Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಮನೆಯ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಸಂಕಷ್ಟದಲ್ಲಿ ಇದ್ದ ಕುಟುಂಬಕ್ಕೆ ಕರ್ನಾಟಕ ಪ್ರೇಸ್ ಕ್ಲಬ್ ಸಂಘಟನೆ ವತಿಯಿಂದ 5ಸಾವಿರ ನಗದು ಹಣವನ್ನು ಸಹಾಯ ಮಾಡಲಾಯಿತು.ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಕಾಂತ ತೇರದಾಳ ಮಾತನಾಡಿ, ಅತೀ ಕಡುಬಡತನದ ಕುಟುಂಬಗಳಿಗೆ ನಮ್ಮ ಸಂಘಟನೆಯಿಂದ ಕೈಲಾದಷ್ಟು ಸಹಾಯವನ್ನು ಮಾಡುವ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತದೆ. ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಕುಸಿದ್ದು ಬಿದ್ದಿರುತ್ತದೆ. ಮೇಲ್ಛಾವಣಿ ದುರಸ್ತಿ ಮಾಡಿಕೊಳ್ಳಲು ನಮ್ಮ ಸಂಘಟನೆಯು ಸಹಾಯ ಮಾಡಲು ಮುಂದಾಗಿರುತ್ತದೆ ಎಂದರು.ಈ ಸಂದರ್ಭದಲ್ಲಿ ರಾಜಕುಮಾರ ಪಾಟೀಲ, ಕೇದಾರೆಪ್ಪ ರಾವಳೋಜಿ, ರವಿಕುಮಾರ ಶಿಂಗೆ, ದಿಲೀಪ ದಾಶ್ಯಾಳ, ಪ್ರವೀಣ ಹೊಳೆಪ್ಪಗೋಳ, ನಿಂಗರಾಜ ಬೆಳನ್ನವರ, ಕಿರಣ ಪವಾರ, ಗಜಾನಂದ ಕಾಂಬಳೆ, ಗುಲಾಬ ತೇರದಾಳ ಸೇರಿದಂತೆ ಇತರರು ಇದ್ದರು.
ಲೇಖನ- ಸುಮನ್ ಪಾಟೀಲ ಜರ್ನಲಿಸಂ ವಿದ್ಯಾರ್ಥಿನಿವಿಜಯಪುರ ಉದಯರಶ್ಮಿ ದಿನಪತ್ರಿಕೆ ಇಂದು ನಾವೆಲ್ಲ 79 ನೇ ಸ್ವಾತಂತ್ಯ ದಿನದ ಸಡಗರ, ಸಂಭ್ರಮದಲ್ಲಿದ್ದೇವೆ.ಭಾರತ ಬಾಹ್ಯಾಕಾಶ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪ್ರಗತಿ ಸಾಧಿಸಿದೆ.ಎಲ್ಲಕ್ಕಿಂತ ಮಿಗಿಲಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದರೂ ಕೂಡ ಭಾರತ ದೇಶದಲ್ಲಿ ಮಹಿಳೆ ಎಷ್ಟು ಸುರಕ್ಷಿತವಾಗಿದ್ದಾಳೆ ಎಂಬ ಪ್ರಶ್ನೆ ಎದುರಾದಾಗ ನಾವೆಲ್ಲಾ ತಲೆ ತಗ್ಗಿಸಬೇಕಾದ ಸಂದರ್ಭ ಬರುತ್ತದೆ.ಆ ದಿನ ನಾನು ಒಂದು ಸಾಹಿತ್ಯಿಕ ಕಾರ್ಯಕ್ರಮ ಮುಗಿಸಿ ಬಾಗಲಕೋಟೆಯಿಂದ ವಿಜಯಪುರಕ್ಕೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ಸು ಸಿಗದೇ ಸಂಜೆ 7 ರ ಬಸ್ಸಿಗೆ ಕೂತೆ.ಬಸ್ಸಿನ ಕಿಟಕಿಗೆ ಒರಗಿ ಹಾಗೆ ಒಂದತ್ತು ನಿಮಿಷ ಬ್ಯಾಗನ್ನು ಎದೆಗವಚಿ ನಿದ್ದೆ ಹೋಗಿದ್ದೆ. ಸ್ವಲ್ಪೊತ್ತಾದ ಮೇಲೆ ಏನೋ ಎದೆ ಭಾರವಾದಂತೆನಿಸಿ ಎಚ್ಚೆತ್ತು ನೋಡಿದಾಗ ಯಾರೋ ಒಬ್ಬ ವಯಸ್ಸಾದ ವ್ಯಕ್ತಿ ನನ್ನೆದೆ ಮೇಲೆ ಕೈ ಇಟ್ಟಿದ್ದ , ಕೂಡಲೇ ಕೂತ ಜಾಗದಿಂದ ಎದ್ದು ಅವನ ಕೈಯನ್ನು ಕಿತ್ತೆಸೆದು ಒಂದೇ ಸಮನೆ ಭಯದಲ್ಲಿ ಬಾಯಿಗೆ ಬಂದದ್ದು ಬೈಯತೊಡಗಿದೆ. ಆತ ಏದ್ದೇನೋ ಬಿದ್ದೆನೋ ಎಂಬಂತೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 300 ಮೀ ಉದ್ದದ ಬೃಹತ್ ತಿರಂಗಾ ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು “ಭಾರತ್ ಮಾತಾ ಕೀ ಜೈ” “ವಂದೇ ಮಾತರಂ” ದೇಶ ಮೊದಲು ಎನ್ನುವ ಘೋಷಣೆಗಳನ್ನು ಕೂಗುತ್ತಾ ತಿರಂಗವನ್ನು ಹಿಡಿದು ನಗರದ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ಸಿದ್ದೇಶ್ವರ ದೇವಸ್ಥಾನದವರೆಗೆ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯುವಶಕ್ತಿಯ ಕೊಡುಗೆ ಅಪಾರವಿದೆ, ಅವರಿಗೆ ದೇಶದ ಕುರಿತು ಇದ್ದ ದೇಶಪ್ರೇಮ ಇಂದಿನ ಯುವಕರಿಗೆ ಆದರ್ಶವಾಗಬೇಕು, ಭಾರತ ದೇಶಕ್ಕೆ ಸ್ವತಂತ್ರ ದೊರಕಿದ್ದು ಸಾವಿರಾರು ಜನರ ಬಲಿದಾನದಿಂದ ಆ ಬಲಿದಾನವನ್ನು ಎಲ್ಲರೂ ನೆನಪಿಸಿಕೊಳ್ಳಬೇಕು ಎಂದರು.ಎಬಿವಿಪಿಯ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ ಮಾತನಾಡಿ, ಎಬಿವಿಪಿ ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮವನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.ನಗರದ ತುಂಗಳ ಶಿಕ್ಷಣ…
ವೀರ ರಾಣಿ ಕಿತ್ತೂರು ಚನ್ನಮ್ಮ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಕೋಶಾಧ್ಯಕ್ಷ ಶಂಕರಗೌಡ ಪಾಟೀಲ (ಸವನಳ್ಳಿ), ಉಪಾಧ್ಯಕ್ಷ ಬಿ.ಎಸ್ ಬಿರಾದಾರ (ಬಾಗಾದಿ) ಹಾಗೂ ಸಮಿತಿ ಸದಸ್ಯರ ಸ್ಪಷ್ಠನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ, ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆಯನ್ನು ಆ. 23 ರಂದು ಲೋಕಾರ್ಪಣೆಗೊಳಿಸಲಾಗುವುದೆಂದು ಪತ್ರಿಕೆಯಲ್ಲಿ ಬಂದ ಪ್ರಕಟಣೆ ಸತ್ಯಕ್ಕೆ ದೂರವಾಗಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ. ದಿನಾಂಕ ನಿಗದಿಪಡಿಸುವ ಮೊದಲು ಜಿಲ್ಲಾಡಳಿತದೊಂದಿಗೆ ನಾವು ಈ ಕಾರ್ಯಕ್ಕೆ ನೆರವಾಗಿರುವ ಹಾಗೂ ಈ ಮೂರ್ತಿ ಪ್ರತಿಷ್ಠಾಪನೆಗೆ ಕಾರಣರಾಗಿ, ನಮಗೆ ಬಸ್ ನಿಲ್ದಾಣದ ಹೃದಯ ಭಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ನಿವೇಶನ ಒದಗಿಸಿದ ಹಾಗೂ ನಾಲ್ಕು ದಶಕಗಳಿಂದ ನೆನಗುದಿಗೆ ಬಿದಿದ್ದ ಈ ಕಾರ್ಯಕ್ಕೆ ನಿವೇಶನ ಒದಗಿಸಿದ್ದು ಮಾತ್ರವಲ್ಲದೇ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ ಮಾಡಿಸಿರುವುದರ ಜೊತೆಗೆ ರಾಣಿ ಚನ್ನಮ್ಮನವರ ಹೆಸರು ಚಿರಸ್ಥಾಯಿಯಾಗಲೆಂದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮನವರ ಹೆಸರಿಡಲು ಕಾರಣರಾದ ಜಿಲ್ಲಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿಎಲ್ಡಿಇ ಸಂಸ್ಥೆಯ ಎಸ್ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಜಯಪುರ, ಎನ್ಎಸ್ಎಸ್ ಘಟಕ-1 ಮತ್ತು ಘಟಕ-2 ಸಹಯೋಗದಲ್ಲಿ ಗುರುವಾರ ಹರ್ ಘರ್ ತಿರಂಗಾ ಅಭಿಯಾನ-2025 ಕ್ಕೆ ಚಾಲನೆ ನೀಡಲಾಯಿತು.ಮನೆಮನೆಗೆ ಎನ್ಎಸ್ಎಸ್ ಸ್ವಯಂಸೇವಕರು ಈ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿ, ನಮ್ಮ ರಾಷ್ಟ್ರದ ಬಗ್ಗೆ ದೇಶಭಕ್ತಿಯ ಭಾವನೆಗಳನ್ನು ಬೆಳೆಸಲು ಮತ್ತು ಹರ್ ಘರ್ ತಿರಂಗ ಹಾರಿಸುವ ಆಚರಣೆಯನ್ನು ಉತ್ತೇಜಿಸಲು ಭಾರತ ಮಾತಾ ಕಿ ಜೈ , ವಂದೇ ಮಾತರಂ ಎಂದು ಘೋಷಣೆಗಳನ್ನು ಕೂಗಿ ರಾಷ್ಟ್ರಭಕ್ತಿಯನ್ನು ಮೂಡಿಸಿ ಮತ್ತು ಪ್ರತಿ ಮನೆಗೆ ರಾಷ್ಟ್ರಧ್ವಜವನ್ನು ವಿತರಿಸಿದರು.ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಅರ್.ಎಂ.ಮಿರ್ಧೆ, ಉಪಪ್ರಾಚಾರ್ಯ ಡಾ.ಅನೀಲ.ಭೀ.ನಾಯಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್ ಪಾಟೀಲ, ವಿಜಯಪುರ ಜಿಲ್ಲಾ ಉಸ್ತುವಾರಿ ಸಂಯೋಜಕ ಗಂಗಾಧರ್ ಅಗಸರ್,ಎನ್ ಎಸ್ ಎಸ್ ಘಟಕ ೧ & ೨ ರ ಅಧಿಕಾರಿಗಳಾದ ಡಾ.ತರನ್ನುಮ್ ಜಬೀನ್ ಖಾನ್, ಡಾ.ಮಿಲನ್ ರಾಠೋಡ್, ದೈಹಿಕ ನಿರ್ದೇಶಕ ಎಸ್.ಕೆ ಪಾಟೀಲ ಎನ್ ಎಸ್ ಎಸ್ ಸ್ವಯಂ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಉತ್ತಮ ಜ್ಞಾನದೊಂದಿಗೆ ಕೌಶಲ್ಯವಿರಬೇಕು, ತಂತ್ರಜ್ಞಾನ ಸೂಕ್ತವಾಗಿ ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಕಾಂತಾ ನಾಯಕ ಹೇಳಿದರು.ನಗರದ ಬಿ.ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಗುರುವಾರ ಆಯೋಜಿಸಲಾದ ೨೦೨೫-೨೬ ನೇ ಸಾಲಿನ ‘ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಜೀವನದ ಸಾಧಿಸುವ ಛಲ, ಹಟ ಮತ್ತು ಗುರಿಯಿರಬೇಕು. ಅಂದಾಗ ಮಾತ್ರ ಜೀವನದಲ್ಲಿ ಸಾಧಿಸಲು ಸಾಧ್ಯವಾಗುತ್ತದೆ. ಇಂದಿನ ವಿದ್ಯಾರ್ಥಿಗಳಿಗಳು ಕೇವಲ ಜ್ಞಾನವನ್ನು ಪಡೆಯದೆ ಅದರೊಂದಿಗೆ ಕೌಶಲ್ಯವು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.ವಿದ್ಯಾರ್ಥಿಗಳು ನಿರಂತರ ಓದಿನೊಂದಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನ…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 21 ನೆಯ ಶರಣಮಾಸದ ಅನುಭಾವ ಮಾಲಿಕೆಯಲ್ಲಿ ಇಂದು ಶರಣೆ ಗೌರಮ್ಮ ನಾಶಿ ಅವರು ಹಡಪದ ಅಪ್ಪಣ್ಣ ಅವರ ಬಗೆಗೆ ಅತ್ಯಂತ ಅರ್ಥವತ್ತಾಗಿ ಮಾತನಾಡಿದರು.ವಂದನೆಗೆ ನಿಲ್ಲಬೇಡನಿಂದೆಗಂಜಿ ಓಡಲಿಬೇಡಹಿಂದು ಮುಂದು ಆಡಲಿ ಬೇಡಸಂದೇಹಗೊಳಲಿ ಬೇಡದ್ವಂದ್ವ ಬುದ್ಧಿಯ ಕಳೆದುನಿಂದಿರೆಬಸವ ಪ್ರಿಯ ಕೂಡಲ ಚನ್ನಬಸವಣ್ಣಎನ್ನುವ ವಚನದೊಂದಿಗೆ ತಮ್ಮಉಪನ್ಯಾಸ ಪ್ರಾರಂಭ ಮಾಡಿದ ಗೌರಮ್ಮ ಅವರು ಶರಣ ಚಳುವಳಿ ಮತ್ತು ವಚನ ಗಳ ಮಹತ್ವವನ್ನು ತಿಳಿಸುತ್ತಾ, ಹಡಪದ ಅಪ್ಪಣ್ಣನವರು ಮಹಾನುಭಾವ ಬಸವಣ್ಣನವರ ಆಪ್ತ ಕಾರ್ಯದರ್ಶಿ ಮತ್ತು ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿ, ಮಹಾಮಂತ್ರಿ ಬಸವಣ್ಣನವರನ್ನು ಎಲ್ಲ ಸಂದರ್ಭಗಳಲ್ಲಿಯೂ ಎಲ್ಲ ಸನ್ನಿವೇಶಗಳಲ್ಲಿಯೂ ನೆರಳಿನಂತೆ ಅನುಸರಿಸಿದವ ರೆoದರೆ ಹಡಪದ ಅಪ್ಪಣ್ಣ, ಬಸವಣ್ಣನವರು ಮತ್ತು ಚೆನ್ನಬಸವಣ್ಣನವರು ಇಬ್ಬರೂ ಅವರ ಆರಾಧ್ಯ ಪುರುಷರಾಗಿದ್ದರು.ಅಂತೆಯೇ ತಮ್ಮ ವಚನಾoಕಿತವನ್ನು ” “ಬಸವಪ್ರಿಯ ಕೂಡಲ ಚೆನ್ನಬಸವಣ್ಣ ” ಎಂದು ಇರಿಸಿಕೊಂಡಿದ್ದರು, ಅವರ 243 ವಚನಗಳು ಲಭಿಸಿವೆ. ಅವರ ಮಡದಿ ಲಿಂಗಮ್ಮ ನವರು 114 ವಚನಗಳನ್ನು ಬರೆದಿದ್ದಾರೆ ಎನ್ನುವುದನ್ನು…
ಲೇಖನ- ಡಾ.ಮಲ್ಲಿಕಾರ್ಜುನ ಆಲಮೇಲಯಡ್ರಾಮಿಕಲಬುರ್ಗಿ ಜಿಲ್ಲೆಮೊ: ೯೭೪೦೪೯೯೮೧೪ ಉದಯರಶ್ಮಿ ದಿನಪತ್ರಿಕೆ “ಯಾರಿಗೆ ಬಂತು ಎಲ್ಲಿಗೆ ಬಂತುನಲವತ್ತೇಳರ ಸ್ವಾತಂತ್ರ್ಯಟಾಟಾ ಬಿರ್ಲಾ ಜೋಬಿಗೆ ಬಂತುಜನಗಳ ತಿನ್ನುವ ಬಾಯಿಗೆ ಬಂತುಕೋಟ್ಯಾಧೀಶನ ಕೋಣೆಗೆ ಬಂತುನಲವತ್ತೇಳರ ಸ್ವಾತಂತ್ರ್ಯ” ಈ ಕವಿತೆ ( ಗೀತೆ )ಬಂಡಾಯ ಸಾಹಿತಿ ಅಂತಲೇ ಚಿರಪರಿಚಿತರಾಗಿದ್ದ ಡಾ.ಸಿದ್ದಲಿಂಗಯ್ಯರವರು, ಸ್ವಾತಂತ್ರ್ಯದ ಬರೆದ ಒಂದು ಉತ್ಕೃಷ್ಟ ಕಾವ್ಯವಾಗಿದೆ, ಇದನ್ನವರು ಇಲ್ಲಿಯ ವ್ಯವಸ್ಥೆಯ ಕಂಡು, ನೊಂದು ಬೇಸರದಿ ಆಕ್ರೋಶ ಭರಿತವಾಗಿ ಬರೆದಿದ್ದಾರೆ. ಅವರ ಪ್ರತಿ ಸಾಲುಗಳು ಅಕ್ಷರಶಃ ಸತ್ಯವಾಗಿವೆ.ಆಗಸ್ಟ 14ರ ಮಧ್ಯರಾತ್ರಿ ಆಂಗ್ಲ ಕ್ಯಾಲೆಂಡರ ಪ್ರಕಾರ 15ನೇ ತಾರೀಖ, 1947ರಂದು ಲಭಿಸಿದ ಸ್ವಾತಂತ್ರ್ಯ ಏನಾಯಿತು? ಎಲ್ಲಿಗೆ ಹೋಯಿತು? ಆಂಗ್ಲರ ಜೊತೆಯೇ ಬೆನ್ನುಹತ್ತಿ ಹೋಯಿತೇ, ಭವಿಷ್ಯ ಮಧ್ಯರಾತ್ರಿ ಸ್ವಾತಂತ್ರ್ಯ ಸಿಕ್ಕಿರುವದಕ್ಕೆ ಅದಕ್ಕಿನ್ನೂ ಬೆಳಕಿನೆಡೆಗೆ ಬರಲು ಸಾದ್ಯವಾಗುತ್ತಿಲ್ಲವೇನೋ.? ಎಂತಹ ವಿಪರ್ಯಾಸವಲ್ಲವೇ?ನಮ್ಮ ಸ್ವಾತಂತ್ರ್ಯವನ್ನು ನಾವೇ ಹುಡುಕುತ್ತಿದ್ದೇವೆ. ಸ್ವಾತಂತ್ರ್ಯದ ಹೆಸರಲ್ಲಿ, ಬಾರು, ಪಬ್ಬು, ಕ್ಲಬ್ ಗಳಲ್ಲಿ ಮೋಜು, ಮಸ್ತಿ ಮಾಡುತ್ತಿದ್ದೇವೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅಳವಡಿಸಿಕೊಳ್ಳಲು ಹೋಗಿ ಅವಿವೇಕಿಗಳಾಗುತ್ತಿದ್ದೇವೆ ಅಲ್ಲವೇ?ಎಲ್ಲಿದೆ ಸ್ವಾತಂತ್ರ್ಯ? ಯಾರಿಗೆ ಲಭಿಸಿದೆ ಸ್ವಾತಂತ್ರ್ಯ ? ಒಂದು…
ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ವಿದ್ಯಾನಗರದ ನಿವಾಸಿ ನಿ.ಶಿಕ್ಷಕಿಯ ನಂಬಿಕೆಗಳಿಸಿದ ಇಬ್ಬರು ಅಪರಿಚಿತರು ಸುಮಾರು ೯೦ ಸಾವಿರ ರೂ. ಬೆಲೆ ಬಾಳುವ ೨೫ ಗ್ರಾಂ. ತೂಕದ ಚಿನ್ನದ ಪಾಟಲಿ (ಬಳೆ) ಕದ್ದು ಪರಾರಿಯಾಗಿದ್ದು, ಈ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಿಜಯಲಕ್ಷ್ಮಿ ಗುರುಲಿಂಗಯ್ಯ ಮಠ ಅವರು ಚಿನ್ನ ಕಳೆದುಕೊಂಡವರಾಗಿದ್ದು, ಎಂದಿನಂತೆ ಸೋಮವಾರ ಸಾಯಂಕಾಲ ವಿದ್ಯಾನಗರದ ಶ್ರೀ ಅರವಿಂದ ಆಶ್ರಮಕ್ಕೆ ಧ್ಯಾನ ಮಾಡುವ ಸಲುವಾಗಿ ತೆರಳುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಅಪರಿಚಿತರು, ಬೆಲೆಬಾಳುವ ಆಭರಣ ಕೈಯಲ್ಲಿ ಹಾಕಿಕೊಂಡು ತಿರುಗಾಡುವುದು ಸೇಫ್ ಅಲ್ಲ ಎಂಬ ಮರಳು ಮಾತಿಗೆ ಮತ್ತು ಪಟ್ಟಣದಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು ನಿಮ್ಮ ಕೈಯಲ್ಲಿರುವ ಚಿನ್ನಾಭರಣವನ್ನು ಬಿಚ್ಚಿ, ನಾವು ಕೊಟ್ಟಿರುವ ಡಬ್ಬದಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಿ ಎಂಬ ಮಾತಿಗೆ ಮೋಸಹೋಗಿದ್ದಾರೆ ಎಂದು ಹೇಳಿದ್ದಾರೆ.ಅವರನ್ನು ನಂಬಿದ ನಿವೃತ್ತ ಶಿಕ್ಷಕಿ ಅವರು ಹೇಳಿದ ಹಾಗೆ ಮಾಡಿದ್ದು, ಆಶ್ರಮಕ್ಕೆ ಹೋದನಂತರ ಅವರು ಕೊಟ್ಟ ಡಬ್ಬಿ ತೆರೆದು ನೋಡಿದಾಗ ಬಂಗಾರದ ಬದಲಿಗೆ ಸಣ್ಣ ಕಲ್ಲು ಇತ್ತು ಎಂದು ಹೇಳಿದ್ದಾರೆ.ಈ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಧ್ಯಾರ್ಥಿ ಜೀವನದಲ್ಲಿ ಸಾಧನೆಗೆ ಅಧ್ಯಯನ ಬಹಳ ಅವಶ್ಯಕವಾಗಿದೆ. ಗ್ರಂಥಾಲಯದಲ್ಲಿ ಕನಿಷ್ಠ ೬ಘಂಟೆಗಳ ಕಾಲ ವಿಧ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಗ್ರಂಥಪಾಲಕ ಸತೀಶ ಬಿರಾದಾರ ಹೇಳಿದರು.ಸಿಂದಗಿ ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಮ್.ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಾ.ಎಸ್.ಆರ್.ರಂಗನಾಥರವರ ಸ್ಮರಣಾರ್ಥವಾಗಿ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಅವರ ಭಾವಚತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇಂದು ಭಾರತದ ಗ್ರಂಥಾಲಯ, ವಿಜ್ಞಾನದ ಜನಕ ಡಾ.ಎಸ್.ಆರ್.ರಂಗನಾಥನ್ ಅವರ ಅಪ್ರತಿಮ ಕೊಡುಗೆಗಳನ್ನು ಸ್ಮರಿಸುತ್ತೇವೆ. ಗ್ರಂಥಾಲಯದ ಉಪಯೋಗ, ಗ್ರಂಥಾಲಯ ಹೇಗಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಹೇಗೆ ಸದುಪಯೋಗ ಮಾಡಿಕೊಳ್ಳಬೇಕು.ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವ ಪುಸ್ತಕ, ದಿನಪತ್ರಿಕೆಗಳು ಅಧ್ಯಯನ ಮಾಡಬೇಕೆಂದರು.ಈ ವೇಳೆ ಪ್ರಾಚಾರ್ಯ ಬಿ.ಡಿ.ಮಾಸ್ತಿ ಡಾ.ಅಂಬರೀಶ ಬಿರಾದಾರ, ರಾಹುಲ ಕಾಂಬಳೆ, ಡಾ.ಅರವಿಂದ ಮನಗೂಳಿ, ಎಸ್.ಎಮ್.ಬಿರಾದಾರ, ಎಸ್.ಕೆ.ಹೂಗಾರ, ಅಮಿತ ಈಳಗೇರ ಡಾ.ಚಂದ್ರಕಾAತ ಪಾಟೀಲ, ವಿ.ಬಿ.ಪಾಟೀಲ, ಎಸ್.ಎಮ್.ಅರ್ಜುಣಗಿ ಸೇರಿದಂತೆ ಅನೇಕರಿದ್ದರು.
