Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೊಲ್ಹಾರ: 2023 ವಿಧಾನಸಭಾ ಚುನಾವಣೆ ಹಿನ್ನೆಲೆ ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಎಸ್.ಕೆ.ಬೆಳ್ಳುಬ್ಬಿಯವರ ನಾಯಕತ್ವ ಹಾಗೂ ಬಿಜೆಪಿ ಪಕ್ಷದ ತತ್ವಸಿದ್ದಾಂತ ಮೆಚ್ಚಿಕೊಂಡು ಕೊಲ್ಹಾರ ತಾಲ್ಲೂಕಿನ ಕೂಡಗಿ ಗ್ರಾಮದ ಅಪಾರ ಸಂಖ್ಯೆಯ ವಿವಿಧ ಸಮಾಜಗಳ ಗುರುಹಿರಿಯರು ಹಾಗೂ ಯುವಕರು ಬೆಳ್ಳುಬ್ಬಿಯವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಬೆಂಬಲ ಸೂಚಿಸಿದರು. ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿ ಜೈಕಾರ ಹಾಕಿದರು.
ಕಲಕೇರಿ: ಸಮೀಪದ ಆಲಗೂರ ಗ್ರಾಮದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ್ ( ಕುದುರಿ ಸಾಲೋಡಗಿ)ಗ್ರಾಮದ ವಿವಿಧೆಡೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.ನಂತರ ಮಾರುತಿ ದೇವಸ್ಥಾನದಲ್ಲಿ ಸಭೆ ನಡೆಸಿ ಮಾತನಾಡಿದ ರಾಜುಗೌಡ ಪಾಟೀಲ್ ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳು ಬಂಡಾಯದ ಬೇಗುದಿಯಲ್ಲಿ ಒದ್ದಾಡುತ್ತಿವೆ. ಕ್ಷೇತ್ರದಲ್ಲಿ ಜೆಡಿಎಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ಎಷ್ಟೆ ಪ್ರಯತ್ನಿಸಿದರು ಈಬಾರಿ ಜಾತ್ಯತೀತವಾಗಿ ನನಗೆ ಕ್ಷೇತ್ರದ ಜನತೆ ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದೆ ಏ.18ರಂದು ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಜೆಡಿಎಸ್ ಮುಖಂಡ ಸಾಯಬಣ್ಣ ಬಾಗೇವಾಡಿ. ಮುನ್ನಾ ಮಳಖೇಡ, ಮಡು ಸಾಹುಕಾರ್, ಕಾಸಿಂ ನಾಯ್ಕೋಡಿ. ರಮೇಶ್ ಹೆಂಡಿ. ಶರಣು ಧರಿ. ಶಂಕರಗೌಡ ಪಾಟೀಲ. ಕಂಠೆಪ್ಪ ಮು ಜನ್ನಪ್ಪಗೋಳ. ಮಡಿವಾಳಪ್ಪ ಮಾಗಣಗೇರಿ. ಲಕ್ಷ್ಮಣ ವಾಲಿಕಾರ. ಮಲ್ಲಿಕಾರ್ಜುನ ತಮ್ಮಣ್ಣಗೋಳ. ಸಂತೋಷ್ ತಮ್ಮಣ್ಣಗೋಳ. ಕೆಂಚಪ್ಪ ಜನ್ನಪ್ಪಗೋಳ. ರಘುವೀರ್ ವರ್ಧಮಾನ. ಮಹಿಬೂಬ ದಲಾಲ. ಪೀರಮೊಹ್ಮದ…
ವಿಜಯಪುರ: ಲಿಂಗಾಯತರನ್ನು ಬಿಜೆಪಿ ಎಂದೂ ಕಡೆಗಣಿಸಿಲ್ಲ, ಬಿಜೆಪಿ ಲಿಂಗಾಯತ ವಿರೋಧಿ ಎಂದರೆ ಹೇಗೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅವರಿಗೆ ಎಲ್ಲ ರೀತಿಯಿಂದ ಅಧಿಕಾರ ನೀಡಿದೆ. ಮಾನ, ಮರ್ಯಾದೆ, ಸ್ವಾಭಿಮಾನ ಇದ್ದವರು ಕಾಂಗ್ರೆಸ್ಗೆ ಹೋಗುವುದಿಲ್ಲ. ಲಿಂಗಾಯತ ಮತಗಳಿಂದ ಶಾಸಕರಾಗಿದ್ದೀರಿ, ಮುಖ್ಯಮಂತ್ರಿಯಾಗಿದ್ದೀರಿ, ಎಲ್ಲ ಅಧಿಕಾರವನ್ನು ಪಕ್ಷ ಕೊಟ್ಟಿದೆ. ಆದರೆ ಸದ್ಯ ಬಿಜೆಪಿ ಲಿಂಗಾಯತ ವಿರೋಧಿ ಎನ್ನುವುದು ಸರಿಯಲ್ಲ. ನನ್ನನ್ನೂ ಉಚ್ಚಾಟನೆ ಮಾಡಲಾಗಿತ್ತು. ನಾನು ಯಾವತ್ತೂ ಪಕ್ಷವನ್ನು ವಿರೋಧಿಸಿ ಮಾತನಾಡಲಿಲ್ಲ. ಸದ್ಯ ಕೆಲವೊಂದು ವಿಷಯ ಬಹಿರಂಗ ಪಡಿಸುತ್ತೇನೆ ಎಂದು ಶೆಟ್ಟರ್ ಹೇಳಿಕೆ ನೀಡುವುದು ಬ್ಲಾö್ಯಕ್ ಮೇಲೆ ಅಷ್ಟೇ ಎಂದರು.ಕೆ.ಎಸ್. ಈಶ್ವರಪ್ಪ ಅವರಿಗೂ ಟಕೆಟ್ ನಿರಾಕರಣೆ ಮಾಡಲಾಗಿದೆ. ಆದರೆ ಅವರು ಪಕ್ಷ ಸಂಘಟನೆ ಮಾಡಲು ಮುಂದಾಗಿಲ್ಲವೇ ? ಈಶ್ವರಪ್ಪ ಅವರನ್ನು ಅನುಕರಣೆ ಮಾಡಬೇಕು ಎಂದರು.ಕೋಮುವಾದಿ, ವಿದೇಶಿ ಹಣವನ್ನು ಬಳಕೆ ಮಾಡಿ ಮುಸ್ಲಿಂ ರಾಷ್ಟçವನ್ನಾಗಿಸುವ ಗುರಿ ಹೊಂದಿರುವ ಎಸ್ಡಿಪಿಐ…
ಆಲಮಟ್ಟಿ: ದೇವರಹಿಪ್ಪರಗಿ ಮತಕ್ಷೇತ್ರದಿಂದ ವಿಧಾನಸಭೆಗೆ ಕೆಜಿಪಿ ಪಕ್ಷದಿಂದ ಸ್ಪರ್ಧಿಸುವುದಾಗಿ ನಿಡಗುಂದಿ ತಾಲ್ಲೂಕಿನ ಇಟಗಿ ಗ್ರಾಮದ ಭೂಕೈಲಾಸ ಮೇಲುಗದ್ದುಗೆ ಹಿರೇಮಠದ ಗುರುಶಾಂತವೀರ ಸ್ವಾಮೀಜಿ ಸ್ಪರ್ಧಿಸುವುದಾಗಿ ಸೋಮವಾರ ತಿಳಿಸಿದರು.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಉದ್ದೇಶದಿಂದ ಸ್ಪರ್ಧಿಸುವುದಾಗಿ ತಿಳಿಸಿದರು. ಬಡ, ದಲಿತ, ಹಿಂದುಳಿದವರ ಏಳಿಗೆಯ ಜತೆ, ರೈತರ ಏಳಿಗೆಗೆ ಇಡೀ ಮತಕ್ಷೇತ್ರವನ್ನು ಸಮಗ್ರ ನೀರಾವರಿ ಮಾಡುವುದಾಗಿಯೂ ಅವರು ಘೋಷಿಸಿದರು. ನನ್ನ ಕನಸು ಎಂದರು. ಸಾಮಾಜಿಕ ಸೇವೆ ಸಲ್ಲಿಸುವ ಉದ್ದೇಶದಿಂದ, ಅಂವಿಕಲರ ಏಳಿಗೆಯ ಜತೆಗೆ ನೌಕರರ ಹಿತವನ್ನು ಕಾಪಾಡುವುದಾಗಿ ತಿಳಿಸಿದರು. ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ಗೊಳಿಸಿ ನೌಕರರ ಬಾಳನ್ನು ಹಸನಾಗಿ ಮಾಡಲು ಪ್ರಯತ್ನಿಸುವೆ ಎಂದರು.ಯಾರೂ ಹಣ, ಹೆಂಡ, ತುಂಡಿನ ಆಸೆಗಾಗಿ ತಮ್ಮ ಮತವನ್ನು ಮಾರಿಕೊಳ್ಳದೇ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರಿಗೆ ಮತ ನೀಡಿ ಎಂದರು.ರಾಜಕೀಯ ಕ್ಷೇತ್ರ ಉಳ್ಳವರ ಪಾಲಾಗದೇ ಅದು ಎಲ್ಲರ ಪಾಲಾಗಬೇಕು ಎಂದರು. ಜೋಳಿಗೆ ಹಾಕಿಕೊಂಡೇ ಪ್ರತಿಯೊಂದು ಗ್ರಾಮದ ಪ್ರತಿ ಮನೆಗೂ ಮತ ಭಿಕ್ಷೆ ಬೇಡುವೆ ಎಂದರು.ಬಿಜೆಪಿ, ಕಾಂಗ್ರೆಸ್…
ವಿಜಯಪುರ: ಕಾಂಗ್ರೆಸ್ ಪಕ್ಷವು ೭೦ ವರ್ಷ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರೂ ದಲಿತರು ಮತ್ತು ಹಿಂದುಳಿದ ವರ್ಗಗಳ ಏಳ್ಗೆಗಾಗಿ ಯಾವುದೇ ಯೋಜನೆಗಳನ್ನು ರೂಪಿಸದೆ ಅವರನ್ನು ಕೇವಲ ಓಟಿಗಾಗಿ ಬಳಸಿಕೊಂಡು ದುರುಪಯೋಗ ಮಾಡಿಕೊಂಡಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ವಕ್ತಾರ ಸುರೇಶ ಬಿರಾದಾರ ಆರೋಪಿಸಿದರು.ಶನಿವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸುವಂತಹ ಸಂವಿಧಾನವನ್ನು ರಚಿಸಿದ ಅಂಬೇಡ್ಕರ ಅವರನ್ನು ಆಗ ಕಾಂಗ್ರೆಸ್ ಪಕ್ಷ ಹೀನಾಯವಾಗಿ ನಡೆಸಿಕೊಂಡಿತು. ಎರಡು ಸಲ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಅಂಬೇಡ್ಕರ ಅವರನ್ನು ಕಾಂಗ್ರೆಸ್ ಪಕ್ಷವು ಕಮ್ಯೂನಿಷ್ಟರ ನೆರವಿನೊಂದಿಗೆ ಸೋಲಿಸಿತು. ಅವರು ತೀರಿಕೊಂಡಾಗ ಅವರ ಅಂತ್ಯಕ್ರಿಯೆ ನೆರವೇರಿಸಲು ಅಂದಿನ ಪ್ರಧಾನಿ ನೆಹರು ಅವರು ಸ್ಥಳ ಒದಗಿಸದೇ ಅನ್ಯಾಯ ಮಾಡಿದರು. ಹೀಗಿರುವಾಗ ಕಾಂಗ್ರೆಸ್ ಪಕ್ಷವು ಈಗ ಅಂಬೇಡ್ಕರ್ ಹೆಸರು ಹೇಳಿ ದಲಿತರ ಮತಯಾಚಿಸುತ್ತಿದೆ. ಕಾರಣ ದಲಿತರು ಯಾವುದೇ ಕಾರಣಕ್ಕೂ ಕಾಂಗೆಸ್ ಪಕ್ಷವನ್ನು ನಂಬದೇ, ಅದನ್ನು ತಿರಸ್ಕರಿಸಿ, ಬಿಜೆಪಿಯನ್ನು ಬೆಂಬಲಿಸಿ ರಾಜ್ಯದಲ್ಲಿ…
ವಿಜಯಪುರ: ನಗರದ ಅಲ್ಲಾಪುರ ಓಣಿಯ ಬಸವ- ಮಲ್ಲಿಕಾರ್ಜುನ ದೇವಸ್ತಾನದ ಮಲ್ಲಯ್ಯನ ಕಂಬಿ ಐದೇಶಿ ಅತ್ಯಂತ ಅದ್ದೂರಿಯಾಗಿ ಜರುಗಿತು.ತಿಂಗಳ ಕಾಲ ಪಾದಯಾತ್ರೆ ಮೂಲಕ ಕಂಬಿ ಹೊತ್ತುಕೊಂಡು ಶ್ರೀಶೈಲಕ್ಕೆ ತೆರಳಿದ್ದ ಸ್ವಾಮೀಜಿಗಳು ಮತ್ತು ಯಾತ್ರಾರ್ಥಿಗಳನ್ನು ಕಳೆದ ಐದು ದಿನಗಳ ಹಿಂದೆ ವಿಜೃಂಭಣೆಯಿAದ ಬರಮಾಡಿಕೊಂಡು ಪ್ರತಿ ದಿನ ಸಾಯಂಕಾಲ ಪೂಜೆ ಪುನಸ್ಕಾರ ಮದಾಲಸಿ ಪ್ರಸಾದವಿತರಣೆ ಮಾಡಲಾಗುತಿತ್ತು. ಪ್ರತಿ ಭಕ್ತರ ಮನೆಯಲ್ಲಿ ಬ್ರಮರಾಂಬ ಸಹಿತ ಮಲ್ಲಿಕಾರ್ಜುನನ ಪೂಜಿಸಿ. ಸ್ವಾಮೀಜಿ ಅವರಿಗೆ ಮುತ್ತೈದೆಯರಿಗೆ ಪೂಜೆ ಬಾಗಿನ ಅರ್ಪಣೆ ಮಾಡಲಾಯಿತು.ಅಲ್ಲಾಪೂರ ಓಣಿಯ ಬಸವ- ಮಲ್ಲಿಕಾರ್ಜುನ ದೇವಸ್ತಾನದ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ. ಸಿದ್ರಾಮಯ್ಯ ರೂಗಿಮಠ. ಕಲ್ಲಯ್ಯ ಸ್ವಾಮೀಜಿ. ರಾಜಶೇಖರ ಮಠ. ನಂದಯ್ಯಾ ಯಾದವಾಡಮಠ, ಶರಣು ಜೋಗುರ. ಪ್ರಭು ಸೊಲ್ಲಾಪುರ. ಸಿದ್ದಪ್ಪ ಅಂಗಡಿ ಮಲ್ಲಪ್ಪ ತೋನಸ್ಯಾಳ. ಈರನಗೌಡ ಪಾಟೀಲ್. ಭೀಮು ಲೋಗಾವಿ. ಚಂದ್ರಶೇಖರ್ ಹುಂಡೆಕಾರ.ಗೊಲ ನಗೌಡ ಬಿರಾದಾರ. ಡಾ.ಆರ್.ಜಿ.ಕಳ್ಳಿ. ನ್ಯಾಯವಾದಿ ದಾನೇಶ ಅವಟಿ ಸೇರಿದಂತೆ ಅನೇಕರಿದ್ದರು.
ವಿಜಯಪುರ : ಇಂದು ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ರಾಕೇಶ ಇಂಗಳಗಿ ಅವರು ವಿಜಯಪುರ ನಗರದ ಚುನಾವಣಾ ಅಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ (ನಾಮಪತ್ರ) ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಯಡಹಳ್ಳಿ, ನಗರ ಘಟಕದ ಅಧ್ಯಕ್ಷ ಹಮೀದ ಇನಾಮದಾರ, ಪ್ರಕಾಶ ಪಾಟೀಲ, ವಾಮನ್ ದೇಶಪಾಂಡೆ ಇನ್ನಿತರರಿದ್ದರು.
ಮುದ್ದೇಬಿಹಾಳ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹಳ ದೊಡ್ಡ ಮಟ್ಟದ ಹಿನ್ನೆಡೆ ಏನೂ ಆಗಿಲ್ಲ. ಪ್ರತೀ ಬೂತ್ ಗೆ ಕೇವಲ ೨೦ ಮತಗಳ ಅಂತರವಾಗಿದ್ದು ಈ ಬಾರಿ ಅತೀ ಹೆಚ್ಚು ಮತಗಳನ್ನು ಕಾಂಗ್ರೇಸ್ ಪಕ್ಷ ಪಡೆಯುವ ವಿಶ್ವಾಸ ಇದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಹೇಳಿದರು.ಬೆಂಗಳೂರಿನ ಡಿ.ಕೆ.ಶಿವಕುಮಾರ ಅವರ ಗೃಹ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಬಿ-ಫಾರಂ ಪಡೆದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ನನ್ನ ಇತಿಹಾಸದಲ್ಲಿಯೇ ಯಾವುದೇ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಇಷ್ಟೊಂದು ಬೆಂಬಲ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಊಹೆಗೂ ಮೀರಿ ಮತಕ್ಷೇತ್ರದ ಜನತೆ ಬೆಂಬಲಿಸುತ್ತಿರುವುದು ನೋಡಿದರೆ ದುರಾಡಳಿತಕ್ಕೆ ಜನತೆ ರೋಸಿ ಹೋಗಿರುವುದು ಕಾಣುತ್ತಿದೆ. ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಬರೀ ಸೋಲಿಸುವದಷ್ಟೇ ಅಲ್ಲದೇ ಹೀನಾಯವಾಗಿ ಸೋಲಿಸಲು ಕಾತುರದಿಂದ ಕಾಯುತ್ತಿದ್ದಾರೆ. ಎಂದರು.
ದೇವರಹಿಪ್ಪರಗಿ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗದವರಿಗೆ ಮನ್ನಣೆ ನೀಡಿ ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಹಿಂದುಳಿದ ವರ್ಗಕ್ಕೆ ಟಿಕೆಟ್ ನೀಡಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹರ್ಷ ವ್ಯಕ್ತ ಪಡಿಸಿದ್ದಾರೆ.ಸಾಮಾಜಿಕ ನ್ಯಾಯದ ಅಡಿಯಲ್ಲಿ ಜಿಲ್ಲೆಗೆ ಒಂದು ಅವಕಾಶ ನೀಡಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಶರಣಪ್ಪಣ್ಣ ಸುಣಗಾರ ಅವರಿಗೆ ಟಿಕೆಟ್ ನೀಡಿರುವುದು ಸಂತಸ ತಂದಿದೆ. ಸಾಮಾಜಿಕ ನ್ಯಾಯದಡಿಯಲ್ಲಿ ಟಿಕೆಟ್ ನೀಡುವಲ್ಲಿ ವರಿಷ್ಠರು ಸಹಕರಿಸಿದ್ದಾರೆ. ನಾನೂ ಸಹ ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಸುಣಗಾರ ಅವರಿಗೆ ಟಿಕೆಟ್ ನೀಡಿದ್ದು, ನನಗೆ ನೀಡಿದಷ್ಟು ಸಂತೋಷವಾಗಿದೆ. ಎಲ್ಲ ಅಭ್ಯರ್ಥಿಗಳು ಬಹಳಷ್ಟು ಶ್ರಮವಹಿಸಿ ಕ್ಷೇತ್ರದ ತುಂಬ ಸಂಚರಿಸಿ ಮತದಾರರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದು ತಿಳಿಸಿದ್ದಾರೆ.
ಕೊಲ್ಹಾರ: ನನ್ನ ಮೇಲೆ ವಿಶ್ವಾಸವಿಟ್ಟು ವರಿಷ್ಠರು ನನಗೆ ಟಿಕೆಟ್ ಘೋಷಣೆ ಮಾಡಿದ್ದು ಇದು ಕೊಲ್ಹಾರ ಪಟ್ಟಣದ ಜನತೆಗೆ ಸಿಕ್ಕ ಅವಕಾಶವಾಗಿದ್ದು ತಮ್ಮೆಲ್ಲರ ಸೇವೆಗಾಗಿ ನನ್ನನ್ನು ಗೆಲ್ಲಿಸಬೇಕೆಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮನವಿ ಮಾಡಿದರು.ಪಟ್ಟಣದ ಅಗಶಿಯ ಹತ್ತಿರ ಭಾರತೀಯ ಜನತಾಪಕ್ಷದ ಕೊಲ್ಹಾರ ತಾಲೂಕು ಕೇಂದ್ರ ಕಛೇರಿಯ ಉದ್ಘಾಟನೆ ಹಾಗೂ ಕಾರ್ಯಕರ್ತರ, ಮತದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಮತಕ್ಷೇತ್ರದ ಜನರ ಸೇವೆಗಾಗಿ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ಸಿಕ್ಕಿದ್ದು, ಇದು ನನ್ನ ಕೊನೆಯ ಚುನಾವಣೆಯಾಗಿದೆ. ನನಗೀಗ ೭೦ ವರ್ಷ. ಆದ್ದರಿಂದ ಕ್ಷೇತ್ರದ ಜನತೆ ನನ್ನ ಕೈಬಿಡುವುದಿಲ್ಲ ಎಂಬ ಅಚಲ ವಿಶ್ವಾಸ ನನಗಿದೆ ಎಂದರು.ಬಸವನ ಬಾಗೇವಾಡಿ ಮತಕ್ಷೇತ್ರದ ಚುಣಾವಣಾ ಉಸ್ತುವಾರಿ, ಉತ್ತರಾಖಂಡ ರಾಜ್ಯದ ರಾಜ್ಯಸಭಾ ಸದಸ್ಯ ನರೇಶ್ ಬನ್ಸಾಲ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಆಡಳಿತ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ಸರ್ವರೀತಿಯ ಸರಕಾರಿ ಯೋಜನೆಗಳು ಕಾರ್ಯಗತವಾಗುತ್ತಿದ್ದು, ಜನರಿಗೆ ಅನುಲಕೂಲವಾಗುತ್ತಿದೆ ಆದ್ದರಿಂದ ಮತದಾರರು ಈ ಬಾರಿಯ ಚುಣಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.ಸಭೆಯಲ್ಲಿ…
