ವಿಜಯಪುರ: ನಗರ ಶಿಕ್ಷಕರ ಕಛೇರಿಯಿಂದ ಬಾಕಿ ಉಳಿದಿರುವ ಸೇವಾ ಪುಸ್ತಕದ ಕೆಲಸವನ್ನು ಸ್ಥಳದಲ್ಲಿಯೇ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಶನಿವಾರ ನಗರದ ಗೋಲಗುಮ್ಮಟ ವಲಯದ ಸುಮಾರು 205 ಶಿಕ್ಷಕರ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸೇವಾ ಪುಸ್ತಕವನ್ನು ಪರಿಶೀಲಿಸಿ ಅದರಲ್ಲಿನ ಬಾಕಿ ಉಳಿದಿರುವ ಸೇವಾ ವಿವರಗಳನ್ನು ಅವರ ಗಮನಕ್ಕೆ ತಂದಾಗ ಸ್ಥಳದಲ್ಲಿಯೇ ಸೇವಾ ಪುಸ್ತಕಕ್ಕೆ ಸಹಿ ಹಾಕಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಈ ಕಾರ್ಯಕ್ಕೆ ಎಲ್ಲ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಲಯದ ಎಲ್ಲಾ ಪ್ರತಿಯೊಬ್ಬ ಶಿಕ್ಷಕರಿಗೆ ನೌಕರರ ಸಂಘದ ಡೈರಿ 2024 ರ ಕ್ಯಾಲೆಂಡರ್ ಸೂಟಿ ಪತ್ರಿಕೆಯನ್ನು ವಿತರಿಸಿದರು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತವರ ಕಛೇರಿಯ ಎಲ್ಲ ಸಿಬ್ಬಂದಿ, ನೌಕರರ ಸಂಘದ ಜಿಲ್ಲಾ ಖಜಾಂಚಿ ಸಯ್ಯದ್ ಜುಬೇರ ಕೆರೂರ ಶಿಕ್ಷಕರ ಸಂಘದ ನಗರ ಘಟಕದ ಅಧ್ಯಕ್ಷ ಎಸ್ ಎನ್ ಪಡಶೆಟ್ಟಿ ಕಾರ್ಯದರ್ಶಿ ಅಜೀಜ ಅರಳಿಮಟ್ಟಿ ಬಸೀರ ನದಾಫ ಜಗದೀಶ ಅಕ್ಕಿ ವೀರಭದ್ರಪ್ಪ ಬಸವರಾಜ ಗಿರಿನಿವಾಸ ಜಾವೀದ ಗರಡಿಮನಿ ಮಂಜುನಾಥ ಆರೇಶಂಕರ ಶ್ರೀಮತಿ ಎಸ್ ಎನ್ ಗಳವೆ ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

