Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನಿರ್ದೇಶಕರ ಅವರ ಜೂನ್ ೨ರ ಪತ್ರದ ಮೇರೆಗೆ ಮುಕ್ತ ಮಾರುಕಟ್ಟೆಯ ಸಗಟುದಾರರಿಗೆ ೩ ಸಾವಿರ ಮ್ಯಾರ್ಟಿಕ್ ಟನ, ರಿಟೇಲರಗಳಿಗೆ ೧೦ ಮೆರ್ಟಿಕ್ ಟನ ಹಾಗೂ ಉತ್ಪಾದಕರಿಗೆ ಅವರ ಉತ್ಪಾದನಾ ಸಾಮರ್ಥದ ಶೇ ೭೦ರಷ್ಟು ಗೋಧಿ ದಾಸ್ತಾನು ಮಿತಿಯನ್ನು ದಿನಾಂಕ ೩೧-೦೩-೨೦೨೬ರವರೆಗೆ ನಿಗದಿ ಪಡಿಸಲಾಗಿದೆ. ಅದರಂತೆ ಜಿಲ್ಲೆಯ ಗೋಧಿ ಸಗಟು ವ್ಯಾಪಾರಸ್ಥರು, ರಿಟೇಲರ್ಸ್ ಹಾಗೂ ಗೋಧಿ ಉತ್ಪಾದನೆ ಮಾಡುವವರು ತಮ್ಮಲಿರುವ ಗೋಧಿ ದಾಸ್ತಾನಿನ ಮಾಹಿತಿಯನ್ನು ತುರ್ತಾಗಿ ಕೇಂದ್ರ ಸರ್ಕಾರದ ವೆಬ್‌ಸೈಟ್https://evegoils.nic.in/wsp/login ನಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಯಾವುದೇ ವ್ಯಾಪಾರಸ್ಥರು ಗೋಧಿ ದಾಸ್ತಾನಿನ ಮಾಹಿತಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳದಿದ್ದರೇ ಅಂತಹವರ ವಿರುದ್ದ ಶಿಸ್ತಿನ ಕ್ರಮಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಹಾಯಕ ಉಪ ಸಂರಕ್ಷಣಾಧಿಕಾರಿ ಅನಂತಕುಮಾರ.ಎಸ್.ಪಾಕಿ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿನಿಯರು ಹೆಚ್ಚು ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಹಾಯಕ ಉಪ ಸಂರಕ್ಷಣಾಧಿಕಾರಿ ಅನಂತಕುಮಾರ.ಎಸ್.ಪಾಕಿಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಥಿ ಮಂಡಳಿ ಬೆಂಗಳೂರು (ಕೆಎಸ್‌ಬಿಡಿಬಿ), ಜಿಲ್ಲಾ ಪಂಚಾಯತ, ಸಾಮಾಜಿಕ ಅರಣ್ಯ ವಿಭಾಗ, ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವಿಜಯಪುರ ಇವರ ಸಂಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿ ವಿದ್ಯಾರ್ಥಿನಿಯೂ ಕನಿಷ್ಠ ಒಂದು ಗಿಡವನ್ನು ನೆಡುವ ಸಂಕಲ್ಪ ಕೈಗೊಂಡರೆ, ಭವಿಷ್ಯದ ಪೀಳಿಗೆಗಾಗಿ ಹಸಿರು, ಶುದ್ಧ ಮತ್ತು ಆರೋಗ್ಯಕರ ವಾತಾವರಣವನ್ನು ನಿರ್ಮಿಸಬಹುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ.ಬಿ.ಕೋರಿಶೆಟ್ಟಿ ಮಾತನಾಡಿ, ಜೈವಿಕ ಇಂಧನವು ನವೀಕರಿಸಬಹುದಾದ ಶಕ್ತಿಯ ಮೂಲವಾಗಿದ್ದು, ಇದು ಪರಿಸರ ಸಂರಕ್ಷಣೆಗೂ, ಶಾಶ್ವತ ಅಭಿವೃದ್ಧಿಗೂ ಮಹತ್ವದ ಪಾತ್ರ ವಹಿಸುತ್ತದೆ. ಭಾರತ ದೇಶವು ಇಂಧನಗಳ ಅವಲಂಬನೆಯನ್ನು ಹಂತ ಹಂತವಾಗಿ ಕಡಿಮೆ…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ 18 ನೆಯ ಶರಣ ಮಾಸದ ಮಾಲಿಕೆಯಲ್ಲಿ ಶರಣ ಶಶಿಧರ ಕರವೀರಶೆಟ್ಟರ ಅವರು ಸಕೀಲಗಳ ಬಗೆಗೆ ಅತ್ಯಂತ ವಿದ್ವತ್ ಪೂರ್ಣವಾದ ಮತ್ತು ಆಳವಾದ ಜ್ಞಾನ ಭಂಡಾರ ವನ್ನು ನಮ್ಮೊಂದಿಗೆ ಹಂಚಿಕೊಂಡರು.ಸಕೀಲಗಳು ಎಂದರೆ ತಾತ್ವಿಕ ರಹಸ್ಯಗಳು, ಅತ್ಯಂತ ಆಳವಾದ ತತ್ವಜ್ಞಾನದ ಅರಿವು ಮೂಡಿಸುವ, ಅಂಗವೇ ಲಿಂಗ ವಾಗುವ ಪರಿ. ಪರಸ್ಪರ ಒಂದರೊಳೊoದಿಗೆ ಸಮರಸವಾದ ಸಂಬಂಧವಿರುವ, ಬಿಟ್ಟು ಬೇರಾಗಿಸದಂತೆ, ಪೂರ್ಣವಾಗಿ ಒಂದೇ ಆಗುವಂತೆ ಮಾಡುವುದನ್ನು ತಿಳಿಸುವುದೇ ಲಿಂಗ ಸಕೀಲಗಳು. ಅವಿರಳ ಜ್ಞಾನಿ ಚೆನ್ನಬಸವಣ್ಣನವರ ಮಿಶ್ರಾರ್ಪಣ ಗ್ರಂಥವು ಇದಕ್ಕೆ ಮೂಲ ಆಗರವಾಗಿದೆ.ಲಿಂಗದೊಳಗೆ ಅಂಗ ಕರಗಿ ಪೂರ್ವಾಶ್ರಮ ಭಾವ ಇಂಗಿ ಪರಸ್ಪರ ಸಾಮರಸ್ಯ ಹೊಂದಿ ಪರಿಪೂರ್ಣವಾಗಿ ಪರಿಶುದ್ಧವಾಗಿ ಲಿಂಗದಿಂದ ಹೊರಹೊಮ್ಮುವ ಪ್ರಕ್ರಿಯೆ.ಸಕೀಲಗಳಲ್ಲಿ ಮೂರು ವಿಧ, ಆರು ವಿಧ, ಎಂಟು ವಿಧ, 36 ವಿಧ,96 ವಿಧ,108 ವಿಧ ಮತ್ತು 216 ವಿಧಗಳನ್ನು ಅತ್ಯಂತ ಸರಳ ರೀತಿಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದರು.ಲಿಂಗತತ್ವಗಳಾದ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗವನ್ನು…

Read More

ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಡಾ. ಶರಣಮ್ಮ ಗೊರೆಬಾಳ ಅವರು ನಮ್ಮ ವೇದಿಕೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಯಾವತ್ತೂ ನಗುಮೊಗದ, ಎಲ್ಲರನ್ನೂ ಪ್ರೀತಿಸುವ,ಹೊಂದಿಕೊಳ್ಳುವ ಗುಣದ,ಖುಷಿಯಾಗಿರುವ, ನಿರ್ಮಲ ಮನಸ್ಸಿನ ಸಾತ್ವಿಕ ಚಿಂತನೆಯ ಮಹಿಳೆ ಎಂದರೆ ತಪ್ಪಾಗಲಾರದು.ಧಾರವಾಡ ವಿದ್ಯಾರಣ್ಯ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಶರಣಮ್ಮ ಗೊರೆಬಾಳ ಇವರು ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಾವರಗೇರಿಯವರು, ಹುಟ್ಟಿದ್ದು ತಾಯಿಯ ತವರೂರಾದ ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಎತ್ತಿನ ಹಳ್ಳಿಯಲ್ಲಿ, ಅವರ ತಂದೆ ಕಲ್ಮೇಶ್ವರ ಕೆಂಗಾಪುರ ಗ್ರಾಮ ಸೇವಕರಾಗಿ ಸೇವೆ ಸಲ್ಲಿಸಿದ್ದು ರಾಯಚೂರು ಜಿಲ್ಲೆ. ಹೀಗಾಗಿಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿ ಮುಗಿಸಿದರು. ಮುಂದೆ ಪಿಯುಸಿ ಧಾರವಾಡದ ವಿದ್ಯಾರಣ್ಯ ಪದವಿ ಪೂರ್ವ ಮಹಾ ಮಹಾವಿದ್ಯಾಲಯ, ಬಿ.ಎ ಪದವಿಯನ್ನು ಕಿಟಲ್ ಕಲಾ ಮಹಾವಿದ್ಯಾಲಯದಲ್ಲಿ ಮುಗಿಸಿದರು. ಬಿ.ಎ ಓದುತ್ತಿರುವಾಗಲೇ 1988ರಲ್ಲಿ ಶ್ರೀ ಎ. ಎಲ್. ಗೊರೆಬಾಳ ಅವರ ಜೊತೆ ಮದುವೆ ಆಯಿತು, ನಂತರ…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 17 ನೆಯ ಶರಣಮಾಸದ ಮಾಲಿಕೆಯಲ್ಲಿ ಶ್ರೀ ವಿಜಯಕುಮಾರ ತೇಲಿ ಅವರು ಮುರಿಗೆಪ್ಪ ಚೆಟ್ಟಿ ಅವರ ಬಗೆಗೆ ಅತ್ಯಂತ ಸವಿಸ್ತಾರವಾಗಿ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟರು.ಮೊದಲಿಗೆ ಮನುಷ್ಯನ ಮನಸ್ಸಿನ ವಿಸ್ತಾರ, ಅಭಿವ್ಯಕ್ತಿ ಪ್ರಸ್ತುತೀಕರಣ, ರಸಗ್ರಹಣ, ಸಂವೇದನೆ, ಆಸ್ವಾದನೆ, ಅನುಭೂತಿ, ಚಿಂತನ-ಮಂಥನದ ಜೊತೆಗೆ ಕಲೆ, ನೆಲೆ, ಹಿನ್ನೆಲೆಯಾದಿಯಾಗಿ ಲಲಿತ ಕಲೆಗಳ ಬಗೆಗೆ,ಮತ್ತು ಭಾರತೀಯ ಕಲಾಪರಂಪರೆ ಶ್ರೇಷ್ಠವಾದದ್ದು ಎಂದು ಪೀಠಿಕೆಯಾಗಿ ಮಾತನಾಡಿದರು.ಮುರಿಗೆಪ್ಪ ಚೆಟ್ಟಿ ಅವರ ಬಾಲ್ಯ, ತಂದೆ-ತಾಯಿ, ಅವರ ಹುಟ್ಟೂರು, ಶಿಕ್ಷಣದ ಬಗೆಗೆ ಹೇಳುತ್ತಾ, ಹೇಗೆ ಅವರು ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಗೋಡೆಯ ಮೇಲೆ, ನೆಲದ ಮೇಲೆ ಚಿತ್ರ ಬಿಡಿಸುತ್ತಿದ್ದುದು,ಸರಕಾರಿ ನೌಕರಿಯಲ್ಲಿದ್ದ ಅವರ ಚಿಕ್ಕಪ್ಪನವರ ಸಹಾಯದಿಂದ ಮುಲ್ಕಿ ಪರೀಕ್ಷೆ, ಇಂಟರಮೀಡಿಯಟ್ ಡ್ರಾಯಿಂಗ್ ಎಕ್ಸಾಮ್ ಪಾಸಾಗಿದ್ದು, ಮ್ಯಾಟ್ರಿಕ್ ಪರೀಕ್ಷೆ ಬರೆದದ್ದು,ನಂತರದಲ್ಲಿ ಬೆಂಬಳಗಿ ಅವರ ಪ್ರೋತ್ಸಾಹದೊಂದಿಗೆ ಮುಂಬೈನ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್ ಸೇರಿದ್ದು, ಅಲ್ಲಿ ಏಳು ಜನ ಕನ್ನಡಿಗರ ಜೊತೆಗೆ ಸಪ್ತವರ್ಣದ ಗುಂಪು ರಚನೆ…

Read More

ಝಳಕಿ ಪೋಲಿಸ್ ಠಾಣಾಧಿಕಾರಿ ಮತ್ತು ಸಿಬ್ಬಂಧಿಗಳಿಗೆ ರಕ್ಷಾ ಬಂಧನ ಉದಯರಶ್ಮಿ ದಿನಪತ್ರಿಕೆ ಚಡಚಣ: ಸಹೋದರ-ಸಹೋದರಿಯರ ಬಾಂಧವ್ಯದ ಪ್ರತೀಕವಾದ ರಕ್ಷಾ ಬಂಧನ ಹಬ್ಬ, ಕೇವಲ ಒಂದು ನೂಲಿನ ಬಗ್ಗುವಿಕೆ ಅಲ್ಲ- ಅದು ಸಹೋದರಿಯರ ನಂಬಿಕೆ, ಮಮತೆ ಮತ್ತು ಜೀವಿತಾವಧಿಯ ರಕ್ಷಣೆಯ ಪ್ರತಿಜ್ಞೆ. ಶ್ರಾವಣ ಮಾಸದ ನೂಲ ಹುಣ್ಣಿಮೆಯ ಸಂಭ್ರಮದಲ್ಲಿ ಈ ಮಧುರ ಸಂಪ್ರದಾಯ ಝಳಕಿ ಪೊಲೀಸ್ ಠಾಣೆಯಲ್ಲೂ ಅರಳಿ ಬಂತು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಸಿಬ್ಬಂದಿಗಳು, ಪಿಎಸ್‌ಐ ಮಂಜುನಾಥ ಎಸ್.ಟಿ. ಅವರ ನೇತೃತ್ವದಲ್ಲಿ, ಠಾಣೆಯ ಎಲ್ಲ ಆರಕ್ಷಕರ ಕೈಗೆ ರಕ್ಷಾ ಕಟ್ಟಿ, ಅವರ ಸುರಕ್ಷಿತ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಸಿಹಿ ಹಂಚಿ, ಶುಭಾಶಯ ಕೋರಿದರು,ರಕ್ಷಾ ಬಂಧನ ಕಟ್ಟಿಕೊಂಡು ಮಾತನಾಡಿದ ಝಳಕಿ ಠಾಣಾಧಿಕಾರಿ ಮಂಜುನಾಥ ತೀರಕನ್ನವರ ಸಹೋದರತ್ವದ ಮಧುರ ನಂಟು ರಕ್ಷಾ ಬಂಧನ, ಪೊಲೀಸ್ ಸಿಬ್ಬಂದಿ ಕೇವಲ ಕಾನೂನು-ಸುವ್ಯವಸ್ಥೆಯ ರಕ್ಷಕರು ಮಾತ್ರವಲ್ಲ, ಸಮಾಜದ ಕುಟುಂಬದ ಭಾಗವೆಂಬ ಸಂದೇಶವನ್ನು ಹಂಚಿದರು.”ಸಹೋದರತ್ವದ ಪ್ರತೀಕವಾದ ರಕ್ಷಾ ಬಂಧನವು ಅಣ್ಣ-ತಂಗಿಯರ ಭಾವನಾತ್ಮಕ ಬಾಂಧವ್ಯವನ್ನು ಗಟ್ಟಿಗೊಳಿಸುವ ದಿನ. ನಮ್ಮ ಹಿರಿಯರು…

Read More

ಮಮದಾಪುರದಲ್ಲಿ ಹೆಸ್ಕಾಂ ನೂತನ ಶಾಖಾಧಿಕಾರಿಗಳ ಕಚೇರಿ ಕಟ್ಟಡ ಮತ್ತು ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಮದಾಪುರ ಬಳಿ ನಿರ್ಮಿಸಲಾಗಿರುವ ಅರಣ್ಯದ ಪ್ರಕೃತಿಯಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ನೆಲೆಸಿದ್ದು, ಶ್ರೀಗಳ ಆಶಯದಂತೆ ವ್ಯಸನಮುಕ್ತ, ಜಗಳರಹಿತವಾಗಿ ಬದುಕಿ ಆದರ್ಶ ಗ್ರಾಮವನ್ನಾಗಿ ಮಾಡಲು ಈ ಭಾಗದ ಗ್ರಾಮಸ್ಥರು ಕೈ ಜೋಡಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಅಂದಾಜು ರೂ. 120 ಲಕ್ಷ ವೆಚ್ಚದಲ್ಲಿ ಹೆಸ್ಕಾಂ ನೂತನ ಶಾಖಾಧಿಕಾರಿಗಳ ಕಚೇರಿ ಕಟ್ಟಡ ಮತ್ತು ಟೊಯೊಟಾ ಕಿರ್ಲೋಸ್ಕರ್ ಸಿ.ಎಸ್.ಆರ್ ಅನುದಾನಡಿ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ಬಳಿಕ ಖಾಜಾ ಬಾಪುಸಾಹೇಬರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಮದಾಪುರದಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಕೆರೆ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಹೋದರ-ಸಹೋದರಿಯರ ಮಧ್ಯೆ ಇರುವ ಪ್ರೀತಿ, ಮಮತೆ, ಹಾಗೂ ಭರವಸೆಯ ನಂಟಿಗೆ ಪ್ರತೀಕವಾದ ರಕ್ಷಾ ಬಂಧನ ಹಬ್ಬ ಶ್ರಾವಣದ ಸಂಭ್ರಮದಲ್ಲಿ ಚಡಚಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಾವಪೂರ್ಣವಾಗಿ ಜರಗಿತು.ಶನಿವಾರ ಬೆಳಿಗ್ಗೆ ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿ ಕಟ್ಟುವ ಮೂಲಕ ಈ ಪವಿತ್ರ ಆಚರಣೆಗೆ ಚಾಲನೆ ನೀಡಿದರು.ಹಣೆಗೆ ತಿಲಕವಿಟ್ಟು, ಆರತಿ ಬೆಳಗುವುದಾದ ನಂತರ ಕಲ್ಲುಸಕ್ಕರೆಯ ಸಿಹಿಯಿಂದ ಸಂತೋಷ ಹಂಚಿಕೊಂಡರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಕ್ಷಾ ಬಂಧನದ ಅಂಗವಾಗಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದವರು ಸಚಿವ ಎಂ. ಬಿ. ಪಾಟೀಲ ಅವರಿಗೆ ರಾಖಿ ಕಟ್ಟಿ ಹಬ್ಬದ ಶುಭಾಷಯ ಕೋರಿದರು.ಶನಿವಾರ ಬೆಳಿಗ್ಗೆ ಸಚಿವರ ಗೃಹ ಕಚೇರಿಗೆ ಆಗಮಿಸಿದ ನಗರದ ಬ್ರಹ್ಮಕುಮಾರಿ‌ ಈಶ್ವರಿಯ ವಿವಿ ಪ್ರಕೃತಿ ಕಾಲನಿ ಸೇವಾ ಕೇಂದ್ರಸಂಚಾಲಕಿ ಶೋಭಾ‌ ಅವರು ಸಚಿವರಿಗೆ ರಾಖಿ‌ ಕಟ್ಟಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರೇಮ, ವಿಶ್ವಾಸ ಮತ್ತು ರಕ್ಷಣೆಯ ಬಾಂಧವ್ಯವನ್ನು ಪ್ರತಿಬಿಂಬಿಸುವ ಪವಿತ್ರ ಹಬ್ಬ ಸಹೋದರ–ಸಹೋದರಿಯರ ನಡುವಿನ ಆತ್ಮೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿ. ಪರಸ್ಪರ ನಂಬಿಕೆ ಮತ್ತು ಪ್ರೀತಿಯನ್ನು ವೃದ್ಧಿಸಲಿ. ಎಲ್ಲರ ಜೀವನದಲ್ಲಿ ಬಾಂಧವ್ಯದ ನಂಟು ಇನ್ನಷ್ಟು ಗಟ್ಟಿಯಾಗಲಿ. ಸಂಬಂಧಗಳ ಮೌಲ್ಯ ಹೆಚ್ಚಲಿ, ಪ್ರೀತಿ ಮತ್ತು ಗೌರವ ಚಿಗುರಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸೇವಾ ಕೇಂದ್ರದ ಗಿರೀಶ ಮತ್ತಿತರರು ಉಪಸ್ಥಿತರಿದ್ದರು.

Read More

ಕೊಡಂಗಲ್ ರಾಜ್ಯ ಹೆದ್ದಾರಿಯಲ್ಲಿನ ತಗ್ಗು-ಗುಂಡಿಗಳು ಜಲಮಯ | ಕಣ್ತೆರೆಯದ ಅಧಿಕಾರಿಗಳು ಉದಯರಶ್ಮಿ ದಿನಪತ್ರಿಕೆ ವರದಿ: ರಶ್ಮಿ ನೂಲಾನವರಸಿಂದಗಿ: ಇದು ರಾಜ್ಯ ಹೆದ್ದಾರಿ. ಆದರೆ ಸ್ಥಳೀಯ ರಸ್ತೆಗಿಂತಲೂ ಹೆಚ್ಚು ಹಾಳಾಗಿದೆ. ನಿತ್ಯ ಈ ರಸ್ತೆ ಮೇಲೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಹಾಪೂರ, ಮಳ್ಳಿ, ಕೆಂಭಾವಿ, ಗೋಲಗೇರಿ, ಸಿಂದಗಿಗೆ ಬರಲು ಇದೇ ಪ್ರಮುಖ ದಾರಿಯಾದರೂ ಈ ರಸ್ತೆ ಇದುವರೆಗೂ ದುರಸ್ತಿಯಾಗದಿರುವುದು ದುರಂತವೇ ಸರಿ.ಈ ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು ನಿರ್ಮಾಣವಾಗಿವೆ. ಪ್ರತಿದಿನ ಹಲವು ಬೈಕ್ ಸವಾರರು, ವಾಹನ ಚಾಲಕರು ಸಂಚರಿಸಲು ಪರದಾಡುವಂತಾಗಿದೆ.ಹೇಳಿಕೊಳ್ಳಲು ಮಾತ್ರ ಇದು ಕೊಡಂಗಲ್ ರಾಜ್ಯ ಹೆದ್ದಾರಿ. ಆದರೆ ಈ ಹೆದ್ದಾರಿಯಲ್ಲಿ ಒಮ್ಮೆ ಸಂಚರಿಸಿದರೆ ಸಾಕು ಹೊಲದ ರಸ್ತೆಯಲ್ಲಿ ಸಂಚರಿಸುವ ಅನುಭವವಾಗುತ್ತದೆ. ಈ ರಸ್ತೆಯ ಮೇಲೆ ನಿತ್ಯ ಇಲ್ಲಿಂದ ಪ್ರಯಾಣ ಬೆಳೆಸುವವರ ಸ್ಥಿತಿ ಅಧೋಗತಿ ಎನ್ನುವಂತಾಗಿದೆ. ಹೇಳೋರು-ಕೇಳೋರು ಯಾರು ಇಲ್ಲದಂತಾಗಿದೆ ಎಂದು ಸವಾರರು ಬೇಸರ ವ್ಯಕ್ತಪಡಿಸುತ್ತಾರೆ.ಮಳೆ ಬಂದರೆ ಸಾಕು ಈ ರಸ್ತೆಯಲ್ಲಿನ ತಗ್ಗು-ಗುಂಡಿಗಳ ಜಲಮಯವಾಗಲಿದ್ದು, ವಾಹನ ಸವಾರರಿಗೆ ರಸ್ತೆಯೇ ಗೊತ್ತಾಗುತ್ತಿಲ್ಲ. ಇಂತಹ ದುಸ್ಥಿತಿಯೆಡೆಯ ಸುಧಾರಣೆಗೆ ಸರಕಾರ…

Read More