Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ತಾಲೂಕಿನ ಇವಣಗಿ ರಸ್ತೆಯಿಂದ ಕಣಕಾಲ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಅಂಬಳನೂರ ಕ್ರಾಸ್ ಹತ್ತಿರ ಅಬಕಾರಿ ಅಧಿಕಾರಿಗಳು ಶುಕ್ರವಾರ ರಸ್ತೆಗಾವಲು ಮಾಡುತ್ತಿರುವ ಸಂದರ್ಭದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು ರೂ. ೪೬,೪೦೦ ಮೌಲ್ಯದ ೫,೭೬೦ ಲೀ. ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿ ರಮೇಶ ಯಮನಪ್ಪ ನನ್ನೂರ ದಾಳಿ ಸಮಯದಲ್ಲಿ ಪರಾರಿಯಾಗಿದ್ದಾರೆ. ಅಬಕಾರಿ ಉಪ ನಿರೀಕ್ಷಕ ಎಸ್.ಎ.ಹುಂಡೇಕಾರ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಬಕಾರಿ ದಾಳಿಯನ್ನು ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, ಉಪ ಅಽಕ್ಷಕ ಎಲ್.ಎಸ್.ಸಲಗರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಜಿ.ಎಸ್.ಪಾಟೀಲ ನೇತೃತ್ವದಲ್ಲಿ ಅಬಕಾರಿ ಪೇದೆಯವರಾದ ಅನಿಲ ಕರಜಗಿ, ಭೀಮಾಶಂಕರ ಸಂಗೊಂಡ, ಯಮನಪ್ಪ ಮಾದರ, ವಾಹನ ಚಾಲಕ ಬಸು ಶಖಾಪುರ ತಂಡ ಮದ್ಯ, ದ್ವಿಚಕ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದ ಶತಾಯುಷಿ ಲಿಂ.ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೪೦ ನೇ ಪುಣ್ಯ ಸ್ಮರಣೋತ್ಸವ ಹಾಗೂ ಲಿಂ.೨೦೦೮ ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೧೦ ನೇ ಯಾತ್ರಾ ಮಹೋತ್ಸವದಂಗವಾಗಿ ಮೇ.೧೫ ರಂದು ನಡೆಯಲಿರುವ ಜಾತ್ರಾಮಹೋತ್ಸವದ ವಾಲ್ ಪೋಸ್ಟರ್ ಅನ್ನು ಶನಿವಾರ ಶ್ರೀಮಠದ ಅಭಿನವ ಸಂಗನಬಸವ ಸ್ವಾಮೀಜಿ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಜಾತ್ರಾಮಹೋತ್ಸವದಂಗವಾಗಿ ಮೇ. ೧ ರಿಂದ ಪ್ರತಿನಿತ್ಯ ಸಂಜೆ ೭ ಗಂಟೆಗೆ ಶಿವಶರಣೆ ಹೇಮರಡ್ಡೆ ಮಲ್ಲಮ್ಮಳ ಚರಿತಾಮೃತ ಪುರಾಣ ನಡೆಯಲಿದೆ. ರೋಣ ತಾಲೂಕಿನ ಬೂದಿಹಾಳದ ಗವಿಸಿದ್ದೇಶ್ವರ ಶಾಸೀಗಳು ಪುರಾಣ ಹೇಳುವರು. ಮೇ.೧೪ ರಂದು ಬೆಳಗ್ಗೆ ೬.೨೦ ಗಂಟೆಗೆ ಪಂಚಾಚಾರ್ಯ ಧ್ವಜಾರೋಹಣ ನಂತರ ಸಾಮೂಹಿಕ ಶಿವದೀಕ್ಷೆ ಮತ್ತು ಅಯ್ಯಾಚಾರ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೧೦ ಗಂಟೆಗೆ ಮನಗೂಳಿ, ಕುಬಕಡ್ಡಿ, ವಿಜಯಪುರ, ಅಡತಿಗಲ್ಲಿ, ಬಬಲೇಶ್ವರ ಸೇರಿದಂತೆ ಇತರೇ ಗ್ರಾಮಗಳ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮೇ.೧೫ ರಂದು ಬೆಳಗ್ಗೆ ೭ ಗಂಟೆಗೆ ಬಸಪ್ಪ ಹುಣಸಿಕಟ್ಟಿಯವರ ತೋಟದಿಂದ ವಿವಿಧ ವಾದ್ಯಮೇಳದೊಂದಿಗೆ ಕುಂಭ…
ಮುದ್ದೇಬಿಹಾಳ: ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಮತ್ತು ಒಳಮೀಸಲಾತಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ತಾಲೂಕಿನ ಬಂಜಾರಾ, ಕೊರಚ, ಕೊರಮ ಸಮಾಜ ಬಾಂಧವರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ ರೇಖಾ ಟಿ ಅವರ ಮೂಲಕ ರಾಜ್ಯಪಾಲರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಸಂತ ಸೇವಾಲಾಲ್ ವೃತ್ತದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಛೇರಿಯವರೆಗೂ ಸಾಗಿತು. ಮೆರವಣಿಗೆಯ ಉದ್ದಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ತಹಶೀಲ್ದಾರ ಕಛೇರಿಯ ವರೆಗೂ ಸಾಗಿತು.ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ತಾಲೂಕು ಅಧ್ಯಕ್ಷ ಬಹದ್ದೂರ ರಾಠೋಡ ಮಾತನಾಡಿ, ಒಳಮೀಸಲಾತಿ ಜಾರಿ ಮಾಡಲು ಬರುವದಿಲ್ಲ ಎಂದು ಸುಪ್ರೀಂ ಕೋರ್ಟ ನಿರ್ದೇಶನ ನೀಡಿದರೂ, ಚುನಾವಣಾ ಹಿನ್ನೆಲೆಯಲ್ಲಿ ಮತಗಳÀ ಆಸೆಗಾಗಿ ರಾಜ್ಯ ಸರ್ಕಾರ ಇಂಥಹ ಕಾನೂನು ಬಾಹಿರ ನಿಲುವನ್ನು ತೆಗೆದುಕೊಂಡಿದೆ. ಬರುವ ಚುನಾವಣೆಯಲ್ಲಿ…
ದೇವರಹಿಪ್ಪರಗಿ: ಪಟ್ಟಣದ ಬಾಳಯ್ಯ ಇಂಡಿಮಠ ಇವರು ಬೆಂಗಳೂರಿನ ಏಕತಾ ಫೌಂಡೇಶನ್ ವತಿಯಿಂದ ನೀಡುವ ೨೦೨೩ನೇ ಸಾಲಿನ ಏಕತಾ ಸಮಾಜ ಸೇವಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಇಂಡಿಮಠ ಅವರ ಧಾರ್ಮಿಕ, ಸಾಮಾಜಿಕ ಸೇವೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದ್ದು, ತಾಲ್ಲೂಕು ಜಂಗಮ ಸೇವಾಭಿವೃದ್ಧಿ ಸಂಘದ ಸದಸ್ಯರು ಪದಾಧಿಕಾರಿಗಳು, ಹರ್ಷ ವ್ಯಕ್ತ ಪಡಿಸಿದ್ದಾರೆ.
ಆಲಮೇಲ: ಕನ್ನಡ ಸಾರಸ್ವತ ಲೋಕಕ್ಕೆ ಎಂಟು ಜ್ಞಾನಪೀಠಗಳು ದೊರೆತಿವೆ, ಜಗತ್ತಿನ ಬಹುದೊಡ್ಡ ಸಾಹಿತ್ಯಧಾರೆಗಳಲ್ಲಿ ಒಂದಾದ ವಚನ ಸಾಹಿತ್ಯ ವಿಜಯಪುರ ನೆಲದಿಂದಲೇ ಜನ್ಮತಳೆದಿದೆ. ಈ ನೆಲ ಕಲೆ, ಸಾಹಿತ್ಯ ಸಂಸ್ಕೃತಿಯ ಶ್ರೀಮಂತಿಕೆಯಿAದ ಕೂಡಿದೆ ಎಂದು ಪ್ರಾಚಾರ್ಯ ಡಾ. ಎಸ್.ಎಸ್.ತಾವರಖೇಡ ಬಣ್ಣಿಸಿದರು.ಅವರು ಆಲಮೇಲ ಪಟ್ಟಣದ ಎಚ್.ಎ.ನಂದಿ ಪದವಿ ಮಹಾವಿದ್ಯಾಲಯದಲ್ಲಿ ಕಡಣಿಯ ಬೆರಗು ಪ್ರಕಾಶನ ಹಮ್ಮಿಕೊಂಡ ಸಿದ್ಧರಾಮ ಉಪ್ಪಿನ ಸಾಹಿತ್ಯ ಉಪನ್ಯಾಸ ಮಾಲಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಿದ್ಧರಾಮ ಉಪ್ಪಿನ ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ, ಅವರ ಕೊಡುಗೆಯನ್ನು ಗುರುತಿಸಿ ಮಹಾಪ್ರಬಂಧ ಮಂಡಿಸಿರುವ ಪ್ರೊ.ಮಿರಾಜಾಪಾಶಾ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಪ್ರಾಧ್ಯಾಪಕ ಎಸ್. ಎಂ. ಉಪ್ಪಾರ ಮಾತನಾಡಿ ‘ಮಿರಾಜಪಾಶನಂತಹ ಯುವ ಸಂಶೋಧಕರು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರ ಕುರಿತಾದ ಸಂಶೋಧನೆ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಿದ್ದಾರೆ, ಇಂತಹ ಕಾರ್ಯಗಳು ಹೆಚ್ಚಾಗಲಿ ಎಂದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಸೈಯದ್ ದೇವರಮನಿ, ಬೆರಗು ಪ್ರಕಾಶನ ಸಂಸ್ಥೆಯ ಸಂಚಾಲಕ ಡಾ. ರಮೇಶ…
ದೇವರಹಿಪ್ಪರಗಿ: ಮತಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಬೇಕೆAದು ಶಾಸಕ ಸೋಮನಗೌಡ ಪಾಟೀಲರ ಚಿರಂಜೀವಿ, ಬಿಜೆಪಿ ಯುವ ಮುಖಂಡ ಸಂಗನಗೌಡ ಪಾಟೀಲ ಸಾಸನೂರ ಮನವಿ ಮಾಡಿದರು.ಶುಕ್ರವಾರ ಸಂಜೆ ದೇವರಹಿಪ್ಪರಗಿ ತಾಂಡದಲ್ಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಪರ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ನಮ್ಮ ತಂದೆಯವರು ಸಾವಿರಾರು ಕೋಟಿ ರೂ. ಅನುದಾನ ತಂದು ಸಮಗ್ರ ನೀರಾವರಿ, ಕೆರೆ ತುಂಬುವ ಯೋಜನೆಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕ್ಷೇತ್ರದ ರಸ್ತೆ ಸುಧಾರಣೆಗೆ ಒತ್ತು ನೀಡಿದ್ದು, ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಿದೆ ಅದಕ್ಕಾಗಿ ಜಾತಿ-ಮತ ನೋಡದೆ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಬೇಕೆAದು ಮನವಿ ಮಾಡಿಕೊಂಡರು.ಇದೇ ಸಂದರ್ಭದಲ್ಲಿ ಸೇವಾಲಾಲ ಮಹಾರಾಜರ ಮತ್ತು ದುರ್ಗಾ ಮಾತೆಯ ಆಶೀರ್ವಾದ ಪಡೆದು ಬಂಜಾರ ಸಮಾಜದ ಬಂಧುಗಳಲ್ಲಿ ಮತಯಾಚನೆ ಮಾಡಿದರು.ಇದೆ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ವಿನೋದ ಚವ್ವಾಣ, ಮಂಗಲೇಶ ಕಡ್ಲವಾಡ, ಸೋಮು ದೇವೂರ, ಶಂಕರ ಜಮಾದಾರ, ಸತೀಶ ಬೂದಿಹಾಳ, ಕಾಸು ಬಿರಾದಾರ ಹಾಗೂ ಜಿಲ್ಲಾ…
ಢವಳಗಿ: ಢವಳಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಅವg ಪರ ಅವರ ಪುತ್ರರಾದ ಶರತಗೌಡ ಮತ್ತು ಭರತಗೌಡ ಅವರು ಪ್ರಚಾರಕ್ಕಾಗಿ ಆಗಮಿಸಿದಾಗ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು.ಈ ಸಂದರ್ಭ ಮಾತನಾಡಿದ ಭರತಗೌಡ, ಶಾಸಕ ನಡಹಳ್ಳಿ ಅವರು ಎಷ್ಟೇ ಅಭಿವೃದ್ದಿ ಕೆಲಸ ಮಾಡಿದರೂ ಇದನ್ನು ಸಹಿಸದ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ನಿಮಗೆ ಯಾರು ಒಳ್ಳೆಯವರು ಅಂತ ಅನಿಸುತ್ತಾರೋ ಮತ್ತು ಅಭಿವೃದ್ದಿ ಪರ ಕೆಲಸ ಮಾಡುತ್ತಾರೆ ಅವರಿಗೆ ಬೆಂಬಲಿಸಿ ಎಂದರು.ಶರತಗೌಡ ಪಾಟೀಲ ನಡಹಳ್ಳಿ ಅವರು ಮಾತನಾಡಿ, ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಅವು ಸೌಹಾರ್ದಯುತ ಆಗಿರಬೇಕು. ಶಾಸಕರು ಮಾಡಿರುವ ಕೆಲಸಗಳು ಜನತೆಯ ಕಣ್ಣ ಮುಂದೆ ಇರುವಾಗ ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಜನರು ಮನ್ನಣೆ ಕೊಡುವುದಿಲ್ಲ ಎಂದರು.ಈ ಸಂಧರ್ಬದಲ್ಲಿ ಬಾಪೂಗೌಡ ಪಾಟೀಲ(ಹಳ್ಳದಂಡಿ), ಮಲ್ಲನಗೌಡ ಬಿರಾದಾರ, ಸುಭಾಷ ಗುಡಿಮನಿ, ಮಡಿವಾಳಪ್ಪ ಬೀರಗೊಂಡ, ಗಂಗಪ್ಪ ಬಡಿಗೇರ, ಸಂಗಣ್ಣಮಾಸ್ತರ ಕೊಣ್ಣುರ, ಮಡಿವಾಳಪ್ಪ ಸುತಗುಂಡರ,…
ಢವಳಗಿ: ಗ್ರಾಮದಲ್ಲಿ ಮಾಜಿ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ ಎಸ್ ನಾಡಗೌಡ ಅಪ್ಪಾಜಿ ಪರ ಅವರ ಸುಪುತ್ರಿ ಪಲ್ಲವಿ ನಾಡಗೌಡ ಅವರು ಕಾಂಗ್ರೆಸ್ ಗ್ಯಾರೆಂಟಿ ಕಾರ್ಡನ್ನು ಮನೆಮನೆಗೆ ಹೋಗಿ ತಲುಪಿಸಿ ಕಾಂಗ್ರೆಸ್ ಪಕ್ಷದ ಹಲವು ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ ಮತನಾಡಿದರು.ಚುನಾವಣೆ ಸಂದರ್ಭದಲ್ಲಿ ಜನರು ಸೀರೆ,ಕುಪ್ಪಸ,ಮತ್ತು ಟೀಶರ್ಟ,ಪ್ಯಾಂಟ್ ಗಳ ಆಮಿಷಕ್ಕೆ ಒಳಗಾಗದಿರಿ. ಜನಸಾಮಾನ್ಯರ ಸಂಕಷ್ಟದ ಬದುಕಿಗೆ ನೆರವಾಗುವ ಯೋಜನೆ ಕಾಂಗ್ರೆಸ್ ರೂಪಿಸಿದೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಪರ್ಸಂಟ್ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದು ನುಡಿದರು.ಢವಳಗಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಗಳಾದ ಕೆಇಬಿ, ಪಶು ವೈಧ್ಯಾಲಯ, ಕಸ್ತೂರಭಾ ಗಾಂಧಿ ಶಾಲೆ, ಬಾಲಕರ ವಸತಿ ನಿಲಯ, ಕೃಷಿ ಮಾರುಕಟ್ಟೆ, ರೈತ ಸಂಪರ್ಕ ಕೇಂದ್ರ,ಇನ್ನೂ ಅನೇಕ ಸಾರ್ವಜನಿಕ ಯೋಜನೆಗಳು ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ಆಗಿದೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷೆ ಪ್ರತಿಭಾ ಅಂಗಡಗೇರಿ ಮಾತನಾಡಿದರು.ಬಾಪೂಗೌಡ ಪಾಟೀಲ(ಅಂಗಡಗೇರಿ), ವಿನೋಧಗೌಡ ಕೊಣ್ಣುರ, ಅಣ್ಣಪ್ಪಗೌಡ ಪಾಟೀಲ, ಶಿವನಗೌಡ ಕೊಣ್ಣುರ, ಮುರಿಗೆಪ್ಪಗೌಡ ಕೊಣ್ಣುರ…
ವಿಜಯಪುರ: ಒಳ ಮೀಸಲಾತಿ ವರ್ಗೀಕರಣದಲ್ಲಿ ಆರ್ಥಿಕವಾಗಿ ಹಿಂದುಳಿದ ಡೋಹರ ಕಕ್ಕಯ್ಯ ಸಮಾಜವನ್ನು ಅವೈಜ್ಞಾನಿಕವಾಗಿ ೪ನೇ ಗುಂಡಿನಲ್ಲಿರಿಸಲಾಗಿದೆ. ಇದು ಸಮುದಾಯಕ್ಕಾದ ದೊಡ್ಡ ಅನ್ಯಾಯ ಹಾಗೂ ಮುಂದಿನ ಪೀಳಿಗೆಯ ಭವಿಷ್ಯ ಸಂಪೂರ್ಣ ಹಾಳಾಗುತ್ತದೆ ಎಂದು ವಿಜಯಪುರ ನಗರ ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ಜಯಪ್ರಕಾಶ ಮಸಾಜಿ ಪೋಳ ಅವರು ಕರ್ನಾಟಕ ರಾಜ್ಯ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.೧೨ನೇ ಶತಮಾನದಲ್ಲಿ ಚರ್ಮಗಾರಿಕೆ ವೃತ್ತಿ ಮಾಡುತ್ತಿರುವ ಸಮಾಜ ನಮ್ಮದು. ಹಾಗೂ ಕರ್ನಾಟಕದಾದ್ಯಂತ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಚರ್ಮ ಹದ ಮಾಡುವದು ನಮ್ಮ ಕುಲ ಕಸಬು ಆಗಿರುತ್ತದೆ. ಡೋರ ಸಮುದಾಯವನ್ನು ಅಲೆಮಾರಿ ಜನಾಂಗವೆAದು ಅರ್ಥೈಹಿಸಿಕೊಂಡು ೪ನೇ ಗುಂಪಿನ ೮೯ ಜಾತಿಗಳೊಂದಿಗೆ ಸೇರಿಸಿ ಕೇವಲ ಶೇ. ೧ರ ಮೀಸಲಾತಿ ನಿಗದಿಪಡಿಸಿರುವದು. ನಮ್ಮ ಡೋಹರ ಜನಾಂಗಕ್ಕೆ ಅನ್ಯಾಯ ಮಾಡಿದಂತಾಗಿದೆ.ರಾಜ್ಯ ಸರಕಾರ ಕೂಡಲೇ ನಮ್ಮ ಸಮುದಾಯದ ಸ್ಥಿತಿ ಗತಿಗಳನ್ನು ಇನ್ನೊಮ್ಮೆ ಪರಿಶೀಲಿಸಿ ಹಾಗೂ ೧ನೇ ಗುಂಪಿನಲ್ಲಿರಿಸಿ ನಮ್ಮ ಶೇ.೬ರ ಮೀಸಲಾತಿ ಒದಗಿಸಬೇಕು. ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ಉಗ್ರ…
ವಿಜಯಪುರ: ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ನಿಶ್ಚಿತವಾಗಿದ್ದು, ಬೇರೆ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಹಾಗೂ ಟಿಕೆಟ್ ತಪ್ಪುತ್ತದೆ ಎಂಬ ಹೇಳಿಕೆಗಳು ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ನಗರ ಯುವ ಮೋರ್ಚಾ ಮಾಜಿ ಅಧ್ಯಕ್ಷ ರಾಘವ್ ಅಣ್ಣಿಗೇರಿ ತಿಳಿಸಿದ್ದಾರೆ. ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರದ ಸಮಗ್ರ ಅಭಿವೃದ್ಧಿಯಾಗಿದ್ದು, ಜನಪ್ರಿಯತೆಯನ್ನು ಹೊಂದಿರುವ ಬಸನಗೌಡ ಪಾಟೀಲ ಯತ್ನಾಳ ಅವರು, ಹಿಂದುತ್ವವಾದಿಗಳಾಗಿದ್ದು, ನಗರದ ಅಭಿವೃದ್ಧಿಯಿಂದಲೇ ಜನಮನದಲ್ಲಿದ್ದಾರೆ ಎಂಬುವುದು, ಪಕ್ಷದ ರಾಜ್ಯ ಘಟಕ ಹಾಗೂ ರಾಷ್ಟç ಘಟಕಕ್ಕೆ ಗೊತ್ತು. ಕಾರಣ ಇವರಿಗೆ ಪಕ್ಷದ ಟಿಕೆಟ್ ಸಿಗುವುದು ನಿಶ್ಚಿತ. ಶಾಸಕರಾಗಿ ಅಭಿವೃದ್ಧಿ ಕೆಲಸ ಮಾಡಿದ ಯತ್ನಾಳರು ನಗರ ಮತಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆ. ವಿನಾಕಾರಣ ಗೊಂದಲ ಮೂಡಿಸಲು ಕೆಲವರು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು, ಅದನ್ನು ಯಾರು ಕೂಡ ನಂಬಬಾರದು. ನಗರದ ಜನತೆಯ ಇಚ್ಚೆಯಂತೆ, ಏ.೧೩ ರ ಗುರುವಾರ ಶುಭ ಮುಹೂರ್ತದಲ್ಲಿ ಬೃಹತ್ ಭವ್ಯ ಮೆರವಣಿಗೆ ಮೂಲಕ ತೆರಳಿ, ವಿಜಯಪುರ ನಗರ ಮತಕ್ಷೇತ್ರದ ಬಿಜೆಪಿ…
