Author: editor.udayarashmi@gmail.com

ದೇವರಹಿಪ್ಪರಗಿ: ಪಕ್ಷದ ಕಾರ್ಯಕರ್ತರನ್ನು ಸಮಾನ ಮನಸ್ಸಿನಿಂದ ಕಾಣಲಾಗುವುದು ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಹೇಳಿದರು. ಪಟ್ಟಣದಲ್ಲಿ ಶನಿವಾರ ಪಕ್ಷದ ಕಾರ್ಯಾಲಯದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಹಿಂದೆ ಆದ ಘಟನೆಗಳನ್ನು ಮರೆಯೋಣ. ನಾವೆಲ್ಲ ಒಂದಾಗಿ ಜಯಕ್ಕಾಗಿ ಶ್ರಮಿಸೋಣ. ಪಕ್ಷ ಸೇರ್ಪಡೆಗೊಂಡ ಕಾರ್ಯಕರ್ತರಲ್ಲಿ ಇವರು ಹಳಬರು, ಹೊಸಬರು ಎಂಬ ಭೇಧಭಾವ ಬೇಡ ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣೋಣ ಎಂದರು. ಪಕ್ಷಕ್ಕೆ ಸೇರದೇ ಬಾಹ್ಯ ಬೆಂಬಲ ನೀಡಿದ ಡಾ.ಆರ್.ಆರ್.ನಾಯಿಕ್, ರಾಜು ಗುತ್ತೇದಾರ ಹಾಗೂ ಪಕ್ಷ ಸೇರ್ಪಡೆಗೊಂಡ ವಿನೋದ ಪಾಟೀಲ, ಶಿವಾನಂದ ಯಾಳಗಿ ಮಾತನಾಡಿ, ಈ ಬಾರಿ ಸೌಮ್ಯ ಸ್ವಭಾವದ ರಾಜುಗೌಡರನ್ನು ಬೆಂಬಲಿಸಿ ಗೆಲ್ಲಿಸೋಣ ಎಲ್ಲರೂ ಕೈಜೋಡಿಸಿ ಎಂದರು.ನಂತರ ಪಕ್ಷಕ್ಕೆ ಸೇರ್ಪಡೆಗೊಂಡ ಗುರು ಜಡಗೊಂಡ, ಮಹಾಂತೇಶ ವಂದಾಲ, ನಾಗೇಂದ್ರ ಇಂಡಿ, ಮಲ್ಲು ಹಳಿಮನಿ, ರಾಜು ಠಾಕೂರ್, ಸದಾನಂದ ಮಣೂರ, ಸಂಗು ಹಳಿಮನಿ, ಪ್ರಭು ರತ್ನಾಕರ…

Read More

ತಿಕೋಟಾ: ವಿಭೂತಿ ಮಾರಾಟ ಮಾಡುವ ದಂಪತಿಯ ಪುತ್ರ ದ್ವಿತೀಯ ಪಿಯುಸಿಯಲ್ಲಿ ಶೆ‌.91.33 ರಷ್ಟು ಅಂಕ ಪಡೆಯುವ ಮೂಲಕ ಹೆತ್ತವರ, ಶಾಲೆಯ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಶ್ರೀಶೈಲ ಹಿರೇಮಠ ಹಾಗೂ ಕಲ್ಪನಾ ದಂಪತಿಗಳ ಪುತ್ರ ಷಡಕ್ಷರಿ ಈ ಬಾರಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಮೂಲಕ ತಂದೆ ತಾಯಿಯ ಖುಷಿಯನ್ನು ಇಮ್ಮಡಿಗೊಳಿಸಿದ್ದಾನೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಬಿ.ಎಲ್.ಡಿ.ಇ ಸಂಸ್ಥೆಯ ಕಾಮರ್ಸ ಬಿಎಚ್ಎಸ್ ಆರ್ಟ್ಸ ಆ್ಯಂಡ್ ಟಿಜಿಪಿ ಸೈನ್ಸ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವಿಧ್ಯಾಭ್ಯಾಸ ಮಾಡಿದ ಷಡಕ್ಷರಿ ಕಾಲೇಜಿನ ಉಪನ್ಯಾಸಕರಾದ ಎಸ್.ಎಂ.ವಾಂಗಿ, ಎಂ.ಎಂ.ಪುಟ್ಟನವರ, ಗುರು ಹಿರೇಮಠ ಹಾಗೂ ಕಾಲೇಜಿನ ಸಿಬ್ಬಂದಿಗಳ ಮಾರ್ಗದರ್ಶನದಿಂದ ಹೆಚ್ಚಯ ಅಂಕ ಪಡೆದುಕೊಂಡಿದ್ದಾನೆ. ತಂದೆ ತಾಯಿಗಳು ಜಾತ್ರೆ, ಪೂಜ್ಯರ ಪ್ರವಚನ ಸ್ಥಳ ಹಾಗೂ ಸಿದ್ದೇಶ್ವರ ಶ್ರೀಗಳ ಆಶ್ರಮ ಸ್ಥಳಗಳಲ್ಲಿ ವಿಭೂತಿ ವ್ಯಾಪಾರ ಮಾಡುತ್ತಾರೆ. ಊರೂರು ಸುತ್ತುತ್ತಾ ವಿಭೂತಿ ವ್ಯಾಪಾರ ನಡೆಸುವ ಈ ದಂಪತಿಗಳು ಮಕ್ಕಳಿಗೆ ಉತ್ತಮ‌ ಶಿಕ್ಷಣ ನೀಡುತ್ತಿದ್ದಾರೆ. ಪ್ರಾಥಮಿಕ…

Read More

ದೇವರಹಿಪ್ಪರಗಿ: ಮುಳಸಾವಳಗಿ ಗ್ರಾಮದಲ್ಲಿ ರಂಜಾನ್ ಪ್ರಯುಕ್ತ ಮಲ್ಲಿಕಾರ್ಜುನ ದೇವಸ್ಥಾನ ಕಮೀಟಿ ಪದಾಧಿಕಾರಿಗಳು ಮುಸ್ಲಿಂ ಬಾಂಧವರಿಗೆ ಪ್ರಸಾದ, ತಂಪುಪಾನೀಯ, ಮಜ್ಜಿU,ೆ ಬಾಳೆಹಣ್ಣು ನೀಡಿ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮ ಹಜರತ್ ಮತಾಬ್ ಸಾಹೇಬ್ ದರ್ಗಾ ಉರುಸ್ ಹಾಗೂ ಮಲ್ಲಯ್ಯ ದೇವಸ್ಥಾನ ಐದೇಶಿ ಹಾಗೂ ಜಾತ್ರೆಗೆ ಹೆಸರಾಗಿದ್ದು, ಸೌಹಾರ್ದತೆಗೆ ಮಾದರಿಯಾಗಿದೆ. ಇಲ್ಲಿ ಹಿಂದೂ ಮುಸ್ಲಿಂರೆಲ್ಲರೂ ಸೇರಿ ಹಬ್ಬ ಆಚರಿಸಿರುವುದು ವಿಶೇಷ. ಅಂತೆಯೇ ರಂಜಾನ್ ಹಬ್ಬದ ನಿಮಿತ್ಯ ಗ್ರಾಮದ ಮುಸ್ಲಿಂ ಜನತೆಗೆÉ ಪ್ರಸಾದ ವ್ಯವಸ್ಥೆ ಮಾಡಿ ಸಾಮರಸ್ಯಕ್ಕೆ ಸಾಕ್ಷಿಯಾದರು.ಕಳೆದ ವಾರವಷ್ಟೆ ಮಲ್ಲಯ್ಯನ ಕಂಬಿ ಹಾಗೂ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಸಮುದಾಯ ಮುಂದೆ ನಿಂತು ಹಿಂದೂ ಜನತೆಗೆ ಪ್ರಸಾದ, ತಂಪುಪಾನೀಯ ವಿತರಿಸಿ ಸಾಮರಸ್ಯಕ್ಕೆ ನಾಂದಿ ಹಾಡಿದ್ದರು. ಇದೇ ದಾರಿಯಲ್ಲಿ ಹಿಂದೂ ಸಮುದಾಯದವರು ರಂಜಾನ್ ಹಬ್ಬದಲ್ಲಿ ಪ್ರಸಾದ ವಿತರಿಸಿ ಒಬ್ಬರಿಗೊಬ್ಬರೂ ಶುಭಾಶಯ ವಿನಿಮಯ ಮಾಡಿಕೊಂಡರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಲಕಪ್ಪ ಸುರಗಿಹಳ್ಳಿ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಶರಣಗೌಡ ಪಾಟೀಲ, ಜಿ.ಪಿ.ಬಿರಾದಾರ, ವಿರುಪಾಕ್ಷಿ ರೋಡಗಿ,…

Read More

ದೇವರಹಿಪ್ಪರಗಿ: ಸಕಲ ಪ್ರಕೃತಿ ಆ ದೇವರು ನಮಗೆ ಕೊಟ್ಟ ಅಮೂಲ್ಯ ಕೊಡುಗೆಗಳಾಗಿವೆ. ಆದ್ದರಿಂದ ನಾವು ದೇವರನ್ನು ಸದಾ ಸ್ಮರಿಸುವುದರ ಮೂಲಕ ಚಿರಋಣಿಯಾಗಿರಬೇಕು. ಎಂದು ಮೌಲಾನಾ ಇಸ್ಮಾಯಿಲ್ ಚಟ್ಟರಕಿ ಹೇಳಿದರು.ಪಟ್ಟಣದ ಈದಗಾ ಮೈದಾನದಲ್ಲಿ ಶನಿವಾರ ರಮಜಾನ್ ನಿಮಿತ್ಯ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಪ್ರತಿಯೊಬ್ಬರ ಪ್ರಾಮಾಣಿಕತೆಯಿಂದ ಸಾಗಬೇಕು. ಪ್ರತಿಯೊಂದು ಧರ್ಮದ ಸಾರವು ಒಂದೇ ಆಗಿದ್ದು, ಇಡೀ ಜಗತ್ತು ದೇವರು ನೀಡಿದ ಕೊಡುಗೆಯಾಗಿದೆ . ಈ ಕೊಡುಗೆಯನ್ನು ಸ್ಮರಣೆ ಮಾಡುವುದರ ಜೊತೆ ನಮ್ಮ ಕಾಯಕದೊಂದಿಗೆ ದೇವರ ಧ್ಯಾನ ಮಾಡಲು ಆ ದೇವರೇ ಸದಾವಕಾಶ ಕಲ್ಪಿಸಿಕೊಟ್ಟಿದ್ದಾನೆ. ಅದುವೇ ಪವಿತ್ರ ರಮಜಾನ್ ಮಾಸ. ಈ ಪವಿತ್ರ ಮಾಸವನ್ನು ಉತ್ತಮ ರೀತಿಯಲ್ಲಿ ಆಚರಿಸಿ ಪಾವನರಾಗಬೇಕಾಗಿದೆ ಎಂದರು.ಪಟ್ಟಣದ ಸಮಸ್ತ ಮುಸ್ಲಿಂ ಸಮುದಾಯ ಈದಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಪರಸ್ಪರ ಆಲಂಗಿಸಿಕೊAಡು ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯನ್ನು ಮೌಲ್ವಿ ಇಸ್ಮಾಯಿಲ್‌ಸಾಬ್ ಲಾಳಸಂಗಿ ನಡೆಸಿಕೊಟ್ಟರು.ಪ್ರಾರ್ಥನೆಯಲ್ಲಿ ಮೌಲಾನಾ ರಫೀಕ್ ಪಾನಪರೋಷ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ ಯಲಗಾರ, ಅಂಜುಮನ್…

Read More

ದೇವರಹಿಪ್ಪರಗಿ: ಮತಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಈ ಸಲ ಬಹುಮತದಿಂದ ಗೆಲುವು ಸಾಧಿಸುವುದರ ಜೊತೆಗೆ ಪದಾಧಿಕಾರಿಗಳು ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತೇನೆ. ಪ್ರತಿಯೊಬ್ಬರೂ ಮತ ನೀಡಿ ಬೆಂಬಲಿಸಿ ಆಶೀರ್ವಾದ ಮಾಡಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಮನವಿ ಮಾಡಿದರು.ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ಸಾತಿಹಾಳ, ಬೈರವಾಡಗಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸಂಚರಿಸಿ ಕಾಂಗ್ರೆಸ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ನಮ್ಮ ಕಾರ್ಯಕರ್ತರು ರೋಸಿ ಹೋಗಿದ್ದಾರೆ. ರಾಜ್ಯ ಸರಕಾರದ ಮಂತ್ರಿಗಳು ೪೦% ಕಮೀಷನ್ ಪಡೆದು ರಾಜ್ಯದ ಬೊಕ್ಕಸವನ್ನೆಲ್ಲ ಕೊಳ್ಳೆ ಹೊಡೆದಿದ್ದಾರೆ. ಬಿಜೆಪಿಯ ಅಧಿಕಾರ ದಾಹ ದುರಾಡಳಿತ, ನಿರುಪಯುಕ್ತ ಯೋಜನೆಗಳು, ಸಾಮಾಜಿಕ ಸಾಮರಸ್ಯವಿಲ್ಲದಿರುವುದು ಸರಕಾರಿ ಯೋಜನೆಗಳ ದುರುಪಯೋಗ ಇವುಗಳಿಂದ ಬೇಸತ್ತು ಹೋಗಿದ್ದಾರೆ. ಅದಕ್ಕಾಗಿ ಜನಪರ ಕಾಳಜಿ ಇರುವ ಕಾಂಗ್ರೆಸ್ ಸರಕಾರ ಬಯಸುತ್ತಿದ್ದು, ಸ್ವಯಂಪ್ರೇರಿತರಾಗಿ ನಮ್ಮ ಪರ ಪ್ರಚಾರ ಮಾಡುತ್ತಿದ್ದಾರೆ. ಪ್ರತಿಯೊಂದು ಗ್ರಾಮಗಳಲ್ಲಿ ನೂರಾರು ಜನ ಸೇರುವುದು ಸಾಕ್ಷಿಯಾಗಿದೆ. ಈ ಬಾರಿ ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲುವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಕಾಂಗ್ರೆಸ್…

Read More

ಚಡಚಣ: ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಕೊಡುಗೆಯಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ, ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.ತಾಲೂಕಿನ ಏಳಗಿ ಪಿ ಎಚ್ ಗ್ರಾಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.ಸಮ್ಮಿಶ್ರ ಸರಕಾರದ ಸಮಯದಲ್ಲಿ ಮತಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗೆ ತಂದಿರುವ ಸಾವಿರಾರು ಕೋಟಿ ಅನುದಾನವನ್ನು ನಂತರ ಆಗಮಿಸಿದ ಬಿಜೆಪಿ ಸರಕಾರದ ಸಚಿವರು ಅನುದಾನವನ್ನು ಹಿಂಪಡೆದಿರುವುದನ್ನು ಮತಕ್ಷೇತ್ರದ ಜನ ಮರೆತಿಲ್ಲ. ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದಲ್ಲದೆ ನನ್ನ ಮಾನಸಿಕ ನೆಮ್ಮದಿ ಹಾಳುಮಾಡಿದ್ದಾರೆ. ಇದೆಲ್ಲವನ್ನು ಅರಿತ ಮತಕ್ಷೇತ್ರದ ಜನ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿಸುಭಾಷಗೌಡ ಪಾಟೀಲ್, ಅಮಸಿದ್ದ ವಾಬಳೆ, ಬಸವರಾಜ ಪೂಜಾರಿ, ಅಪ್ಪಣ್ಣ ಪೂಜಾರಿ, ಪ್ರಭಾಕರ ಗುಮತೆ, ಶ್ರೀ.ಸಾತಣ್ಣ ವಾಲಿ, ಜಗನ್ನಾಥ ಗೌಡ ಬಿರಾದಾರ, ದಯಾನಂದ ಕಸಮೋಳೆ, ಸಂಗಪ್ಪ ಸುಸಲಾಧಿ, ಬಸವರಾಜ ವಾಲಿಕಾರ, ಲಕ್ಷ್ಮಿ ಕಾಂತ, ವಿಕಾಸ ಗೌಡ ಬಿರಾದಾರ ಕಾರ್ಯಕರ್ತರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು…

Read More

ನಗರದ ವಿವಿಧೆಡೆ ಶಾಸಕ ಯತ್ನಾಳ ಮತಯಾಚನೆ ವಿಜಯಪುರ: ಕಳೆದ ಬಾರಿ ಮುಸ್ಲಿಂ ಸಮುದಾಯ ಪ್ರದೇಶಗಳಲ್ಲಿ ಸಾವಿರಕ್ಕೆ ಒಂದೆರಡು ಮತಗಳು ಮಾತ್ರ ನಮಗೆ ಬಿದ್ದಿವೆ. ಅದೇ ರೀತಿ ನಮ್ಮ ಹಿಂದೂಗಳು ಕೂಡ ಜಾಗೃತರಾಗಿ, ಒಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನನಗೆ ಮತ ನೀಡಬೇಕು ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.ನಗರದ ವಾರ್ಡ ನಂ.29 ಮತ್ತು 3೦ರ ಕಾಸಗೇರಿ ಓಣಿ, ಗೌಡರ ಓಣಿ, ರಾಮನಗರ, ರಾಜಾಜಿನಗರದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಕಳೆದ ಬಾರಿ ನಮ್ಮವರು ಶೇ 58 ರಷ್ಟು ಮಾತ್ರ ಮತದಾನ ಮಾಡಿದರೆ, ಅವರು ಶೇ ೮೫ ರಷ್ಟು ಮತದಾನ ಮಾಡಿದ್ದರು. ಈ ಬಾರಿ ಶೇ ೯೦ ರಷ್ಟು ನಾವುಗಳು ಮತದಾನ ಮಾಡಿದರೆ, ಕನಿಷ್ಠ 4೦ ಸಾವಿರ ಮತಗಳಿಂದ ಗೆದ್ದು, ಮತ್ತೆ ಕೇಸರಿ ಗುಲಾಲ ಹಾರುವುದು ನಿಶ್ಚಿತ ಎಂದರು.ಮತದಾನ ಸಮಯದಲ್ಲಿ ಎಲ್ಲಿಯೂ ಕೂಡ ದಾಂಧ0ಲೆ ಆಗಲು ಸಾಧ್ಯವಿಲ್ಲ. ಮಿಲಿಟರಿ ನಿಯೋಜನೆ ಇರುತ್ತದೆ. ಸೂಕ್ಷö್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೇರಾ ಸಹ…

Read More

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶನಿವಾರ ಮುಸ್ಲಿಂ ಬಾಂಧವರು ಈದ್‌ಉಲ್ ಫಿತ್ರ ಹಬ್ಬವನ್ನು (ರಂಜಾನ್) ಸಡಗರ,ಸಂಭ್ರಮದಿಂದ ಆಚರಿಸಿದರು. ಮಕ್ಕಳು, ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಹೊಸ ಬಟ್ಟೆ ತೊಟ್ಟು ಬೆಳಗ್ಗೆ ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಸಾಮೂಹಿಕ ಪ್ರಾರ್ಥನೆಯಲ್ಲಿ ಜಾಮೀಯಾ ಮಸೀದಿಯ ಹಾಫೀಜ್ ಮಹ್ಮದಅಲಿ ಮಿಲಿ ಮಾತನಾಡಿ, ರಂಜಾನ ತಿಂಗಳಲ್ಲಿ ಒಂದು ತಿಂಗಳ ಕಾಲ ನಮ್ಮ ಬಾಂಧವರು ಉಪವಾಸ ಇರುವದು ಒಂದು ತರಬೇತಿಯಿದ್ದಂತೆ ಈ ಅವಽಯಲ್ಲಿ ತಮ್ಮ ಆತ್ಮವನ್ನು ಶುದ್ಧಿ ಮಾಡಿಕೊಂಡಂತೆ ಉಳಿದ ಅವಽಯಲ್ಲಿ ಇದೇ ಮನಸ್ಥಿತಿಯಲ್ಲಿ ಇದ್ದು ಎಲ್ಲ ಬಾಂಧವರು ಉತ್ತಮ ಜೀವನ ನಡೆಸುವಂತಾಗಬೇಕು. ದೀನ-ದಲಿತ ಬಡವರ ನಿರ್ಗತಿಕರ, ನಿರಾಶ್ರಿತರ, ವಿಧವೆಯರ ಸ್ಥಿತಿಗತಿ ಅರಿತು ಅವರಿಗೆ ಸಹಾಯಧನ ನೀಡಬೇಕು. ದೇಶದಲ್ಲಿ ಹಬ್ಬದ ಆಚರಣೆ ಎಲ್ಲ ಧರ್ಮದಂತೆ ಆಚರಣೆ ಮಾಡಬೇಕು. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಸೌಹಾರ್ದ, ಪರಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಬೇಕು. ಎಲ್ಲರೂ ಸಂತಸದ ಜೀವನ…

Read More

ತಾಳಿಕೋಟಿ: ಪವಿತ್ರ ರಮಜಾನ್ ಹಬ್ಬದ ಪ್ರಯುಕ್ತ ಶನಿವಾರ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲೀಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಈ ಸಂದರ್ಭದಲ್ಲಿ ಈದ್ ಪ್ರವಚನ ನೀಡಿದ ಡಾ.ಮಿನ್‌ಹಾಜುದ್ದೀನ ಖಾಜಿ ಅವರು, ನಮ್ಮೆಲ್ಲರ ಸೃಷ್ಠಿಕರ್ತ ಒಬ್ಬನೇ ಆಗಿದ್ದಾನೆ. ನಾವೆಲ್ಲರೂ ಅವನ ಆಜ್ಞೆಗಳಿಗೆ ಶರಣಾಗಿ ಬಾಳಬೇಕಾಗಿದೆ. ಅವನ ದೃಷ್ಠಿಯಲ್ಲಿ ನಾವೆಲ್ಲರೂ ಸಮಾನರಾಗಿದ್ದೇವೆ. ನಮ್ಮ ಪೈಕಿ ಪ್ರತಿಯೊಬ್ಬರೂ ಸತ್ಯ ಹಾಗೂ ಪ್ರಾಮಾಣಿಕತೆಯ ಗುಣವನ್ನು ಬೆಳಸಿಕೊಳ್ಳಬೇಕು.ಪ್ರವಾದಿ ಮಹಮ್ಮದರ ಆದರ್ಶಗಳನ್ನು ಅನುದಿನವೂ ಪಾಲಿಸಬೇಕು. ಪರೋಪಕಾರ ಮಾನವೀಯ ಅನುಕಂಪದAತಹ ಉದಾತ್ತಗುಣಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿರುವ ಬಡ ಹಾಗೂ ನಿರ್ಗತಿಕರಿಗೆ ನೆರವಾಗಬೇಕು. ಸಮಾಜದಲ್ಲಿರುವ ಎಲ್ಲ ಧರ್ಮೀಯರೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಶಾಂತಿ ಸಾಮರಸ್ಯದಿಂದ ಜೀವನ ನಡೆಸಬೇಕು ಎಂದರು.ಶಿಕ್ಷಣದಿAದ ಮಾತ್ರ ಸಮಾಜದ ಸರ್ವಾಂಗೀಣ ಪ್ರಗತಿ ಸಾಧ್ಯ, ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಲು ಪ್ರಯತ್ನಿಸಬೇಕು. ಇವರಿಂದ ಸಮಾಜದ ಅಭಿವೃದ್ಧಿ ಆಗುವುದರೊಂದಿಗೆ ದೇಶಕ್ಕೆ ಸತ್ಪçಜೆಯನ್ನು ನೀಡಿದಂತಾಗುತ್ತದೆ. ರಮಜಾನ್ ಮಾಸದಲ್ಲಿ ಉಪವಾಸಗಳ ಮೂಲಕ ಪಡೆದುಕೊಂಡ ಶಾಂತಿ, ಸಹನೆಯಂಥಹ ಉದಾತ್ತ ಗುಣಗಳನ್ನು…

Read More

ನಾಗಠಾಣದ ಬಂಜಾರಾ ಸಮಾಜದ ಸಾವಿರಾರು ಜನ ಕಾಂಗ್ರೆಸ್ ಸೇರ್ಪಡೆ ವಿಜಯಪುರ: ಇಂದಿರಾಗಾಂಧಿ ಮತ್ತು ಕಾಂಗ್ರೆಸ್‌ನ ಬಹುದೊಡ್ಡ ಕೊಡುಗೆ ಬಂಜಾರಾ ಸಮಾಜಕ್ಕೆ ಇದೆ. ಸುಳ್ಳು ಹೇಳುವ ಮೋದಿಯದ್ದಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.ಶನಿವಾರ ನಗರದಲ್ಲಿ ತಮ್ಮ ನೇತೃತ್ವದಲ್ಲಿ ನಾಗಠಾಣ ಮತ ಕ್ಷೇತ್ರದ ಸಾವಿರಾರು ಲಂಬಾಣಿ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆಯ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ, ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದು ಇಂದಿರಾಗಾಂಧಿ. ಸಂತ ಸೇವಾಲಾಲರ ಜಯಂತಿ ಆಚರಣೆಗೆ ತಂದಿದ್ದು ಸಿದ್ದರಾಮಯ್ಯ. ದೇವರಾಜ್ ಅರಸ್, ಕೆ.ಟಿ.ರಾಠೋಡ್, ಎಲ್.ಆರ್. ನಾಯಕ್ ಅವರಿಂದ ಸಮುದಾಯ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಕಾಂಗ್ರೆಸ್ ಮೊದಲಿನಿಂದಲೂ ಬಂಜಾರಾ ಸಮಾಜದ ಹಿತ ಕಾಪಾಡುತ್ತಲೇ ಬಂದಿದೆ. ಆದರೆ ಬಿಜೆಪಿ ಮಾತ್ರ ಈಗ ಒಳ ಮೀಸಲಾತಿ ನೆಪದಲ್ಲಿ ನಿಮ್ಮನ್ನು ಸದಾಶಿವ ಆಯೋಗದಿಂದಲೇ ಕೈಬಿಡುವ ಹುನ್ನಾರ ನಡೆಸಿದೆ. ಇದನ್ನು ನೀವು ಅರ್ಥ ಮಾಡಿಕೊಳ್ಳಿ ಎಂದು ಎಚ್ಚರಿಸಿದರು.ಲಂಬಾಣಿಗರೆಂದರೆ ಗೌಡ, ಸಾಹುಕಾರರಿಗಿಂತ ಮೂಲ ಕಾಂಗ್ರೆಸ್ಸಿಗರು. ಇತ್ತೀಚೆಗೆ ಭ್ರಮೆಯ ಬಲೆಯಲ್ಲಿ ಹಲವರು ಬಿಜೆಪಿ ಕಡೆ ಸಿಕ್ಕಿಹಾಕಿಕೊಂಡರು.…

Read More