ಬಸವನಬಾಗೇವಾಡಿ: ತಾಲೂಕಿನ ವಡವಡಗಿ ಗ್ರಾಮದಲ್ಲಿ ಕಾರ್ಯಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪರವಾನಗಿ ಭೂಮಾಪಕರ ಮೇಲೆ ನಡೆದಿರುವ ಹಲ್ಲೆ ಖಂಡನೀಯ. ಭೂಮಾಪಕರಿಗೆ ಕಾರ್ಯಕ್ಷೇತ್ರದಲ್ಲಿ ಸರ್ಕಾರ ಸೂಕ್ತ ಭದ್ರತೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಭೂಮಾಪಕರು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ತಾಲೂಕಿನ ವಡವಡಗಿ ಗ್ರಾಮದ ಸರ್ವೆ ನಂ.೧೫೬/೧ ರಲ್ಲಿ ತಕರಾರು ಪ್ರಕರಣದ ಅಳತೆ ಕಾರ್ಯಕ್ಕೆ ಪರವಾನಗಿ ಭೂಮಾಪಕರಾದ ಶಿವರಾಜ ಚೌಧರಿ ಅವರು ಹೋದ ಸಂದರ್ಭದಲ್ಲಿ ಏಕಾಏಕಿ ಭೂಮಾಪಕರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಜರುಗಿದೆ. ಈ ಭೂಮಾಪಕರ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.ಭೂಮಾಪಕರು ತಮ್ಮ ಕಾರ್ಯಕ್ಷೇತ್ರಕ್ಕೆ ಹೋದ ಸಂದರ್ಭದಲ್ಲಿ ಯಾವುದೇ ಸೇವಾ ಭದ್ರತೆ ಇಲ್ಲದೇ ಕಾರ್ಯನಿರ್ವಹಿಸುವಂತಾಗಿದೆ. ತಕರಾರು ಪ್ರಕರಣಗಳನ್ನು ಪರವಾನಗಿ ಭೂಮಾಪಕರಿಗೆ ಹಂಚಿಕೆ ಮಾಡಲಾಗುತ್ತಿದೆ. ಕೆಲವು ತಕರಾರು ಪ್ರಕರಣಗಳ ಅಳತೆ ಕಾರ್ಯ ಕಷ್ಟ ಸಾಧ್ಯವಾಗಿದೆ. ಈ ತಕರಾರು ಪ್ರಕರಣಗಳಿಗೆ ಬೇಕಾದ ಬಾಂದ ಜವಾನರು, ಸೇವಾ ಭದ್ರತೆ ಇಲ್ಲದೇ ಕೆಲಸ ನಿರ್ವಹಿಸಲು ಸಮಸ್ಯೆಯಾಗುತ್ತಿದೆ. ಮಹಿಳಾ ಪರವಾನಗಿ ಭೂಮಾಪಕರು ಸಹ ಇಲಾಖೆ ಸೂಚಿಸಿದ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೂ ಯಾವುದೇ ಭದ್ರತೆ ಇರುವುದಿಲ್ಲ. ಇಂತಹ ಘಟನೆಗಳ ಬಗ್ಗೆ ಹಲವಾರು ಸಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಸರ್ಕಾರ ನಮಗೆ ಭದ್ರತೆ ಒದಗಿಸಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಭೂಮಾಪಕರಾದ ವಿಠ್ಠಲ ಅರ್ಥಗಾ, ಸುರೇಶ ಪಾಟೀಲ, ಪರಶುರಾಮ ಅಬ್ಬಿಗರ, ಆಕಾಶ ಬಾಗೇವಾಡಿ, ಅರುಣ ವಾಲಿ, ಮಹೇಶ ಪಟ್ಟಣಶೆಟ್ಟಿ, ವಿರೇಶ ಮುದ್ದೇಬಿಹಾಳಮಠ, ಶಂಕರ ತಿಪ್ಪಣ್ಣವರ, ಶ್ರೀಕಾಂತ ಪಾಟೀಲ, ನಿಂಗನಗೌಡ ಸುಂಬಡದ, ಮಲ್ಲಿಕಾರ್ಜುನ ಮುದ್ದರಕಿ, ಸದಾನಂದ ಎಸ್.ಎಚ್. ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

