ಕೊಲ್ಹಾರ: ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳು ಅಧ್ಯಾತ್ಮದ ಒಲುವಿನ ಜೊತೆಗೆ ಜ್ಞಾನದ ಬುತ್ತಿಯನ್ನು ನಾಡಿನ ದೇಶದ ಮತ್ತು ವಿದೇಶದಲ್ಲಿರುವ ಪ್ರಜೆಗಳಿಗೆ ಉಣಬಡಿಸಿದ ಆಧುನಿಕ ಜಗದ ಸಂತರಾಗಿದ್ದರು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
೨೦೨೪ರ ಜನವರಿ ತಿಂಗಳ ೧ & ೨ ತಾರೀಖಿನಂದು ಶ್ರೀಗಳು ಲಿಂಗೈಕ್ಯರಾದ ಪ್ರಯುಕ್ತ ನಡೆಯುತ್ತಿರುವ ಗುರು ನುಡಿ ನಮನ ಕಾರ್ಯಕ್ರಮದ ಅಂಗವಾಗಿ ಕೊಲ್ಹಾರ ರೈತ ಭಾಂದವರು ೫ ಕ್ವಿಂಟಾಲ್ ಬುಂದೆ ಅನ್ನಪ್ರಸಾದ ವ್ಯವಸ್ಥೆಯನ್ನು ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಕಳಿಸಿಕೊಡುವ ಕಾರ್ಯಕ್ರಮಕ್ಕೆ ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಮುಂದೆ ಚಾಲನೆ ನೀಡಿ ವರದಿಗಾರರೊಂದಿಗೆ ಅವರು ಮಾತನಾಡಿದರು.
ಶ್ರೀಗಳ ನುಡಿನಮನ ಕಾರ್ಯಕ್ರಮವು ರಾಜ್ಯಾದ್ಯಂತ ಆಚರಣೆಯಾಗುವದರ ಜೊತೆಗೆ ಇಂದಿನ ಯುಗದ ಜನರಿಗೆ ಅವರು ಹೇಳಿರುವ ಪ್ರವಚನಗಳ ಜ್ಞಾನಗಂಗೆಯ ವಿಡಿಯೋ ದ್ವನಿಸುರುಳಿಗಳನ್ನು ಪ್ರತಿಯೊಬ್ಬರು ಆಲಿಸುವಂತಾಗಲು ಪಠ್ಯಪುಸ್ತಕಗಳಲ್ಲಿಯೂ ಕೂಡ ಸಿದ್ದೇಶ್ವರ ಮಹಾಸ್ವಾಮಿಗಳು ನಡೆದು ಬಂದ ಜೀವನ ಚರಿತ್ರೆ ಪಾಠ ಬೋಧನೆಯಾಗಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ಬೆಳ್ಳುಬ್ಬಿಯವರು ಹೇಳಿದರು.
ಅರಮನೆಯಂತಹ ಮನೆಗೆ ಆಸೆ ಪಡದೇ ದುಡ್ಡಿನ ವ್ಯಾಮೋಹದಿಂದ ದೂರ ಸರಿದು ಆಸೆಯೆಂಬ ಅಭಿಲಾಷೆಯನ್ನು ವ್ಯಕ್ತಪಡಿಸದೇ ತಮ್ಮದೇ ಆದ ತತ್ವವನ್ನು ರೂಡಿಸಿಕೊಂಡು ಸಮಾಜದಲ್ಲಿ ಮಾನವರು ಯಾವ ರೀತಿ ಬದುಕಬೇಕೆಂಬ ಜೀವನ ಪಾಠವನ್ನು ತಾವುಗಳು ಆಚರಿಸಿ ಜನರು ಇದೇ ರೀತಿ ಬದುಕಬೇಕು ಎಂದು ತೋರಿಸಿದ ಮಹಾನ್ ತಪಸ್ಸಿನ ಸಂತ ಶ್ರೇಷ್ಠರು ಸಿದ್ದೇಶ್ವರ ಶ್ರೀಗಳು ಎಂದು ಹೇಳಿದರು.
ಈ ವೇಳೆ ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು, ಹಿರೇಮಠದ ಮುರುಘೇಂಧ್ರ ಮಹಾಸ್ವಾಮಿಗಳು, ಈರಯ್ಯ ಮಠಪತಿ, ಪಟ್ಟಣದ ರೈತ ಬಾಂಧವರು, ಸಮಸ್ತ ಜನತೆ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
ಸಿದ್ದೇಶ್ವರ ಶ್ರೀ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸಿ :ಬೆಳ್ಳುಬ್ಬಿ
Related Posts
Add A Comment

