ಹೆಸರಾಂತ ನಾಟಕರಾದ ಹಂದಿಗನೂರು ಸಿದ್ದರಾಮಪ್ಪ ಟ್ರಸ್ಟ್ ಆರಂಭಕ್ಕೆ ಒತ್ತಾಯ | ಜಿಲ್ಲಾಧಿಕಾರಿ ಡಾ.ಆನಂದ್. ಕೆ ಅವರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನಾಟಕ ಬರಹಗಾರ ಕವಿಗಳ ಸಂಘ ವಿಜಯಪುರ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಡಾ.ಆನಂದ್. ಕೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಪದಾಧಿಕಾರಿಗಳು, ಜಿಲ್ಲೆಯ ಹೆಸರಾಂತ ನಾಟಕರಾದ ಹಂದಿಗನೂರು ಸಿದ್ದರಾಮಪ್ಪ ಟ್ರಸ್ಟ್ ಸರ್ಕಾರದ ವತಿಯಿಂದ ಪ್ರಾರಂಭಿಸಬೇಕು. ಈ ಟ್ರಸ್ಟಿನ ಮೂಲಕ ಅವರ ಬದುಕು ಬರಹ ಹಾಗೂ ನಾಟಕದ ಮೂಲಕ ಸಮಾಜದ ಪರಿವರ್ತನೆಗೆ ಅವರ ಕೊಡುಗೆಗಳು ಏನು? ಎಂಬುವದರ ಕುರಿತು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಈ ಟ್ರಸ್ಟಿನ ಮೂಲಕವಾಗಿ ಆಗುತ್ತದೆ. ಕಳೆದ ವರ್ಷ ಬಾಗಲಕೋಟೆ ಜಿಲ್ಲೆಯಲ್ಲಿ ಬಿ ಬಿ ದತ್ತರಿಗಿ ಯವರ ಟ್ರಸ್ಟ ಪ್ರಾರಂಭವಾಗಿದೆ. ಅದೇ ರೀತಿ ಬಿಜಾಪುರದ ಹೆಸರಾಂತ ನಾಟಕರರಾದ ಹಂದಿಗನೂರು ಸಿದ್ದರಾಮಪ್ಪ ಟ್ರಸ್ಟ್ ಪ್ರಾರಂಭಿಸಬೇಕು ಹಾಗೂ ವಿಜಯಪುರದ ರಾಣಿ ಚೆನ್ನಮ್ಮ ರಂಗಮಂದಿರ ನೂತನ ಕಟ್ಟಡದೊಂದಿಗೆ ಪುನ ಪ್ರಾರಂಭವಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುವ ಕಾರ್ಯಕ್ರಮಕ್ಕೆ ಕವಿಗಳಿಗೆ ಆಹ್ವಾನ ನೀಡಬೇಕು. ಜಿಲ್ಲೆಯ ಕವಿಗಳ ಮಾಹಿತಿಯನ್ನು ಕಾಲಕಾಲಕ್ಕೆ ತಮ್ಮ ಮೇಲಾಧಿಕಾರಿಗಳಿಗೆ ನೀಡಬೇಕು. ನಗರದಲ್ಲಿ ನಮ್ಮ ಸಂಘದ ಕಾರ್ಯ ಚಟುವಟಿಕೆ ನಡೆಸಲು ನಿವೇಶನ ನೀಡಬೇಕು. ಅರ್ಹತೆ ಹೊಂದಿದ ಕವಿಗಳಿಗೆ ಮಾಶಾಸನ ವ್ಯವಸ್ಥೆ ಮಾಡಬೇಕು. ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ಜಿಲ್ಲೆಯ ಇಬ್ಬರು ಕವಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಹೋರಾಟಗಾರ ಅಭಿಷೇಕ ಚಕ್ರವರ್ತಿ, ನಾಟಕ ಬರಹಗಾರ ಕವಿಗಳ ಸಂಘದ ಜಿಲ್ಲಾಧ್ಯಕ್ಷ ವಾಯ್.ಎಚ್.ಅಂಗಡಗೇರಿ,ರಾಜ್ಯ ಸಂಘಟನಾ ಸಂಚಾಲಕ ಡಾ.ರಾಘವೇಂದ್ರ ಉಮ್ಮರಗಿ, ಗೌರವಾಧ್ಯಕ್ಷ ಸಿದ್ದಪ್ಪ ಆಳಗೊಂಡ, ಪ್ರಧಾನ ಕಾರ್ಯದರ್ಶಿ, ಗುಂಡು ಕುಂಬಾರ, ಶಿವಾನಂದ ಡೆಂಗಿ, ಭೀಮು ಹೊನವಾಡ, ಮಲ್ಲಿಕಾರ್ಜುನ ಅಗಸರ, ಅನಿಲ ಜಾದವ ಮುಂತಾದವರು ಉಪಸ್ಥಿತರಿದ್ದರು.

