Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ತಿಕೋಟಾ: 22 ವರ್ಷಗಳ ಕಾಲ ಭಾರತಾಂಬೆಯ ಸೇವೆಗೈದು ತಾಲ್ಲೂಕಿನ ಹೊನವಾಡ ಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ಸುರೇಶ ಬಸಪ್ಪ ಬ್ಯಾಡಗಿ ಅವರಿಗೆ ಗೆಳೆಯರ ಬಳಗದಿಂದ ಶನಿವಾರ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರಯೋಧ ಸುರೇಶ ಬ್ಯಾಡಗಿ ಜೀವನದ ಅಮೂಲ್ಯವಾದ ಸಮಯವನ್ನು ದೇಶಕ್ಕಾಗಿ ಮುಡುಪಾಗಿಟ್ಟು ದೇಶ ಸೇವೆ ಮಾಡಿದ್ದು ಸ್ಮರಣೀಯವಾದುದು. ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಭಕ್ತಿಯಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ನಮ್ಮ ದೇಶದ ಸೇವೆ ಮಾಡುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ನಾನು ಸೇನೆಯಲ್ಲಿ ಕಳೆದ ದಿನಗಳಲ್ಲಿ ನನಗೆ ಶಿಸ್ತು, ಧೈರ್ಯ ಮತ್ತು ದೇಶಪ್ರೇಮವನ್ನು ಕಲಿಸಿವೆ ಎಂದರು.ದೇಶದ ವಿವಿಧ ರಾಜ್ಯಗಳಾದ ರಾಜಸ್ಥಾನ, ಮೇಘಾಲಯ, ಆಸ್ಸಾಂ, ಪಂಜಾಬ, ಪಠಾಣಕೋಟ, ಜಾರ್ಖಂಡ್, ಜಮ್ಮು ಕಾಶ್ಮೀರಗಳಲ್ಲಿ ಸೇವೆ ಸಲ್ಲಿಸಿದ್ದು, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲೂ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.ಈ ಸಂದರ್ಭದಲ್ಲಿ ಹಣಮಂತ ಮೊಹಿತೆ, ಧರೆಪ್ಪ ಪಾಂಡೇಗಾವಿ, ಮಹಾಂತೇಶ ಮಂಗೊಂಡ, ನರಸಿಂಗ ಭೋಸಲೆ, ದೀಪಕ ಅಥಣಿ, ಶಿವಪ್ಪ ಗಸ್ತಿ, ಚಂದ್ರಕಾಂತ ಗುಗ್ಗರಿ,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಡಾ.ಬಾಬು ಜೀವನರಾಮ ಅವರಂತಹ ಮೇರು ವ್ಯಕ್ತಿತ್ವದ ವ್ಯಕ್ತಿಯ ಅವಶ್ಯಕತೆ ಇಂದಿನ ದಿನಗಳಲ್ಲಿ ತುಂಬಾ ಅಗತ್ಯವಾಗಿದೆ ಇದೆ ಎಂದು ತಹಶೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಭಾನುವಾರ ಕಂದಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಹಸಿರು ಕ್ರಾಂತಿಯ ಹರಿಕಾರ, ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಿವೃತ್ತ ಪ್ರೌಢಶಾಲಾ ಶಿಕ್ಷಕ ಕೆ.ಎಸ್.ಹಿರೇಕುರುಬರ ಮಾತನಾಡಿ, ಬಾಬೂಜೀ ಈ ದೇಶಕ್ಕೆ ನೀಡಿದ ಕೊಡುಗೆಯ ಕುರಿತು ವಿವರಿಸಿದರು.ಶಿರಸ್ತೇದಾರ ಸುರೇಶ ಮ್ಯಾಗೇರಿ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಸರ್ವೇಶ ಆಲಮೇಲಕರ, ಹಣಮಂತ ಲಾತೂರ, ಅನೀಲ ಮೋಕಾಶಿ ಇಸ್ಮಾಯಿಲ್ ಮಂದೇವಾಲ್, ಶ್ರೀನಿವಾಸ ಬಂಡಿವಡ್ಡರ, ನಫೀಸಾ ದಪೇದಾರ, ಪೂಜಾ ನಿಕ್ಕಂ, ಸಿದ್ದು ಮೇಲಿನಮನಿ, ಸದಾಶಿವ ಗುಡಿಮನಿ, ಪ್ರಕಾಶ ಗುಡಿಮನಿ, ಜಿ.ಪಿ.ಬಿರಾದಾರ, ರಾಘು ಗುಡಿಮನಿ, ರಾಹುಲ ದೊಡಮನಿ, ನಾಗೇಶ ವಗ್ಗರ, ಕಿರಣ ವಗ್ಗರ, ಪರಶುರಾಮ ಸನಾದಿ, ರಾಕೇಶ್ ದೊಡಮನಿ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸತ್ಕಾರ್ಯವೇ ಸೌಭಾಗ್ಯ ಎನ್ನುವಂತೆ ಬಡಜನರ ಹಾಗೂ ನಿರ್ಗತಿಕರ ಸೇವೆ ಮಾಡುವುದು ನಿಜವಾದ ಸೇವೆ ಎನಿಸಿಕೊಳ್ಳುತ್ತದೆ ಎಂದು ವಿಜಯಪುರ ಬಾಲಾಜಿ ಆಸ್ಪತ್ರೆಯ ಸಂಸ್ಥಾಪಕ ಡಾ.ಶ್ರೀಪಾದ ಕುಲಕರ್ಣಿ ಹೇಳಿದರು.ಮುಳಸಾವಳಗಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನನ ಐದೇಶಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಉಚಿತ ನೇತ್ರ ಮತ್ತು ಮೂಳೆ, ಕೀಲು ತಪಾಸಣೆ ಶಿಬಿರದ ನೇತೃತ್ವ ವಹಿಸಿ ಮಾತನಾಡಿದರು.ಶಿಬಿರದ ಮೂಲಕ ಸುಮಾರು ೧೧೦ ಜನರ ತಪಾಸಣೆ ಹಾಗೂ ೧೧೫ ಜನರ ನೇತ್ರ ತಪಾಸಣೆಯನ್ನು ಮಾಡಲಾಯಿತು. ನೇತ್ರ ಶಸ್ತ್ರಚಿಕಿತ್ಸೆಗೆ ಅರ್ಹರಾದ ೧೫ ಜನರನ್ನು ಅನುಗ್ರಹ ಆಸ್ಪತ್ರೆಯಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಯಿತು. ನಂತರ ಅನುಗ್ರಹ ಹಾಗೂ ಬಾಲಾಜಿ ಆಸ್ಪತ್ರೆಯ ಸಿಬ್ಬಂದಿಗಳನ್ನು ಜಾತ್ರಾ ಸಮಿತಿಯಿಂದ ಸನ್ಮಾನಿಸಲಾಯಿತು.ಅನುಗ್ರಹ ಆಸ್ಪತ್ರೆಯ ಸಂಗನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಹಣಮಂತ ಹಿರೂರ, ಜಿ.ಪಿ.ಬಿರಾದಾರ ಮಾತನಾಡಿದರು.ಸಾಹೇಬಗೌಡ ಬಂಥನಾಳ, ವಿರುಪಾಕ್ಷಿ ರೋಡಗಿ, ಶ್ರೀಶೈಲ ಹದರಿ, ಶ್ರೀಶೈಲ ಮಠಪತಿ, ದಾನಯ್ಯ ಮಠಪತಿ, ಮಲ್ಲನಗೌಡ ಬಿರಾದಾರ, ಕಂಠೆಪ್ಪಗೌಡ ಬಿರಾದಾರ, ಸಂಗು ಬಂಥನಾಳ, ಕಿರಣ ಗಬ್ಬೂರ, ನಿತಿನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತದ ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ119ನೇ ಜಯಂತಿ ಹಿನ್ನೆಲೆಯಲ್ಲಿ, ಏಪ್ರೀಲ್ 05 ರಂದು ನಗರದ ಸೆಟ್‌ಲೈಟ್ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಡಾ.ಬಾಬು ಜಗಜೀವನ ರಾಂ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ‌ ಮಾಡಿ ಗೌರವ ಸಲ್ಲಿಸಿದರು.ಶಾಸಕರಾದ ವಿಠ್ಠಲ ಕಟಕಧೋಂಡ, ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ, ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಮಾಲಾರ್ಪಣೆ‌ ಮಾಡಿ, ಗೌರವ‌ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ ಸೌದಾಗರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ,ವಿವಿಧ ಸಂಘಟನೆಗಳ‌ ಮುಖಂಡರು,ಸಾರ್ವಜನಿಕರು ಮತ್ತು ಇತರರು ಇದ್ದರು.

Read More

ಲೇಖನ- ಮನು ಪತ್ತಾರಕಲಕೇರಿವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಈ ರಾಷ್ಟ್ರವನ್ನು ಕಟ್ಟುವಲ್ಲಿ ಅಹರ್ನಿಶಿ ಯಾಗಿ ದುಡಿದ ಮಹನೀಯರಲ್ಲಿ ಬಾಬು ಜಗಜೀವನ್ ರಾಮ್ ರು ಕೂಡಾ ಒಬ್ಬರು, ” ಪ್ರಾಚೀನ ಭಾರತದ ಜನ ತಾಂತ್ರಿಕ ವ್ಯವಸ್ಥೆಯ ತೊಟ್ಟಿಲು” ಎಂದೇ ಕರೆಯಲಾಗುವ ಬಿಹಾರ ರಾಜ್ಯದ ಶಾಹಬಾದ್ ಜಿಲ್ಲೆಯ ಚಂದ್ವಾ ಎಂಬ ಪುಟ್ಟ ಗ್ರಾಮದಲ್ಲಿ ಚಮ್ಮಾರ ಕುಲದ ಶೋಭಿರಾಮ ಮತ್ತು ವಸಂತದೇವಿ ಯವರ ಐದನೇಯ ಮಗನಾಗಿ 1908 ಏಪ್ರಿಲ್ 5 ರಂದು ಜನಿಸಿದ ಜಗಜೀವನರಾಂ, ಭಾರತೀಯ ಶ್ರೇಣೀಕೃತ ಸಮಾಜದ ವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕ ಅಲಕ್ಷಿತ ಸಮುದಾಯಗಳನ್ನು ಹೊಸ ಮನ್ವಂತರದ ಕಡೆಗೆ ತೆಗೆದುಕೊಂಡು ಹೋದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಅಲಕ್ಷಿತ ಜನರಿಗೆ ಗಗನ ಕುಸುಮವಾದ ಶಿಕ್ಷಣವನ್ನು ಪಡೆಯಲೇ ಬೇಕೆಂದು ಪಣ ತೊಟ್ಟು ಹಠ ಯೋಗಿಯಂತೆ ದಾಪುಗಾಲು ಹಾಕಿದ ಜಗಜೀವನ್ ರಾಮ್, ತಂದೆ ಶೋಭಿರಾಮ ತಾಯಿ ವಸಂತದೇವಿ ಯವರ ಆದರ್ಶಗಳನ್ನು ಮೈಗೂಡಿಸಿಕೊಂಡವರು, ಶಿವನಾರಾಯಣ ಸಚೇತನ ಪಂತದ ಅನುಯಾಯಿಗಳಾದ ತಂದೆತಾಯಿಯವರು ರಾಮ್ ಅವರಿಗೆ ಬಾಲ್ಯಾವಸ್ಥೆಯಲ್ಲಿಯೇ ಧಾರ್ಮಿಕ, ಆಧ್ಯಾತ್ಮಿಕಯಲ್ಲಿ ಒಲವು…

Read More

ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನ ಹುಳುಗಬಾಳ ಗ್ರಾಮದ ಉಜ್ವಲಾ ಸಾಂಗ್ಲಿ ಅವರು ಕೆನರಾ ಬ್ಯಾಂಕಿನಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮಾಡಿಸಿದರು ವರ್ಷಕ್ಕೆ 436 ರೂಪಾಯಿ ಹಣವನ್ನು ಈ ಯೋಜನೆಯಲ್ಲಿ ತೊಡಗಿಸಿದ್ದು ಇವರು ಅನಾರೋಗ್ಯದಿಂದ ಮರಣ ಹೊಂದಿದ್ದು ಇವರ ನಾಮಿನಿಯಾದ ಕುಮಾರ ಮಹಾವೀರ ಸಾಂಗ್ಲಿ ಇವರಿಗೆ 2, ಲಕ್ಷ ರೂಪಾಯಿ ಪರಿಹಾರ ವಿತರಿಸಿದರು.ಈ ವೇಳೆ ಕೇನರಾ ಬ್ಯಾಂಕ್ ಚೀಫ್ ಮಾನೇಜರ ಪ್ರೌನ್ ಜಾನ ಮಾತನಾಡಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಯಾವುದೇ ಕಾರಣದಿಂದಾಗಿ ಮರಣ ಹೊಂದಿದವರಿಗೆ ಜೀವ ವಿಮಾ ರಕ್ಷಣೆಯನ್ನು ನೀಡುವ ವಿಮಾ ಯೋಜನೆಯಾಗಿದ್ದು ಇದು ಒಂದು ವರ್ಷದ ಕವರೇಜ್ ಆಗಿದ್ದು, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾಗಿದೆ ಈ ಯೋಜನೆಯನ್ನು ಬ್ಯಾಂಕು ಅಥವಾ ಅಂಚೆ ಕಚೇರಿಗಳು ನೀಡುತ್ತವೆ ಮತ್ತು ಜೀವ ವಿಮಾ ಕಂಪನಿಗಳ ಮೂಲಕ ನಿರ್ವಹಿಸಲ್ಪಡುತ್ತವೆ 18 ರಿಂದ 50 ವರ್ಷ ವಯಸ್ಸಿನ ಭಾಗವಹಿಸುವ ಬ್ಯಾಂಕುಗಳು ಅಥವಾ ಅಂಚೆ ಕಚೇರಿಯ ಖಾತೆದಾರರಾಗಿರುವ ಎಲ್ಲಾ ವ್ಯಕ್ತಿಗಳು ಸೇರಲು ಅರ್ಹರಾಗಿರುತ್ತಾರೆಂದು…

Read More

ಉದಯರಶ್ಮಿ ದಿನಪತ್ರಿಕೆ ದಾವಣಗೆರೆ 4. ಮೀಸಲಾತಿ ಸೌಲಭ್ಯಗಳಿಂದ ಲಿಂಗಾಯತ ಬಡಮಕ್ಕಳು ವಂಚಿತರಾಗಿದ್ದು, ಸಾಮಾನ್ಯ ಲಿಂಗಾಯತರಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ವಿರಕ್ತ ಮಠಾಧೀಶರು ಮತ್ತು ಪಂಚಪೀಠಾಧೀಶರರು ವಿವಿಧ ರಾಜಕೀಯ ಪಕ್ಷಗಳ ಒಕ್ಕೂಟ ಕಾಮನ್ ಮಿನಿಮಮ್ ಪ್ರೋಗ್ರಾಂ ರೀತಿಯಲ್ಲಿ ಸಮಾಜದ ಒಕ್ಕೂಟ್ಟು ಮತ್ತು ಏಳ್ಗಿಗಾಗಿ ಅದರನಗುಣವಾಗಿ ಮುನ್ನಡೆಯುವ ಅಗತ್ಯತೆ ಇದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ದಾವಣಗೆರೆ ದೊಡ್ಡಪೇಟೆ ವಿರಕ್ತಮಠದಲ್ಲಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆದ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನದಲ್ಲಿ ಶಾಮನೂರು ಶಿವಶಂಕರಪ್ಪನವರ ಆಶಯದಂತೆ ಕೈಗೊಂಡ ನಿರ್ಣಯ ಐತಿಹಾಸಿಕವಾಗಿದೆ. ಈ ನಿರ್ಣಯ ಇಡೀ ನಮ್ಮ ಧರ್ಮದ ಅಸ್ಮೀತೆಯಾಗಿದೆ. ಅವರಿಗೆ ನಾವೂ ಋಣಿಯಾಗಿರಬೇಕು. ಆ ನಿಟ್ಟಿನಲ್ಲಿ ಶಾಮನೂರು ಶಿವಶಂಕರಪ್ಪನವರನ್ನು ಸದಾ ಸ್ಮರಿಸುವ, ಗೌರವಿಸುವ ಕಾರ್ಯವನ್ನು ಎಲ್ಲ ಬಾಂಧವರು ಈ ಉಪಚುನಾವಣೆಯಲ್ಲಿ ಅವರ ಮೊಮ್ಮಗ ಸಮರ್ಥರನ್ನು ಗೆಲ್ಲಿಸುವ ಮೂಲಕ ಋಣ ತೀರಿಸಬೇಕು ಎಂದರು.ಕನ್ನಡದ ಮೊದಲ ಕವಿಯತ್ರಿ ಅಕ್ಕಮಹಾದೇವಿ. ಇಡೀ ಸ್ತ್ರೀ ಕುಲದ ಸಂಕೇತ.…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಇಂದಿನ ಸಮಾಜದಲ್ಲಿ ಬಹಳಷ್ಟು ಜನ ಅಂಗವಿಕಲತೆಯಿಂದ ಬಳಲುತ್ತಿದ್ದಾರೆ ಅಂತವರು ಅಂಗವಿಕಲತೆಯನ್ನು ಮೆಟ್ಟಿ ನಿಲ್ಲಬೇಕು. ಅಂಗವಿಕಲತೆ ಎನ್ನುವುದು ಶಾಪವಲ್ಲ ಅದನ್ನು ವರವಾಗಿ ಮಾಡಿಕೊಳ್ಳುವಂತಹ ಕಲೆಯನ್ನು ಎಲ್ಲರು ಬೆಳೆಸಿಕೊಳ್ಳಬೇಕು ಎಂದು ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಬಸವರಾಜ ಉಮರಾಣಿ ಹೇಳಿದರು.ಅವರು ಪ್ರತಿಷ್ಠಿತ ಬಿ ಎಲ್ ಡಿ ಇ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಜಮಖಂಡಿಯಲ್ಲಿ ಶನಿವಾರ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿ ಮಾರ್ಗದರ್ಶನ ಮಾಡಿದರು.ಇಂದು ಬಹಳಷ್ಟು ಜನ ನಾಟಕೀಯವಾಗಿ ಯಾವುದಾದರೂ ಒಂದು ನ್ಯೂನತೆ ಇದ್ದರೆ ಅದನ್ನೇ ದೊಡ್ಡದಾಗಿ ಮಾಡುತ್ತಾರೆ, ನಿಜವಾಗಿಯೂ ಅದು ನ್ಯೂನತೆ ಅಲ್ಲ, ಅದನ್ನು ಮರೆ ಮಾಚಿ ನಮ್ಮಿಂದ ಯಾರಿಗೂ ತೊಂದರೆ ಆಗದಂತೆ ಜೀವನ ನಡೆಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೆ ಜೆ ಜೀರಗಾಳಿ ಮಾತನಾಡಿ, ಬಸವರಾಜ ಉಮರಾಣಿ ಅವರನ್ನು ಪ್ರಶಂಶಿಸಿ, ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಮಾದರಿ ಹಾಗೂ ಯಶಸ್ವಿಗೆ ಸತತ ಪರಿಶ್ರಮ ಮುಖ್ಯ ಎಂದು ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. ಅತಿಥಿ ಪರಿಚಯವನ್ನು ಪ್ರೊ. ಪ್ರೇಮಾನಂದ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಮಕ್ಕಳು ತಂದೆ – ತಾಯಿಗಳು ಕೊಟ್ಟ ಸಂಸ್ಕಾರದಂತೆ ಬೆಳೆಯುತ್ತಾರೆ. ಆದ್ದರಿಂದ ಮಕ್ಕಳಿಗೆ ದುಡ್ಡಿನ ಮಹತ್ವ ಮತ್ತು ಅನ್ನದ ಬೆಲೆಯನ್ನು ತಿಳಿಸಿಕೊಡಬೇಕು ಎಂದು ಓಲೆಮಠದ ಆನಂದ ದೇವರು ಶ್ರೀಗಳು ಹೇಳಿದರು.ವ್ಯಸನಮುಕ್ತ ಗ್ರಾಮಗಳ ನಿರ್ಮಾಣದ ಸಂಕಲ್ಪದೊಂದಿಗೆ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಕುರಿತು ಜಮಖಂಡಿ ನಗರದ ಓಲೆಮಠದ ಆಶ್ರಯದಲ್ಲಿ ತಾಲ್ಲೂಕಿನ ಟಕ್ಕಳಕಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಜನಜಾಗೃತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಮಾಜಿ ಶಾಸಕ ಆನಂದ ನ್ಯಾಮಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ, ದುಶ್ಚಟಗಳನ್ನು ಬಿಡಿಸಿ ಮನೆಗೆ ಬೆಳಕು ಕೊಡುವ ಸತ್ಕಾರ್ಯವನ್ನು ಓಲೆಮಠದ ಪೂಜ್ಯರು ಮಾಡಿದ್ದಾರೆ. ಹಾಗಾಗಿ ದುಶ್ಚಟಗಳನ್ನು ಬಿಡುವುದಾಗಿ ಪ್ರಮಾಣ ಮಾಡಿದ ಯುವಕರು ಮರಳಿ ದುಶ್ಚಟಕ್ಕೆ ಅಂಟಿ ಕೊಳ್ಳಬಾರದು ಎಂದು ಸಲಹೆ ನೀಡಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಮುತ್ತಣ್ಣ ಹಿಪ್ಪರಗಿ ಮಾತನಾಡಿ, ಗ್ರಾಮಗಳಲ್ಲಿ ಇನ್ನೂ ಒಂದಿಷ್ಟು ಸಂಸ್ಕೃತಿ, ಸಂಸ್ಕಾರ ಉಳಿದಿರುವುದು ಮಹಿಳೆಯರಿಂದ ಮಾತ್ರ ಎಂದರು.ಝುಂಜರವಾಡದ ಬಸವರಾಜ ಶರಣರು ಪ್ರವಚನ ನೀಡಿದರು.ತಾಲ್ಲೂಕಿನ ವಿವಿಧ ಪ್ರಕಾರಗಳ ಕಲಾವಿದರನ್ನು…

Read More