Author: editor.udayarashmi@gmail.com

ದೇವರಹಿಪ್ಪರಗಿ: ಮಕ್ಕಳು, ಯುವಜನತೆ ಹಾಗೂ ವಿದ್ಯಾರ್ಥಿಗಳಲ್ಲಿ ಜೀವಜಲದ ಮಹತ್ವ ತಿಳಿಸಿ, ಮಿತವ್ಯಯದ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ್ ರೇಣುಕ ವೀರಸೋಮೇಶ್ವರ ಶ್ರೀಗಳು ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದ ಸೋಮೇಶ್ವರ ಪ್ರೌಢಶಾಲೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.ಇಂದು ಭೂಮಿಯ ಬಹುತೇಕ ದೇಶಗಳಲ್ಲಿ ಶುದ್ಧ ನೀರಿನ ಅಭಾವ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ಗುರುತರ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಆದ್ದರಿಂದ ನಾವೆಲ್ಲರೂ ನೀರನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡಿಕೊಳ್ಳೋಣ ಎಂದರು.ಯಾಳವಾರ ಮಠದ ಕೇದಾರಲಿಂಗ ದೇವರು. ಕನ್ನೂರು ಮಠದ ಸೋಮನಾಥ ಶಿವಾಚಾರ್ಯರು. ಸೋಮೇಶ್ವರ ವಿದ್ಯಾವರ್ಧಕÀ ಸಂಘದ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Read More

ಆಲಮಟ್ಟಿ: ಇಲ್ಲಿನ ಕೃಷ್ಣಾ ಸೇತುವೆ ಬಳಿ ಆಕಸ್ಮಿಕ ಬೆಂಕಿ ತಗುಲಿ ಅಪಾರಹಾನಿ ಸಂಭವಿಸಿದ ಘಟನೆ ಬುಧವಾರ ಜರುಗಿದೆ.ಇಂದು ಸಾಯಂಕಾಲ ಹತ್ತಿದ ಬೆಂಕಿಗೆ ನೂತನವಾಗಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಹಳಿ ಡಬ್ಲಿಂಗ್ ಕಾಮಗಾರಿಗೆ ತಂದಿರಿಸಿದ ಸಲಕರಣೆಗಳು ಭಸ್ಮವಾಗಿವೆ.ಆಕಸ್ಮಿಕವಾಗಿ ತಗುಲಿದ ಬೆಂಕಿಯ ಕೆನ್ನಾಲಿಗೆಯು ಅರಳದಿನ್ನಿಯ ಸಂಗಯ್ಯ.ವೀರಭದ್ರಯ್ಯ.ಹಿರೇಮಠ ಅವರಿಗೆ ಸೇರಿದ 3ಎಕರೆ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ 4ತಿಂಗಳ ಬೆಳೆ ಸಂಪೂರ್ಣ ಸುಟ್ಟು ಹೋಗಿದೆ.ಬೆಂಕಿ ನಂದಿಸಲು ಬಸವನಬಾಗೇವಾಡಿ ಅಗ್ನಿಶಾಮಕಠಾಣೆಯ ವಾಹನವು ಸಕಾಲಕ್ಕೆ ಆಗಮಿಸಿ ಪಕ್ಕದಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್, ಪಾಟೀಲರ ಕಬ್ಬಿನ ಬೆಳೆ, ಕನಕಿ ಬಣವೆ ಸೇರಿದಂತೆ ಇನ್ನುಳಿದಂತೆ ಗುಡಿಸಲು ಹೀಗೆ ಬೆಂಕಿಗಾಹುತಿಯಾಗುತ್ತಿದ್ದ ಅಪಾರ ಆಸ್ತಿಯನ್ನು ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಭೀಮಾಶಂಕರ ಮಾದರ ನೇತೃತ್ವದಲ್ಲಿ ಕೆ.ಎಲ್.ಲಮಾಣಿ, ಮಾಂತೇಶ ಮಮದಾಪುರ, ನಾಗಪ್ಪ ಉಂಡಿ, ಶ್ರೀಶೈಲ ಮುಕಾರ್ತಿಹಾಳ ಅವರು ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಲು ಯಶಸ್ವಿಯಾದರು. 

Read More

ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಕಾಲೇಜಿನ ವಿದ್ಯಾರ್ಥಿಗಳು ವಿನೂತನವಾಗಿ ಪೋಷಕರಿಗೆ ಪತ್ರ ಬರೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.ಪಟ್ಟಣದ ತಾಲೂಕು ಸ್ವೀಪ್ ಸಮಿತಿ ಹಾಗೂ ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ ಮತದಾನ ಜಾಗ್ರತಿ ವಿನೂತನವಾಗಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲಕರಿಗೆ ಮತದಾನದ ಮಹತ್ವ ತಿಳಿಸಲು ಮತ್ತು ಕಡ್ಡಾಯವಾಗಿ ಮತದಾನ ಮಾಡುವಂತೆ ಪೋಷಕರಿಗೆ ಪತ್ರ ಬರೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.ಪ್ರಾಚಾರ್ಯ ಡಾ ಎಸ್ ಬಿ ರಾಠೋಡ ಮಾತನಾಡಿ, ಮತದಾನ ಸಂವಿಧಾನ ನೀಡಿರುವ ಹಕ್ಕು ಮತ್ತು ವರ, ಎಲ್ಲರೂ ಮೇ 10 ರಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು.ತಾ.ಪಂ. ಯೋಜನಾಧಿಕಾರಿ ಶಿವದತ್ತ ಕೊಟ್ಟಲಗಿ ಮಾತನಾಡಿ, ಏ. 11 ರ ವರೆಗೆ ಚುನಾವಣೆ ಆಯೋಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದವರ ಹೆಸರು ಸೇರಿಸಲು ಅವಕಾಶ ನೀಡಿದೆ, ಎಲ್ಲರೂ ಹೆಸರು ನೋಂದಾ ಯಿಸಬೇಕೆಂದು ಹೇಳಿದ ಅವರು, ವಿದ್ಯಾರ್ಥಿಗಳು ಅತಿಹೆಚ್ಚು ಮತದಾನಮಾಡಲು…

Read More

ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರ ಬಡಾವಣೆಯ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ಸರಸ್ವತಿ ಬಾಪುಗೌಡ ಪೀರಾಪೂರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್‌ನ್ನು ಸೇರ್ಪಡೆಗೊಂಡರು.ಈ ವೇಳೆ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಹಿರಿಯ ಮುಖಂಡ ಎಂ.ಬಿ.ನಾವದಗಿ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ಸುರೇಶಗೌಡ ಪಾಟೀಲ, ರುದ್ರುಗೌಡ ಅಂಗಡಗೇರಿ, ಸಂಗನಗೌಡ ಬಿರಾದಾರ, ಸೇರಿದಂತೆ ಹಲವರು ಇದ್ದರು.

Read More

ಸುರಗಂಗೆ ಸುರಿದ್ಹಂಗೆಗೆ ನನ್ನವಳ ನಗುವು|ಕೋಲ್ಮಿಂಚು ಹೊಳೆದಂಗೆ ಬಾನಗಲವೂ|| ಗೋಧೂಳಿ ಸಮಯದಾ ಕೆಂಧೂಳಿನಾ ಕೆಂಪು|ಮೊಗವೆತ್ತಿ ತನ್ಮಯದಿ ನಾ ರಮಿಸಲು||ಕಂಪಿಸುವ ಅಧರಗಳು ಬಿರಿದ ಕುಸುಮದ ದಳವು|ಭೂಮಿ ತೂಕದ ಹೆಣ್ಣು ಪಾರಿಜಾತೆ||||ಸುರಗಂಗೆ|| ತಿದ್ದಿ ತೀಡಿಹ ಹುಬ್ಬು ಬಣ್ಣಿಸಲಿ ನಾನೆಂತು|ಮನ್ಮಥನು ಹಿಡಿದಿರುವ ಇಂದ್ರಚಾಪ||ವೈದೇಹಿ ಗುಣದವಳ ವಾರಿಧಿಯ ಮನದವಳ|ಕೈಹಿಡಿದ ನನಗಿನ್ನು ಇಲ್ಲ ತಾಪ||||ಸುರಗಂಗೆ|| ಕರುವ ಕೊರಳಿನ ಗೆಜ್ಜೆ ಅವಳ ಕಾಲಿನ ಗೆಜ್ಜೆ|ನನ್ನೆದೆಯು ಮುದಗೊಂಡು ಘಲ್ಲೆನುವುದು||ಮನವು ಒಲವಿನ ಇಳೆ ಕೈತುಂಬ ಹಸಿರು ಬಳೆ |ಸೋತ ಬದುಕಲಿ ಎದ್ದು ಗೆಲ್ಲೆನುವುದು||||ಸುರಗಂಗೆ||

Read More

“ಉದ್ಯೋಗo ಪುರುಷ ಲಕ್ಷಣಂ” ಎಂಬ ಮಾತು ಇತ್ತು.ಉದ್ಯೋಗ ಅನ್ನುವುದು ಪುರುಷರಿಗಾಗಿ ಅನ್ನುವ ಒಂದು ಕಾಲವಿತ್ತು. “ಗೃಹಿಣಿ ಗೃಹಮುಚ್ಯತೆ” ಎಂದು ಹೆಣ್ಣು ಮನೆ ಒಳಗೆ , ಪುರುಷರು ಹೊರಗೆ ದುಡಿದು ತರೋದು,ಹೆಣ್ಣು ಅಡುಗೆ ಮನೆಗೆ ಸೀಮಿತವಾಗಿ, ಮಕ್ಕಳನ್ನು ಹೆರುವ ಯಂತ್ರವಾಗಿ, ಅವರನ್ನು ಸಾಕುವುದರಲ್ಲೆ ಜೀವನ ಕಳೆದು ಹೋಗುತ್ತಾ ಇತ್ತು. ಆದರೆ, ಆಗಿನ ಕಾಲದಲ್ಲಿ, ಕೂಡ, ರೈತ ಮಹಿಳೆಯರು, ಹೊಲದಲ್ಲಿ ದುಡಿಯುವುದು, ಮನೆ ಗೆಲಸಕ್ಕೆ ಹೋಗುವುದು ಕೂಡ ಇತ್ತು. ಕಾರಣ ಆರ್ಥಿಕವಾಗಿ ಹಿಂದುಳಿತ. ಆಗಲೂ, ಇಬ್ಬರೂ , ದುಡಿಯುತ್ತಾ ಇದ್ದರು. ಸಂಸಾರದ ನೊಗ ಹೊರಲು. ಜೊತೆಗೆ, ಎಷ್ಟೋ ಹೆಣ್ಣುಮಕ್ಕಳು, ಕೂಡ, ಗಂಡನನ್ನು ಕಳೆದುಕೊಂಡವರು, ಅಡುಗೆ ಕೆಲಸಕ್ಕೆ ಹೋಗುವುದು, ಹಪ್ಪಳ ಸಂಡಿಗೆ,ಉಪ್ಪಿನಕಾಯಿ, ಪುಡಿಗಳನ್ನು, ಮನೆಯಲ್ಲೇ ಮಾಡಿ, ಮಾರಾಟ ಮಾಡುತ್ತಾ ಸಂಸಾರ ಸಾಗಿಸುತ್ತ ಇದ್ದರು. ಆಗೆಲ್ಲ ಎರಡನೇ ಮದುವೆಗೆ ಅವಕಾಶ ಕೂಡ ಇರಲಿಲ್ಲ. ಅಪ್ಪ ಅಮ್ಮ ಎರಡು ಆಗಿ ಮಕ್ಕಳನ್ನು ಸಾಕಿ ಬೆಳೆಸಿದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇದೆ.ಆಗಲೂ ಕೆಲವು ಮನೆಗಳಲ್ಲಿ ಹೆಣ್ಣು ಮಗುವನ್ನು ಓದಿಸಿ…

Read More

ಮಹಾನಗರ ಪಾಲಿಕೆ ಮತ್ತು ವಿಡಿಎ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ ವಿಜಯಪುರ: ಮಹಾನಗರ ಪಾಲಿಕೆ ಮತ್ತು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತರಿಗೆ ದೂರು ನೀಡಿದ್ದು ಈಗಾಗಲೇ ಸಂಬAಧಿಸಿದ ಅಧಿಕಾರಿಗಳಿಗೆ ವಿಚಾರಣೆಗಾಗಿ ಏ.೨೭ರಂದು ಹಾಜರಾಗಲು ನೋಟೀಸ್ ಬಂದಿವೆ ಎಂದು ನಗರದ ಆರ್‌ಟಿಐ ಕಾರ್ಯಕರ್ತ ಸನ್ನಿ ಊರ್ಪ್ ತ್ರಿಲೋಚನ ಗವಿಮಠ ತಿಳಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ವಿಷಯ ತಿಳಿಸಿದ ಅವರು ದೂರಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಿದರು.ವಿಜಯಪುರ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಲೆಕ್ಕ ತನಿಖಾ ವರದಿಯಲ್ಲಿ ಅನೇಕ ನ್ಯೂನ್ಯತೆಗಳಿವೆ. ಪಾಲಿಕೆ ಆರಂಭಗೊ0ಡಾಗಿನಿ0ದ ಈವರೆಗೂ ರೂ. 97ಕೋಟಿ ಆಕ್ಷೇಪಣಾ ಮೊತ್ತದಲ್ಲಿ ಅವ್ಯವಹಾರ ಆಗಿರುವುದು ಲೆಕ್ಕ ಪರಿಶೋಧನಾ ವರದಿಯಲ್ಲಿ ಕಂಡು ಬಂದಿದೆ. ಅಲ್ಲದೇ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ರೂ.16ಕೋಟಿ ವಸೂಲಾತಿ ಮೊತ್ತದಲ್ಲೂ ಅವ್ಯವಹಾರವಾಗಿದೆ. ಹೆಚ್ಚುವರಿ ಹುದ್ದೆಗಳ ನೇಮಕ ಹಾಗೂ ಒಂದೇ ತೆರನಾದ ಕಾಮಗಾರಿಗೆ ಟೆಂಡರ್ ಕರೆಯುವ ಮೂಲಕ ಅಧಿಕಾರಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅವ್ಯವಹಾರವೆಸಗಿದ್ದಾರೆ. ಸರಕಾರಿ ಬಿಡ್ ಬಿಟ್ಟು ರೂ.೩೨ಲಕ್ಷ ಬೆಲೆಯ…

Read More

ಗುತ್ತಿಗೆದಾರನಿಂದ ಲಂಚ ಪಡೆವಾಗ ಲಾಕ್ | ಮನೆ ಮೇಲೂ ದಾಳಿ | ಲಕ್ಷಾಂತರ ಮೌಲ್ಯದ ಚಿನ್ನಾಭರಣ ರೂ.30 ಲಕ್ಷ ನಗದು ಪತ್ತೆ ಮುದ್ದೇಬಿಹಾಳ: ಗುತ್ತಿಗೆದಾರರೊಬ್ಬರು ದೂರು ನೀಡಿದ್ದ ಹಿನ್ನೆಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಕುಡಿವ ನೀರಿನ ಕಾಮಗಾರಿಗೆ ಸಂಬAಧಿಸಿದAತೆ ಬಿಲ್ ಬರೆಯಲು ೩೦ ಸಾವಿರ ರೂ.ಲಂಚ ಪಡೆದುಕೊಳ್ಳುತ್ತಿರುವಾಗ ಮಂಗಳವಾರ ಆರ್.ಡಬ್ಲೂ.ಎಸ್ ಇಲಾಖೆ ಎಇಇ ಜೆ.ಪಿ.ಶೆಟ್ಟಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.ಲೋಕಾಯುಕ್ತ ಅಧಿಕಾರಿಗಳು ಅವರ ಮನೆಯ ಮೇಲೂ ದಾಳಿ ಮಾಡಿದ್ದು ಲಕ್ಷಾಂತರ ರೂ.ಹಣ ಮತ್ತು ಚಿನ್ನಾಭರಣ, ಮಹತ್ವದ ಬ್ಯಾಂಕ್ ಖಾತೆಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ತಾಳಿಕೋಟಿ ತಾಲೂಕಿನ ಖ್ಯಾತನಡೋಣಿ ಹಾಗೂ ಬೂದಿಹಾಳ ಗ್ರಾಮದಲ್ಲಿ ಕುಡಿವ ನೀರಿನ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರರೊಬ್ಬರು ೧೬ ಲಕ್ಷ ರೂ. ಬಿಲ್ ಪಾವತಿಸುವಂತೆ ಜೆ.ಪಿ.ಶೆಟ್ಟಿ ಅವರನ್ನು ಕೋರಿದ್ದರು. ಇದಕ್ಕೆ ಶೇ.೩ ರಷ್ಟು ಕಮೀಷನ್ ಕೊಡಬೇಕು ಎಂಬ ಬೇಡಿಕೆಯನ್ನು ಅಧಿಕಾರಿ ಶೆಟ್ಟಿ ಇರಿಸಿದ್ದರು ಎನ್ನಲಾಗಿದೆ. ಅದರಂತೆ ೬೦ ಸಾವಿರ ರೂ.ಪೈಕಿ ೩೦…

Read More

ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಯುವಕರು ದೇವರಹಿಪ್ಪರಗಿ: ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬಾಂಧವರೆಲ್ಲ ಸೇರಿ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ಭರ್ಜರಿ ಆಚರಣೆ ಮಾಡಿ ಕೋಮು ಸೌಹಾರ್ದತೆ ಮೆರೆದರು.ಜಾತ್ರೆಗೆ ಬಂದ ಹಿಂದೂ ಭಕ್ತಾಧಿಗಳಿಗೆಲ್ಲ ಮುಸ್ಲಿಂ ಯುವಕರು ಹೆಗಲ ಮೇಲೆ ಕೇಸರಿ ಶಾಲು ಧರಿಸಿ, ತಲೆಯ ಮೇಲೆ ಟೋಪಿ ಹಾಕಿ ತಂಪು ಪಾನಿಯ, ಕುಡಿಯುವ ನೀರು, ಶರಬತ್ ನೀಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿತ್ತು.ಭಾವೈಕ್ಯತೆಗೆ ಸಾಕ್ಷಿಯಾದ ಮುಳಸಾವಳಗಿ:ಸುಮಾರು ನೂರಾರು ವರ್ಷಗಳಿಂದ ಭಾವೈಕ್ಯತೆಗೆ ಹೆಸರಾಗಿರುವ ಮುಳಸಾವಳಗಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಎಂಬ ಬೇಧ ಭಾವ ಮಾಡದೆ ಎಲ್ಲರೂ ಸೇರಿ ಮಲ್ಲಿಕಾರ್ಜುನ ಜಾತ್ರೆ ಆಚರಿಸುತ್ತಿರುವುದು ಸಾಮರಸ್ಯದ ಸಂಕೇತವಾಗಿದೆ. ಇಡೀ ರಾಜ್ಯದಲ್ಲಿ ಧರ್ಮ ಸಂಘರ್ಷ ಏರ್ಪಟ್ಟಿದ್ದು, ಇಲ್ಲಿ ಮಾತ್ರ ಪ್ರತಿಯೊಂದು ಕುಟುಂಬವೂ ಭಾವೈಕ್ಯತೆಯಿಂದ ಬದುಕುತ್ತಿರುವುದು ಮಾದರಿಯಾಗಿದೆ. ಅಪರೂಪ ಎಂಬAತೆ ಎಲ್ಲ ಸಮುದಾಯದ ಹಿರಿಯರು, ಯುವಕರು ಸೇರಿಕೊಂಡು ಜಾತ್ರೆ ಆಚರಿಸುತ್ತಿರುವುದು ಇಡೀ ರಾಜ್ಯಕ್ಕೆ ಸಾಮರಸ್ಯದ ಸಂದೇಶ ಸಾರಿದಂತಿದೆ.ಜಾತ್ರೆಯ ನಿಮಿತ್ಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಶೈಲ ಹಾಗೂ ವಿವಿಧ ಕಡೆಯಿಂದ…

Read More