ಬ್ರಹ್ಮದೇವನಮಡು: ಪ್ರತಿಯೊಬ್ಬರೂ ಧಮ೯ದ ಹಾದಿಯಲ್ಲಿ ನಡೆದಾಗ ಮಾತ್ರ ಸನ್ಮಾಗ೯ ಸಿಗಲಿದೆ. ನಂಬಿಕೆ,ಭಕ್ತಿ,ದಯ,ಸಹನೆಯಿಂದ ಗುರು ಹಿರಿಯರನ್ನು ಗೌರವಿಸುತ್ತ ಜೀವನ ನಡೆಸಬೇಕು ಎಂದು ಶ್ರೀಮಠದ ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ಕ್ರತ ಡಾ.ವಿಶ್ವರಾಧ್ಶ ಶಿವಾಚಾಯ೯ರು ಹೇಳಿದರು.
ಸಮೀಪದ ಸುಕ್ಷೇತ್ರ ಮಾಗಣಗೇರಿ ಬೃಹನ್ಮಠದ
ಗುರು ಚನ್ನವೃಷಬೇಂದ್ರ ಶಿವಯೋಗಿಗಳ ಮತ್ತು ಕೆಂಭಾವಿ ಗುರು ಅಯ್ಯಪ್ಪಯ್ಯ ಶಿವಾಚಾರ್ಯರ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಮಹಾಪುರಾಣದ ತೊಟ್ಟಿಲೋತ್ಸವ ಕಾಯ೯ಕ್ರಮದಲ್ಲಿ ಅವರು ಆಶೀವ೯ಚನ ನೀಡಿದರು.
ಸತ್ಶ, ಶುದ್ದ ಕಾಯಕದೊಂದಿಗೆ ಧಮ೯ದಿಂದ ನಡೆದರೆ ಜೀವನ ಸಾಥ೯ಕವಾಗುತ್ತದೆ ಎಂದರು.
ಈ ವೇಳೆ ನಾಗೇಶ ಧನಶೆಟ್ಟಿ ,ಪತ್ರಕತ೯ ಮಲ್ಲು ಕೆಂಭಾವಿ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಅರಳಹಳ್ಳಿಯ ಪ್ರವಚನಕಾರ ಬಸವರಾಜ ಶಾಸ್ತ್ರಿಗಳು ಪ್ರವಚನ ನೀಡಿದರು. ಗದುಗಿನ ಮಲ್ಲಿಕಾಜು೯ನ ನರಸಲಗಿ ಸಂಗೀತ ಸೇವೆಯೊಂದಿಗೆ ಅಕಾಶ ಹಿರೇಮಠ ತಬಲ್ ಸಾತ್ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

