Author: editor.udayarashmi@gmail.com

ಶಿಗಣಾಪುರ(ಚಡಚಣ): ನಾನು ಅಭಿವೃದ್ಧಿ ಪರ ಶಾಸಕನಾಗಿ ನಿಮ್ಮ ನೆನಪಲ್ಲಿ ಉಳಿಯಬೇಕು ಎಂದು ಕೊಂಡವನಾದ್ದರಿಂದ ನಿಮ್ಮ ಎಲ್ಲ ಅನಾನುಕೂಲಗಳನ್ನು ಅನುಕೂಲಗಳನ್ನಾಗಿ ಬದಲಿಸುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಹೇಳಿದರು.ಗುರುವಾರ ಗ್ರಾಮದಲ್ಲಿ ನಡೆದ ಚುನಾಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಮತದಾರರು ಕೆಟ್ಟಿಲ್ಲ, ನಾಯಕರು ಕೆಟ್ಟಿದ್ದಾರೆ. ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯ, ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ಶಿಗಣಾಪುರ ಗ್ರಾಮದ ಯಾರೇ ಬಂದರೂ ಅವರ ಕಾರ್ಯ ಮಾಡಿಕೊಡುವೆ. ಸಬ್ಸಿಡಿ, ಕೃಷಿ ಹೊಂಡ, ಅನೇಕ ಸೌಲಭ್ಯಗಳನ್ನು ನಿಮಗೆ ನೀಡುತ್ತೇನೆ. ಸಾಮಾನ್ಯನೇ ಬಂದರೂ ಅವರ ಕೆಲಸ ಮಾಡಿಕೊಡುವೆ ಎಂದು ಕಟಕದೊಂಡ ಹೇಳಿದರು.’ನೀವು ಶಾಸಕರಾದರೆ ಗ್ರಾಮದ ಕೆರೆ ಹೂಳೆತ್ತುವುದು ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಬೇಕು’ ಎಂದು ಸಾಮಾಜಿಕ ತಾಣದ ಜಿಲ್ಲಾ ಮುಖ್ಯಸ್ಥ ಹಾಗೂ ಗ್ರಾಮದ ಮುಖಂಡ ಪ್ರಕಾಶ ಪಾಟೀಲ ಪ್ರಾಸ್ತಾವಿಕ ಮಾತನಾಡುತ್ತ ಮನವಿ ಮಾಡಿದರು.ಬಿಜೆಪಿ ಅತಿ ಭ್ರಷ್ಟ, ಕೋಮುವಾದಿ ಪಕ್ಷವಾಗಿದೆ. ಜೆಡಿಎಸ್‌ನ ಸದ್ಯದ ಶಾಸಕರೂ ನಿರುಪಯೋಗಿಯಾಗಿದ್ದಾರೆ. ಇದಕ್ಕೆ ಬೇಸತ್ತು ಎಂ.ಆರ್.ಪಾಟೀಲರು ಅವರನ್ನು ತೊರೆದು ಕಾಂಗ್ರೆಸ್ ಸೇರಿದ್ದು ಬಲ ಬಂದಿದೆ.…

Read More

ಇಂಡಿ: ದೇಶದ ಹಿತಕ್ಕಾಗಿ, ರಾಜ್ಯ ಮತ್ತು ಇಂಡಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ, ಲಿಂಬೆ ನಾಡಿನ ಬದಲಾವಣೆಗಾಗಿ, ಜನಪರ ಸರಕಾರ ರಚಿಸಲು, ಮೋದಿಜಿ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಮನವಿ ಮಾಡಿದರು. ತಾಲ್ಲೂಕಿನ ಹಿರೇಬೇವನೂರ, ಸಾತಲಗಾಂವ ಪಿ.ಐ, ಲಾಳಸಂಗಿ ಹಾಗೂ ಕೆಸರಾಳ ತಾಂಡಾಕ್ಕೆ ಗುರುವಾರ ಬೇಟಿ ನೀಡಿ ಮತಯಾಚನೆ ಮಾಡಿ ಅವರು ಮಾತನಾಡಿದರು. ನರೇಂದ್ರಮೋದಿಯವರ ಪ್ರತಿಯೊಂದು ಯೋಜನೆಗಳು ಪ್ರತಿ ಹಳ್ಳಿಗೂ ತಲುಪುವಲ್ಲಿ ಕೇಂದ್ರದಲ್ಲೂ ಬಿಜೆಪಿ ರಾಜ್ಯದಲ್ಲೂ ಬಿಜೆಪಿ ಇರುವ ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕೇಂದ್ರ ಸರ್ಕಾರದಿಂದ 6000 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4000 ಸಾವಿರ ಡಬಲ್ ಎಂಜಿನ್ ಸರಕಾರವಿದ್ದ ಕಾರಣದಿಂದಾಗಿ ನೇರವಾಗಿ ರೈತರ ಖಾತೆಗೆ ಒಟ್ಟು10000 ಸಾವಿರ ರೂಗಳು ತಲುಪುತ್ತಿದೆ. ದೇಶದಲ್ಲಿ 70ವರ್ಷ ಆಡಳಿತ ನಡೆಸಿದರೂ ಹೈವೆ, ರೈಲ್ವೆ ಲೈನ್ ಅಲ್ಲ ಶೌಚಾಲಯಗಳನ್ನೂ ನಿರ್ಮಾಣ ಮಾಡದ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ನೀಡಲು…

Read More

ಇ0ಡಿ: ನನ್ನ ಎರಡು ಅಧಿಕಾರದ ಅವಧಿಯಲ್ಲಿ ಇಂಡಿ ಕ್ಷೇತ್ರದಲ್ಲಿ ಅಗಾಧವಾದ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ ಜಿಲ್ಲಾ ಕೇಂದ್ರವನ್ನು ಮಾಡುವ ಉತ್ಸುಕತೆ ನನ್ನಲ್ಲಿದ ಇಂಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ನನ್ನದಾಗಿದೆ ಅದಕ್ಕಾಗಿ ನಿಮ್ಮೆಲ್ಲರ ಬೆಂಬಲ-ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಇಂಡಿ ಕ್ಷೇತ್ರದ ಕಾಂಗೈ ಅಭ್ಯರ್ಥಿ ಯತಮತ್ರಾಯಗೌಡ ಪಾಟೀಲ ಅವರು ಭುಂಯ್ಯಾರ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದರು.ಭುಯ್ಯಾರ ಗ್ರಾಮದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಭುಂಯ್ಯಾರ, ನಾಗರಹಳ್ಳಿ, ರೋಡಗಿ, ಖೇಡಗಿ, ಹಿರೇಬೇವನೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಜನರ ಬೇಡಿಕೆಗೆ ತಕ್ಕಂತೆ ರಸ್ತೆ, ಕುಡಿಯುವ ನೀರು, ಸಹಕಾರ ತತ್ವದಡಿ ರೈತರಿಗೆ ಅನೂಕೂಲವಾಗುಮತ ನೆನೆಗುದಿಗೆ ಬಿದ್ದ ಮರಗೂರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿದ್ದು, ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ, ಸಾಕಷ್ಟು ಕ್ಷೇತ್ರಕ್ಕೆ ಅನುದಾನ ತಂದ ತೃಪ್ತಿ ನನಗಿದೆ ಎಂದರು.ಭುಯ್ಯಾರ ಗ್ರಾಮದಿಂದಲೂ ೨-೩ ಬಾರಿ ವಿಧಾನಸಭೆ ಪ್ರವೇಶ ಸಿಕ್ಕಿದ್ದು, ಅದು ಕಾಂಗ್ರೆಸ್‌ಕ್ಕೆ ಶಿಂಗಪ್ಪ ಗೋಳಸಾರ, ಬಿದಾಚಾರ್ಯ ಜಹಾಗೀರದಾರ, ಲಾಳಸಂಗಿ, ಹೊನವಾಡ ಅವರ ಆಡಳಿತ ವೈಖರಿ…

Read More

– ಗುರುರಾಜ ಕೆ.ಪಟ್ಟಣಶೆಟ್ಟಿಯಾದಗೀರ: ಮೊದಲೆಲ್ಲ ಜನರೇ ಚಿತ್ರ ಮಂದಿರ ಹುಡುಕಿಕೊಂಡು ಹೋಗುತಿದ್ದರು. ಈಗ ಬದಲಾದ ಕಾಲದಲ್ಲಿ ಮೊಬೈಲ ಇಂಟರನೆಟ್ ಸಹಾಯದಿಂದ ಕ್ಷಣಾರ್ಧದಲ್ಲಿ ಜಗತ್ತನ್ನೇ ನೋಡುವ ಕಾಲಘಟದಲ್ಲಿ ಜನ ಚಿತ್ರಮಂದಿರಕ್ಕೆ ಹೋಗುವುದೇ ಕಡಿಮೆಯಾಗಿದೆ. ಚಿತ್ರಮಂದಿರವೇ ಜನರ ಬಳಿಗೆ ತೆಗೆದುಕೊಂಡು ಬರುವ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ ಪ್ರಶಾಂತ ಶೆಟ್ಟಿಯವರು. ಸುಮಾರು ಹದಿನಾಲ್ಕುನೂರು ಚದುರಡಿ ಅಳತೆಯಲ್ಲಿ ಇನ್ನೂರು ಜನ ಆಸನವುಳ್ಳ ಕಬ್ಬಿಣ, ಪ್ಲೈವುಡ್ ಹಾಗೂ ಅಧುನಿಕ ತಂತ್ರಜ್ಞಾನ ಬಳಸಿ ನೊಡುಗರಿಗೆ ಬೆರಗಾಗುವ ಹಾಗೆ ಟೂರಿಂಗ ಟಾಕೀಜ್ ನಿರ್ಮಿಸಿದ್ದಾರೆ. ಇದಕ್ಕೆ ಸರಿ ಸುಮಾರು ಇಪ್ಪತ್ತೆರಡು ಲಕ್ಷ ರೂ ತಗುಲಿದ್ದು, ಇದು ನಾಲ್ಕು ಎ.ಸಿ ಹೊಂದಿದೆ. ವಿದ್ಯುತ್ ಕೈ ಕೊಟ್ಟಾಗ ಜನರೇಟರ್ ಸೌಲಭ್ಯ ಹಾಗೂ ಉತ್ತಮ ಗುಣಮಟ್ಟದ ಡಿ ಟಿ ಎಚ್ ಸೌಂಡ್ ಸಿಸ್ಟಂ ಹೊಂದಿದೆ. ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಾಗಿಸುವಂತಿದ್ದು ಜೋಡಣೆಯೂ ಸುಲಭವಾಗಿದೆ. ಜೋಡಣೆಗೆ ಸರಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಹಣ ಕೆಲಸಗಾರರಿಗೇ ಬೇಕಾಗುವುದಂತೆ.ಇಂತಹ ಸುಸಜ್ಜಿತವಾದ ಟೂರಿಂಗ್ ಟಾಕೀಜ ಭಾರತದ ಚಿತ್ರರಂಗದಲ್ಲೇ…

Read More

ವಿಜಯಪುರ: ಶ್ರೀ ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆ ಉತ್ನಾಳ, ಮಲ್ಲಸರ್ಜ ದೇಸಾಯಿ ಅಂತಾರಾಷ್ಟಿçÃಯ ಕ್ರೀಡಾ ತರಬೇತಿ ಕೇಂದ್ರ ಮತ್ತು ಅಖಿಲ ಕರ್ನಾಟಕ ಪಂಚಮಸಾಲಿ ಪರಿಷತ್ತು ಅಖಿಲ ಭಾರತಿಯ ಪಂಚಮಸಾಲಿ ಪರಿಷತ ವತಿಯಿಂದ ಏ.೧೬ ಇಂದಿರಾ ಪ್ರಾಥಮಿಕ ಹಾಗೂ ವಿದ್ಯಾ ಗಣೇಶ ಪ್ರೌಢಶಾಲೆಯಲ್ಲಿ ಮಲ್ಲಸರ್ಜ ದೇಸಾಯಿ ಪ್ರಶಸ್ತಿ, ಪ್ರಧಾನ ಸಮಾರಂಭ ಕಾರ್ಯಕ್ರಮ ಜರುಗಿತು.ಅಧ್ಯಕ್ಷತೆಯನ್ನು ಪ್ರೇಮಾನಂದ ಬಿರಾದಾರ ಮಹಾನಗರ ಪಾಲಿಕೆ ಸದಸ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿಜಯಲಕ್ಷ್ಮಿ ಬಾಳಿ, ವಿದ್ಯಾ ಗಣೇಶ್ ಸಂಸ್ಥೆಯ ಅದ್ಯಕ್ಷರು ವಿಜಯಪುರ, ಬಸವರಾಜ ಬಾಗೇವಾಡಿ, ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರು ಉತ್ನಾಳ, ಡಿ. ಎಸ್. ಬಸನಗೌಡ್ರು ರಾಣಿ ಚನ್ನಮ್ಮ ದೂರ ಶಿಕ್ಷಣ ಕೇಂದ್ರದ ಅಧ್ಯಕ್ಷರು ರಾಮದುರ್ಗ ಮತ್ತು ಧಾರವಾಡ. ಶ್ರೀಮತಿ ಸುರೇಖಾ. ಬ. ಬಾಗಲಕೋಟ ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉತ್ನಾಳ ವಹಿಸಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಾಂತೇಶ್.ಮ.ರಾಜಗೋಳಿ (ಮಾಧ್ಯಮ ಕ್ಷೇತ್ರ), ವೀಭಾ.ವಿ.ಕುಂಬಾರ (ಕ್ರೀಡಾ ಕ್ಷೇತ್ರ), ಗುರವ್ವಾ.ಸುರೇಶ.ಉಕ್ಕಲಿ (ಪೌರಕಾರ್ಮಿಕ), ಕುಸಪ್ಪ.ರಾಮಣ್ಣ.ಹಂಚಿನಾಳ(ಘನ ತ್ಯಾಜ್ಯ ವಿಲೇವಾರಿ),…

Read More

ವಿಜಯಪುರ: ಅತೀ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆಯ ನಾಗಠಾಣ ಮೀಸಲು (ಎಸ್.ಸಿ) ಮತಕ್ಷೇತ್ರವು ಮಾತ್ರ ಅಭಿವೃದ್ದಿಯಿಂದ ವಂಚಿತಗೊAಡಿದ್ದು, ಇಲ್ಲಿಯವರೆಗೆ ಈ ಕ್ಷೇತ್ರಕ್ಕೆ ಆರಿಸಿ ಬಂದಿರುವ ಯಾವೊಬ್ಬ ಶಾಸಕರು ಅಭಿವೃದ್ದಿ ಕೆಲಸವನ್ನು ಮಾಡಿಲ್ಲ. ಈ ಬಾರಿಯಾದರೂ ಸಹ ನಾಗಠಾಣ ಮತಕ್ಷೇತ್ರಕ್ಕೆ ಒಬ್ಬ ಪ್ರಜ್ಞಾವಂತ ಜನಪ್ರತಿನಿಧಿಯನ್ನು ಆರಿಸುವ ಜವಾಬ್ದಾರಿ ಎಲ್ಲ ನಾಗಠಾಣ ಮತಕ್ಷೇತ್ರದ ಮತದಾರರ ಮೇಲೆ ಇದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಕೃಷಿಗೆ ಒತ್ತು ನೀಡಬೇಕು. ಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡಬೇಕು. ಇಲ್ಲಿ ವಿದ್ಯಾವಂತ ನಿರುದ್ಯೋಗ ಯುವಕರು ಬಹಳಷ್ಟಿದ್ದು, ಅವರಿಗೆ ಉದ್ಯೋಗ ಒದಗಿಸುವಂತಾಗಬೇಕು. ಇಲ್ಲಿಯವರೆಗೆ ಈ ಮತಕ್ಷೇತ್ರಕ್ಕೆ ಸ್ಪರ್ಧೆ ಬಯಸಿದ ಜನಪ್ರತಿನಿಧಿಗಳು ಪೊಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆಯೇ ಹೊರತು ಮತಕ್ಷೇತ್ರದ ಜನರ ಅಭಿವೃದ್ದಿ ಕಡೆಗೆ ಕಿಂಚಿತ್ತು ಜವಾಬ್ದಾರಿಯುತ ಕೆಲಸವನ್ನು ಮಾಡಿರುವದಿಲ್ಲ.ಆದ್ದರಿAದ ಈ ಬಾರಿಯ ಚುನಾವಣೆಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹಾಗೂ ಯುವಕರ ಪರವಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಮತದಾರರು ಆರಿಸಿ ಕ್ಷೇತ್ರವು ಅಭಿವೃದ್ದಿಗೊಳ್ಳುವಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಬೇಕು. ಹಾಗೂ ಮತದಾನದ…

Read More

ಸಿಂದಗಿ: ಮತಕ್ಷೇತ್ರದ ಎಎಪಿ ಪಕ್ಷದ ಅಧಿಕೃತ ಅಭ್ಯರ್ಥಿ ಮುರಿಗೆಪ್ಪಗೌಡ ಸಿದ್ದನಗೌಡ ರದ್ದೇವಾಡಗಿ ಅವರು ಬುಧವಾರ ಚುನಾವಣಾ ಅಧಿಕಾರಿ ಸಿದ್ರಾಮ ಮಾರಿಹಾಳರವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಅಕ್ಬರ ಖಾಜಾಸಾಬ ಮುಲ್ಲಾ ಅವರೂ ಸಹ ಬುಧವಾರ ಚುನಾವಣಾ ಅಧಿಕಾರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

Read More

ಸಿಂದಗಿ: ಈ ಚುನಾವಣೆಯಲ್ಲಿ ನಾನು ಗೆದ್ದರೆ ಇದು ನನ್ನ ಗೆಲುವಲ್ಲ, ಇದು ಕಾರ್ಯಕರ್ತರ ಗೆಲುವಾಗುತ್ತದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.ಬುಧವಾರದಂದು ತಾಲೂಕು ಆಡಳಿತ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಶಾಸಕ ರಮೇಶ ಭೂಸನೂರ, ಉಪಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಮತ್ತು ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ನೀರನ್ನು ಹರಿಸುಲು ೬ಹೊಸ ಮೋಟಾರ್‌ಗಳನ್ನು ಕುಡಿಸುವ ಕಾಲುವೆಗಳಿಗೆ ನೀರು ಹರಿಸುವ ಮೂಲಕ ರೈತರ ಭರವಸೆಯನ್ನು ಉಳಿಸಿಕೊಂಡಿದ್ದೇನೆ. ಈ ಭಾಗದ ಹಾಲುಮತ ಸಮುದಾಯಕ್ಕೆ ಸಮುದಾಯ ಭವನಗಳನ್ನು ಮಂಜೂರು ಮಾಡಿದ್ದೇನೆ ಎಂದು ಹೇಳಿದರು.ಈ ವೇಳೆ ಮಾತನಾಡಿದ ವಿ.ಪ ಸದಸ್ಯ ಹಣಮಂತ ನಿರಾಣಿ, ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಸಿಂದಗಿ ಕ್ಷೇತ್ರದಲ್ಲಿ ಅನುಕಂಪದ ಅಲೆ ನಡೆಯುವುದಿಲ್ಲ. ಮೂರು ಬಾರಿ ಶಾಸಕರಾದ ಅನುಭವ ರಮೇಶ ಭೂಸನೂರ ಅವರಿಗಿದೆ. ಕಾರಣ ಹೊಸಬರಿಗೆ ಆದ್ಯತೆ ಕೊಟ್ಟರೆ ಮತ್ತೊಮ್ಮೆ ಚುನಾವಣೆ ಬರುವವರೆಗೆ ಶಾಸಕ ಸ್ಥಾನದ…

Read More

ಸಿಂದಗಿ: ಕಳೆದ ಉಪಚುನಾವಣೆಯಲ್ಲಿ ರಾಜ್ಯದ ಎಲ್ಲ ನಾಯಕರನೊಳಗೊಂಡು ಸಿಎಂ, ಮಂತ್ರಿ ಮಂಡಲ, ಸಂಸದರು, ಶಾಸಕರು ಬಂದು ದುಡ್ಡು ಹಂಚಿ ಕ್ಷೇತ್ರ ಗಿಟ್ಟಿಸಿಕೊಂಡಿದ್ದಾರೆ ಎಂದು ಬಸವನ ಬಾಗೇವಾಡಿ ಶಾಸಕ ಹಾಲಿ ಅಭ್ಯರ್ಥಿ ಶಿವಾನಂದ ಪಾಟೀಲ ಹೇಳಿದರು. ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ನಾಮಪತ್ರ ಸಲ್ಲಿಕೆ ಸಂದರ್ಭ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಗಾಂಧೀಜಿ ವೃತ್ತದಿಂದ ಆರಂಭವಾದ ಮೆರವಣಿಗೆ ಮೂಲಕ ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಬಸವನಬಾಗೇವಾಡಿ ಶಾಸಕ ಹಾಲಿ ಅಭ್ಯರ್ಥಿ ಶಿವಾನಂದ ಪಾಟೀಲ ಅವರು ಮಾತನಾಡಿ, ಈ ದೇಶವನ್ನು ಹಿಂದುತ್ವದ ಆಧಾರದ ಮೇಲೆ ಆಳಲು ಹುಚ್ಚುತನಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಳದಿದ್ದಾರೆ. ಪ್ರಸ್ತುತ ಬಿಜೆಪಿ ಮಾಜಿ ಸಿಎಂ, ಸಂಸದರು, ಶಾಸಕರು ಪಕ್ಷವನ್ನೇ ಬಿಟ್ಟು ಬರುತ್ತಿದ್ದಾರೆ. ಈ ಚುನಾವಣೆಯ ಬಳಿಕ ರಾಜ್ಯದ ಜನ ಬಿಜೆಪಿಯನ್ನು ಕೈ…

Read More

ದೇವರಹಿಪ್ಪರಗಿ: ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ನ್ಯಾಯದಡಿ ಕುರುಬ ಸಮುದಾಯಕ್ಕೆ ಟಿಕೇಟ್ ನೀಡುವ ಅವಕಾಶವಿದ್ದಾಗಲೂ ಅದನ್ನು ನೀಡದೇ ಇರುವ ಪಕ್ಷದ ಕ್ರಮದ ಕುರಿತು ಮತಕ್ಷೇತ್ರದ ಕಾಂಗ್ರೆಸ್ ಧುರೀಣೆ ಗೌರಮ್ಮ ಮುತ್ತತ್ತಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪಟ್ಟಣದಲ್ಲಿ ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಜಿಲ್ಲೆಯ ಕುರುಬ ಸಮುದಾಯದ ಸಮಾಧಿಯ ಮೇಲೆ ಜಿಲ್ಲೆಯ ಕಾಂಗ್ರೆಸ್ ನಾಯಕರು ತಮ್ಮ ಸೌಧ ನಿರ್ಮಿಸಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ ಇಡೀ ಜಿಲ್ಲೆಯಲ್ಲಿ ಯಾವೋಬ್ಬ ಕುರುಬ ಸಮುದಾಯದ ವ್ಯಕ್ತಿ ಅಥವಾ ಮಹಿಳೆಗೆ ಅವಕಾಶ ನೀಡದೇ ನಿರಾಶೆಗೊಳಿಸಿದೆ. ಅದಾಗ್ಯೂ ಪಕ್ಷಕ್ಕೆ ಸಮುದಾಯದ ಮತಗಳು ಬೇಕು ಆದರೆ ಅವಕಾಶ ಮಾತ್ರ ಬೇಡ ಎನ್ನುವಂತಾಗಿದೆ. ಹಿಂದೆ ಸಮುದಾಯದಿಂದ ಯಾರು ಟಿಕೇಟ್ ಕೇಳುತ್ತಿರಲಿಲ್ಲ. ಆದರೆ ಈಗ ಅರ್ಹರು ಅವಕಾಶ ಕೇಳುತ್ತಿದ್ದರು ಸ್ಪರ್ಧಿಸಲು ಅವರಿಗೆ ಸ್ಥಾನ ನೀಡುತ್ತಿಲ್ಲ. ಜೊತೆಗೆ ಮಹಿಳಾ ಮೀಸಲಾತಿ ಅಡಿಯಲ್ಲಿ ಕ್ಷೇತ್ರದಲ್ಲಿ ಸಮುದಾಯದ ಮಹಿಳೆಯರು ಅರ್ಹತೆ ಹೊಂದಿದ್ದರೂ ಅವರಿಗೂ ಸಹ ಅವಕಾಶ ನೀಡಿಲ್ಲ.ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಮಾನ ಅವಕಾಶಗಳ ತತ್ವ ಪ್ರತಿಪಾದನೆ ಮಾಡುವ…

Read More