Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಧರ್ಮಗಳಿಗೆ ಕೇಂದ್ರ ಸರಕಾರದಿಂದ ಸಂವಿಧಾನಾತ್ಮಕ ಮಾನ್ಯತೆ ದೊರಕದೇ ಇರುವ ಕಾರಣ ಸೆ.೨೨ರಂದು ಆರಂಭವಾಗುವ ಜಾತಿ ಗಣತಿಯಲ್ಲಿ ಕರ್ನಾಟಕದ ಅಖಂಡ ವೀರಶೈವ ಲಿಂಗಾಯತ ಸಮಾಜವು ಧರ್ಮದ ಕಾಲಂ ೮ರಲ್ಲಿ ಹಿಂದೂ, ಜಾತಿಯ ಕಾಲಂ ೯ರಲ್ಲಿ ವೀರಶೈವ ಲಿಂಗಾಯತ (ಎ-೧೫೨೪), ಉಪಜಾತಿ ಕಾಲಂ ೧೦ರಲ್ಲಿ ಅವರವರ ಉಪಪಂಗಡಗಳನ್ನು ನಮೂದಿಸಬೇಕೆಂದು ಬೆಂಗಳೂರು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಕರೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಿಸುವುದರಿಂದ ನಾವೆಲ್ಲರೂ ಹಿಂದೂ ಸಮಾಜದ ಅವಿಭಾಜ್ಯ ಅಂಗ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯ ಸರಕಾರವೇ ಹೇಳಿದಂತೆ ಇದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಗಣತಿಯ ಹೊರತು ಜಾತಿ ಗಣತಿಯಲ್ಲವಾದರೂ ಜಾತಿ ಕಾಲಂ ಕಡ್ಡಾಯವಾಗಿ ನಮೂಧಿಸಲೆಬೇಕಾಗಿರುವುದರಿಂದ ಜಾತಿಯ ಜೊತೆ ಜನಸಂಖ್ಯೆಯ ಗಣತಿಯೂ ಆಗಿರುತ್ತದೆ. ಗಣತಿಯ ಸಂದರ್ಭದಲ್ಲಿ ಜನ ಸಾಮಾನ್ಯರು ತಮ್ಮ ಗಣತಿಯ ನಂತರ ಕಡ್ಡಾಯವಾಗಿ ಗಣತಿ ಪತ್ರದ ಭಾವಚಿತ್ರ ತೆಗೆದುಕೊಳ್ಳಬೇಕು. ಗಣತಿದಾರರು ಪೋಟೋ ತೆಗೆಯಲು…
ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕೆಲ ಜನರನ್ನು ನಾವು ಸದಾ ನೋಡುತ್ತೇವೆ, ಸದಾ ಚಟುವಟಿಕೆಯಿಂದ ಇರುವ ಅವರು ಒಂದಿಲ್ಲೊಂದು ಕಾರ್ಯದಲ್ಲಿ ನಿರತರಾಗಿರುತ್ತಾರೆ. ಸದಾ ಹೊಸತೇನನ್ನಾದರೂ ಹುಡುಕುತ್ತಾ ಕ್ರಿಯಾಶೀಲರಾಗಿರುವ ಅವರು ನಾವೆಲ್ಲ ಇಂದಿನ ಆಧುನಿಕ ಜಗತ್ತಿನಲ್ಲಿ ಕರೆಯುವ ಹೈ ಪರ್ಫಾರ್ಮರ್ಆಗಿ ಹೊರಹೊಮ್ಮುತ್ತಾರೆ. ಅವರ ಸಾಧನೆಯೇನು ಒಮ್ಮಿಂದೊಮ್ಮೆಲೆ ಉದ್ಭವವಾದ ಮೂರ್ತಿಯಲ್ಲ.. ನಿತ್ಯ ನಿರಂತರ ಪರಿಶ್ರಮದ ಫಲ.ಬಹಳಷ್ಟು ಬಾರಿ ಇಂಥವರ ಕುರಿತು ನಾವು ನಕಾರಾತ್ಮಕವಾಗಿ ಮಾತನಾಡುತ್ತೇವೆ. ಕಾರಣ ಅವರು ಮಾಡುತ್ತಿರುವ ಕೆಲಸ ಕಾರ್ಯಗಳ, ಅವರ ನಿರಂತರ ತೊಡಗಿಕೊಳ್ಳುವಿಕೆಯ ಹಿಂದಿನ ಶ್ರಮದ ಅರಿವು ನಮಗೆ ಇರುವುದಿಲ್ಲ. ಅವರೊಂದಿಗಿದ್ದೂ ಅವರಂತಾಗದವರು ಅವರ ಕುರಿತು ನಕಾರಾತ್ಮಕವಾಗಿ ಮಾತನಾಡುವುದರ ಬದಲು ಅವರ ಈ ಹೆಚ್ಚಿನ ಕಾರ್ಯಕ್ಷಮತೆಯ ಹಿಂದಿರುವ ರಹಸ್ಯವನ್ನು ಅರಿಯಬೇಕು.. ಬಹುಶಹ ಸಾಧಿಸಬೇಕೆಂಬ ಪ್ರತಿಯೊಬ್ಬರಿಗೂ ಕೂಡ ಇದೊಂದು ದಿಕ್ಸೂಚಿಯಾಗಿ ತಮ್ಮ ಬದುಕಿನಲ್ಲಿ ಮುಂದುವರೆಯಲು ಕಾರಣವಾಗಬಹುದು.ಅತ್ಯಧಿಕ ಕಾರ್ಯಕ್ಷಮತೆಯುಳ್ಳವರು ಕಠಿಣ ಸವಾಲುಗಳನ್ನು ತಮಗೆ ತಾವೇ ಕೇಳಿಕೊಳ್ಳುತ್ತಾರೆ. ಆ ಸವಾಲುಗಳಿಗೆ ತಮ್ಮದೇ ಆದ ರೀತಿಯ ಪ್ರಯತ್ನಗಳ ಮೂಲಕ ಉತ್ತರಗಳನ್ನು ಕಂಡುಕೊಳ್ಳುತ್ತಾರೆ. ತಾವು…
ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಧ್ಯಮದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜದಲ್ಲಿನ ಅಸಮಾನತೆಗೆ ಕಾರಣಗಳು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಾಧ್ಯಮಗಳು ತೊಡಗಬೇಕು. ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸಬೇಕು. ಹಾಗೆಯೇ ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.ಶುಕ್ರವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ೨೦೨೪ ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ೨೦೧೭ ರಿಂದ ೨೦೨೩ ನೇ ಕ್ಯಾಲೆಂಡರ್ ವರ್ಷದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು ಮಾಧ್ಯಮಗಳು ಸತ್ಯ ಅಸತ್ಯದ ಶೋಧನೆ ನಡೆಸಬೇಕು. ವರದಿಗಳಾಗಲಿ ಅಥವಾ ಅಭಿಪ್ರಾಯಗಳಾಗಲಿ ವಸ್ತುಸ್ಥಿತಿಯಿಂದ ಕೂಡಿರಬೇಕು. ಕಲ್ಪನೆಯ ವರದಿ ಆಗಬಾರದು ಎಂದು ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಊಹಾ ಪತ್ರಿಕೋದ್ಯಮ ಜೋತುಬೀಳುತ್ತಿವೆ.…
ಇಂದು (ಸೆಪ್ಟಂಬರ್ ೨೧, ರವಿವಾರ) ಅಂತರಾಷ್ಟ್ರೀಯ ಶಾಂತಿ ದಿನದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿದ್ರಾಮ. ಖೊದ್ನಾಪೂರತಿಕೋಟಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ದಲೈಲಾಮಾ ಅವರು “ನಾವು ನಮ್ಮೊಂದಿಗೆ ಶಾಂತಿ ಕಾಯ್ದುಕೊಳ್ಳುವವರೆಗೆ ನಾವು ಹೊರಗಿನ ಜಗತ್ತಿನಲ್ಲಿ ಎಂದಿಗೂ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ನಾವು ನಮ್ಮ ರಾಷ್ಟçದ ಜನರಲ್ಲಿ ಪ್ರೀತಿ, ದಯೆ, ಗೌರವ, ಸಹಾನುಭೂತಿ, ಸಹಾಯ, ಸಹಕಾರ, ಸಮನ್ವಯತೆ ಮತ್ತು ಸಾಮರಸ್ಯತೆ, ಸಮಗ್ರತೆ, ರಾಷ್ಟ್ರೀಯತೆ, ಐಕ್ಯತೆ ಮತ್ತು ಸಹಿಂಷ್ಣುತೆಯನ್ನು ಬೆಳೆಸುತ್ತಾ, ಇಡೀ ಜಗತ್ತಿಗೆ ಶಾಂತಿಯ ಮಂತ್ರದ ಸಂದೇಶವನ್ನು ಸಾರಬೇಕಾಗಿದೆ. ಜಗತ್ತಿನಲ್ಲಿ ಇಂದು ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಬಾಹ್ಯಾಕಾಶ-ವೈದ್ಯಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಪ್ರಗತಿಯನ್ನು ಸಾಧಿಸಿದರೂ ಜನರ ಜನರ ಮಧ್ಯೆ, ರಾಷ್ಟ್ರ-ರಾಷ್ಟ್ರಗಳ ನಡುವೆ ಪ್ರೀತಿ, ಗೌರವ, ಸೌಹಾರ್ಧತೆ, ಶಾಂತಿ, ಸಹಕಾರ, ಸಮನ್ವಯತೆ ಮತ್ತು ಸಹಮತ ಇಲ್ಲದಾಗಿದೆ. ಜಗತ್ತಿನಲ್ಲಿ ಅಹಿಂಸೆ, ಕದನ, ಯುದ್ಧದದಂತಹ ಭೀತಿಯು ಆವರಿಸುತ್ತಿದೆ. ಈ ಕಾರಣಕ್ಕಾಗಿ ವಿಶ್ವಸಂಸ್ಥೆಯು ಜಗತ್ತಿನ ಎಲ್ಲ ರಾಷ್ಟçಗಳಲ್ಲಿ ಅಹಿಂಸೆ, ಕದನ ವಿರಾಮ ಮತ್ತು ಉತ್ತಮ…
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಅಬಕಾರಿ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ನಗರದ ಬಿಎಲ್ಡಿಇ ಕಾಲೇಜಿನ ದರ್ಬಾರ್ ಹಾಲ್ನಲ್ಲಿ ಬೆಂಗಳೂರು ರಾಜೀವ್ ಗಾಂಧಿ ಯೂನಿವರ್ಸಿಟಿ ಹೆಲ್ತ್ ಸೈನ್ಸ್, ಬಿಎಲ್ಡಿಇ ನರ್ಸಿಂಗ್ ಕಾಲೇಜು ಆಶ್ರಯದಲ್ಲಿ ನಡೆದ ಪುರುಷರ ಇಂಟರ್ ಜೋನ್, ಮಹಿಳೆಯರ ಸಿಂಗಲ್ ಜೋನ್ ಕಬಡ್ಡಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಬಡ್ಡಿ ಮತ್ತು ಸೈಕ್ಲಿಂಗ್ ಕ್ರೀಡಾಪಟಗಳಿಗೆ ಜಮಖಂಡಿ ಕೊಡುಗೆ ಬಹಳಷ್ಟು ಇದೆ, ಕ್ರೀಡೆಗಳಲ್ಲಿ ಸೋಲು ಗೆಲುವು ಇದ್ದೆ ಇರುತ್ತದೆ ಸೋತವರು ನಾಳಿಯ ಗೆಲುವುವಿಗೆ ಮೆಟ್ಟಿಲು ಮಾಡಿಕೊಳ್ಳಬೇಕು, ಗೆದ್ದವರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯ ಮಟ್ಟದಲ್ಲಿ ಬೆಳೆಯಬೇಕು ಎಂದರು.ನನ್ನ ರಾಜಕೀಯ ಗುರುಗಳು ನನ್ನನ್ನು 27 ವಯಸ್ಸನಲ್ಲಿ ಎಂಎಲ್ಎ ಸ್ಥಾನಕ್ಕೆ ನಿಲ್ಲಿಸಿದರು, ನನ್ನ ಗುರುಗಳು ಎಂಪಿ ಸ್ಥಾನಕ್ಕೆ ನಿಂತರು ಆದರೆ ಕಬಡ್ಡಿ ಕ್ರೀಡಾಪಟುವಾಗಿದ್ದ ನನಗೆ ನನ್ನ ಗೆಳೆಯರು ನನ್ನ ಗುರುಗಳಿಂತ ಹೆಚ್ಚಿಗೆ ಮತ ನೀಡಿದ್ದರು ಇದಕ್ಕೆ ಗುರುಗಳು ಕೂಡಾ ಅಚ್ಚರಿ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಗರದ ಅಂಚೆ ಕಚೇರಿಯಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಕಳೆದ ಕೆಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದು, ಇದರಿಂದಾಗಿ ರೈಲ್ವೆ ಪ್ರಯಾಣಿಕರು ಅನಗತ್ಯ ತೊಂದರೆ ಎದುರಿಸುತ್ತಿದ್ದಾರೆ ಆದ್ದರಿಂದ ಸರಾಫ್ ಬಜಾರ್ನ ವ್ಯಾಪಾರಸ್ಥರಿಂದ ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ತೆರೆಯಲು ವ್ಯಾಪಾರಸ್ಥರಿಂದ ಪೋಸ್ಟ್ ಮಾಸ್ಟರ್ ಎಸ್.ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಉಮೇಶ್ ಕೊಠಾರಿ, ರಮೇಶ್ ಮೆಹ್ರಾ, ಮುಖೇಶ್ ಜೈನ್, ಸಂದೀಪ್ ವರ್ಮಾ, ಬಾಲ್ ಕಿಸಾನ್ ವರ್ಮಾ, ದಾಮೋದರ್ ವರ್ಮಾ, ಸುರೇಶ್ ವರ್ಮಾ, ವಿಮಲ್ ಓಸ್ವಾಲ್, ಕಿರಣ್ ಓಸ್ವಾಲ್, ರಾಜೇಶ್ ಓಸ್ವಾಲ್, ನರೇಂದ್ರ ಭಂಡಾರಿ, ಮಂದರ್ ಓಸ್ವಾಲ್, ಪಿಂಟು ಓಸ್ವಾಲ್, ದರ್ಶನ್ ಓಸ್ವಾಲ್, ರಾಜೇಶ್ ಜೈನ್, ರಾಮದೇವ್ ವರ್ಮಾ, ಗೌರವ್ ವರ್ಮಾ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ ೨೦೦ ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಹಾಗೂ ಭಾರತದ ಮೊದಲ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ, ವೀರರಾಣಿ ಅಬ್ಬಕ್ಕ ಅವರ ೫೦೦ನೇ ಜಯಂತೋತ್ಸವದಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತವು ಹಮ್ಮಿಕೊಂಡಿರುವ ರಥಯಾತ್ರೆ ಸೆ.21ರಂದು ಸಂಜೆ 6 ಗಂಟೆಗೆ ತಾಳಿಕೋಟೆಯಿಂದ ಬಸವನಬಾಗೇವಾಡಿಗೆ ಬರಲಿದೆ ಎಂದು ಎಬಿವ್ಹಿಪಿ ಹಿರಿಯ ಕಾರ್ಯಕರ್ತರಾದ ಅಶೋಕ ಕಲ್ಲೂರ ದೇಸಾಯಿ, ಮಲ್ಲಿಕಾರ್ಜುನ ದೇವರಮನಿ ಹೇಳಿದರು.ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ರಥಯಾತ್ರೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ೨೦೦ ವರ್ಷಗಳ ಹಿಂದೆ ಮಹಿಳೆಯೋರ್ವಳು ದಕ್ಷ ಆಡಳಿತ ನಡೆಸಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಕತ್ತಿ ಹಿಡಿದು ಧೈರ್ಯದಿಂದ ಯುದ್ಧ ಮಾಡಿ ಮೊದಲ ಯುದ್ಧದಲ್ಲಿ ಅವರನ್ನು ಸೋಲಿಸಿ, ಕಿತ್ತೂರಿನ ಸ್ವಾತಂತ್ರವನ್ನು ರಕ್ಷಿಸಲು ಯತ್ನಿಸಿದ ಧೀಮಂತ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ. ಬ್ರಿಟಿಷರ ವಸಾಹತುಶಾಹಿ ವಿರುದ್ಧ ಹೋರಾಡಿದ ಮೊದಲ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಸೋಂಪುರ ರಸ್ತೆ, ಹಳೆಯ ಚಾಂದಕವಟೆ ರಸ್ತೆ, ಓಂ ನಗರ, ಬಂದಾಳ ರಸ್ತೆ, ಕಲ್ಯಾಣ ನಗರ ಮತ್ತು ಜ್ಯೋತಿ ನಗರ ಸೇರಿದಂತೆ ವಿವಿದೆಡೆ ಸೆ.೧೮ರ ರಾತ್ರಿ ಭೂಕಂಪನ ಸಂಭವಿಸಿದ ಕಾರಣ ಸ್ಥಳೀಯ ಸಾರ್ವನಿಕರಲ್ಲಿ ಭಯದ ವಾತಾವರಣ ಮನೆಮಾಡಿದೆ. ಇದರ ಕುರಿತಾಗಿ ಜಿಲ್ಲೆಯ ತಂಡವನ್ನು ಕರೆಯಿಸಿ ಪರಿಶೀಲನೆ ಮಾಡಲಾಗಿದೆ. ಅವರು ಪ್ರಾಥಮಿಕ ವರದಿಯನ್ನು ನೀಡಿರುತ್ತಾರೆ. ಭೂಕಂಪನದ ಅನುಭವವಾದ ಸಿಂದಗಿಯ ಸುತ್ತಮುತ್ತಲಿನ ಭಾಗದಲ್ಲಿ ಭೂಮಿಯ ಆಳದಲ್ಲಿ ಸುಣ್ಣದ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಅತಿಯಾದ ಮಳೆಯಾದ ಕಾರಣ ನೀರು ಸುಣ್ಣದ ಜೊತೆ ಬೆರೆತು ರಾಸಾಯನಿಕ ಪ್ರಕ್ರಿಯೆ ಜರುಗುವುದರಿಂದ ಈ ರಸಾಯನವು ಭೂಮಿಯಲ್ಲಿ ಅತ್ತಿಂದಿತ್ತ ಹೊಯ್ದಾಡುವುದರಿಂದ ಭೂಮಿಯಲ್ಲಿ ಕಂಪನ ಉಂಟಾಗುತ್ತದೆ. ಈ ಕಂಪನವೇ ನಮಗೆ ಭೂಕಂಪನ ಎಂಬಂತೆ ಭಾಸವಾಗುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.ಸಾರ್ವಜನಿಕರು ಪ್ರಕೃತಿಯ ಈ ವಿಸ್ಮಯದಿಂದ ಯಾವುದೇ ರೀತಿ ಘಾಭರಿಗೆ ಒಳಗಾಗಬಾರದು ಎಂದು ಸಲಹೆ ನೀಡಿದ ಅವರು, ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ವಿಸೃತವಾಗಿ ಚರ್ಚೆ ಮಾಡಲಾಗಿ ಬರುವ ಸೆ.೨೨…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿ ಸುರಿದ ಮಳೆಯಿಂದಾಗಿ ಬೋರಿ ಹಳ್ಳ ತುಂಬಿ ಬಂದಿದ್ದು ತಾಲೂಕಿನ ಜೇವರ್ಗಿ ಬಿ ಗ್ರಾಮದ ಶಾಲೆಯ ಮೈದಾನಕ್ಕೆ ನೀರು ನುಗ್ಗಿದರ ಪರಿಣಾಮ ಶಾಲೆಗೆ ರಜೆ ಘೋಷಿಸಲಾಗಿದೆಪ್ರತಿ ವರ್ಷ ಬೋರಿಹಳ್ಳ ತುಂಬಿ ಬಂದಾಗ ಹಾಗೂ ಜೋರಾಗಿ ಮಳೆ ಸುರಿದಾಗ ಶಾಲಾ ಆವರಣಕ್ಕೆ ನೀರು ನುಗ್ಗಿ ತೊಂದರೆ ಮಾಡುತ್ತದೆ ಇದು ಪ್ರತಿ ವರ್ಷದ ಸಮಸ್ಯೆಯಾಗಿ ಕಾಡುತ್ತಿದೆಶಾಲೆಯ ಹಲವು ಗೋಡೆಗಳು ಬಿರುಕು ಬಿಟ್ಟಿದ್ದು ಸತತ ಮಳೆ ಬಂದಾಗ ಮೇಲ್ಚಾವಣಿ ಸೋರುವುದು ಇದರಿಂದ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಶಾಲೆಯನ್ನು ಬೆರಡೆ ಸ್ಥಳಾಂತರಿಸಿ ಪರ್ಯಾಯವ್ಯವಸ್ಥೆ ಮಾಡಬೇಕೆಂದು ಎಸ್ಡಿಎಂಸಿ ಅಧ್ಯಕ್ಷ ಶಿವರುದ್ರ ಜೋಗದೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈಗಾಗಲೇ ಜಾಸ್ತಿ ಮಳೆ ಬಂದ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಆದರೆ ಪದೇ ಪದೇ ಹೇಗಾಗುವುದರಿಂದ ಮಕ್ಕಳ ಅಭ್ಯಾಸದ ಮೇಲೆ ಪರಿಣಾಮವಾಗುತ್ತದೆ ಆದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನ ರೇವೂರ(ಬಿ) ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಾನಂದ ಮಲಕಾಜ ಹಾಗೂ ಉಪಾಧ್ಯಕ್ಷರಾಗಿ ಸಂಗೀತಾ ಉಡಗಿ ಆಯ್ಕೆಯಾಗಿದ್ದಾರೆಚುನಾವಣೆ ನಡೆಯುವ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸ್ಥಾನಕ್ಕೆ ಈ ಇಬ್ಬರು ಮಾತ್ರ ನಾಮ ಪತ್ರ ಸಲ್ಲಿಸಿದ ಪ್ರಯುಕ್ತ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಪರಶುರಾಮ ಘೋಷಿಸಿದರುರೇವೂರ್ (ಬಿ), ಅಂಕಲಗಾ, ಸಿಧನೂರ, ಚಿಕ್ಕರೇವೂರ, ಕುಲಾಲಿ, ಅರ್ಜುಣಗಿ ಗ್ರಾಮಗಳ ರೈತರನ್ನೊಳಗೊಂಡ ಪತ್ತಿನ ಸಹಕಾರ ಸಂಘ ಇಲ್ಲಿ ಸೇವೆ ಸಲ್ಲಿಸುತ್ತಿದೆ.ಈ ಸಂದರ್ಭದಲ್ಲಿ ಶ್ರೀಶೈಲ ಶಿವಶರಣಪ್ಪ ಪಾಟೀಲ, ಭೀಮರಾಯ ಮಹಾಂತಪ್ಪ ಪಾಟೀಲ, ಗುಂಡರಾಯ ಪಾಟೀಲ, ಸಿದ್ದಣ್ಣ ಮಲ್ಲಪ್ಪ ಸಾಗರ, ಶಿವಕುಮಾರ ಪಾಟೀಲ, ಮಲ್ಲಿಕಾರ್ಜುನ ಜಮಾದಾರ, ಗುರು ನಂದರ್ಗಿ, ಮಹೀಬುಬ್ ಪಟೇಲ್, ಶ್ರೀಮಂತ ಶರಣಪ್ಪ, ಅಶ್ವಿನಿ ರಾಜಕುಮಾರ ಕಲಶೆಟ್ಟಿ ಮತ್ತಿತರರು ಇದ್ದರುಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಗುಲಾಲು ಹಂಚಿ ಸಂಭ್ರಮಿಸಿದರು.
