ ಅಂತ್ಯ ಕಂಡಿದೆ.ಪಟ್ಟಣದ ಹೃದಯ ಭಾಗದ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದ ಬಳಿ ಇರುವ ಸರ್ಕಾರಿ ಉರ್ದು ಶಾಲೆಗೆ ಅಂದಾಜು ೧೨೫ ವರ್ಷಗಳ ಇತಿಹಾಸವಿದೆ. ಈ ಶಾಲೆಯನ್ನು ಸಾರ್ವಜನಿಕರ ಗಮನಕ್ಕೆ ತರದೇ ಸ್ಥಳಾಂತರಿಸಲಾಗಿದೆ. ಈ ಶಾಲೆಯನ್ನು ಪುರಸಭೆಗೆ ಹಸ್ತಾಂತರಿಸುವ ಕುತಂತ್ರ ನಡೆದಿದೆ ಎಂದು ಆರೋಪಿಸಿ ಮತ್ತು ಕೂಡಲೇ ಶಾಲೆಯನ್ನು ಪುನರ್ ಆರಂಭಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮುಸ್ಲಿಂ ಕೌನ್ಸಿಲ್ ಮತ್ತು ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರು ಬುಧವಾರ ಬೆಳಿಗ್ಗೆ ಧರಣಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.ಧರಣಿಯ ಕಾವು ಹೆಚ್ಚುತ್ತಿದ್ದಂತೆಯೇ ಧರಣಿ ನಿರತರ ಬಳಿ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ನಾನು ಈಗಾಗಲೇ ಈ ಶಾಲೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ತಾಲೂಕಿನ ಶಿವಣಗಿ ಗ್ರಾಮದದ ಹನುಮಾನ ದೇವಸ್ಥಾನದ ಹತ್ತಿರ ಇರುವ ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಕೃಷ್ಣಾ ಭೋಸಲೆ ಮಾತನಾಡಿ, ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದ ಮಾರುಕಟ್ಟೆಯಲ್ಲಿ ಉಪಜೀವನಕ್ಕಾಗಿ ಮಾರುಕಟ್ಟೆಗೆ ವ್ಯಾಪಾರ ಮಾಡಲು ಸುತ್ತ ಮುತ್ತಲಿನ ಗ್ರಾಮದಿಂದ ಬಂದ ವ್ಯಾಪಾರಸ್ಥರಿಗೆ ಶೌಚಾಲಯ, ಶುದ್ದ ಕುಡಿಯುವ ನೀರಿನ ಘಟಕ ಮುಂತಾದ ಮೂಲಭೂತ ಸೌಲಭ್ಯದಿಂದ ಬಳಲುತ್ತಿದ್ದಾರೆ. ಇದೇ ಜಾಗದಲ್ಲಿ ಮಳೆಯಾದರೆ ಚರಡಂಡಿ ಅಸ್ತವ್ಯಸ್ಥಗೊಂಡು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಅಲ್ಲಿರುವ ಮಾರುಕಟ್ಟೆಗಾಗಿ ನಿರ್ಮಿಸಿದ ಜಾಗವು ತುಂಬಾ ಚಿಕ್ಕದಾಗಿದ್ದು, ಸಾರ್ವಜನಿಕರಿಗೆ ಸಂಚಾರ ಮಾಡಲು ಅಥವಾ ವ್ಯಾಪಾರ ಮಾಡಲು ಗಿಜಿಗಿಜಿಯಾಗಿ ಆಡಚಣೆಯಾಗುತ್ತಿದೆ. ಆದ ಕಾರಣ ಇಂತಹ ಗಂಭೀರ ವಿಷಯವನ್ನು ಪರಿಗಣಿಸಿ ಶಿವಣಗಿ ಮಾರುಕಟ್ಟೆ ಜನರಿಗೆ ಅನುಕೂಲ ಕಲ್ಪಿಸಿಕೊಡಲು ಒತ್ತಾಯಿಸಿದರು.ಇಲ್ಲಿಯ ವ್ಯಾಪಾರಸ್ಥರಿಗೆ ಸಾರ್ವಜನಿಕರಿಗೆ ಮೂಲಭೂತ ಅವಕಾಶ ಕಲ್ಪಿಸಿಕೊಡದೇ ಹೋದಲ್ಲಿ ಮುಂಬರುವ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದರು.ಈ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಆಗಸ್ಟ್ 15 ರಂದು ನಡೆಯಲಿರುವ 79 ನೇ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಗಳ ಕುರಿತು ಚರ್ಚಿಸಲು ಮಂಗಳವಾರ ಕಂದಾಯ ಉಪವಿಭಾಗ ಅಧಿಕಾರಿ ಅನುರಾಧ ವಸ್ತ್ರದ ಅಧ್ಯಕ್ಷತೆ ಸಭೆ ಜರುಗಿದ್ದು, ಅರ್ಥಪೂರ್ಣವಾಗಿ ಆಚರಣೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ತಿಳಿಸಿದರು.ತಾಲ್ಲೂಕು ಆಡಳಿತ ಸೌಧದ ಸಭಾಭವನದಲ್ಲಿ ನಡೆದ ಸ್ವತಂತ್ರೋತ್ಸ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಸಿ ಮಾತಾನಾಡಿದರು.ಸ್ವತಂತ್ರೋತ್ಸ ಕಾರ್ಯಕ್ರಮವನ್ನು ಯಾವುದೇ ಲೋಪವಿಲ್ಲದೆ, ವಿಶೇಷ ಕಾಳಜಿಯಿಂದ ವಿವಿಧ ಸಮತಿಗಳು ಕಾರ್ಯನಿರ್ವಹಿಸಬೇಕು. ಪ್ರತಿವರ್ಷದಂತೆ ಈ ವರ್ಷವೂ ಸರಕಾರಿ ಕಚೇರಿ ಮತ್ತು ಪಟ್ಟಣದ ವಿವಿಧ ವೃತ್ ಗಳಲ್ಲಿ ಸ್ವಚ್ಚತೆಯೊಂದಿಗೆ ದೀಪದ ಅಲಂಕಾರಕ್ಕೆ ‌ಕ್ರಮಕೈಗೊಳ್ಳಬೇಕು. ಕಚೇರಿ ಮತ್ತು ಶಾಲಾ ಕಾಲೇಜು ಸಿಬ್ಬಂದಿ ತಮ್ಮ ಧ್ವಜಾರೋಹಣವನ್ನು ೭:೩೦ ಒಳಗೆ ಮುಗಿಸಿಕೊಂಡು ೮:೩೦ ಘಂಟೆಗೆ ತಾಲ್ಲೂಕು ಕ್ರೀಡಾಂಗಣಕ್ಕೆ ಹಾಜರಿರಬೇಕು. ತದನಂತರ ಸಾರ್ವಜನಿಕ ಧ್ವಜಾರೋಹಣ ಜರುಗಲಿದ್ದು ಎಲ್ಲ ಅಧಿಕಾರಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು. ನಂತರ ಪೋಲಿಸ್ ಪಡೆ, ಹೋಮ್ ಗಾರ್ಡ,ಭಾರತ ಸೇವಾದಳಗಳಿಂದ ಪಥ ಸಂಚಲನ ಜರುಗಲಿವೆ. ಕಾರ್ಯಕ್ರಮದ ಸ್ಥಳದ ಸ್ವಚ್ಚತೆ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಭಾರತೀಯ ರಾಷ್ಟ್ರಧ್ವಜವು ಇಡೀ ದೇಶದ ನಾಗರಿಕರ ಗೌರವ, ಹೆಮ್ಮೆ, ಸಂಸ್ಕೃತಿ, ನಾಗರಿಕತೆ ಮತ್ತು ಸಂಸ್ಕಾರದ ಪ್ರತಿಬಿಂಬಿತವಾಗಿದೆ. ಪ್ರತಿಯೊಬ್ಬ ನಾಗರಿಕರೂ ರಾಷ್ಟ್ರಧ್ವಜಕ್ಕೆ ರಾಷ್ಟ್ರಧ್ವಜ ನೀತಿಸಂಹಿತೆ ಪ್ರಕಾರ ಭಕ್ತಿ, ಶ್ರದ್ದೆ, ಶಿಸ್ತಿನಿಂದ ಗೌರವವನ್ನು ಸಲ್ಲಿಸಬೇಕಾಗುತ್ತದೆ ಎಂದು ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಗೋಮೂತ್ರ ಹೇಳಿದರು.ತಾಲೂಕಿನ ತಾಂಬಾ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಪ್ರೌಢಶಾಲೆ, ಭಾರತ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ,ಶಾಲಾ ಶಿಕ್ಷಣ ಇಲಾಖೆ ಇವರುಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ಮಾಹಿತಿ ಕಾಯಾ೯ಗಾರವನ್ನು ಉದ್ಘಾಟಿಸಿ ಮಾತನಾಡಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿರುವುದುರಿಂದ ರಾಷ್ಟ್ರಧ್ವಜವು ಭಾವೈಕ್ಯತೆಯ ಸಂಕೇತವಾಗಿದೆ ವಿದ್ಯಾರ್ಥಿಗಳಿಗೆ, ಶಿಕ್ಷಕ ವೃಂದದವರಿಗೆ ರಾಷ್ಟ್ರೀಯ ಭಾವೈಕ್ಯತೆ , ಹಾಗೂ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತು ಬೌದ್ದಿಕವಾಗಿ, ಹಾಗೂ ಪ್ರಾತ್ಯಕ್ಷಿಕವಾಗಿ ತರಬೇತಿ ನೀಡಿದರು.ರಾಷ್ಟ್ರಧ್ವಜವನ್ನು ಮಡಚುವ, ಕಟ್ಟುವ ಹಾರಿಸುವ ವಿಧಾನವನ್ನು ಹಾಗೂ ಧ್ವಜದ ನಿಯಮಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾ ಪಿ,ಕೆ, ಬಿರಾದಾರ ಅವರು ಮಾತನಾಡಿ, ರಾಷ್ಟ್ರಧ್ವಜದ ಬಗ್ಗೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪ್ರತಿ ವರ್ಷದಂತೆ ಶ್ರಾವಣ ತಿಂಗಳ ಏಕಾದಶಿಯಂದು ತಾಲೂಕಿನ ಇಂಗಳಗಿ ಗ್ರಾಮದ ವಿಠಲ ರುಕ್ಮಿಣಿ ದೇವರಿಗೆ ಊರಿನ ಗುರು ಹಿರಿಯರೆಲ್ಲರೂ ಸೇರಿ ಲಕ್ಷ ತುಳಸಿ ಅರ್ಚನೆ ಮಾಡಿದರು.ಐದು ವರ್ಷಗಳ ಹಿಂದೆ ಗ್ರಾಮದಲ್ಲಿ ಪ್ರತಿಷ್ಠಾಪಿತವಾದ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿಂದು ಮಾಣಿಕರಾವ ಕೃಷ್ಠಾಣಾಜಿ ಕುಲಕರ್ಣಿ, ಯರಗಲ್ಲದ ರಾಮರಾವ ಕುಲಕರ್ಣಿ, ಆನಂದ ಕುಲಕರ್ಣಿಯವರ ನೇತೃತ್ವದಲ್ಲಿ ಲಕ್ಷ ತುಳಸಿ ಅರ್ಚನೆ ಕಾರ್ಯ ನಡೆಯಿತ್ತು.ಊರಿನ ಗುರು ಹಿರಿಯರ ಮುಖಂಡತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಠಲ ಜಾದವ,ನಾಥು ಜಾದವ,ಬಸು ಜಾದವ, ರಾಜು ಜಾದವ, ಅಶೋಕ ತಡಲಗಿ, ರಾಘವೇಂದ್ರ ಕುಲಕರ್ಣಿ, ಉಮೇಶ ಕುಲಕರ್ಣಿ ಹಾಗು ಇಂಗಳಗಿ ಗ್ರಾಮಸ್ಥರು ಭಕ್ತಿ ಭಾವದಿಂದ ಪಾಲ್ಗೊಂಡಿದರು.ಸಾಯಂಕಾಲ ಯರಗಲ್ಲದ ರಾಮರಾವ ಕುಲಕರ್ಣಿಯವರಿಂದ ಪ್ರವಚನ,ದ್ವಾದಸಿ ಬೆಳ್ಳಿಗೆ ಪೂಜೆ, ಅಲಂಕಾರ, ತೀರ್ಥ ಪ್ರಸಾದ ಜರಗಿತು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಭುಯ್ಯಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಥಣಿ ಪುರಸಭೆಯ ಮಾಜಿ ಅಧ್ಯಕ್ಷ ಶ್ರೀ ದಿಲೀಪ ಯಲ್ಲಪ್ಪ ಲೋಣಾರೆ ಅವರು 43 ಇಂಚಿನ ಸ್ಮಾರ್ಟ್ಟಿವಿಯನ್ನು ದೇಣಿಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಸಿದಗೊಂಡ ಪೂಜಾರಿ, ಸದಸ್ಯರಾದ ತ್ರಿಮೂರ್ತಿ ಖೇಡಗಿ, ಭಾಗಣ್ಣ ತಳವಾರ, ಶಿವಯೋಗೆಪ್ಪ ಸಾಲೋಟಗಿ, ಮಲ್ಲು ನಾಟಿಕಾರ, ಶಿವಯೋಗೆಪ್ಪ ತಳವಾರ ಹಾಗೂ ಮುಖ್ಯ ಶಿಕ್ಷಕ ಸಿದ್ರಾಮ ರಾಥೋಡ, ಸಹಶಿಕ್ಷಕರಾದ ಬಾಣಪ್ಪ ಪೂಜಾರಿ, ಶಿವಲಿಂಗಪ್ಪ ಕೆ ಎನ್, ಅಜೇಯ ಲೋಣಾರೆ, ರಾಹುಲ ಚವಾಣ, ಜಟ್ಟೆಪ್ಪ ನಾಟಿಕಾರ, ಶರಣಬಸು ತಳವಾರ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಬದುಕಿನಲ್ಲಿ ಬರುವ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ನಮಗೆ ಚರ್ಚೆ, ಮಾತುಕತೆ ಮತ್ತು ಸಮಾಲೋಚನೆಗಳ ಅವಶ್ಯಕತೆ ಇದೆ.ಈ ಹಿಂದೆ ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಒಂದು ನೋಟ್ ಪುಸ್ತಕ ಬೇಕಾದರೆ ಅವರು ತಮ್ಮ ಪಾಲಕರಿಗೆ ಹೇಳುತ್ತಿದ್ದರು. ಹಾಗೆ ಹೇಳಿದೊಡನೆ ಪುಸ್ತಕ ಸಿಗುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇರಲಿಲ್ಲ. ಪಾಲಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆಯಲ್ಲಿ ಉಳಿದ ಹಿಂದಿನ ವರ್ಷದ ಪುಸ್ತಕಗಳಲ್ಲಿನ ಖಾಲಿ ಹಾಳೆಗಳನ್ನು ಹರಿದು ಅದರಿಂದಲೇ ಮತ್ತೊಂದು ನೋಟು ಪುಸ್ತಕವನ್ನು ತಯಾರಿಸಿ ಅದನ್ನು ಬಳಸಿಕೊಳ್ಳಲು ಹೇಳುತ್ತಿದ್ದರು.ಯೂನಿಫಾರ್ಮ್ ಅಥವಾ ಸಮವಸ್ತ್ರದ್ದು ಕೂಡ ಇದೇ ಕಥೆ. ನಮಗೆ ಹೊಸ ಸಮವಸ್ತ್ರ ಬೇಕೆಂದು ನಾವು ಈ ವರ್ಷಕ್ಕೆ ಪಾಲಕರಲ್ಲಿ ಬೇಡಿಕೆ ಇಟ್ಟರೆ ಅದು ಮಾರ್ಚ್ ತಿಂಗಳಿನಲ್ಲಿಯೇ ಆಗಬೇಕಿತ್ತು. ಶಾಲೆಯ ರಜಾ ದಿನಗಳಲ್ಲಿ ನಮ್ಮ ಹಳೆಯ ಸಮವಸ್ತ್ರವನ್ನು ಪರಿಶೀಲಿಸಿ ಅದನ್ನು ರಿಪೇರಿ ಮಾಡಬಹುದಾದರೆ ಪಾಲಕರು ಅದರ ಹೊಲಿಗೆ ಬಿಚ್ಚಿ ದೊಡ್ಡದಾಗಿಸುವ ಇಲ್ಲವೇ ಇಲ್ಲವೇ ನಮ್ಮ ದೇಹದ ಅಳತೆಗೆ…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 14 ನೆಯ ದಿವಸದ ಶರಣ ಮಾಸದ ಅನುಭಾವ ಮಾಲಿಕೆಯಲ್ಲಿ ಅನಿತಾ ಕಾರಾಜನಗಿ ಅವರು ಸದ್ಗುರು ಸಮರ್ಥ ಭಾವೂ ಸಾಹೇಬರ ಬಾಲ್ಯದಿಂದ ಅವರ ಸಾಧನೆಯ ಶಿಖರವನ್ನು ತಿಳಿಸುತ್ತಾ ಹೋದರು. ಭಾವೂ ಮಹಾರಾಜರು ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿ ಗ್ರಾಮದವರು. ತಂದೆ ಖಂಡೆ ರಾಯ ಮತ್ತು ತಾಯಿ ಭಾಗೀರಥಿಯ ಉದರದಲ್ಲಿ 1843 ರಲ್ಲಿ ಜನಿಸಿದರು. ನಿವರ್ಗಿ ಗ್ರಾಮದ ಕಾಶಿಬಾಯಿ ಅವರೊಂದಿಗೆ ಬಾಲ್ಯ ವಿವಾಹವಾಯಿತು. ಕೃಷ್ಣ ರಾಯ ಭೀಮರಾಯ, ರಾಮರಾಯ ಎಂಬ ಮೂವರು ಮಕ್ಕಳು ಇವರಿಗಿದ್ದರು. ರಘುನಾಥರಾಯ ಮಹಾರಾಜರಿಂದ ಗುರು ಲಿಂಗ ಜಂಗಮ ಮಹಾರಾಜರ ಸಮ್ಮುಖದಲ್ಲಿ ನಾಮೋಪದೇಶವಾಯಿತು. ಆರಂಭದಲ್ಲಿ ಬೇರೆ ಜಾತಿಯವರಿಂದ ನಾಮ ಹೇಗೆ ಪಡೆಯುವುದೆಂಬ ಸಂಶಯ ಉಂಟಾದರೂ ಅವುಗಳನ್ನೆಲ್ಲ ತೊಡೆದುಹಾಕಿ, ನೀಲಗಾರರಾಗಿದ್ದ ಗುರುಲಿಂಗ ಜಂಗಮ ಮಹಾರಾಜರನ್ನು ಬ್ರಾಹ್ಮಣರಾದ ಭಾವೂ ಅವರು ತಮ್ಮ ಗುರುಗಳೆಂದು ಸ್ವೀಕರಿಸುತ್ತಾರೆ.ಭಾವೂ ಸಾಹೇಬರು 18 ವರ್ಷ ಕಟ್ಟುನಿಟ್ಟಾಗಿ ಧ್ಯಾನ, ಸಾಧನೆ ಮಾಡಿ ಸದ್ಗುರು ಸಮರ್ಥ ಭಾವೂ ಸಾಹೇಬ…

Read More