Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!

ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ

ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಭಾವರಶ್ಮಿ»ನಮ್ಮ ಕಾಮೆಂಟುಗಳು ಸಣ್ಣತನಕ್ಕೆ ಸಾಕ್ಷಿಯಾಗದಿರಲಿ
ಭಾವರಶ್ಮಿ

ನಮ್ಮ ಕಾಮೆಂಟುಗಳು ಸಣ್ಣತನಕ್ಕೆ ಸಾಕ್ಷಿಯಾಗದಿರಲಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸಿದ್ಧಾಪುರ ಶಿವಕುಮಾರ್
ಲೇಖಕ-ಪತ್ರಕರ್ತ

ಉದಯರಶ್ಮಿ ದಿನಪತ್ರಿಕೆ

ಇದು ವೈವಿಧ್ಯಮಯ ಜಗತ್ತು. ಇಲ್ಲಿ‌ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಆಯ್ಕೆ ಆಕರ್ಷಣೆ ಮೆಚ್ಚುಗೆ ಅಭಿಮಾನ ಮೂಡುತ್ತವೆ. ಅದು ಅವರವರ ವೈಯಕ್ತಿಕ ಸ್ವಭಾವ ಆಸಕ್ತಿ ಗ್ರಹಿಕೆಗಳ ಮೇಲೆ ಸೃಜಿಸುವಂತಹದ್ದು. ನಮಗೆ ಮೆಚ್ಚುಗೆ ಆದದ್ದು ಇನ್ನೊಬ್ಬರಿಗೆ ಇಷ್ಟವಾಗಲಾರದು. ಆದರೆ ಅಭಿಮಾನ ಆದರ್ಶವಾಗಿರಲು ಅದರದೇ ಆದ ಗೌರವಯುತ ಗ್ರಹಿಕೆ ಮತ್ತು ಅಧ್ಯಯನ ಬೇಕಾಗುತ್ತದೆ. ಅಭಿಮಾನ ಮತ್ತು ಅಭಿಮಾನಿಸಲ್ಪಡುವ ವ್ಯಕ್ತಿತ್ವ ಮತ್ತು ನುಡಿದಂತೆ ನಡೆದ ಬದುಕಿನ ಚಾರಿತ್ರ್ಯ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿದ್ದಲ್ಲಿ ಅವರವರ ಅಭಿಮಾನಕ್ಕೂ ಹೆಮ್ಮೆ ಘನತೆ ಇರುತ್ತದೆ. ಹೀಗಾಗಿಯೇ ಅಭಿಮಾನ ಎಂಬುದು ಅದು ಪರಿಶುದ್ಧ ಅಂತಃಕರಣದ್ದಾಗಿರಬೇಕು. ಏಕಮುಖಿ ಧೋರಣೆಯಿಂದ ಕೂಡಿರಬಾರದು. ತಾನು ಮೆಚ್ಚಿಕೊಂಡವರನ್ನು ಹೊರತುಪಡಿಸಿ ಇತರರಿಗೆ ಶ್ರೇಯಸ್ಸು ಆದರೆ, ಅಸಂಬದ್ಧವಾಗಿ ಕಾಮೆಂಟಿಸಿ ಹೊಟ್ಟೆಕಿಚ್ಚಿನಿಂದ ನರಳಬಾರದು. ಈ ಮಾನಸಿಕ ಕೀಳರಮೆಯ ನರುಳುವಿಕೆ ಎಂದಿಗೂ ಸಜ್ಜನಿಕೆಯಾಗಲಿ ಪ್ರಬುದ್ಧ ಅಭಿಮಾನವಾಗಲಿ ಆಗಲಾರದು. ಇನ್ನೊಬ್ಬರ ಶ್ರೇಯಸ್ಸು ಗೆಲುವು ನಮ್ಮನ್ನು ಕಂಗೆಡಿಸಿದರೆ ನಮ್ಮನ್ನು‌ ನಾವೇ ಅವಿವೇಕಿಗಳಂತೆ ತೋರಿಸಿಕೊಂಡಂತೆ. ದುರಾಭಿಮಾನ ನಮ್ಮ ವ್ಯಕ್ತಿತ್ವಕ್ಕೆ ಖಂಡಿತವಾಗಿ ದಕ್ಕೆ ತರುತ್ತದೆ. ಎಂಬ ಸಣ್ಣ ಅರಿವಿರಬೇಕು. ತಾನು ಮೆಚ್ಚುವ ಅಥವಾ ಅಭಿಮಾನಿಸುವವರಿಗೆ ಗೌರವ ಸಿಕ್ಕರೆ ಮಾತ್ರ ಅದು ಮಹತ್ವದ್ದು ಎಂದು ಬೀಗುವ ಮನಸ್ಥಿತಿ ಅಕ್ಷರಶಃ ಸಂಕುಚಿತವೇ. ಈ ಬಗ್ಗೆ ಪ್ರಾಮಾಣಿಕ ಆತ್ಮವಿಮರ್ಷೆ ಮಾಡಿಕೊಂಡರೆ ತಾನು ಮೆಚ್ಚಿದ ಶ್ರೇಷ್ಠ ವ್ಯಕ್ತಿತ್ವದಿಂದ ಕಲಿತ ಆದರ್ಶವಾಗಲಿ ಅರಿತು ನಡೆದ ಮೌಲ್ಯವಾಗಲಿ ಏನೆಂಬುದು ತಿಳಿದೀತು. “ನಾನು ಮೆಚ್ಚಿಕೊಂಡವರು ಇಡೀ ಜಗತ್ತಿಗೆ ಮೆಚ್ಚುಗೆಯಾಗುತ್ತಾರೆ” ಎಂಬ ಭ್ರಮೆಯಿಂದ ಪೂರ್ಣವಾಗಿ ಹೊರಬೇಕು. ಸೀಮಿತ ಧೋರಣೆಯ ಸಂಕುಚಿತ ಅಂಧಾಭಿಮಾನ ಎಂದಿಗೂ ಯಾರಿಗೂ ಘನತೆ ತಂದುಕೊಡಲಾರದು. ಪ್ರತಿಭೆ ಸಾಧನೆ ಸೇವೆ ಮತ್ತು ಶ್ರೇಷ್ಠತೆ ಎನ್ನುವುದು ಬಹುಮುಖವಾದದ್ದು. ಅದು ತನ್ನದೇ ರೀತಿಯಲ್ಲಿ ಸಾರ್ವಜನಿಕ ಮನ್ನಣೆ ಗೌರವ ಪುರಸ್ಕಾರ ಸಂಪಾದಿಸಿಕೊಂಡಾಗ ಗೌರವಿಸುವುದ ಬಿಟ್ಟು, ಅದನ್ನು ಹೀಯಾಳಿಸುವ ಮಟ್ಟಕ್ಕಿಳಿದರೆ ನಮಗೆ ನಾವೇ ಅವಮಾನಿಸಿಕೊಂಡಂತೆ ಸರಿ. ನಮ್ಮ ನಡುವಿನ ಸಾರ್ವಜನಿಕ ಹಿತಾಸಕ್ತಿಯ ಸಾಧನೆ/ಸಾಧಕರಿಗೆ ಮನ್ನಣೆ ಪುರಸ್ಕಾರ ಲಭಿಸಿದಾಗ ಮುಕ್ತ ಮನಸ್ಸಿನಿಂದ ಸಂಭ್ರಮಿಸಿದರೆ, ಅದು ನಿಜ ಶಿಕ್ಷಣವಂತನಿಂದ ಹೊಮ್ಮಿದ ನಾಗರೀಕತೆಯ ಸಂಕೇತ. ಅದಲ್ಲದೆ ಹೊಟ್ಟೆ ಕಿಚ್ಚಿನ ಕಿಡಿಗೇಡುತನ ದುರಾಭಿಮಾನವೇ ಅಲ್ಲದೆ ಮತ್ತೇನು? ದೊಡ್ಡತನದಿಂದ ದೊಡ್ಡವರಾಗುತ್ತಾರೆ. ಹಾಗೆಯೇ ಸಣ್ಣತನದಿಂದ ಸಣ್ಣವರಾಗುತ್ತಾರೆ. ಈ ಸತ್ಯವನ್ನು ಇತಿಹಾಸವೇ ಸಾರಿ ಹೇಳುತ್ತಲೇ ಇರುತ್ತದೆ. ತೆರೆದು ನೋಡಿ‌ ಅರ್ಥೈಸಿಕೊಂಡು ಅನುಸರಿಸುವ ವಿವೇಕದ ವಿಶಾಲತೆ ಬೇಕಷ್ಟೆ. ವೈವಿಧ್ಯಮಯವಾದ ಈ ಸಮಾಜದಲ್ಲಿನ ಇತರರ ಆಯ್ಕೆ ಅಭಿಮಾನದ ಸಂಭ್ರಮಗಳಲ್ಲಿ ಭಾಗಿಯಾಗಿ (ಅಥವ ಮೌನವಹಿಸಿ) ನಮ್ಮ ವ್ಯಕ್ತಿತ್ವದ ತೂಕವನ್ನು ಹೆಚ್ಚಿಸಿಕೊಳ್ಳೋಣ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!

ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ

ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ

ಕನೇರಿ ಶ್ರೀಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧ ಖಂಡನೀಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!
    In (ರಾಜ್ಯ ) ಜಿಲ್ಲೆ
  • ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ
    In (ರಾಜ್ಯ ) ಜಿಲ್ಲೆ
  • ಕನೇರಿ ಶ್ರೀಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧ ಖಂಡನೀಯ
    In (ರಾಜ್ಯ ) ಜಿಲ್ಲೆ
  • ತಲ್ಲಣಿಸದಿರು ತಾಳು ಮನವೇ..
    In ಭಾವರಶ್ಮಿ
  • ಮಾನವೀಯತೆ, ಚಾರಿತ್ರ್ಯ ನಿರ್ಮಾಣ ಶಿಕ್ಷಣದ ಅಗತ್ಯವಿದೆ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಸರ್ಕಾರದಿಂದ ಶ್ರೀಗಳಿಗೆ ಅಪಮಾನ :ಸಂಸದ ಜಿಗಜಿಣಗಿ
    In (ರಾಜ್ಯ ) ಜಿಲ್ಲೆ
  • ರೋಟರಿ ಸಂಸ್ಥೆಯಿಂದ ಕಣ್ಣು ಉಚಿತ ತಪಾಸಣೆ ಶಿಬಿರ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ ಪು.ಕೆ. ಪಟ್ಟಣಕ್ಕೆ ಸಚಿವ ಶಿವಾನಂದರ ಕೊಡುಗೆ
    In (ರಾಜ್ಯ ) ಜಿಲ್ಲೆ
  • ಚನ್ನಬಸವಣ್ಣನವರು ಯುವಕರ ಹೆಗ್ಗುರುತು :ಡಿ.ಎನ್.ಅಕ್ಕಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.