ಆಲಮೇಲ: ಪಟ್ಟಣದ ಸ್ವಾಮಿ ವಿವೇಕಾನಂದ ಸಂಘ(ರಿ) ವತಿಯಿಂದ ಸ್ವಾಮಿವೇಕಾನಂದರ ೧೬೧ನೇ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಸದಸ್ಯ ರತನಟಾಟ ಒನಕುದರೆ ಸ್ವಾಮಿ ವಿವೇಕಾನಂದರು ಭಾರತ ನಿರ್ಮಿಸಿದ ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರು ಅವರ ಜೀವನದ ಕಥೆಯು ಸ್ಪೂರ್ತಿಯಾಗಿದೆ ಎಂದು ಹೇಳಿದರು
ಈಗಿನ ಯುವಪಿಳಿಗೆಯವರಾದ ನಾವುಗಳು ದುಷ್ಟಚಟಗಳ ದಾಸರಾಗದೆ ಧರ್ಮ ರಕ್ಷಣೆಯ ಕಡೆಗೆ ಮಹಾನ ನಾಯಕರು ಹಾಕಿಕೊಟ್ಟ ಉತ್ತಮವಾದ ಜೀವನದ ಕಡೆಗೆ ಸಾಗಬೇಕಿದೆ
ಇದೆ ತಿಂಗಳ ಕೋನೆಯಲ್ಲಿ ನಮ್ಮ ಸಂಘದ ವತಿಯಿಂದ ಉಚಿತ ನೇತ್ರ ತಪಾಸಣ ಶಿಬಿರ ಮತ್ತು ರಕ್ತದಾನ ಶಿಬಿರ ಹಾಗೂ ಸ್ವಾಮಿ ವಿವೇಕಾನಂದರ ಉಪನ್ಯಾಸ ಕಾರ್ಯಕ್ರಮ ಮಾಡಲಿದ್ದವೆ ಎಂದರು
ವಿಶ್ವ ಅಮರಗೊಂಡ, ಮದನ ರಜಪೂತ, ವಿಶ್ವ ಕೊರಳ್ಳಿ, ಶರಣು ಗುರಕಾರ, ಕಮಲಾಕರ ಪತ್ತಾರ, ಅಶೋಕ ಪರಿಟ, ಅಜಯ ಬಂಟನೂರ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

