ಸಿಂದಗಿ: ಇಡೀ ರಾಜ್ಯದಲ್ಲಿ ರೈತರ ಕಬ್ಬು ಕಾರ್ಖಾನೆಗೆ ಹೋಗುತ್ತಿದೆ. ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಈಗಾಗಲೇ ನನಗೆ ಸಾಕಷ್ಟು ದೂರುಗಳು ಬಂದಿವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಎಪಿಎಂಸಿಗೆ ದಿಡೀರನೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಮೋಸ ಸೇರಿದಂತೆ ರೈತರಿಗೆ ವಂಚಿಸುವುದನ್ನು ತಡೆಯಲು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಬ್ಬಿನ ತೂಕದಲ್ಲಿ ಮೋಸ ನಡೆಯುತ್ತಿರುವ ಕುರಿತು ಹಲವಾರು ಬಾರಿ ರೈತ ಸಂಘಟನೆಗಳಿಂದ ನನಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡಲು ಡಿಜಿಟಲ್ ತೂಕದ ಯಂತ್ರ ಅಳವಡಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಏಕೆಂದರೆ ಡಿಜಿಟಲ್ ತೂಕದ ಯಂತ್ರಗಳನ್ನು ಬಳಸುವುದರಿಂದ ತೂಕದಲ್ಲಿ ರೈತರಿಗೆ ಯಾವುದೇ ಮೋಸವಾಗುವುದಿಲ್ಲ. ಈಗಾಗಲೇ ಕಾರ್ಖಾನೆಯವರಿಗೆ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಕೆಲವು ಕಾರ್ಖಾನೆಯ ಮಾಲೀಕರು ಅಳವಡಿಸಿದರೇ ಇನ್ನೂ ಕೆಲವು ಕಾರ್ಖಾನೆಯ ಮಾಲೀಕರು ಅಳವಡಿಸಿದೆ ಇಲ್ಲದಿರುವುದು ಕಂಡುಬಂದಿದೆ. ಕೆಲವು ಕಾರ್ಖಾನೆಯವರು ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ನನಗೆ ನಿನ್ನೆಯ ತನಕವೂ ದೂರುಗಳು ಬಂದಿವೆ. ಈ ದಿಸೆಯಲ್ಲಿ ರೈತರಿಗೆ ಸಹಾಯಕಾರಿಯಾಗಲಿ ಎಂಬ ದೃಷ್ಟಿಯಿಂದ ಎಪಿಎಂಸಿ ಕಾರ್ಯದರ್ಶಿಗಳಿಗೆ ಡಿ.೨೨ ರಂದು ಎಪಿಎಂಸಿಯಲ್ಲಿರುವ ವೇಬ್ರಿಜ್ ತೂಕದ ಯಂತ್ರಗಳನ್ನು ರಿಪೇರಿಗಳನ್ನು ಮಾಡಿಸಿ ಸುಸ್ಥಿತಿಯಲ್ಲಿ ಇಡುವಂತೆ ಆದೇಶವನ್ನು ಮಾಡಲಾಗಿದೆ. ಮತ್ತು ರೈತರು ತೂಕಕ್ಕಾಗಿ ಬಂದರೆ ಅವರಿಗೆ ಉಚಿತವಾಗಿ ತೂಕ ಮಾಡಬೇಕೆಂದು ಸ್ಪಷ್ಟನಿರ್ದೇಶನ ನೀಡಲಾಗಿದೆ. ರೈತರು ಎಪಿಎಂಸಿಯಲ್ಲಿ ನೀಡಿದಂತಹ ತೂಕದ ರಶೀದಿಯನ್ನು ಗೌಪ್ಯವಾಗಿ ಕಾಪಾಡಿಕೊಂಡು ತಮ್ಮ ಬಳಿ ಇಟ್ಟುಕೊಂಡು ಕಾರ್ಖಾನೆಯಲ್ಲಿ ತೂಕ ಮಾಡಿದ ನಂತರದೊಳಗೆ ತೂಕದಲ್ಲಿ ಏನಾದರೂ ವ್ಯತ್ಯಾಸಗಳು ಕಂಡು ಬಂದರೆ ಲಿಖಿತ ರೂಪದಲ್ಲಿ ಒಂದು ಅರ್ಜಿಯನ್ನು ಸಲ್ಲಿಸಬೇಕು. ಅದನ್ನು ಸಲ್ಲಿಸಿದ್ದೆ ಆದರೆ ಕಾರ್ಖಾನೆಯ ಕ್ರಷಿಂಗ್ ಪರವಾನಿಗೆಯನ್ನು ಈ ವರ್ಷದ ಮಟ್ಟಿಗೆ ರದ್ದುಗೊಳಿಸುವ ಅವಕಾಶವಿದೆ. ಜೊತೆಗೆ ಕಾನೂನಿನಲ್ಲಿ ಕಾರ್ಖಾನೆಯ ಮಾಲೀಕರಿಗೆ ದಂಡ ವಿಧಿಸಿ ಶಿಕ್ಷೆ ಕೊಡಿಸುವಂತಹ ಅವಕಾಶವು ಸಹ ಇದೆ. ಇದನ್ನು ರೈತರು ತಿಳಿದು ಮೋಸ ಹೋಗದಂತೆ ನಿಗಾ ವಹಿಸಬೇಕು ಎಂದರು.
ಈ ವೇಳೆ ಶಾಸಕ ಅಶೋಕ ಮನಗೂಳಿ, ಪ್ರಸನ್ನಕುಮಾರ ಜೇರಟಗಿ, ಮಲ್ಲು ಶಂಬೇವಾಡ ಸೇರಿದಂತೆ ಕಾರ್ಯಕರ್ತರು, ಅಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

