ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ದಂಪತಿಗೆ ಮಲೆ ಮಹದೇಶ್ವರ ದೇಗುಲದ ಪಾರುಪತ್ತೇದಾರ ಮಾದಪ್ಪಸ್ವಾಮಿ ಅವರಿಂದ ಗೌರವ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಚಾಮರಾಜನಗರ ಜಿಲ್ಲೆಯ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಮಲೆಮಹಾದೇಶ್ವರ ಬೆಟ್ಟಕ್ಕೆ ಇತ್ತೀಚೆಗೆ ಭೇಟಿ ನೀಡಿದ ’ಉದಯರಶ್ಮಿ’ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ದಂಪತಿಯನ್ನು ಮಲೆ ಮಹದೇಶ್ವರ ದೇಗುಲದ ಪಾರುಪತ್ತೇದಾರ (ಧರ್ಮದರ್ಶಿ) ಮಾದಪ್ಪಸ್ವಾಮಿ ಅವರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಪಾರುಪತ್ತೇದಾರ ಮಾದಪ್ಪಸ್ವಾಮಿ ಅವರು, ಮುಜರಾಯಿ ಇಲಾಖೆಗೆ ಸೇರಿರುವ ಮಲೆ ಮಹದೇಶ್ವರ ದೇಗುಲಕ್ಕೆ ನಿತ್ಯವೂ ನಾಡಿನ ಎಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ರಾಜ್ಯದ ಅತ್ಯಧಿಕ ಆದಾಯ (೨ನೇ ಸ್ಥಾನ) ತರುವ ಈ ದೇಗುಲದ ಆಡಳಿತ ಮಂಡಳಿಗೆ ಮಾನ್ಯ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ ಎಂದು ವಿವರಿಸಿದರು.

ದೇವಾಲಯದ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿದ ಮಾದೇಸ್ವಾಮಿ ಅವರು, ಪತ್ರಿಕೆಯ ಧೋರಣೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಇಂದುಶೇಖರ ಮಣೂರ ಮಾತನಾಡಿ, ಪವಿತ್ರ ಕ್ಷೇತ್ರದಲ್ಲಿ ತಮಗೆ ದೊರೆತ ಈ ಗೌರವ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಪಾರುಪತ್ತೇದಾರದಂತಹ ದೊಡ್ದ ಸ್ಥಾನದಲ್ಲಿದ್ದರೂ ತಮ್ಮ ಸರಳತೆ ಮತ್ತು ಸಮಾನತೆಯ ತತ್ವಗಳಿಂದ ಮಾದೆಸ್ವಾಮಿ ಅವರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಈ ವೇಳೆ ಚಾಮರಾಜನಗರ ಜಿಲ್ಲೆಯ ಹಿರಿಯ ಪತ್ರಕರ್ತ ನಾಗರಾಜ, ’ಉದಯರಶ್ಮಿ’ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ, ಪತ್ರಕರ್ತ ರಾಜು ಕೆರೂಟಗಿ ಸೇರಿದಂತೆ ಹಲವರಿದ್ದರು.

“ನಾಡಿನ ಪ್ರಖ್ಯಾತ ದಾರ್ಮಿಕ ಕ್ಷೇತ್ರ ಮಲೆ ಮಹಾದೇಶ್ವರ ಬೆಟ್ಟದ ದೇಗುಲದ ಪಾರುಪತ್ತೇದಾರದಂತಹ ದೊಡ್ದ ಸ್ಥಾನದಲ್ಲಿದ್ದರೂ ತಮ್ಮ ಸರಳತೆ ಮತ್ತು ಸಮಾನತೆಯ ತತ್ವಗಳಿಂದ ಕೂಡಿದ ಮಾದೆಸ್ವಾಮಿ ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿದೆ”
– ಇಂದುಶೇಖರ ಮಣೂರ
ಪ್ರಧಾನ ಕಾರ್ಯದರ್ಶಿ
ಕಾರ್ಯನಿರತ ಪತ್ರಕರ್ತರ ಸಂಘ, ವಿಜಯಪುರ ಜಿಲ್ಲಾ ಘಟಕ

