Author: editor.udayarashmi@gmail.com

ಕೊಲ್ಹಾರ: ಕಳೆದ ೧೦ ವರ್ಷಗಳ ನನ್ನ ಅಧಿಕಾರ ಅವಧಿಯಲ್ಲಿ ಕ್ಷೇತ್ರದ ಜನತೆಗೆ ಮಾತು ಕೊಟ್ಟಂತೆ ಪ್ರತಿಯೊಂದು ಊರಿನ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು ತಮ್ಮ ಕಣ್ಣ ಮುಂದೆಯೇ ಕಾಣುತ್ತಿದೆ ಅದ್ದರಿಂದ ಬರುವ ಮೇ೧೦ ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತಾವುಗಳು ಮತ್ತೊಮ್ಮೆ ನನ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ತಮ್ಮ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಶಿವಾನಂದ ಎಸ್ ಪಾಟೀಲ ಹೇಳಿದರು.ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣಾ ನಿಮಿತ್ಯವಾಗಿ ಬಸವನ ಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಶಿವಾನಂದ ಪಾಟೀಲರು ಕೊಲ್ಹಾರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕೈಗೊಂಡ ಮತಯಾಚಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ನೂರಕ್ಕೆ ಎಪ್ಪತರಷ್ಟು ಕೆಲಸ ಮಾಡಿದ್ದು ಇನ್ನು ಮೂವತ್ತುಪ್ರತಿಶತ ಕೆಲಸ ಬಾಕಿ ಇದ್ದು ತಾವುಗಳು ಈ ಬಾರಿ ನನ್ನನ್ನು ಗೆಲ್ಲಿಸಿದರೆ ಸರ್ವ ಕಾಮಗಾರಿಗಳು ನೂರಕ್ಕೆ ನೂರರಷ್ಟು ಪೂರ್ಣಗೊಳಿಸುತ್ತೇನೆ. ಅಣ್ಣ ಬಸವಣ್ಣನ ಜನ್ಮಸ್ಥಳದ ನಂಟು ನನ್ನನ್ನು ಈ ಕ್ಷೇತ್ರ ಬಿಟ್ಟು ಹೋಗದಂತೆ ತಡೆಯುತ್ತಿದ್ದು ನಿಮ್ಮೆಲ್ಲರ…

Read More

ದೇವರಹಿಪ್ಪರಗಿ: ಕ್ಷೇತ್ರದ ಸರ್ವ ಸಮುದಾಯದ ಬಂಧುಗಳು ಭೇದ ಭಾವ ಮಾಡದೇ ನನ್ನನ್ನು ಪ್ರೀತಿಪೂರ್ವಕವಾಗಿ ಬೆಂಬಲಿಸುತ್ತಿರುವುದು ಚುನಾವಣೆಗೆ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಭೀಮನಗೌಡ (ರಾಜುಗೌಡ) ಪಾಟೀಲ ಕುದುರಿಸಾಲವಾಡಗಿ ಹೇಳಿದರು.ದೇವರಹಿಪ್ಪರಗಿ ಮತಕ್ಷೇತ್ರದ ವಿವಿಧ ತಾಂಡಾಗಳ ಬಂಜಾರ ಮಹಿಳೆಯರು ಸೇರಿದಂತೆ ಯುವಕರು ಬುಧವಾರ ಮೆರವಣಿಗೆ ಮೂಲಕ ಆಗಮಿಸಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು,ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಸೇರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಬಂಜಾರ ಸಮುದಾಯದವರ ಪಕ್ಷ ಸೇರ್ಪಡೆಯಿಂದ ಆನೆ ಬಲ ಬಂದಂತಾಗಿದೆ ಎಂದರು.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ ಮಾತನಾಡಿ, ಈ ಸಲ ಜೆಡಿಎಸ್ ಮತದಾರರ ಮನ ಗೆಲುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಬೆಂಬಲಿಸಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ಶ್ರೀಕಾಂತ ರಾಠೋಡ(ಪಡಗಾನೂರ ತಾಂಡಾ) ಮಾಜಿ ಉಪಾಧ್ಯಕ್ಷ ಸುರೇಶ ಜಾಧವ್, ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಯುವ ಮುಖಂಡ ಗುರುರಾಜ್ ಆಕಳವಾಡಿ (ಪಡಗಾನೂರ) ಮಾತನಾಡಿದರು. ನಂತರ ಮಹಿಳೆಯರು, ಯುವಕರಿಗೆ ಶಾಲು ಹೊದಿಸಿ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.ಪಟ್ಟಣ…

Read More

ವಿಜಯಪುರ: ದೇಶದ ನೆಚ್ಚಿನ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರು, ಚುನಾವಣೆ ಪ್ರಚಾರ ಅಂಗವಾಗಿ, ಇದೇ ಶನಿವಾರ 29 ರ ಬೆಳಿಗ್ಗೆ 11 ಗಂಟೆಗೆ ಸುಭಾಷಚಂದ್ರ ಬೋಸ್ ರಸ್ತೆ (ಅಥಣಿ ರಸ್ತೆ) ಯಲ್ಲಿರುವ ಸೈನಿಕ ಶಾಲೆ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಬಹಿರಂಗ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜನಪರ ಯೋಜನೆಗಳ ಮೂಲಕ ಅಭಿವೃದ್ಧಿ ಜೊತೆಗೆ ದೇಶದ ಕೀರ್ತಿಯನ್ನು ಜಗತ್ತಿನಾದ್ಯಂತ ಹೆಚ್ಚಿಸುತ್ತಿರುವ ಹೆಮ್ಮೆಯ ಪ್ರಧಾನ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು. ಎಲ್ಲ ಕಡೆಯಿಂದ ಜನರಿಗೆ ಅನುಕೂಲ ಮಾಡಿಕೊಡಲು ಸಾರಿಗೆ ಇಲಾಖೆ ಹೆಚ್ಚಿನ ವ್ಯವಸ್ಥೆ ಮಾಡಿರುತ್ತದೆ. ಜಿಲ್ಲೆಯ ಹಾಗೂ ನಗರ ಮತಕ್ಷೇತ್ರದ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು, ಮಾತಾ ಬಗೀನಿಯರು, ವ್ಯಾಪಾರಸ್ಥರು, ವಕೀಲರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಸಾಕ್ಷಿ ಆಗಬೇಕಾಗಿ ಬಿಜೆಪಿ ಪ್ರಚಾರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಸತತ ಪ್ರಯತ್ನ, ನಿರಂತರ ತಪಸ್ಸು, ಪಡೆಯುವ ಛಲದಿಂದ ಶಿವನ ಮುಡಿಯಲ್ಲಿರುವ ಗಂಗೆಯನ್ನು ವರಿಸಿಕೊಂಡು ಗಂಗೆಯನ್ನೇ ಭೂಮಿಗಿಳಿಸಿ ಮಾನವ ಜಗಉದ್ಧರಿಸಿದ ತಪಸ್ವಿ ಶ್ರೀ ಭಗೀರಥ ಮಹರ್ಷಿ ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರಶ್ರೀ ಭಗೀರಥ ಮಹರ್ಷಿ ಅವರಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.ಸರಕಾರವು ದಾರ್ಶನಿಕರ ಜಯಂತಿಗಳ ಆಚರಣೆಯ ಮೂಲಕ ತತ್ವಾದರ್ಶಗಳನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವುದಾಗಿದೆ.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಾಹುಸಾಹೇಬ ವೈ.ಸುರಕೋಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸೇರಿದಂತೆ,ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು  ಹಾಗೂ ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

Read More

ಬಸವನಬಾಗೇವಾಡಿ: ತಾಲೂಕಿನ ನಾಗೂರ, ಇವಣಗಿ, ಹಂಚಿನಾಳ ಹಂಗರಗಿ ಗ್ರಾಮ ಸೇರಿದಂತೆ ವಿವಿಧೆಡೆ ಗುರುವಾರ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಪರ ಅವರ ಪುತ್ರಿ ಸರೋಜಿನಿ ಗಿಡ್ಡಪ್ಪಗೋಳ ಬೆಂಬಲಿಗರೊಂದಿಗೆ, ಮುಖಂಡರೊಂದಿಗೆ ಮನೆ ಮನೆಗೆ ಕರ ಪತ್ರ ಹಂಚುವ ಮೂಲಕ ಮತಯಾಚಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸರೋಜಿನಿ ಗಿಡ್ಡಪ್ಪಗೋಳ ಅವರು, ತಮ್ಮ ತಂದೆ ಎಸ್.ಕೆ.ಬೆಳ್ಳುಬ್ಬಿ ಅವರು ಶಾಸಕರಿದ್ದ ವೇಳೆಯಲ್ಲಿ ಕೈಗೊಂಡ ಅನೇಕ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕಳೆದ ಹತ್ತು ವರ್ಷದ ಅವಽಯಲ್ಲಿ ಆಗಿಲ್ಲ. ಇವಣಗಿ ಗ್ರಾಮದಲ್ಲಿ ನಿಮ್ಮ ತಂದೆ ಕಾಲದಲ್ಲಿ ಆರಂಭವಾಗಿದ್ದ ಮಂಗಲ ಕಾರ್ಯಾಲಯ ಇನ್ನೂ ಹಾಗೇ ಇದೆ. ಮಹಿಳೆಯರಿಗೆ ಸರಿಯಾಗಿ ಶೌಚಾಲಯ ನಿರ್ಮಾಣವಾಗಿಲ್ಲ. ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಾಣವಾದ ಸಿಸಿ ರಸ್ತೆಗಳು ಮತ್ತೆ ಸಿಸಿ ರಸ್ತೆಗಳು ನಿರ್ಮಾಣವಾಗಿಲ್ಲ. ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ನಿಮ್ಮ ತಂದೆಯವರಿಂದ ಮಾತ್ರ ಅಭಿವೃದ್ಧಿ ಕಾರ್ಯ ಸಾಧ್ಯ ಎಂದು ಮತಬಾಂಧವರು ಮನೆ ಮನೆಗೆ ತೆರಳಿದ ಸಂದರ್ಭದಲ್ಲಿ ತಮ್ಮ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಈ…

Read More

ಢವಳಗಿ: ಗ್ರಾಮದಲ್ಲಿ ಗುರುವಾರದಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಎ ಎಸ್ ಪಾಟೀಲ ನಡಹಳ್ಳಿಯವರು ಬಿರುಸಿನ ಪಚಾರ ನಡೆಸಿದರು.ಗ್ರಾಮದ ಶ್ರೀ ಮಡಿವಾಳೇಶ್ವರ ಉಚಿತ ಪ್ರಸಾದ ನೀಲಯದಿಂದ ಗ್ರಾಮದ ಸಮುದಾಯ ಭವನದವರೆಗೆ ರೋಡ್ ಶೋ ಮಾಡಿ ಮತಯಾಚನೆ ಮಾಡಿದರು. ಅಭಿಮಾನಿಗಳು ಜಿಸಿಬಿ ಮೇಲೆ ನಿಂತು ಪುಷ್ಪದ ರಾಶಿಯನ್ನೇ ಸುರಿಸಿದರು. ಮಹಿಳೆಯರು ಕಲಶ ಹಾಗೂ ಡೊಳ್ಳುವಾಲಗದೊಂದಿಗೆ ಸ್ವಾಗತಿಸಿಕೊಂಡರು.ಈ ಸಂದರ್ಭ ಗುರುನಾಥ ಬಿರಾದಾರ ಮಾತನಾಡಿ, ಈ ಬಾರಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಅಧರ್ಮದ ನಡುವೆ ರಾಜಕಾರಣ ನಡೆಯುತ್ತದೆ. ಕಳೆದ ಇಪ್ಪತ್ತೆöÊದು ವರ್ಷದಿಂದ ಮುದ್ದೇಬಿಹಾಳದ ಕ್ಷೇತ್ರಕ್ಕೆ ನಾಡಗೌಡರ ಅಭಿವೃದ್ದಿಯ ಕೊಡುಗೆ ಶೂನ್ಯವಾಗಿದೆ ಎಂದು ಟೀಕಿಸಿದರು.ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಅವರು ಮಾತನಾಡಿ, ಕಳೆದ ಇಪತ್ತು ವರ್ಷದಿಂದ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನೂ ಇಲ್ಲ. ನಾಡಗೌಡರಿಗೆ ಕಳೆದ ಇಪ್ಪತ್ತೆöÊದು ವರ್ಷದ ಅಭಿವೃದ್ದಿಯ ದಾಖಲಾತಿ ಮತದಾರರಿಗೆ ನೀಡಿ ನೀವು ಮತ ಕೇಳಿ ಎಂದರು. ಅಷ್ಟೇ ಅಲ್ಲದೆ ನಿಮ್ಮನ್ನೂ ಆಯ್ಕೆ ಮಾಡಿ ಕಳಿಸಿದ ಮತದಾರರ ಕುಂದು ಕೊರತೆಯ ಬಗ್ಗೆ…

Read More

ಸಿಂದಗಿ: ತಾಲೂಕಿನ ಮಲಘಾಣ ಗ್ರಾಮದಲ್ಲಿರುವ ಶ್ರೀ ಶ.ವಿ.ವ ಸಂಸ್ಥೆಯ ಶ್ರೀ ಶರಣಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2023 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಕಲಾ ವಿಭಾಗಪೂಜಾ ಚಾಂದಕವಠೆ 600 ಅಂಕಗಳಿಗೆ 572 (ಶೇ.95.33) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಪಾರ್ವತಿ ಪೂಜಾರಿ 558 (ಶೇ.93) ಅಂಕ ಪಡೆದು ದ್ವಿತೀಯ ಸ್ಥಾನ, ಹಾಗೂ ಪಾರ್ವತಿ ಬಿರಾದಾರ 556 (ಶೇ.92.66) ರೂಪಾ ಹಿರೇಮಠ 556 (ಶೇ.92.66) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ವಾಣಿಜ್ಯ ವಿಭಾಗಸಂತೋಷ ಹಿರೇಮಠ 600 ಅಂಕಗಳಿಗೆ 561 (ಶೇ.93.5), ಪೂಜಾ ಬಿರಾದಾರ 551 (ಶೇ.91.83), ಪ್ರಿಯಾಂಕಾ ಮ್ಯಾಕೇರಿ 551 (ಶೇ.91.83) ರಾಕೇಶ ಕಾಂಬಳೆ 545 (ಶೇ.90.83) ಅಂಕ ಪಡೆದುಕೊಂಡಿದ್ದಾರೆ.ಒಟ್ಟು 211 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 111 ವಿದ್ಯಾರ್ಥಿಗಳು ಪ್ರಥಮ, 29 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, 08 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.ಈ ವಿದ್ಯಾರ್ಥಿಗಳ…

Read More

ಮುದ್ದೇಬಿಹಾಳ: ಹೆರಿಗೆ ಆಸ್ಪತ್ರೆ ಕಟ್ಟುವದಾಗಿ ಹೇಳಿ ಸಿದ್ಧಗಂಗಾ ಶ್ರೀಗಳನ್ನು ಕರೆತಂದು ಅಡಿಗಲ್ಲು ಸಮಾರಂಭ ಮಾಡಿ ಅದೇ ಜಾಗದಲ್ಲಿ ಬಂಗ್ಲೋ ಕಟ್ಟಿಕೊಂಡು ಕೋಳಿ, ಕುರಿ, ಶೆರೆ ಕೊಟ್ಟು ಯುವಕರನ್ನು ಹಾಳು ಮಾಡುತ್ತಿರುವ ಇವರಿಗೆ ಪಾಪ ಸುತ್ತಿಕೊಳ್ಳದೇ ಬಿಡದು ಎಂದು ಮಾಜಿ ಸಚಿವ, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ) ಕಟುವಾಗಿ ಟೀಕಿಸಿದರು.ಗುರುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿ ಅವರು ಮಾತನಾಡಿದರು.ಭ್ರಷ್ಟರ ಕೈಯಲ್ಲಿ ಸರ್ಕಾರ ಕೊಟ್ಟರೆ ಭಷ್ಟಾಚಾರ ಬಿಟ್ಟರೆ ಏನೂ ಮಾಡಲು ಸಾಧ್ಯವಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿ ಅದೇ ಹಣದಿಂದ ಸಧ್ಯ ಚುನಾವಣೆ ನಡೆಸುತ್ತಿದ್ದಾರೆ. ನಮ್ಮ ಜನಕ್ಕೆ ಹಣ ಹೆಂಡ ಕೊಟ್ಟರೆ ಇವರಿಗೆ ಮತ ನೀಡುತ್ತಾರೆ ಎಂದುಕೊAಡಿದ್ದಾರೆ. ನಮ್ಮ ಜನರ ನಾಡಿ ಮಿಡಿತ ನನಗೆ ಗೊತ್ತು. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಯಾರನ್ನೂ ಕ್ಷಮಿಸುವದಿಲ್ಲ. ಈ ಬಾರಿ ನನ್ನನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಈಗಾಗಲೇ ತೀರ್ಮಾನಿಸಿಬಿಟ್ಟಿದ್ದಾರೆ ಎಂದರು.ಇದು ನನ್ನ ಕೊನೆಯ ಚುನಾವಣೆ. ನಾನು ಈ…

Read More

ವಿಜಯಪುರ: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗೂಂಡಾಗಿರಿ ಮತ್ತು ಉಗ್ರವಾದವನ್ನು ಸಂಪೂರ್ಣ ಮಟ್ಟ ಹಾಕಲಾಗಿದೆ. ಅದೇ ರೀತಿ ಕರ್ನಾಟಕ ಬಿಜೆಪಿ ಸರ್ಕಾರ ಪಿಎಫ್‌ಐ ಮಟ್ಟ ಹಾಕುವ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.ಬುಧವಾರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.ಧರ್ಮ ಆಧಾರಿತವಾಗಿ ಮೀಸಲಾತಿ ಕೊಡುವ ಮನೋಭಾವ ಭಾರತದ ಹಿತಕ್ಕೆ ಮಾರಕವಾಗಿದೆ, ಧಾರ್ಮಿಕ ಆಧಾರಿತ ಮೀಸಲಾತಿ ಅಸಂವಿಧಾನಿಕ. ಹೀಗಾಗಿ ಭಾರತೀಯ ಜನತಾ ಪಕ್ಷ ಧಾರ್ಮಿಕ ಆಧಾರಿತ ಮೀಸಲಾತಿ ಯಾವತ್ತೂ ಕೊಡುವುದಿಲ್ಲ ಎಂದರು.ವಿಶ್ವದ ದೊಡ್ಡ ಶಕ್ತಿಯಾಗಿ ಭಾರತ ಮುನ್ನಡೆಯುತ್ತಿದೆ, ನಮ್ಮನ್ನಾಳಿದ ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಮುನ್ನಡೆಯುತ್ತಿದೆ ಎಂದರು.ಬಸವಣ್ಣನವರ ವಿಚಾರಧಾರೆಯನ್ನು ಮನೆ-ಮನಗಳನ್ನು ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ, ಕರ್ನಾಟಕ-ಉತ್ತರ ಪ್ರದೇಶ ಸಾವಿರಾರು ವರ್ಷಗಳಿಂದ ಸ್ನೇಹ ಸೂತ್ರದಲ್ಲಿ ಇವೆ, ಪ್ರಧಾನಮಂತ್ರಿಯವರ ಏಕಭಾರತ ಶ್ರೇಷ್ಠ ಭಾರತ ಎನ್ನುವ…

Read More

ವಿಜಯಪುರ: ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಬಹುಮತ ಸಾಧಿಸಿ ಮತ್ತೆ ಅಧಿಕಾರ ಹಿಡಿಯುವುದು ಖಚಿತ ಎಂದು ಮಹಾರಾಷ್ಟçದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಶ್ವಾಸ ವ್ಯಕ್ತಪಡಿಸಿದರು.ಬುಧವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡವರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ರುಪಿಸಿದ್ದಾರೆ. ರೈತರಿಗಾಗಿ ಕೃಷಿ ಸಮ್ಮಾನ್ ಯೋಜನೆ ರೂಪಿಸಿ ಕೇಂದ್ರ ಸರಕಾರದಿಂದ ರೂ. ೬೦೦೦ ಹಾಗೂ ರಾಜ್ಯ ಸರಕಾರದಿಂದ ರೂ.೪೦೦೦ ಸೇರಿ ಒಟ್ಟು ರೂ.೧೦,೦೦೦ ರೈತರ ನೇರ ಖಾತೆಗೆ ಜಮೆಯಾಗುವಂತೆ ಮಾಡಿದ್ದಾರೆ. ಹಾಗೆಯೇ ಕರ್ನಾಟಕದ ಬಸವರಾಜ ಬೊಮ್ಮಾಯಿ ಸರಕಾರವೂ ಸಹ ಕೃಷಿಕ ಮತ್ತು ಕೂಲಿಕಾರರ ಮಕ್ಕಳಿಗಾಗಿ ವಿದ್ಯಾಸಿರಿ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ನಾಡಿನ ಜನತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ.ಕೇಂದ್ರ ಮತ್ತು ರಾಜ್ಯದ ಡಬಲ್ ಎಂಜಿನ್ ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊAಡು ಬಿಜೆಪಿ ಚುನಾವಣೆಯನ್ನು ಎದುರಿಸುತ್ತಿದ್ದು ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಮತ್ತೊಮ್ಮೆ ಅಧಿಕಾರ ಗದ್ದುಗೆ ಏರುವುದು ನಿಶ್ಚಿತ ಎಂದರು.ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ…

Read More