ಮೋರಟಗಿ: ಸಾರ್ವಜನಿಕರು ಆನೇಕಾಲು ಮಾತ್ರೆ ತಿರಸ್ಕರಿಸುವುದರಿಂದ ಸಿಂದಗಿ ಹಾಗೂ ಆಲಮೇಲ ತಾಲೂಕಿನಲ್ಲೇ ಮೋರಟಗಿ ಸಮುದಾಯ ಆರೋಗ್ಯ ಕೇಂದ್ರದ ಹಳ್ಳಿಗಳಲ್ಲಿ ಆನೆಕಾಲು ರೋಗದ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿವೆ. ರೋಗ ಮುಕ್ತ ಗ್ರಾಮ ನಿರ್ಮಾಣಕ್ಕಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಮುದಾಯ ಅರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ, ಶಶಿಕಾಂತ ಬಾಗೇವಾಡಿ ಹೇಳಿದರು.
ಸಮುದಾಯ ಅರೋಗ್ಯ ಕೇಂದ್ರದಲ್ಲಿ ಆನೆಕಾಲು ರೋಗ ಮುಕ್ತಕ್ಕಾಗಿ ಕರೆದ ಸಾಮೂಹಿಕ ಔಷದಿ ಸೇವನೆ ಜಾಗೃತಿ ಕಾರ್ಯಕ್ರಮದ ಸಭೆಯಲ್ಲಿ
ಸಭೆಯಲ್ಲಿ ಅವರು ಮಾತನಾಡಿದರು.
ಆನೆಕಾಲು ರೋಗ ಇದೊಂದು ಸೋಂಕಿತ ಕ್ಯೂಲೆಕ್ಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಸಾಂಕ್ರಾಮಿಕವಾಗಿ ಹರಡುವ ರೋಗವಾಗಿದೆ, ಆ ಸೊಳ್ಳೆಯಿಂದ ಕಚ್ಚಿದರೆ ಒಬ್ಬರಿಂದ ಒಬ್ಬರಿಗೆ ರೋಗ ಅಂಟಿಕೊಳ್ಳುವ ಎಲ್ಲ ಸಾಧ್ಯತೆಗಳು ಇರುತ್ತದೆ ಸಾರ್ವಜನಿಕರು ಮುಂಜಾಗ್ರತವಾಗಿ ಮಾತ್ರೆ ತೆಗೆದುಕೊಂಡರೆ ಮಾತ್ರ ರೋಗ ಅಂಟಿಕೊಳ್ಳುವುದಿಲ್ಲ, ಮಾತ್ರೆ ತಿರಸ್ಕರಿಸಿದರೆ ಸೊಂಕಿತನಿಗೆ ಕಚ್ಚಿದ ಸೊಳ್ಳೆ ಸಾಮಾನ್ಯ ಇನ್ನೊಬ್ಬರಿಗೆ ಕಚ್ಚುವುದರಿಂದ ಆನೆಕಾಲು ರೋಗ ಉತ್ಪತ್ತಿ ಆಗುತ್ತದೆ. ಇದನ್ನು ತಡೆಗಟ್ಟುಲು ಸರಕಾರ ನಿಮ್ಮ ಮನೆ ಬಾಗಿಲಿಗೆ ಅರೋಗ್ಯ ಸಿಬ್ಬಂದಿ ಆಶಾ ಕಾರ್ಯಕರ್ತರು ಮಾತ್ರೆ ಕೊಡಲು ಬರುತ್ತಾರೆ. ಆನೇಕಾಲು ರೋಗದಂತೆ ವಿವಿಧ ರೀತಿಯ ರೋಗಗಳನ್ನು ನಿಯಂತ್ರಿಸಲು ಸರಕಾರ ಉಚಿತ ಮಾತ್ರೆಗಳು ನೀಡುತ್ತಿದೆ. ಸರಕಾರದ ಉಚಿತ ಅರೋಗ್ಯ ಯೋಜನೆಗಳ ಲಾಭ ಪಡೆದುಕೊಳ್ಳಬೇಕು. ವಿಶೇಷವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರಿ ವಹಿಸಿ ಪ್ರತಿಯೊಂದು ವಾರ್ಡಗಳಲ್ಲಿ ಡಂಗುರ ಸಾರಿಸುವ ಮೂಲಕ ಜಾಗೃತಿ ಮೂಡಿಸ್ಬೇಕು ಎಂದು ಮನವಿ ಮಾಡಿದರು.
ನಂತರ ತಾಲೂಕ ಅರೋಗ್ಯ ಶಿಕ್ಷಣ ಅಧಿಕಾರಿ ಹರಿ ಕುಲಕರ್ಣಿ ಹಾಗೂ ಎನ್.ವ್ಹಿ.ಬಿ. ಡಿ. ಸಿ. ಪಿ. ಪ್ರಭು ಜಂಗಿನ್ಮಠ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾ. ಪಂ. ಉಪಾಧ್ಯಕ್ಷರ ಪ್ರತಿನಿಧಿ ಇಸುಫ್ ಮುಲ್ಲಾ, ವೈದ್ಯಾಧಿಕಾರಿಗಳಾದ ಡಾಕ್ಟರ್ ಶಶಿಕಾಂತ್ ಬಾಗೇವಾಡಿ, ಡಾಕ್ಟರ್ ಗಿರೀಶ್ ಪಾಟೀಲ್, ಡಾಕ್ಟರ್ ಮಂಜುನಾಥ್ ಎಂ ಆರ್ ಮಷೀನ್ ಫಾರೂಕ್ ವಲ್ಲಿಭಾಯಿ, ಮೈನುದ್ದೀನ್ ಮಣಿಯಾರ್, ಗ್ರಾ.ಪಂ. ಸದಸ್ಯರಾದ ಶ್ರೀಮಂತ ಮಳಗಿ, ಸಂತೋಷ ಮದರಿ, ನೂರಮಹಮದ ಕಣ್ಣಿ, ಶ್ರೀ ಸಿದ್ದರಾಮೇಶ್ವರ ಶಾಲೆಯ ಮುಖ್ಯೋಪಾಧ್ಯಾಯ ಆರ್, ಎಸ್ ಬಿರಾದಾರ, ಸದ್ಭಾವನಾ ಶಾಲೆಯ ಮುಖ್ಯಗುರು ಮುರಗೇಂದ್ರ ಕೋರಿ, ಜ್ಞಾನಜ್ಯೋತಿ ಶಾಲೆಯ ಮುಖ್ಯಗುರು ಎಂ. ಜಿ. ಹರಾವಾಳ, ಫಾರೂಕ್ ವಲ್ಲಿಭಾಯಿ, ಸೇರಿದಂತೆ ಅರೋಗ್ಯ ಕೇಂದ್ರ ಸಿಬ್ಬಂದಿ ಆಶಾ ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

