Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾರಾಷ್ಟ್ರದ ಅಕ್ಕಲಕೋಟದ ಮಾಜಿ ಶಾಸಕ ಸಿದ್ರಾಮಪ್ಪ ಮಲಕಪ್ಪ ಪಾಟೀಲ(೮೭) ಇದೇ ನ.೧೩ ರ ಗುರುವಾರ ರಾತ್ರಿ ಸೋಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು. ಅವರ ಅಂತ್ಯಕ್ರಿಯೆ ಅಕ್ಕಲಕೋಟ ತಾಲೂಕಿನ ಕುಮಠೆ ಗ್ರಾಮದಲ್ಲಿ ನ.೧೪ ರ ಶುಕ್ರವಾರದಂದು ನೆರವೇರಿತು.ಇವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗ ಅಗಲಿದ್ದಾರೆ. ಅವರ ನಿಧನಕ್ಕೆ ಹಾಲಳ್ಳಿ ಗ್ರಾಮದಲ್ಲಿ ಅವರ ಅಭಿಮಾನಿಗಳು ಮೇಣದ ಬತ್ತಿ ಬೆಳಗಿಸುವುದರ ಮೂಲಕ ಶೃದ್ಧಾಜಂಲಿ ಸಲ್ಲಿಸಿದರು.ಮೂಲಕ ಮೂಲತಃ ಕರ್ನಾಟಕದ ಚಡಚಣ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಜೂನ ೧೦, ೧೯೩೯ರಂದು ಹುಟ್ಟಿ ಬೆಳದು ಪ್ರಾಥಮಿಕ ಶಿಕ್ಷಣವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಚಡಚಣ ಪಟ್ಟದ ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ ಪೂರೈಸಿದ ಇವರು ನಂತರ ಅಕ್ಕಲಕೋಟ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದರು.ಅವರು ಅಕ್ಕಲಕೋಟ ತಾಪಂ ಅಧ್ಯಕ್ಷರಾಗಿ, ಸೋಲಾಪು ಜಿಪಂ ಉಪಾಧ್ಯಕ್ಷರಾಗಿ, ಸೋಲಾಪುರ ಡಿಸಿಸಿ ಬ್ಯಾಂಕ್ಗೆ ೩೫ ವರ್ಷ ಸಂಚಾಲಕರಾಗಿ, ಸ್ವಾಮಿ ಸಮರ್ಥ ಸಕ್ಕರೆ ಕಾರ್ಖಾನೆ…
ಉದಯರಶ್ಮಿ ದಿನಪತ್ರಿಕೆ ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಶ್ರೀಮಠದ ಒಡೆಯ ಅಭಿನವ ರುದ್ರಮುನಿ ಶಿವಾಚಾಯ೯ರ ನೇತೃತ್ವದಲ್ಲಿ ಲಿಂ.ರುದ್ರಮುನಿ ಶಿವಾಚಾಯ೯ರ ೪೮ನೇ ಪುಣ್ಶಾರಾಧನೆ ನಿಮಿತ್ಶ ನ.೧೭ರಿಂದ ನ.೨೭ ರವರೆಗೆ ನಿತ್ಶ ೧೧ ದಿನಗಳ ಕಾಲ ರಾತ್ರಿ ೮ ರಿಂದ ೯ರ ವರೆಗೆ ನವಲಗುಂದದ ಶ್ರೀ ಅಜಾತ ನಾಗಲಿಂಗ ಸ್ವಾಮಿಗಳ ಪುರಾಣ ನಡೆಯಲಿದೆ. ಶಹಾಪೂರದ ಸರಸ್ವತಿ ಪೀಠ, ವಿಶ್ವಕಮ೯ ಏಕದಂಡಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಪ್ರವಚನ ನಡೆಸಿಕೊಡುವರು. ಯಂಕಂಚಿಯ ನಿಂಗಣ್ಣ ವಿಶ್ವಕಮ೯ ಸಂಗೀತ ಸೇವೆ ನೀಡುವರು. ಮೋರಟಗಿಯ ರವಿ ವಿಭೂತಿ ತಬಲಾ ಸಾಥ್ ನೀಡುವರು. ನ.೧೭ರಂದು ರಾತ್ರಿ ೮ಕ್ಕೆ ಪುರಾಣ ಆರಂಭೋತ್ಸವಕ್ಕೆ ಉದ್ದಿಮೆದಾರ ವೆಂಕಟೇಶ ಗುತ್ತೆದಾರ, ಚಿಕ್ಕರೂಗಿಯ ಈರಣ್ಣ ಶಾಸ್ತ್ರೀಗಳು ಉದ್ಘಾಟಿಸುವರು.ಮುಧೋಳ (ಬಿ) ಗಂಜಗಟ್ಟಿ ಡಾ.ವೈಜನಾಥ ಶಿವಾಚಾಯ೯ರು,ಮಳ್ಳಿ ಹಿರೇಮಠದ ರುದ್ರಮುನಿ ಶಿವಾಚಾಯ೯ರು ದಿವ್ಶ ಸಾನಿಧ್ಶವಹಿಸುವರು.ರೋಡಗಿಯ ವಿರಕ್ತಮಠದ ಅಭಿನವ ಶಿವಲಿಂಗೇಶ್ವರ ಸ್ವಾಮಿಗಳು, ಕಡಕೋಳ (ಡೋಣಿ) ಹಿರೇಮಠದ ರಾಜಗುರು ಮಹಾಲಿಂಗ ಸ್ವಾಮಿಗಳು, ಕೋರವಾರ ಚೌಕಿಮಠದ ಮುರಗೇಂದ್ರ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಚಬನೂರದ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ವೃದ್ದಿಗೆ ನಮ್ಮ ಸರಕಾರಿ ಪ್ರೌಢಶಾಲೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶಿಕ್ಷಕರೊಂದಿಗೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಪಾಲಕರೂ ಸಹಕಾರ ನೀಡಬೇಕೆಂದು ಚಿಮ್ಮಡ ಹಾಗೂ ತೇರದಾಳ ಸರಕಾರಿ ಪ್ರೌಢಶಾಲೆಯ ಮುಖ್ಯೊಪಾದ್ಯಾಯೆ ಎಂ.ಎಸ್. ಜಿಟ್ಟಿ ಹೇಳಿದರು.ಗ್ರಾಮದ ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪೋಷಕ-ಶಿಕ್ಷಕರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಸ್ಎಸ್ಎಲ್ಸಿ ಫಲಿತಾಂಶ ವೃದ್ದಿಗಾಗಿ ವಿಶೇಷ ತರಗತಿ ನಡೆಸುವುದು, ಬೆಳಗಿನ ಜಾವ ಅಭ್ಯಾಸಕ್ಕಾಗಿ ಮಕ್ಕಳನ್ನು ಎಚ್ಚರಿಸುವುದು, ವಿಶೇಷ ಟಿಪ್ಪಣಿಗಳನ್ನು ಮಕ್ಕಳಿಗೆ ನೀಡುವುದು ಹಾಗೂ ಶೇ. ೧೦೦ ರಷ್ಟು ಮಕ್ಕಳ ಹಾಜರಾತಿ ಕಾಯ್ದುಕೊಳ್ಳುವ ಮೂಲಕ ವಿಶೇಷ ಮುತುವರ್ಜಿ ವಹಿಸಲಾಗುತ್ತಿದ್ದು ಈ ಬಾರಿ ಶೇ,೧೦೦ ಫಲಿತಾಂಶಕ್ಕಾಗಿ ಶೃಮಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಆರ್ಟಿ.ಇ ಕಾಯಿದೆ ಕುರಿತು ಶ್ರೀಮತಿ ಬಿ.ಡಿ. ಬಡಿಗೇರ, ಮಕ್ಕಳ ಹಕ್ಕು ಹಾಗೂ ನಿರ್ವಹಣಾ ನೀತಿ ಕುರಿತು ಶ್ರೀಮತಿ ಆರ್.ಎಚ್. ಕೋರಡ್ಡಿ, ಪ್ರೋತ್ಸಾಹದಾಯಕ ಯೋಜನೆಗಳ ಕುರಿತು ಎಂ.ಎಲ್. ಜಮಾದಾರ, ಪಾಲಕ, ಪೋಷಕರ ಜವಾಬ್ದಾರಿ ಕುರಿತು ಶ್ರೀಮತಿ ಜಿ.ಎಸ್. ಕುಲಕರ್ಣೀ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಜಗತ್ತಿನಲ್ಲಿ ಯಶಸ್ವಿ ಹೊಂದಲು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಬೇಕು. ಗುಣಮಟ್ಟದ ಶಿಕ್ಷಣದ ಜೊತೆಗೆ ಪ್ರಸ್ತುತ ಜಗತ್ತು ಅಪೇಕ್ಷಿತ ಮಟ್ಟದ ವಿಷಯ ಜ್ಞಾನ, ಕೌಶಲ್ಯ, ವಿಶ್ಲೇಷಣಾತ್ಮಕ ಚಿಂತನಾ ಶಕ್ತಿ, ಕಾರ್ಯತತ್ಪರತೆ, ಕ್ರಿಯಾಶೀಲತೆ, ಸೃಜನಾತ್ಮಕತೆ ಮತ್ತು ಪ್ರಾಯೋಗಿಕತೆಯಂತಹ ಔದ್ಯೋಗಿಕ ಕೌಶಲ್ಯಗಳನ್ನು ಪಡೆಯುವುದು ಅಗತ್ಯವಾಗಿದೆ ಎಂದು ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಎಂಪ್ಲೆöÊಯೆಬಿಲಿಟ್ ಸ್ಕಿಲ್ಸ್ ವಿಷಯದ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ “ಔದ್ಯೋಗಿಕ ಮತ್ತು ಸ್ಪರ್ಧಾತ್ಮಕ ಕೌಶಲ್ಯಗಳ ಕಾರ್ಯಾಗಾರ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಅವರು ಮಾತನಾಡುತ್ತಾ, ಸ್ಪರ್ಧಾತ್ಮಕ ಪರೀಕ್ಷೆಗಳು ಸರ್ಕಾರಿ ಉದ್ಯೋಗ ಮತ್ತು ಪ್ರತಿಷ್ಠಿತ ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ಗಿಟ್ಟಿಸಿಕೊಳ್ಳಲು ಪ್ರವೇಶದ್ವಾರವಾಗಿವೆ. ಇಂದು ಕೇವಲ ವಿಷಯ ಜ್ಞಾನ, ಅಂಕ ಮತ್ತು ಪದವಿ ಪಡೆದರೆ ಸಾಲದು. ಅದಕ್ಕಿಂತ ಮುಖ್ಯವಾಗಿ ಶಿಸ್ತು, ಉದಾತ್ತ ಗುರಿ, ಯೋಜಿತ ತಯಾರಿ, ನಿರಂತರ ಕಲಿಕೆ, ಕಠಿಣ ಪರಿಶ್ರಮ,…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಸಿಗಬೇಕು ಎಂದು ಎಸ್ ಎನ್ ಹಪ್ತಿ ಹೇಳಿದರು.ಅವರು ತಾಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ರಾಜಕೀಯ ಸಾಮಾಜಿಕ ಆರ್ಥಿಕ ಸಬಲತೆ ಹೊಂದಿದಾಗ ಕುಟುಂಬದ ಅಭಿವೃದ್ಧಿಗೆ ಅಲ್ಲದೆ ದೇಶದ ಬೆಳವಣಿಗೆಗೂಕಾರಣವಾಗುತ್ತಾಳೆ ಎಂದು ಹೇಳಿದರು.ಉದ್ಘಾಟನೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಬಿ ಎಸ್ ಪಾಟೀಲ್ ನೆರವೇರಿಸಿ ಮಾತನಾಡಿದರು.ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ.ವೀರಭದ್ರ ಗೋಲಾ ಮಾತನಾಡಿ, ಮಹಿಳೆ ಒಂದು ದೇಶದ ಪ್ರಗತಿಯ ಸಂಕೇತ ಅವಳಿಗೆ ಉತ್ತಮವಾದ ಶಿಕ್ಷಣ ನೀಡಿ, ಎಲ್ಲರಂತೆ ಅವಕಾಶಗಳನ್ನು ಸಮಾನವಾಗಿ ಪಡೆಯಲು ಸಮರ್ಥಲಾಗಿದ್ದಾಳೆ ಎಂದರು.ಸಬಲೀಕರಣದ ಅಧಿಕಾರಿ ವ್ಹಿ ಎಸ್ ಶಹಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.ಅತಿಥಿಗಳಾಗಿ ಪ್ರೊ ಆರ್ ವೈ ಕಂಬಾರ ಪ್ರೊ ಎಸ್ ಎಂ ಹರನಾಳ ಡಾ. ಐ ಜಿ ಕೋನಸಿರಸಗಿ ವಿದ್ಯಾರ್ಥಿನಿ ಉಮಾಶ್ರೀ ಬಿಜಾಪುರ ಮಾತನಾಡಿದರು .ಗೌರಿ ಶಾಬಾದಿ ಪ್ರಾರ್ಥಿಸಿದರು ನಾಜಿಯಾ ಮುಲ್ಲಾ ನಿರೂಪಿಸಿದರು ಶರಣಮ್ಮ ಚೌಡಾಪುರ ಸ್ವಾಗತಿಸಿದರು ಪದ್ಮಾವತಿ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ವೃಕ್ಷ ಮಾತೆ ಎಂದೇ ಹೆಸರಾಗಿದ್ದ ಸಾಲು ಮರದ ತಿಮ್ಮಕ್ಕ ಇಂದು ನಮ್ಮನ್ನು ಅಗಲಿರಬಹುದು ಆರದೆ ಅವರು ಬೆಳೆಸಿದ ಮರಗಳು ಪರಿಸರ ಕಾಳಜಿಯ ಪಾಠಗಳ ಮೂಲಕ ಅವರು ಅಜರಾಮರರಾಗಿದ್ದಾರೆ ಎಂದು ಗ್ರಾ.ಪಂ. ಮಾಜಿ ಅಧ್ಯಕಷ ಪರಪ್ಪಾ ಪಾಲಭಾವಿ ಹೇಳಿದರು.ಗ್ರಾಮದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದ ಆವರಣದಲ್ಲಿ ಭಾಜಪ ಘಟಕದಿಂದ ಶನಿವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಶೃಧ್ಧಾಂಜಲಿ ಸಭೆಯಲ್ಲಿ ಮೌನಾಚರಣೆ ನೆರವೇರಿಸಿದ ನಂತರ ಮಾತನಾಡಿದ ಅವರು ತಿಮ್ಮಕ್ಕ ಕಾಯಕವೇ ಕೈಲಾಸ ಎಂಬ ಮನಸ್ಸನ್ನು ಹೊಂದಿದ್ದರು ಸಾವಿರಾರು ಮರಗಳನ್ನು ನೆಟ್ಟು ಮಕ್ಕಳಂತೆ ಪೋಷಣೆ ಮಾಡಿ ದೇಶಕ್ಕೆ ಮಾದರಿಯಾಗಿರುವ ತಿಮ್ಮಕ್ಕನವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದರು.ಉಪನ್ಯಾಸಕ ಪ್ರವೀಣ ಮೈತ್ರಿ ಮಾತನಾಡಿ, ೧೧೪ ವರ್ಷಗಳ ಸಂತ್ರಪ್ತ ಜೀವನ ಸಾಗಿಸಿದ ತಿಮ್ಮಕ್ಕ ಪರಿಸರ ಕಾಳಜಿಯಲ್ಲಿ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದರು. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದರು.ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಗುರಲಿಂಗಪ್ಪ ಪೂಜಾರಿ, ಬಸವರಾಜ ಕುಂಚನೂರ, ಮನೋಜ ಹಟ್ಟಿ, ಬಾಳೇಶ ಬ್ಯಾಕೋಡ, ನಾಗಪ್ಪ ಆಲಕನೂರ, ಪ್ರಭು…
ಜೀವ ವೈವಿದ್ಯತೆ ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಈ ಪಕ್ಷಿಯನ್ನು ‘ಇಂಪೇನ್ ಮೋನಲ್’ ಅಥವಾ ‘ಇಂಪೇನ್ ಫೆಸೆಂಟ್’ ಎಂದು ಕರೆಯಲಾಗುತ್ತದೆ. ಇದು ‘ಬೇಟೆ ಹಕ್ಕಿ’ಯ ಪ್ರಬೇಧಕ್ಕೆ ಸೇರಿದ್ದು, ಇದನ್ನು ನೇಪಾಳದಲ್ಲಿ ‘ಧನ್ಫೆ’ ಎಂದೂ ಕರೆಯುತ್ತಾರೆ. ಈ ಪಕ್ಷಿಯು ಉತ್ತರಾಖಾಂಡ್ ರಾಜ್ಯದ ರಾಜ್ಯ ಪಕ್ಷಿಯೂ ಆಗಿದ್ದು, ಇಲ್ಲಿ ಈ ಪಕ್ಷಿಯನ್ನು ‘ಮೋನಲ್’ ಎಂದು ಕರೆಯುತ್ತಾರೆ. ೨೦೦೭ರ ವರೆಗೆ ಈ ಪಕ್ಷಿಯು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿಯೂ ಗುರುತಿಸಿಕೊಂಡಿದ್ದು, ಈ ಪಕ್ಷಿಯನ್ನು ‘ಏಕ ಜೈವಿಕ ಕುಲ’ ಪ್ರಬೇಧಕ್ಕೆ ಸೇರಿದ್ದೆಂದೂ ಗುರುತಿಸಲಾಗಿದೆ. ಅಧ್ಯಯನದ ಪ್ರಕಾರ ವಾಯುವ್ಯ ಭಾರತದಲ್ಲಿರುವ ಗಂಡು ಮೋನಲ್ಗಳ ಕಂದು ಬಣ್ಣದ ಉದ್ದನೆಯ ಬಾಲವು ಇತರೆಲ್ಲಾ ಮೋನಲ್ಗಳಿಗಿಂತ ಕಡಿಮೆ ಉದ್ದವಿರುವುದನ್ನು ಗುರುತಿಸಲಾಗಿದೆ. ಇವುಗಳ ಎದೆಯ ಭಾಗವು ಗಾಢ ಹಸಿರು ಬಣ್ಣದಿಂದ ಕೂಡಿದ್ದು, ಇದು ಇವುಗಳಲ್ಲೂ ಉಪ ವರ್ಗಗಳ ಇರುವಿಕೆಯನ್ನು ಸೂಚಿಸುತ್ತದೆ. ‘ಹಿಮಾಲಯನ್ ಮೋನಲ್’ನ ವೈಜ್ಞಾನಿಕ ಹೆಸರು ‘ಲೇಡಿ ಮೇರಿ ಇಂಪೇ’ ಆಗಿದ್ದು,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಲ್ಲಿನ ರಾಜಾಜಿನಗರದ ಪ್ರಗತಿ ಶಾಲೆಯ ೨೫ ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮ ಪ್ರಯುಕ್ತ ನ.೧೭ ರಂದು ಬೆಂಗಳೂರು ರೆಸ್ಟೋರೆಂಟನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಜರುಗಿತು. ನ.೧೯ ರಂದು ಬೆಳಗ್ಗೆ ೮ ಗಂಟೆಗೆ ಮುರಾಣಕೇರಿಯ ಕಾಳಿಕಾ ದೇವಸ್ಥಾನದಿಂದ ಆರಂಭವಾಗುವ ಸರಸ್ವತಿ ಮೆರವಣಿಗೆ ಕಾಸಗೇರಿ, ರಾಜಾಜಿನಗರ,ರಾಮನಗರ ಮೂಲಕ ಪ್ರಗತಿ ಶಾಲೆ ತಲುಪಲಿದೆ.ಸಿದ್ಧೇಶ್ವರ ಬ್ಯಾಂಕ್ ನಿರ್ದೇಶಕ ಹರ್ಷಗೌಡ ಪಾಟೀಲ ಉದ್ಘಾಟಿಸುವರು. ಸಿದ್ಧಸಿರಿ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ರಾಮನಗೌಡ ಪಾಟೀಲ (ಯತ್ನಾಳ) ಅಧ್ಯಕ್ಷತೆ ವಹಿಸಲಿದ್ದು, ಮಹಾನಗರಪಾಲಿಕೆ ಸದಸ್ಯ ಗಿರೀಶ ಬಿರಾದಾರ ನೇತೃತ್ವ ವಹಿಸುವರು. ಪ್ರಗತಿ ಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಸಂಗಮೇಶ ಮನಹಳ್ಳಿ ಉಪಸ್ಥಿತರಿರುವರು.ಮಧ್ಯಾಹ್ನ ೧-೩೦ಕ್ಕೆ ಕನ್ನಡ ಪುಸ್ತಕ ಪರಿಷತ್ ಆಶ್ರಯದಲ್ಲಿ ಕನ್ನಡ ಪುಸ್ತಕ ಸಮ್ಮೇಳನ ಜರುಗಲಿದೆ. ತೋಂಟದ ಸಿದ್ಧಲಿಂಗಶ್ರೀ ಪುಸ್ತಕ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಉಪನ್ಯಾಸ ನಡೆಯಲಿದೆ.ನ.೨೩ ರಂದು ಬೆಳಗ್ಗೆ ೧೦ ಗಂಟೆಗೆ ಭಾರತ ಪಂಕ್ಷನ್ ಗಾರ್ಡನ್ ಒಳಾಂಗಣದಲ್ಲಿ ನಡೆಯುವ ಗುರುವಂದನೆಯಲ್ಲಿ ‘ಭಾರತದಲ್ಲಿ ಗುರು-ಶಿಷ್ಯ ಪರಂಪರೆ’ ವಿಷಯದ ಮೇಲೆ ೧ನೇ ಗೋಷ್ಠಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತನ್ನ ಸಹೋದರನ ನೆರವಿನಿಂದ ಪ್ರಿಯತಮೆ ತನ್ನ ಪ್ರಿಯಕರನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ನಗರದ ಜಾಮೀಯಾ ಮಸೀದಿ ಬಳಿ ಇರುವ ಅಮನ್ ಕಾಲೋನಿಯಲ್ಲಿ ವರದಿಯಾಗಿದೆ.ಕೊಲೆಗೀಡಾದ ದುರ್ದೈವಿಯನ್ನು ಸಮೀರ್ ಇನಾಮದಾರ (೨೬) ಎಂದು ಗುರುತಿಸಲಾಗಿದೆ. ಕೊಲಗೀಡಾಗಿರುವ ಸಮೀರ್ ತಯ್ಯಬಾ ಅವರ ಪ್ರಿಯಕರ ಎನ್ನಲಾಗಿದ್ದು, ತಯ್ಯಬಾ ತನ್ನ ಸಹೋದರರಾದ ಅಸ್ಲಮ್ ಬಾಗವಾನ ನೆರವಿನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು, ದಿನನಿತ್ಯ ಸಮೀರ್ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತು ಈ ಕೊಲೆ ನಡೆದಿದೆ ಎನ್ನಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಸತ್ಯಾಂಶ ಹೊರಬರಲಿದೆ.ಸಮೀರ್ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಗೋಳಗುಮ್ಮಟ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ತಿಳಗೂಳ ಗ್ರಾಮದ ಸಾಹಿತಿ, ವ್ಯಕ್ತಿತ್ವ ವಿಕಸನ ತರಭೇತುದಾರ ಜಗದೀಶ ಸಾತಿಹಾಳ ತಮ್ಮ ಎರಡು ವರ್ಷದ ಮಗಳು ಬಸವಪ್ರೀಯಾ ಸಾತಿಹಾಳ ಇವರ ಜನ್ಮದಿನದ ಅಂಗವಾಗಿ ತಿಳಗೂಳ ಗ್ರಾಮದ ವಿವಿಧ ಸರ್ಕಾರಿ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ವಿವಿದ ಕಛೇರಿಗಳಿಗೆ ಗೋಡೆ ಗಡಿಯಾರಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸಿದರು.ಜಗದೀಶ ಸಾತಿಹಾಳ ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
