Author: editor.udayarashmi@gmail.com

ವಿಜಯಪುರ ಜಿಲ್ಲೆಯ ೮ ಮತಕ್ಷೇತ್ರಗಳಲ್ಲಿ ಈವರೆಗೆ ೧೭೨ ನಾಮಪತ್ರ ಸಲ್ಲಿಕೆ ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏಪ್ರಿಲ್ 20ರ ಗುರುವಾರದಂದು ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ 57 ಅಭ್ಯರ್ಥಿಗಳಿಂದ 60 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಟ್ಟಾರೆ ಜಿಲ್ಲೆಯಾದ್ಯಂತ 8 ವಿಧಾನಸಭಾ ಮತಕ್ಷೇತ್ರಗಳಿಂದ ಈವರೆಗೆ 172 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ 07, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 06, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 07, 29-ಬಬಲೇಶ್ವರ ಮತಕ್ಷೇತ್ರದಿಂದ 11, 30-ಬಿಜಾಪುರ ನಗರ ಮತಕ್ಷೇತ್ರದಿಂದ 10, 31-ನಾಗಠಾಣ (ಎಸ್‌ಸಿ) ಮತಕ್ಷೇತ್ರದಿಂದ 12, 32-ಇಂಡಿ ಮತಕ್ಷೇತ್ರದಿಂದ 02 ಹಾಗೂ 33-ಸಿಂದಗಿ ಮತಕ್ಷೇತ್ರದಿಂದ 05 ನಾಮಪತ್ರಗಳು ಸೇರಿದಂತೆ ಒಟ್ಟು 60 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.ಮುದ್ದೇಬಿಹಾಳ ಮತಕ್ಷೇತ್ರದಿಂದ ಬಸವರಾಜ ಜನತಾ ದಳ (ಜಾತ್ಯಾತೀತ), ದೀಪಾ ಮನೂರ, (ಕರ್ನಾಟಕ ರಾಷ್ಟç ಸಮಿತಿ), ರಾಮನಗೌಡ ಶಿವಪ್ಪಗೌಡ ಬಾಳವಾಡ (ರಾಷ್ಟಿçÃಯ ಜನಸಂಭವನ ಪಾರ್ಟಿ), ಮೆಹಬೂಬ ಹಡಲಗೇರಿ (ಆಮ್…

Read More

ಸಿಂದಗಿ: ಶಿಕ್ಷಕರು ಕೇವಲ ವರ್ಗ ಕೋಣೆಗೆ ಸೀಮಿತವಾಗಿರದೆ ಜಗತ್ತಿನ ಎಲ್ಲ ಜ್ಞಾನವನ್ನು ಅರಿತುಕೊಂಡು ಕ್ರಿಯಾಶೀಲತೆಯನ್ನು ಮೆರೆಯಬೇಕು ಎಂದು ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ ಹೇಳಿದರು.ಪಟ್ಟಣದ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಜೆ.ಎಚ್ ಪಟೇಲ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಸಿಂದಗಿ ಸಾಧಕರ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧಕರ ಪ್ರಾರಂಭದ ಬದುಕು ಅತ್ಯಂತ ಕಷ್ಟಕರವಾಗಿರುತ್ತದೆ. ಅವರು ಮಾಡಿದ ಕಾರ್ಯಗಳು, ಅನುಭವಗಳು, ಸಾಧನೆಗಳು ಇಂದಿನ ಶಿಕ್ಷಕರಿಗೆ ಅವಶ್ಯಕವಾಗಿ ನೀಡಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಮಾತನಾಡಿ, ಶಿಕ್ಷಕರಲ್ಲಿ ಕ್ರಿಯಾಶೀಲತೆ ಸೃಜನಶೀಲತೆಗಳಂತ ಮೌಲ್ಯಗಳು ಇದ್ದಲ್ಲಿ ಮಕ್ಕಳ ಪ್ರತಿಭೆ ಹೊರಹೊಮ್ಮುತ್ತದೆ. ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಬೋಧಿಸಿದ್ದಲ್ಲಿ ಬೋಧನೆ ಪರಿಣಾಮಕಾರಿಯಾಗುತ್ತದೆ. ಈ ಕ್ಷೇತ್ರದ ಅರಿವನ್ನು ಎಲ್ಲ ಪ್ರಶಿಕ್ಷಣಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಈ ವೇಳೆ ಶಿಕ್ಷಕ ಸಿದ್ದಲಿಂಗ ಚೌಧರಿ ಮಾತನಾಡಿ, ಸಿಂದಗಿ ಜ್ಞಾನದ ಬಿಂದಿಗೆಯನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ದೊಡ್ಡ ಚಾಪನ್ನು ಮೂಡಿಸಿರುವ ಸಿಂದಗಿ ಅನೇಕ…

Read More

ಪತಿ ದಿ.ಶಿವಾನಂದ ಪಾಟೀಲ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿದ ಜೆಡಿಎಸ್‌ಅಭ್ಯರ್ಥಿ ಸಿಂದಗಿ: ನನ್ನ ಪತಿ ದಿ.ಶಿವಾನಂದ ಪಾಟೀಲರ ಕನಸನ್ನು ನನಸು ಮಾಡುವುದು ಮತದಾರರ ಕೈಯಲ್ಲಿದೆ ಎಂದು ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಹೇಳಿದರು.  ಗುರುವಾರದಂದು ನಾಮಪತ್ರ ಸಲ್ಲಿಸುವ ಮುನ್ನ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಅವರು, ಇಲ್ಲಿ ನೆರೆದಿರುವ ಜನರನ್ನು ನೋಡಿದರೆ ಶಿವಾನಂದ ಪಾಟೀಲರ ಕಾರ್ಯಗಳು ನೆನಪಿಗೆ ಬರುತ್ತವೆ. ಸಿಂದಗಿಯನ್ನು ಮಾದರಿ ಮತಕ್ಷೇತ್ರವನ್ನಾಗಿಸುವ ಅವರ ಕನಸನ್ನು ನನಸು ಮಾಡುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಮನೆ ಮಗಳಿಗೆ ಆಶೀರ್ವಾದ ಮಾಡಿ ಎಂದು ಭಾವುಕರಾದರು. ಕುಮಾರಸ್ವಾಮಿಯವರ ಪಂಚರತ್ನ ಯೋಜನೆಗಳು ರೈತ ಪರ, ಜನ ಪರ ಯೋಜನೆಗಳಾಗಿವೆ. ಅವರು ಕ್ಷೇತ್ರವನ್ನು ದತ್ತು ಪಡೆಯುತ್ತೇನೆ ಎಂಬ ವಿಶ್ವಾಸವನ್ನು ನೀಡಿದ್ದಾರೆ. ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ನೀಡಿದ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರೆ ಅಭಿವೃದ್ದಿ ಶತಸಿದ್ದ ಎಂದು ಹೇಳಿದರು. ತಾಲೂಕು ಅಧ್ಯಕ್ಷ ಸಂತೋಷ ಹರನಾಳ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ಪರ್ಸಂಟೇಜ್ ವ್ಯವಹಾರಕ್ಕೆ ಜನ ಬೇಸತ್ತು ಹೋಗಿದ್ದಾರೆ. ಕಾರಣ ಮತದಾರರು ಈ ಬಾರಿ…

Read More

ಇಂಡಿ: ಬರುವ ಮೇ ೧೦ ರಂದು ನಡೆಯುವ ಇಂಡಿ ವಿಧಾನಸಭಾ ಮತಕ್ಷೇತ್ರಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಅಭ್ಯರ್ಥಿ ಮಹಿಬೂಬ ಅರಬ ನಾಮಪತ್ರ ಸಲ್ಲಿಸಿದರು.ಬಳಿಕ ಮಾತನಾಡಿದ ಮಹಿಬೂಬ ಅರಬ, ಪಕ್ಷದ ನೇತಾರ ಜನಾರ್ಧನ ರೆಡ್ಡಿಯವರು ಯುವಕರಿಗೆ ಅನುಕೂಲವಾಗುವ ಉದ್ಯೋಗ ದೊರಕಿಸಿಕೊಡುವ ಪ್ರಣಾಳಿಕೆ ಮಾಡಿದ್ದು, ಅವರ ಕೈ ಬಲಪಡಿಸಲು ಯುವಕರು ಮುಂದಾಗಬೇಕೆಂದು ಕೇಳಿಕೊಂಡರು.ಮಿನಿ ವಿಧಾನಸೌಧದಲ್ಲಿ ಚುನಾವಣೆ ಅಧಿಕಾರಿ ರಾಮಚಂದ್ರ ಗಡದೆ ಇವರಿಗೆ ನಾಮಪತ್ರ ಸಲ್ಲಿಸಿದರು.ಅಲ್ತಾಫ ಹುಸೇನ ಅಳ್ಳಗಿ, ತೌಶೀಫ್ ಶೇಖ, ನಿಸಾರ ಶೇಖ, ತೌಷಿಫ ರಿಸಾಲದಾರ, ಶಬ್ಬೀರ ಡಾಂಗೆ, ಪಪ್ಪು ಮೋಮೀನ, ಪ್ರೇಮಾ ಸಿಂಘೆ, ಯಶವಂತ ಪಾರಸಿ,ಮಹಮ್ಮದ ಫಾರುಕಿ ಬೋರಾಮಣಿ, ಅಜರುದ್ದೀನ ಮಕಾನದಾರ, ಮುಸ್ತಾಕ ನಾಗೂರ, ಮಹಮ್ಮದ ರಫೀಕ ದಡೇದ, ಮಹಮ್ಮದ ಹುಸೇವ ಚುನ್ನೆವಾಲೆ, ಜಾಕೀರ ಅರಬ, ಅಬುಬಕರ ಶೇಖ ಮತ್ತಿತರಿದ್ದರು.

Read More

ವಿಜಯಪುರ: ನಗರದಲ್ಲಿ ಹಲವು ವರ್ಷಗಳಿಂದ ಅಭಿವೃದ್ಧಿ ಮಾಡದೇ ಉಳಿದುಕೊಂಡಿದ್ದ ಸಮಸ್ಯೆಗಳಿಗೆ ಐದು ವರ್ಷದಲ್ಲಿ ಪರಿಹಾರ ಕೊಡಿಸಲು ಶ್ರಮಿಸಿರುವ ತಂದೆಯವರಿಗೆ ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯ ಲಿಂಗೇಶ್ವರ ಕಾಲೊನಿ, ಮಂಜುನಾಥ ನಗರ, ಕರ್ಪೂರಮಠ ಕಾಲೊನಿಗಳಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ರಾ ಪಾಟೀಲ ಯತ್ನಾಳ ಅವರ ಪರವಾಗಿ ಮತಯಾಚನೆ ನಡೆಸಿ ಅವರು ಮಾತನಾಡಿದರು.ನಗರದ ಪ್ರತಿಯೊಂದು ಆಂತರಿಕ ಹಾಗೂ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನೂರಾರು ಕಡೆಗೆ ಬೆಳಕಿಗಾಗಿ ಹೈಮಾಸ್ಕ್ ಅಳವಡಿಸಲಾಗಿದೆ. ಉದ್ಯಾನಗಳ ಅಭಿವೃದ್ಧಿ, ಓಪನ್ ಜಿಮ್, ಚಿಲ್ಡ್ರನ್ ಪಾರ್ಕ ಗಳನ್ನು ಮಾಡಲಾಗಿದೆ. ಇಲಾಖೆ ಹಾಗೂ ಸಿದ್ದಸಿರಿ ಸಂಸ್ಥೆ ಯಿಂದಲೂ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಕಸ ವಿಲೇವಾರಿಗಾಗಿ ಹೊಸ ವಾಹನಗಳ ಖರೀದಿ ಮಾಡಲಾಗಿದ್ದು, ಇದರಿಂದ ನಗರದ ನೋಟ ಅಂದಗೊಳ್ಳುವ ಜೊತೆಗೆ ಜನರು ಸಮಸ್ಯೆಯಿಂದ ಮುಕ್ತವಾಗಿದ್ದಾರೆ ಎಂದು ತಿಳಿಸಿದರು.ಔದ್ಯೋಗಿಕ ನಗರವನ್ನಾಗಿ ಮಾಡುವ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಹೇಳಿದರು.ಮುಖಂಡರಾದ ಆನಂದ ಹುಲಿಮನಿ, ಸಾಯಿಬಣ್ಣ…

Read More

ಜಿಗಜೀವಣಗಿ: ನಿಮ್ಮ ಗ್ರಾಮಕ್ಕೆ ಅನ್ಯಾಯ ಮಾಡಿದವರೇ ನಿಮ್ಮ ಮತ ಕೇಳಲು ಬರುತ್ತಾರೆ ಎಚ್ಚರವಾಗಿರಿ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಹೇಳಿದರು.ಗುರುವಾರ ಇಲ್ಲಿ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಗ್ರಾಮದ ದೊಡ್ಡ ಕೆರೆಯನ್ನು ತುಂಬಲು ಟೆಂಡರ್ ಕರೆಯದೇ ಅನ್ಯಾಯ ಮಾಡಿದರು. ಕಾರಜೋಳರು ನೀರಾವರಿ ಸಚಿವರಾಗಿಯೂ ಇದನ್ನು ಮಾಡದೇ ಯಾವ ಮುಖ ಇಟ್ಟುಕೊಂಡು ತಮ್ಮ ಮಗನಿಗೆ ಚುನಾವಣೆಗೆ ನಿಲ್ಲಿಸಲು ಹೊರಟಿದ್ದರೋ ಗೊತ್ತಿಲ್ಲ. ನಿಮ್ಮ ಮಕ್ಕಳಿಗೆ ಉದ್ಯೋಗ ಸೃಷ್ಟಿಯಾದರೆ ತೀರಿ ಹೋಗಿರುವ ನನ್ನ ಮಕ್ಕಳಿಗೆ ಸಿಕ್ಕಂತೆ. ನಾನು ಜೀವನದಲ್ಲಿ ಬಹಳ ಕಳೆದುಕೊಂಡಿದ್ದೇನೆ. ಕ್ಷೇತ್ರ ಮತ್ತು ಮತದಾರರೇ ನನ್ನ ಬದುಕಿನ ಜೀವ. ನಿಮ್ಮ ಅಭಿವೃದ್ಧಿಗಾಗಿ ನನಗೆ ಮತ ನೀಡಿ ಎಂದು ವಿನಂತಿಸಿದರು.ಮುಖಂಡ ಎಂ.ಆರ್. ಪಾಟೀಲ ಮಾತನಾಡಿ, ಕಟಕದೊಂಡರಿಗೆ ಯಾವುದೇ ಆಸೆ ಇಲ್ಲ. ಇದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡು ಅನಾಥರಾಗಿರುವ ಅವರು ತುಂಬ ನೋವಲ್ಲಿದ್ದಾರೆ. ಆ ನೋವು ಮರೆಯಲು ಅವರಿಗೆ ನೀವು ಮತ ಹಾಕಿದರೆ ಶಾಸಕರಾಗಿ ನಿರಂತರವಾಗಿ ಕೆಲಸ ಮಾಡಿ ತಮ್ಮ ಋಣ ತೀರಿಸಿ ನೆಮ್ಮದಿ…

Read More

ವಿಜಯಪುರ: ಕೆ.ಪಿ‌‌.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಬಬಲೇಶ್ವರ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ಸಾಂಕೇತಿಕವಾಗಿ ತಮ್ಮ ನಾಮಪತ್ರ ಸಲ್ಲಿಸಿದರು. ಬಬಲೇಶ್ವರ ಪಟ್ಟಣದಲ್ಲಿರುವ ನೀರಾವರಿ ಇಲಾಖೆ ಕಚೇರಿಗೆ ಆಗಮಿಸಿದ ಎಂ. ಬಿ. ಪಾಟೀಲ ಅವರು ಚುನಾವಣಾಧಿಕಾರಿ ಮಂಜುನಾಥ ಅವರಿಗೆ ಎರಡು ಸೆಟ್ ಗಳಲ್ಲಿ ತಮ್ಮ‌ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮುಖಂಡರಾದ ಎಚ್. ಎಸ್. ಕೊರಡ್ಡಿ, ವಿ‌. ಎಸ್. ಪಾಟೀಲ, ರಾಜೇಸಾಬ ಮುಲ್ಲಾ, ಕುಮಾರ ದೇಸಾಯಿ, ಬಿ. ಜಿ. ಬಿರಾದಾರ, ಪ್ರಕಾಶ ಸೊನ್ನದ, ಎಂ. ಎನ್. ಚೋರಗಸ್ತಿ ಉಪಸ್ಥಿತರಿದ್ದರು.

Read More

ಯಕ್ಕುಂಡಿಯಲ್ಲಿ ನಡೆದ ಜಲ ರತ್ನಾಕರ ಪ್ರಶಸ್ತಿ ಪ್ರದಾನ ಸಮಾರಂಭ | 3ಕೃತಿಗಳ ಲೋಕಾರ್ಪಣೆ ವಿಜಯಪುರ: ಜಿಲ್ಲೆಯ ಜನ ನೆಮ್ಮದಿಯ ಬದುಕು ಸಾಗಿಸುವ ಕೆಲಸ ಮಾಡಿದ್ದೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ನಡೆದ ಜಲ ರತ್ನಾಕರ ಪ್ರಶಸ್ತಿ ಪ್ರಧಾನ ಮತ್ತು ಮೂರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಲಸಂಪನ್ಮೂಲ ಸಚಿವನಾಗಿದ್ದಾಗ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ಈ ಬಾಗದಲ್ಲಿ ರೂ. 14000 ಕೋ. ವೆಚ್ಚದಲ್ಲಿ ನಾನಾ ನೀರಾವರಿ ಯೋಜನೆಗಳನ್ನು ಮಾಡಿದ್ದೇನೆ. ಇದರಿಂದಾಗಿ ರೈತರು ತೋಟಗಾರಿಕೆ ಬೆಳೆಗಳ ರಕ್ಷಣೆಗಾಗಿ ಪ್ರತಿವರ್ಷ ಟ್ಯಾಂಕರ್ ಮೂಲಕ ನೀರು ಖರೀದಿಸುವ ಅನಿವಾರ್ಯತೆ ತಪ್ಪಿದೆ. ಶ್ರೀಗಳು ನನಗೆ ಜಲನಾಯಕ ಎಂದು ಬಿರುದು ನೀಡಿರುವುದು ವಿಶ್ವಶ್ರೇಷ್ಠ ಪ್ರಶಸ್ತಿಯಾಗಿದೆ ಎಂದು ಅವರು ತಿಳಿಸಿದರು.ನಮ್ಮ ಜನ ಶ್ರೀಮಂತರಾಗಿ ನೆಮ್ಮದಿಯ ಜೀವನ ಸಾಗಿಸಲು ಕ್ರಮ ಕೈಗೊಂಡಿದ್ದೆ. ಜೀವನಕ್ಕೆ ಅಗತ್ಯವಾಗಿರುವ ಜಲ, ವೃಕ್ಷ, ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.ಮಮದಾಪುರದ ವಿರಕ್ತಮಠದ ಅಭಿನವ…

Read More

ಕೊನೆಯ ಘಳಿಗೆಯಲ್ಲಿ ತಪ್ಪಿದ ಟಿಕೆಟ್ | ಸ್ವಾಮೀಜಿ ಒತ್ತಡ | ಕುಮಾರಸ್ವಾಮಿಯವರಿಂದ ಅನ್ಯಾಯ ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಶೂನ್ಯದಿಂದ ಸಂಘಟನೆ ಮಾಡಿ ಇಂದು ಗೆಲ್ಲುವ ಹಂತಕ್ಕೆ ತಂದು ನಿಲ್ಲಿಸಿದ ನನಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಕ್ಷದ ಬಿಫಾರಂ ತಪ್ಪಿಸಿ ಅವಕಾಶವಾದ ರಾಜಕಾರಣ ಮಾಡಿದ್ದಾರೆ ಎಂದು ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಪರಮಾನಂದ ಟಣಕೇದಾರ ಆರೋಪಿಸಿದರು.ಗುರುವಾರ ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವನಬಾಗೇವಾಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಟ್ಟಲು ನಾನು ಲಕ್ಷಾಂತರ ರೂ ಸಂಬಳದ ಸರಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಹಲವು ತಿಂಗಳುಗಳಿAದ ಪಕ್ಷ ಸಂಘಟನೆ ಮಾಡಿದ್ದೆ. ಪಕ್ಷದ ಟಿಕೆಟ್ ಕುರಿತು ನಮ್ಮ ನಾಯಕರಾದ ಕುಮಾರಸ್ವಾಮಿ ಮತ್ತು ಬಂಡೆಪ್ಪ ಕಾಶಂಪೂರ ಅವರೊಂದಿಗೆ ಮಾತನಾಡಿ ಖಚಿತ ಪಡಿಸಿಕೊಂಡಿದ್ದೆ. ಅವರೂ ಸಹ ಯಾವ ಕಾರಣಕ್ಕೂ ಕೊನೆಯ ಹಂತದಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಭರವಸೆಯನ್ನೂ ಸಹ ಕೊಟ್ಟಿದ್ದರು. ಆದರೀಗ ಭಿಫಾರಂ ಕೊಡುವುದಾಗಿ ಹೇಳಿ ನನ್ನನ್ನು ಬೆಂಗಳೂರಿಗೆ…

Read More

ಮುಳವಾಡದಲ್ಲಿ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಕೊಲ್ಹಾರ: ತಾಲ್ಲೂಕಿನ ಮುಳವಾಡ ಗ್ರಾಮದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಅಖಿಲಗೌಡ ಪಾಟೀಲ್, ಸಂಗನಗೌಡ ಯಂಕಂಚಿ, ಪ್ರವೀಣ ಬುಟೆ, ಬಸವರಾಜ ಬಾಗೇವಾಡಿ, ಸಂಗಮೇಶ ಬಾಟಿ ಸೇರಿದಂತೆ 16 ಹಳ್ಳಿಗಳ ನೂರಾರು ಯುವಕರು ಬಸವನಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಕಾಂಗ್ರೆಸ್ ದುರಾಡಳಿತ ಮತ್ತು ಜವಾಬ್ದಾರಿ ಮರೆತ ಶಾಸಕ ಶಿವಾನಂದ ಪಾಟೀಲರ ಸರ್ವಾಧಿಕಾರಿ ಧೋರಣೆಗೆ ಬೇಸತ್ತು ಇಂದು ಸಾವಿರಾರು ಜನ ಯುವಕರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಕಾರ್ಯಕರ್ತರೇ ಪಕ್ಷದ ಶಕ್ತಿ. ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ನೀರಾವರಿ ಯೋಜನೆಗಳು ಸಾಕಾರಗೊಂಡಿದ್ದು ಬಿಜೆಪಿ ಅಧಿಕಾರವಧಿಯಲ್ಲಿ. ಈ ಬಾರಿ ಮತಕ್ಷೇತ್ರದ ಜನ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳಿಗೆ ನೀಡಿದ್ದ ವಚನದಂತೆ ಮೂರನೇ ಹಂತದ ನೀರು ರೈತರ ಜಮೀನುಗಳಿಗೆ ಹರಿಸುವವರೆಗೂ ವಿಶ್ರಾಂತಿ…

Read More