ಬಸವನಬಾಗೇವಾಡಿ: ಆಗಿನ ಕಾಲದ ಸಾಮಾಜಿಕ, ಸಮಾನತೆ, ದೀನದಲಿತರ, ಹಿಂದುಳಿದವರ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸುಧಾರಣೆ ತಂದ ಮಹಾತ್ಮರಲ್ಲಿ ಸಾವಿತ್ರಿಬಾಯಿ ಪುಲೆಯವರು ಅಗ್ರಗಣ್ಯರು. ಅವರ ಆರ್ಶ ಸರಳ ಜೀವನವು ಎಲ್ಲರಿಗೂ ಮಾದರಿಯಾಗಿದೆ ಎಂದು ಮಾಳಿ ಸಮಾಜದ ಯುವ ಮುಖಂಡ ಜಟ್ಟಿಂಗರಾಯ ಮಾಲಗಾರ ಹೇಳಿದರು.
ಪಟ್ಟಣದ ನಾಗೂರ ರಸ್ತೆಯಲ್ಲಿ ಮಾಳಿ ಸಮಾಜ ಬಾಂಧವರು ಬುಧವಾರ ಹಮ್ಮಿಕೊಂಡಿದ್ದ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ೧೯೩ ನೇ ಜಯಂತಿ ಕರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ಸಾವಿತ್ರಿಬಾಯಿ ಅವರು ಮಹಿಳಾ ಹಕ್ಕುಗಳ ಧ್ವನಿ ಎತ್ತಿದರು. ಸಾಮಾಜಿಕ ನಿಯಮಗಳ ವಿರುದ್ಧ ಅವರು ಹೋರಾಡಿದರು. ಅವರು ನೀಡಿರುವ ಕೊಡುಗೆಗಳು ದೇಶದ ಸಾಮಾಜಿಕ ರಚನೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ ಎಂದರು.
ಈ ಸಂದರ್ಭದಲ್ಲಿ ಅಪ್ಪಾಶಿ ಮಾಲಗಾರ, ಸಿದ್ದಣ್ಣ ಕಲ್ಲೂರ, ಬಸವರಾಜ ಮಾಲಗಾರ, ಪಾವಡೆಪ್ಪ ಮಾಲಗಾರ, ರಾಜು ಮಾಳಿ, ರಮೇಶ ಮಾಲಗಾರ, ಮುತ್ತು ಮಾಲಗಾರ, ಸಂಗಪ್ಪ ತೋಟದ, ಲಕ್ಷ್ಮಣ ಮಾಲಗಾರ, ಸದಾಶಿವ ಮಾಲಗಾರ, ಮಲ್ಲಪ್ಪ ಮಾಲಗಾರ, ಮಹಾದೇವ ಮಾಲಗಾರ, ಬಾಬುಗೌಡ ಪಾಟೀಲ, ಶೇಖಪ್ಪ ನಾಯ್ಕೋಡಿ, ರಕ್ಷೀತ ಮಾಳಿ, ಬಾಬು ಪವಾರ, ಪರು ಮಾಲಗಾರ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

