ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರ ಹಾಗೂ ತಾಲೂಕಿನ ಗ್ರಾಮಗಳಲ್ಲಿ ಇರುವ ಎಟಿಎಂ ಗಳಲ್ಲಿ ಹಣವಿಲ್ಲದೆ ಖಾಲಿ ಖಾಲಿ. ಇದರಿಂದ ಹಣ ಪಡೆಯಬೇಕೆಂಬ ಗ್ರಾಹಕರಿಗೆ ನಿರಾಶೆಯಾಗುತ್ತಿದೆ. ಇದು ಕೇವಲ ಒಂದು ಎರಡು ದಿವಸದ ಸಮಸ್ಯೆ ಅಲ್ಲ ಕಳೆದ ಒಂದು ತಿಂಗಳಿAದ ಹಣವಿಲ್ಲ.
ಬೆಳಗ್ಗೆ ೯ ಗಂಟೆಗೆ ನೌಕರಿಗೆ ಅಥವಾ ಕೆಲಸಕ್ಕೆ ಹೋಗಿ ೪ ಅಥವಾ ೫ ಗಂಟೆಗೆ ಬರುವವರಿಗೆ ತೊಂದರೆಯಾಗುತ್ತಿದೆ.
ಉದ್ಯೋಗದ ಸಮಯದಲ್ಲಿ ಅವರು ಬ್ಯಾಂಕಿಗೆ ಬಂದು ಹಣ ಪಡೆಯುವದು ಆಗುವದಿಲ್ಲ, ಅಥವಾ ಬೇರೆ ಗ್ರಾಮಗಳಲ್ಲಿ ಕೆಲಸ ಮಾಡುವವರು ಹಣ ತೆಗೆಯಲೆಂದೇ ಇಂಡಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೆಂಟ್ರಲ್ ಬ್ಯಾಂಕ ಡಿಜಿಟಲ್ ಕರೆನಸಿಝ ಸಿಬಿಡಿಸಿ ಇವರು ಬ್ಯಾಂಕಿನಿAದ ಆಗಲೀ ಇನ್ನಿತರ ಮೂಲಗಳಿಂದ ಹಣ ವರ್ಗಾಯಣೆ ಕಡಿಮೆಯಾಗಬೇಕು, ಮತ್ತು ಫೋನ್ ಪೇ ಮೂಲಕ ಹಣ ವರ್ಗಾಯಣೆ ಆಗಬೇಕು ಎಂಬ ವ್ಯವಸ್ಥೆ ಮಾಡುವ ಯೋಚನೆಯಲ್ಲಿದ್ದು ಹಣ ಎಟಿಎಂನಲ್ಲಿ ಹಾಕುತ್ತಿಲ್ಲ ಎಂದೇ ಹೇಳಲಾಗುತ್ತಿದೆ.
ನಗರದ ಎಸ್.ಬಿ.ಐ, ಕೆನರಾ ಬ್ಯಾಂಕು, ಯುನಿಯನ್ ಬ್ಯಾಂಕ, ಬ್ಯಾಂಕ ಆಫ್ ಇಂಡಿಯಾ, ಕರ್ನಾಟಕ, ಕೋಟಕ ಮಹೀಂದ್ರಾ ಸೇರಿದಂತೆ ಅನೇಕ ಬ್ಯಾಂಕುಗಳಲ್ಲಿ ಪ್ರತಿ ದಿನ ಗ್ರಾಹಕರು ತಿರುಗಿ ಸುಸ್ತಾಗುತ್ತಿದ್ದಾರೆ ಆದರೆ ಹಣ ದೊರೆಯುತ್ತಿಲ್ಲ.
ಅರ್ಜಂಟಾಗಿ ಹಣ ಬೆಕು ಎನ್ನುವವರಿಗೆ ತೊಂದರೆಯಾಗುತ್ತಿದೆ ಎಂಬುದು ಗ್ರಾಹಕರ ಅಳಲು.
ಯಾವದೇ ವ್ಯವಸ್ಥೆ ಬದಲಾವಣೆ ಮಾಡುವ ಮೊದಲು ಗ್ರಾಹಕರಿಗೆ ತಿಳುವಳಿಕೆ ನೀಡಬೇಕು. ನಂತರ ಸ್ವಲ್ಪ ಸಮಯ ನೀಡಿ ಬದಲಾವಣೆ ಮಾಡಬೇಕು. ಈಗ ಒಮ್ಮಿಂದೊಮ್ಮಲೆ ಬ್ಯಾಂಕಿನಿAದ ಎಟಿಎಂ ನಲ್ಲಿ ಹಣ ಬರದೇ ಇರುವದು ಗ್ರಾಹಕರಿಗೆ ತೊಂದರೆ ಯಾಗುತ್ತಿದೆ ಎಂಬ ಮಾತು ಎಲ್ಲ ಕಡೆಗಳಿಂದ ಕೇಳಿ ಬರುತ್ತಿದೆ.

