Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ೨೦೨೬ನೇ ಮೇ ಹಾಗೂ ಜೂನ್ ತಿಂಗಳಿಗೆ ಸಂಬಂಧಿಸಿದ ಪಡಿತರ ಅಕ್ಕಿಯನ್ನು ಮೇ ತಿಂಗಳಿನಲ್ಲಿಯೇ ವಿತರಿಸಲು ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.ಅಂತ್ಯೋದಯ ಅನ್ನಯೋಜನೆ ಪ್ರತಿ ಪಡಿತರ ಚೀಟಿಗೆ ಎರಡೂ ತಿಂಗಳ ಪಡಿತರ ಅಕ್ಕಿ ಒಟ್ಟು ೭೦ ಕೆಜಿ ಹಾಗೂ ಆಧ್ಯತಾ (ಬಿಪಿಎಲ್) ಪಡಿತರ ಚೀಟಿಗೆ ಪ್ರತಿ ತಿಂಗಳು ಪ್ರತಿ ಸದಸ್ಯರಿಗೆ ೫ ಕೆಜಿಯಂತೆ ಒಟ್ಟು ೧೦ ಕೆಜಿ ಅಕ್ಕಿಯನ್ನು ಕಡ್ಡಾಯವಾಗಿ ಎರಡು ಪ್ರತ್ಯೇಕ ಬಯೋಮೆಟ್ರಿಕ್ ನೀಡುವ ಮೂಲಕ ಪಡಿತರ ಚೀಟಿದಾರರು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಮೇ ಹಾಗೂ ಜೂನ್ ತಿಂಗಳ ಅಕ್ಕಿಯನ್ನು ೨೦೨೬ನೇ ಜೂನ್ ತಿಂಗಳಲ್ಲಿ ವಿತರಣೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಸರ್ಕಾರವು ನೀಡುತ್ತಿರುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿಕೊಳ್ಳದಿರಲು ಸೂಚಿಸಿದೆ. ಒಂದು ವೇಳೆ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸಲಾಗುವುದು ಎಂದು…

Read More

ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ್ ಕೌಲಗಿ ವಿಶ್ವಾಸ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತನ್ನ ಪರಿಣಾಮಕಾರಿ ಬೋಧನೆ ಹಾಗೂ ಅತ್ಯುತ್ತಮ ಫಲಿತಾಂಶದ ಮೂಲಕ ಮನೆ ಮಾತಾಗಿರುವ ಸಂಸ್ಥೆ ಇದೀಗ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡು ಮತ್ತೊಂದು ಮೈಲಿಗಲ್ಲು ನೆಡಲು ಸಜ್ಜಾಗಿದೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ್ ಕೌಲಗಿ ಹೇಳಿದರು.ಗುರುವಾರ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಈ ಬಾರಿ ನೀಟ್ ಪರೀಕ್ಷೆಯ ನಂತರದಲ್ಲಿ ವಿದ್ಯಾರ್ಥಿಗಳು ಕೀ ಉತ್ತರವನ್ನು ಪರಿಶೀಲಿಸಿಕೊಂಡಿದ್ದು ನಿರೀಕ್ಷೆಗಳು ಗರಿಗೆದರಿವೆ. ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಪ್ರಾರಂಭಗೊಂಡ ಮರು ವರ್ಷದಿಂದಲೇ ತನ್ನ ಸಾಧನೆಯ ಪತಾಕೆಯನ್ನು ಸಂಸ್ಥೆಯು ಹಾರಿಸುತ್ತಲೇ ಬಂದಿದೆ. ಶ್ರೀಧರ ದೊಡಮನಿ ಎನ್ನುವ ವಿದ್ಯಾರ್ಥಿಯು ನೀಟ್ ಹಾಗೂ ಕೆ-ಸಿಇಟಿ ನಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆಯುವ ಮೂಲಕ ಸಾಧನೆಯ ಹಾದಿಯಲ್ಲಿ ಮೊದಲ ಹೆಜ್ಜೆ ಗಟ್ಟಿಯಾಗಿ ಊರಿದನು. ತದ ನಂತರದ ಬ್ಯಾಚ್‌ಗಳಲ್ಲಿ ಬಂದಂತ ಅತ್ಯುತ್ತಮ ಫಲಿತಾಂಶವು ಜನತೆಗೆ ಎಕ್ಸಲಂಟ್ ಮೇಲಿದ್ದ ನಂಬಿಕೆಯನ್ನು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರ ಹಾಗೂ ತಾಲೂಕಿನ ಗ್ರಾಮಗಳಲ್ಲಿ ಇರುವ ಎಟಿಎಂ ಗಳಲ್ಲಿ ಹಣವಿಲ್ಲದೆ ಖಾಲಿ ಖಾಲಿ. ಇದರಿಂದ ಹಣ ಪಡೆಯಬೇಕೆಂಬ ಗ್ರಾಹಕರಿಗೆ ನಿರಾಶೆಯಾಗುತ್ತಿದೆ. ಇದು ಕೇವಲ ಒಂದು ಎರಡು ದಿವಸದ ಸಮಸ್ಯೆ ಅಲ್ಲ ಕಳೆದ ಒಂದು ತಿಂಗಳಿAದ ಹಣವಿಲ್ಲ.ಬೆಳಗ್ಗೆ ೯ ಗಂಟೆಗೆ ನೌಕರಿಗೆ ಅಥವಾ ಕೆಲಸಕ್ಕೆ ಹೋಗಿ ೪ ಅಥವಾ ೫ ಗಂಟೆಗೆ ಬರುವವರಿಗೆ ತೊಂದರೆಯಾಗುತ್ತಿದೆ.ಉದ್ಯೋಗದ ಸಮಯದಲ್ಲಿ ಅವರು ಬ್ಯಾಂಕಿಗೆ ಬಂದು ಹಣ ಪಡೆಯುವದು ಆಗುವದಿಲ್ಲ, ಅಥವಾ ಬೇರೆ ಗ್ರಾಮಗಳಲ್ಲಿ ಕೆಲಸ ಮಾಡುವವರು ಹಣ ತೆಗೆಯಲೆಂದೇ ಇಂಡಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.ಸೆಂಟ್ರಲ್ ಬ್ಯಾಂಕ ಡಿಜಿಟಲ್ ಕರೆನಸಿಝ ಸಿಬಿಡಿಸಿ ಇವರು ಬ್ಯಾಂಕಿನಿAದ ಆಗಲೀ ಇನ್ನಿತರ ಮೂಲಗಳಿಂದ ಹಣ ವರ್ಗಾಯಣೆ ಕಡಿಮೆಯಾಗಬೇಕು, ಮತ್ತು ಫೋನ್ ಪೇ ಮೂಲಕ ಹಣ ವರ್ಗಾಯಣೆ ಆಗಬೇಕು ಎಂಬ ವ್ಯವಸ್ಥೆ ಮಾಡುವ ಯೋಚನೆಯಲ್ಲಿದ್ದು ಹಣ ಎಟಿಎಂನಲ್ಲಿ ಹಾಕುತ್ತಿಲ್ಲ ಎಂದೇ ಹೇಳಲಾಗುತ್ತಿದೆ.ನಗರದ ಎಸ್.ಬಿ.ಐ, ಕೆನರಾ ಬ್ಯಾಂಕು, ಯುನಿಯನ್ ಬ್ಯಾಂಕ, ಬ್ಯಾಂಕ ಆಫ್ ಇಂಡಿಯಾ, ಕರ್ನಾಟಕ, ಕೋಟಕ ಮಹೀಂದ್ರಾ ಸೇರಿದಂತೆ ಅನೇಕ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಅಹಿರಸಂಗ ಗ್ರಾಮದಲ್ಲಿ ಆಚರಿಸುತ್ತಿರುವ ಪೀರ ರಾಜೇನೂರ ಶಾ ಶಾಹನೂರಲಿ ಬಾಬಾ ಉರುಸು ಗ್ರಾಮದಲ್ಲಿ ಹಿಂದು – ಮುಸ್ಲಿಮ ಬಾಂಧವರು ಸಹೋದರತ್ವ ಭಾವನೆಯಿಂದ ಆಚರಿಸುತ್ತಿದ್ದು ಭಾವೈಕ್ಯತೆ ಸಂಕೇತವಾಗಿದೆ ಎಂದು ಜೈನಾಪುರದ ರೇಣುಕಾ ಶಿವಾಚಾರ್ಯರರು ಹೇಳಿದರು.ತಾಲೂಕಿನ ಅಹಿರಸಂಗ ಗ್ರಾಮದಲ್ಲಿ ನಡೆದ ಪೀರ ರಾಜೇನೂರ ಶಾ ಶಾಹನೂರಲಿ ಬಾಬಾ ಉರುಸು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಪೀರ ರಾಜೇನೂರ ಶಾ ಶಾಹನೂರಲಿ ಬಾಬಾರವರು ಪವಾಡ ಪುರುಷರಾಗಿದ್ದರು. ಹೀಗಾಗಿ ಅವರ ಮೇಲೆ ಜನರ ಅಪಾರ ಪ್ರೇಮ ಇತ್ತು. ಜನರು ಅವರನ್ನು ಗೌರವ ಮತ್ತು ಶ್ರದ್ದೆಯಿಂದ ಕಾಣುತ್ತಿದ್ದರು. ಅವರಿಂದ ಉದ್ದಾರ ಆದವರು ಅನೇಕರು ಎಂದರು.ಶ್ರೀ ಮಲ್ಲಿಕಾರ್ಜುನ ಶ್ರೀಗಳು ಅಹಿರಸಂಗ, ವಿಠ್ಠಲಗೌಡ ಯಶವಂತರಾಯಗೌಡ ಪಾಟೀಲರು,ಅಹಿರಸಂಗದ ರೇವಣಸಿದ್ದಯ್ಯ ಶಾಸ್ತ್ರಿಗಳು, ಅಶೋಕ ಬಡಿಗೇರ ದಾದಾ ಶ್ಯಾಮಣ್ಣವರ ಮಾತನಾಡಿದರು.ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು ಸಾನಿದ್ಯ ವಹಿಸಿದ್ದರು. ರಜಾಕ ಯಡ್ರಾಮಿ,ಶಬಾನಾ ಶೇಖ,ಪ್ರಭುಗೌಡ ಬಿರಾದಾರ, ಮುಜಬಿರ ರಹಮಾನ ಶ್ಯಾಮಣ್ಣನವರ ಮತ್ತಿತರಿದ್ದರು ವೃದಿಕೆಯ ಮೇಲೆ ಇದ್ದರು.ವಾಸುದೇವ ಕುಲಕರ್ಣಿ, ಲಾಲಸಾಬ ಮುಲ್ಲಾ, ಯಶವಂತ ಕಾಡೆಗೋಳ, ನಿಸಾರ ಶ್ಯಾಮಣ್ಣನವರ, ಶಿವಾನಂದ ಬ್ಯಾಗೇಳಿ,…

Read More

ಪಕ್ಷಾಂತರ ವಿರೋಧಿ ಸಮಿತಿ ಚಿಂತನೆ | ಪಕ್ಷಾಂತರ ಮಾಡಿದರೆ ಸಚಿವ ಸ್ಥಾನ, ಮತದಾನ ಹಕ್ಕು ಕೂಡ ನಿರಾಕರಣೆ? ಬೆಂಗಳೂರು: ಪಕ್ಷಗಳಿಂದ ಹೊರಹೋಗುವ ಅಥವಾ ಪಕ್ಷಾಂತರ ಮಾಡುವ ಶಾಸಕರ ವಿರುದ್ಧ ಶೀಘ್ರದಲ್ಲೇ ಇನ್ನಷ್ಟು ಕಠಿಣ ಕ್ರಮಗಳು ಜಾರಿಯಾಗುವ ಸಾಧ್ಯತೆ ಇದೆ. ಅವಿಶ್ವಾಸ ನಿರ್ಣಯದ ವೇಳೆ ಮತದಾನದ ಹಕ್ಕು ಕಳೆದುಕೊಳ್ಳುವುದು ಹಾಗೂ ಸಚಿವ ಸ್ಥಾನ ಸೇರಿದಂತೆ ಲಾಭದಾಯಕ ಸರ್ಕಾರಿ ಹುದ್ದೆಗಳನ್ನು ವಹಿಸುವುದರಿಂದ ಅನರ್ಹಗೊಳ್ಳುವಂತಹ ಶಿಕ್ಷೆಗಳು ವಿಧಿಸುವ ಬಗ್ಗೆ ರಾಷ್ಟ್ರೀಯ ಮಟ್ಟದ ಸಮಿತಿ ಚರ್ಚೆ ನಡೆಸುತ್ತಿದೆ.ಸಂವಿಧಾನದ 10ನೇ ಅನುಸೂಚನೆ (ಪಕ್ಷಾಂತರ ನಿಷೇಧ ಕಾನೂನು) ಕುರಿತ ಸುಧಾರಣೆಗಳನ್ನು ಪರಿಶೀಲಿಸುತ್ತಿರುವ ಸಮಿತಿ ಜೂನ್‌ ತಿಂಗಳಲ್ಲಿ ರಾಜ್ಯದಲ್ಲಿ ಅಂತಿಮ ಸಭೆ ನಡೆಸಿ ತನ್ನ ವರದಿಯನ್ನು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.ಈ ಸಮಿತಿಗೆ ರಾಹುಲ್ ನರ್ವೇಕರ್ ಅಧ್ಯಕ್ಷತೆ ವಹಿಸಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲಪಡಿಸಲು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲು ಫೆಬ್ರವರಿಯಲ್ಲಿ ರಚಿಸಲಾಗಿತ್ತು. ಯು ಟಿ ಖಾದರ್ ಅವರೊಂದಿಗೆ ಸುರಮ ಪಾದಿ ಹಾಗೂ ಶರಿಂಗೈನ್ ಲಾಂಗ್ ಕುಮೆರ್…

Read More

ಹೆಚ್ ಡಿ ಕೋಟೆ ತಾಲೂಕು ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಚಾಕಹಳ್ಳಿ ಕೃಷ್ಣ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ನಾಯಕರಿಗೆ ಮೊದಲ ಆದ್ಯತೆ ನೀಡಬೇಕೆಂದು, ಅದರಲ್ಲೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಯಕರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಮೊನ್ನೆ ನಡೆದ ನಾಯಕ ಸಮುದಾಯದ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲೇ ವರಿಷ್ಠರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ತಾಲೂಕು ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಚಾಕಹಳ್ಳಿ ಕೃಷ್ಣ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರು, ನಮ್ಮ ಸಮುದಾಯದ ಹಿರಿಯ ನಾಯಕರು. ಶಾಸಕರಾಗಿ ತಾಲೂಕಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಎಸ್ಟಿ ಪ್ರಮಾಣಪತ್ರ ಗೊಂದಲ ಸರಿಪಡಿಸಲು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ದೊಡ್ಡನಾಯಕ, ದಿವಂಗತ ಚಿಕ್ಕಮಾದು, ಅಪ್ಪಣ್ಣ, ಸಿದ್ದರಾಜು, ಬಸವರಾಜು, ರಾಮಚಂದ್ರ ಸೇರಿದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಸ್ಟಿ ಸಮುದಾಯದ ನಾಯಕರು ಹೋರಾಟ ನಡೆಸಿದ್ದಾರೆ.…

Read More

ವಿಷ ಸೇವಿಸಲೆತ್ನಿಸಿದ ಜಮೀನಿನ ಮಾಲೀಕನ ಆರೋಗ್ಯ ಸ್ಥಿರ | ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಟವರ್ ನಿರ್ಮಾಣ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಜಮೀನಿಗೆ ತೆರಳಿದಾಗ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿಷ ಪದಾರ್ಥ ಸೇವಿಸಲು ಯತ್ನಿಸಿದ ಜಮೀನಿನ ಮಾಲೀಕನಿಗೆ ಸೂಕ್ತ ಚಿಕಿತ್ಸೆ ಹಾಗೂ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.ಕೇಂದ್ರ ಸರ್ಕಾರದ ಇಂಧನ ಇಲಾಖೆಯ ವ್ಯಾಪ್ತಿಯ ಕೇಂದ್ರೀಯ ವಿದುಚ್ಛಕ್ತಿ ಪ್ರಾಧಿಕಾರದಡಿ ಬರುವ ನರೇಂದ್ರ ಹೊಸ ಸ್ವೀಕರಣಾ (ಕೂಡಗಿ) ಕೇಂದ್ರದಿಂದ ಪುಣೆ (ಜಿ.ಐ.ಎಸ್) ಸ್ಟಿಕರಣಾ ಕೇಂದ್ರದವರೆಗೆ ೭೬೫ ಕೆ.ವಿ. ಪ್ರಸರಣ ಮಾರ್ಗ ನಿರ್ಮಿಸುವ ಕಾಮಗಾರಿಗೆ ನಡೆದಿತ್ತು.ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬಸವನ ಬಾಗೇವಾಡಿ, ಬಬಲೇಶ್ವರ, ತಿಕೋಟಾ ಹಾಗೂ ಕೋಲಾರ ತಾಲೂಕುಗಳಲ್ಲಿ ಟವರ್ ನಿರ್ಮಾಣ ಹಾಗೂ ವಿದ್ಯುತ್ ತಂತಿ ಅಳವಡಿಸುವ ಕಾಮಗಾರಿಗಳು ನಡೆಯುತ್ತಿವೆ. ಒಟ್ಟು ೧೭೭ ಸ್ಥಳಗಳಲ್ಲಿ ಟವರ್ ನಿರ್ಮಾಣದ ಅಡಿಪಾಯ ಕಾಮಗಾರಿಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ೧೬೮ ಸ್ಥಳಗಳಲ್ಲಿ ಟವರ್ ನಿರ್ಮಾಣದ ಅಡಿಪಾಯ…

Read More

ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದಿಂದ ಜಿಲ್ಲಾಧಿಕಾರಿ ಡಾ.ಆನಂದ್ ಕೆ ಅವರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೆಲವರಿಗೆ ಪರಿಶಿಷ್ಟ ಪಂಗಡದ ವಾಲ್ಮೀಕಿ ಜಾತಿಯ ನಕಲಿ ಜಾತಿ ಪ್ರಮಾಣ ನೀಡಿರುವವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದಿಂದ ಜಿಲ್ಲಾಧಿಕಾರಿ ಡಾ.ಆನಂದ ಕೆ ಹಾಗೂ ಡಿವೈಎಸ್ಪಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದ ಲಚ್ಚೆಪ್ಪ ಬಸಪ್ಪ ಬಸವಪಟ್ಟಣ ಇವರು ಹಿಂದೂ ಕಬ್ಬಲಿಗ ಜಾತಿಗೆ ಸೇರಿದವರಾಗಿರುತ್ತಾರೆ. ಆದರೆ ಇವರ ಮಗ ಮಹಾಂತೇಶ ಲ. ಬಸವಪಟ್ಟಣ ಇವನ ಜಾತಿ ಹಾಗೂ ಜನ್ಮ ದಿನಾಂಕ ದೃಢೀಕರಣ ಪತ್ರದಲ್ಲಿ ಹಿಂದೂ ವಾಲ್ಮೀಕಿ ಎಂದು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು ವಾಲ್ಮಿಕಿ ಸಮಾಜಕ್ಕೆ ಅನ್ಯಾಯ ಮಾಡಿರುತ್ತಾರೆ. ಜಿಲ್ಲೆಯಲ್ಲಿ ಇದೇ ರೀತಿ ಸುಮಾರು 5700 ನಕಲಿ ಜಾತಿ ಪ್ರಮಾಣ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಬಹು ಭಾಷಾ ಕಥಾ ಸಾಹಿತ್ಯ ಪರಂಪರೆಯ ಮತ್ತು ವಿವಿಧ ಭಾಷೆಯ ಕಥಾ ಸಾಹಿತ್ಯ ವೈಭವವನ್ನು ಅರಿತುಕೊಳ್ಳುವುದು ಮುಖ್ಯ. ಅದಕ್ಕಾಗಿ ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಮೇ.೧೨ ರಂದು ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಐ.ಕ್ಯೂ.ಎ.ಸಿ ಸಂಯೋಜಕ ಬಿ ಎಸ್ ಬೆಳಗಲಿ ಹೇಳಿದರು.ಗುರುವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವು ವೈವಿದ್ಯೆಮಯ ಭಾಷೆ, ಸಂಸ್ಕೃತಿ, ಸಾಹಿತ್ಯ ಪರಂಪರೆಯ ನೆಲೆಯಾಗಿದೆ. ವಿಶ್ವದ ಪ್ರತಿಯೊಂದು ಭಾಷೆಯು ತನ್ನದೆ ಆದ ವೈಶಿಷ್ಟತೆಗಳನ್ನು ಹೊಂದಿದೆ. ಈ ಪರಂಪರೆ ಭಾರತ ದೇಶದ ಏಕತೆಗಾಗಿ ಸಂದೇಶ ಸಾರುತ್ತದೆ ಎಂದರು.ಕಥೆಗಳು ಕೇವಲ ಮನರಂಜನೆಯ ಸಾಧನವಲ್ಲ, ಸಮಾಜದ ದರ್ಪಣವಾಗಿಯೂ, ಚಿಂತನೆಗೆ ದಾರಿಯಾಗಿಯೂ ಕಾರ್ಯನಿರ್ವಹಿಸುತ್ತವೆ. ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಲೇಖನ ಮಂಡಿಸುವವರು ಆದ್ಯಯನ ಕೇಂದ್ರಿಕರಿಸಿ ಸಂಶೋಧನಾ ಲೇಖನಗಳನ್ನು ರಚಿಸಬಹುದು. ವಿಷಯಗಳ ಜೊತೆಯಲ್ಲಿ ನಿಮ್ಮ ಆದ್ಯಯನಕ್ಕೆ ಲಭಿಸುವ ಕಥಾಸಾಹಿತ್ಯದ ಚಿಂತನೆಗಳ ಬರಹಗಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಗುವದು. ಕಾರಣ ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ…

Read More

ವೇತನ ಬಿಡುಗಡೆಗೆ ಆಗ್ರಹಿಸಿ ನೌಕರರ ಸಂಘದಿಂದ ಬಿಇಓ ಅವರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಖಂಡ ವಿಜಯಪುರ ಗ್ರಾಮೀಣ ಶೈಕ್ಷಣಿಕ ತಾಲ್ಲೂಕಿನಲ್ಲಿ ಎಸ್ಎಸ್ಎ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಮಾರ್ಚ್ ಹಾಗೂ ಏಪ್ರೀಲ್ ತಿಂಗಳ ವೇತನ ಆಗದೇ ಇರುವದರಿಂದ ಸಂಕಷ್ಟ ಅನುಭವಿಸುತ್ತಿದ್ದು, ತಿಕೋಟಾ ತಾಲ್ಲೂಕ ನೌಕರರ ಸಂಘದ ಅಧ್ಯಕ್ಷ ಚನ್ನಯ್ಯ ಮಠಪತಿ ಅವರ ತಂಡದಿಂದ ವೇತನ ಬಿಡುಗಡೆಗೆ ಆಗ್ರಹಿಸಿ ಬಿಇಓ ಬಸವರಾಜ ತಳವಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಮಠಪತಿ ಎರಡು ತಿಂಗಳಿನಿಂದ ವೇತನ ಇಲ್ಲದೇ‌ ಶಿಕ್ಷಕರು ಪರದಾಡುವಂತಾಗಿದೆ. ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ, ಸಾಲದ ಕಂತುಗಳು, ಸಂಸಾರಿಕ ಖರ್ಚು ನಿಭಾಯಿಸಲಿಕ್ಕೆ ಆಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಯಾವುದೇ ತಾಂತ್ರಿಕ ಸಮಸ್ಯೆ ಅಥವಾ ಬಜೆಟ್ ಸಮಸ್ಯೇ ಏನೇ ಇದ್ದರು ಈ ವಾರದೊಳಗೆ ವೇತನ ಪಾವತಿ ಮಾಡಬೇಕು. ಇಲ್ಲದಿದ್ದರೆ ಕಛೇರಿ ಮುಂದೆ ನೌಕರರ ಸಂಘದ ವತಿಯಿಂದ ವೇತನಕ್ಕಾಗಿ ಪ್ರತಿಭಟನೆಗೆ ಧರಣಿ ಕೂಡಲಾಗುವುದು ಎಂದು ಹೇಳಿದರು.ಜಿಲ್ಲಾ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ…

Read More