Author: editor.udayarashmi@gmail.com

ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಅಯೋಧ್ಯಾ ನಗರಿಯಿಂದ ಶ್ರೀರಾಮದೇವಳದ ಉದ್ಘಾಟನೆಯ ಆಹ್ವಾನಾರ್ಥವಾಗಿ ಬಂದಿರುವ ಪವಿತ್ರ ಮಂತ್ರಾಕ್ಷತೆ ಮತ್ತು ಕರೆಯೋಲೆಯನ್ನು ೫೦೦ಕ್ಕೂ ಹೆಚ್ಚು ಮನೆಗಳಿಗೆ ವಿತರಿಸಿ, ಆಮಂತ್ರಿಸಿದರು.

Read More

ವಿಜಯಪುರ: ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ಆರ್. ಎಸ್. ಪಾಟೀಲ (ಕೂಚಬಾಳ) ೨ನೇ ಬಾರಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಯುವ ಮೋರ್ಚಾದಿಂದ ಸನ್ಮಾನಿಸಲಾಯಿತು.ಈ ವೇಳೆಯಲ್ಲಿ ಬಸವರಾಜ್ ಹೂಗಾರ, ಶ್ರೀಕಾಂತ್ ಸಿಂಧಿ, ಪರಶುರಾಮ ಹೊಸಪೇಟೆ, ಶ್ರೀಧರ ಬಿಜ್ಜರಗಿ ಇನ್ನಿತರರು ಇದ್ದರು.

Read More

ರೇವತಗಾಂವದ ಶ್ರೀ ಸಿಂಹಗಢ ಮಹಾರಾಜರ ೫೪ನೇ ಪುಣ್ಯಾರಾಧನೆ ಸಂಪನ್ನ ಚಡಚಣ: ಶರಣರ ಆಚರಣೆಗಳು ಯಾವುದೇ ಒಂದು ಜಾತಿ, ಜನಾಂಗ, ವರ್ಗಕ್ಕೆ ಸೀಮಿತವಾಗಿಲ್ಲ. ಮನುಕುಲದ ಸಂತರಾಗಿರುವ ಸಿಂಹಗಢ ಮಹಾರಾಜರಂತಹ ಮಹಾತ್ಮರ ಸಂದೇಶಗಳು, ಪವಾಡಗಳು ಮನುಕುಲ ಸರಿಯಾದ ದಾರಿಯಲ್ಲಿ ನಡೆಯುವುದಕ್ಕೆ ದಾರಿ ದೀಪವಾಗುತ್ತವೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ ಹೇಳಿದರು.ಬುಧವಾರ ರೇವತಗಾಂವ ಗ್ರಾಮದ ಶ್ರೀ ಸಿಂಹಗಢ ಮಹಾರಾಜರ ೫೪ನೇ ಪುಣ್ಯಾರಾಧನೆ ಕಾರ್ಯಕ್ರಮದ ‘ಧರ್ಮ ಸಭೆ’ ಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಿಂಹಗಢ ಮಹಾರಾಜರಂತಹ ಶರಣರು ಅಂದು ನುಡಿದ ವಿಚಾರಗಳು ಇಂದಿಗೂ ಪ್ರಸ್ತುತ. ಅವರ ವಚನಗಳು, ನಾಣ್ನುಡಿಗಳು ಇಂದಿಗೂ ಅಜರಾಮರವಾಗಿದ್ದು, ಸಮಾಜಕ್ಕೆ ಅವರ ಕೊಡುಗೆ ಅಪಾರ. ಅವರ ಅರ್ಥಪೂರ್ಣವಾದ ತತ್ವಾದರ್ಶ ವಿಚಾರ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡರವರು ಮಾತನಾಡುತ್ತ. ಸಮಾಜದಲ್ಲಿ ನಾವು ಏನಾದರೂ ಬದಲಾವಣೆ ಮಾಡಬೇಕು ಎಂಬ ಇಚ್ಛಾಶಕ್ತಿ ಇದ್ದರೆ ಶಿಕ್ಷಣದಿಂದ ಮಾತ್ರ ಸಾಧ್ಯ.…

Read More

ವಿಜಯಪುರ: ೨೦೨೨-೨೩ನೇ ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಅಕ್ರಮ ನಡೆಯದಂತೆ ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಅವರು ಮಾತನಾಡಿ, ಸನ್ ೨೦೨೨-೨೩ನೇ ಸಾಲಿನ ಜಲಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ ಸರ್ಕಾರ ಪ್ರತಿಮನೆಗೆ ಶುದ್ಧ ಕುಡಿಯುವ ನೀರಿನ್ನು ಒದಗಿಸುವ ಉತ್ತಮ ಯೋಜನೆಯನ್ನು ಹಮ್ಮಿಕೊಂಡಿದೆ. ಆದರೆ ಸರ್ಕಾರಿ ಅಧಿಕಾರಿಗಳ ಮತ್ತು ಶಾಸಕರ ದಿವ್ಯ ನಿರ್ಲಕ್ಷದಿಂದಾಗಿ ಈಗಾಗಲೇ ಕೆಲವೊಂದು ಹಳ್ಳಿಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ ಇನ್ನು ಕೆಲವೊಂದು ಹಳ್ಳಿಗಳಲ್ಲಿ ಚಾಲನೆಗೊಳ್ಳುತ್ತಿದೆ. ಈ ಯೋಜನೆ ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸವಾಗುತ್ತಿದೆ. ಆದ್ದರಿಂದಾಗಿ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದು ದೇವರಹಿಪ್ಪರಗಿ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದರ ಮೂಲಕ ಬರಗಾಲದ ನಾಡಿಗೆ ಜೀವ ಜಲ ಒದಗಿಸಿದ ಪುಣ್ಯ ಸರ್ಕಾರಕ್ಕೆ ಮತ್ತು ಪ್ರಾಮಾಣಿಕ ಅಧಿಕಾರಿ…

Read More

ಕಲಕೇರಿ: ಸುಮಾರು ೫೦೦ ವರ್ಷಗಳ ಹೋರಾಟದಲ್ಲಿ ವಿಶ್ವಹಿಂದೂ ಪರಿಷತ್‌ನ ಕಾರ್ಯಕರ್ತರು, ಸಾಧುಸಂತರು ಸೇರಿದಂತೆ ಸುಮಾರು ೨ ಲಕ್ಷ ಸ್ವಯಂ ಸೇವಕರ ತ್ಯಾಗದ ಪ್ರತಿಫಲವಾಗಿ ಇಂದು ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮನ ಆಗಮನಕ್ಕೆ ಶಬರಿಯಂತೆ ಕಾದಿದೆ ಈ ಧರೆ, ಮನೆ ಮನೆಗೂ ಮರ್ಯಾದಾ ಪುರುಷೋತ್ತಮನ ಆಗಮನದ ಆಮಂತ್ರಣ ತಲುಪುತ್ತಿದೆ, ಅದರ ನಿಮಿತ್ಯ ರಾಮಜನ್ಮಭೂಮಿ ಟ್ರಸ್ಟ್ ಕಳಿಸಿರುವ ಆರ್ಶಿವಾದದ ಮಂತ್ರಾಕ್ಷತೆಯನ್ನು ತಲುಪಿಸಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಳಿಕೋಟಿ ತಾಲೂಕಾ ಕಾರ್ಯಕಾರಣಿ ಸಂಗಮೇಶ ಪಾಲಕಿ ಅವರು ಮಾತನಾಡಿದರು.ಕಲಕೇರಿ ಗ್ರಾಮದ ಯಲ್ಲಾಲಿಂಗ ಮಹಾರಾಜ ಮಠದಿಂದ ವಿವಿಧ ವಾಧ್ಯಗಳೊಂದಿಗೆ ಕೇಸರಿ ಶಾಲುಗಳೊಂದಿಗೆ ನೂರಾರು ಸ್ವಯಂ ಸೇವಕರೊಂದಿಗೆ ಶ್ರೀರಾಮನ ರಥದ ಭವ್ಯ ಮೆರವಣಿಗೆ ಮುಖ್ಯ ಭಜಾರದ ಮೂಲಕ ಗ್ರಾಮದ ಓಣಿಗಳಲ್ಲಿ ಸಂಚರಿಸಿ ಮನೆ ಮನೆಗೆ ಮಂತ್ರಾಕ್ಷತೆ ತಲುಪಿಸಲಾಯಿತು, ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮನ ವೇಷಭೂಷಣದಲ್ಲಿ ಮಕ್ಕಳು ಕಂಡರು,ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದ ಪೀಠಾದಿಪತಿಗಳಾದ ಸಿದ್ದರಾಮ ಶಿವಾಚಾರ್ಯರು, ಪಂಚರಂಗ ಸಂಸ್ಥಾನ ಗದ್ದುಗೆ ಮಠದ ಪೀಠಾದಿಪತಿ ಮಡಿವಾಳೇಶ್ವರ ಶಿವಾಚಾರ್ಯರು, ಮುಖಂಡರಾದ ಸಿದ್ದು…

Read More

ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೊ) ಪ್ರಸಕ್ತ ವರ್ಷ 2024ರ ಮೊದಲ ಭಾಗ(ಜನೇವರಿ) ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಹಾಗೂ ಸರ್ಟಿಫಿಕೆಟ್ ಕೋರ್ಸುಗಳಿಗೆ ಪ್ರವೇಶಗಳು ಪ್ರಾರಂಭವಾಗಿದ್ದು, 31.01.2024ರ ಒಳಗಾಗಿ ಪ್ರವೇಶ ಪಡೆಯಬಹುದಾಗಿದೆ ಎಂದು ಇಗ್ನೊ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ. ಮಂಜುನಾಥ ಕೋರಿ ತಿಳಿಸಿದ್ದಾರೆ.ಇಗ್ನೊದಲ್ಲಿ ವರ್ಷಕ್ಕೆ ಎರಡು ಬಾರಿ ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ಸರ್ಟಿಫಿಕೇಟ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ. ಈಗ ಮೊದಲ ಹಂತದ ಪ್ರವೇಶಕ್ಕೆ ನೋಂದಣಿ ಆರಂಭವಾಗಿವೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಇಗ್ನೊ ಅದ್ಯಯನ ಕೇಂದ್ರ, 1307, ಬಿ.ಎಲ್.ಡಿ.ಇ ಸಂಸ್ಥೆಯ ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯ, ರಾಮ ಮಂದಿರ ರಸ್ತೆ, ಎಸ್. ಎಸ್. ಕ್ಯಾಂಪಸ್ ವಿಜಯಪುರ, ಮೊಬೈಲ್ ಸಂಖ್ಯೆ- 9980691291 ಸಂಪರ್ಕಿಸಬಹುದಾಗಿದೆ. ಅಲ್ಲದೇ, ಪ್ರವೇಶ ಬಯಸುವವರು www.ignou.ac.in ನಲ್ಲಿ ಲಾಗಿನ್ ಆಗಿ ಆನಲೈನ್ ಮೂಲಕವೂ ನೋಂದಣಿ ಮಾಡಿಸಬಹುದಾಗಿದೆ ಎಂದು ಡಾ. ಮಂಜುನಾಥ ಕೋರಿ ತಿಳಿಸಿದ್ದಾರೆ.

Read More

ಅಯೋಧ್ಯಾ ಸಂಭ್ರಮೋತ್ಸವದ ಪ್ರಯುಕ್ತ ಜ.೧೮ರಿಂದ ಜ.೨೨ರ ವರೆಗೆ ಶುಲ್ಕರಹಿತ ಹೆರಿಗೆ ಕಾರ್ಯ ವಿಜಯಪುರ: ಸ್ವಂತಕ್ಕೆ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ ಎನ್ನುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತ ಒಂದು ವರ್ಷದ ಅವಧಿಯಲ್ಲಿಯೇ ಜನರ ಪ್ರೀತಿಗೆ ಪಾತ್ರವಾಗಿರುವ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ನಿರ್ಮಿತ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇದೇ ತಿಂಗಳ ೨೨ ನೇ ತಾರಿಖಿನಂದು ಅಯೋಧ್ಯೆಯಲ್ಲಿ ಜರುಗಲಿರುವ ರಾಮಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಅಯೋಧ್ಯಾ ಸಂಭ್ರಮೋತ್ಸವನ್ನು ಆಚರಿಸಲಾಗುತ್ತಿದೆ.ಅದರ ಪ್ರಯುಕ್ತ ನಗರ ಶಾಸಕ ಬಸನಗೌಡ ರಾ.ಪಾಟೀಲ್ ಯತ್ನಾಳ ಅವರ ಅಪೇಕ್ಷೆಯಂತೆ ಜ.೧೮ರಿಂದ ಜ.೨೨ರ ವರೆಗೆ ಐದು ದಿನಗಳ ಕಾಲ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಲ್ಲಿ ಹುಟ್ಟಿದ ಮಗುವನ್ನು ಶ್ರೀ ರಾಮ ಹಾಗೂ ಸೀತಾದೇವಿ ಪ್ರತಿರೂಪವೆಂದು ಪರಿಗಣಿಸಿ ಹೆರಿಗೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೆರವೇರಿಸಲಾಗುತ್ತದೆ. ಈ ಮೂಲಕ ಅಯೋಧ್ಯೆಯಲ್ಲಿ ಜರುಗುವ ರಾಮ ಮಂದಿರದ ಉದ್ಘಾಟನೆಯ ಸಮಯವನ್ನು ಮತ್ತಷ್ಟು ಸಾರ್ಥಕವಾಗಿಸಲಾಗುತ್ತಿದ್ದು ಅವಶ್ಯಕತೆಯುಳ್ಳ ರಾಮ ಭಕ್ತರು ಇದರ…

Read More

ವಿಜಯಪುರ: ಸ್ವಾಮಿ ವಿವೇಕಾನಂದರು ಹಾಗೂ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ವ್ಯಕ್ತಿ ತನ್ನನ್ನು ತಾನಾರು ಎನ್ನುವುದನ್ನು ಕಂಡುಕೊಂಡಾಗ ಮಾತ್ರ ಅರಿವಿನ ಬೆಳಕಿನೆಡೆಗೆ ಮನುಷ್ಯ ಸಾಗುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ಸ್ನಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೆಕಾನಂದರ ೧೬೧ ಜನ್ಮದಿನೋತ್ಸವ ಹಾಗೂ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ನಿಜವಾದ ಭಾರತವನ್ನು ಪರಿಚಯಿಸುವ ಮೂಲಕ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಯ ಪರಿಚಯ ಮಾಡಿಕೊಟ್ಟ ಸ್ವಾಮಿ ವಿವೇಕಾನಂದರು ಹಾಗೂ ಆಧ್ಯಾತ್ಮಿಕ ಶಕ್ತಿಯ ಮೂಲಕ ಜನಸಾಮಾನ್ಯರಲ್ಲಿ ಅರಿವಿನ ದೀಪ ಪ್ರಜ್ವಲಿಸಿದವರು ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಎಂದು ಹೇಳಿದರು.ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರಿದಿರುವ ಭಾರತ ಸ್ವಾಮಿ ವಿವೇಕಾನಂದರನ್ನು ಅರಿಯುವಲ್ಲಿ ಎಡವಿದೆ. ಪಾಶ್ಚಾತ್ಯರು ಅವರ ಮಾತುಗಳನ್ನು ಕೇಳಿ ತಮ್ಮ ಬದುಕಿನಲ್ಲಿ ಪರಿವರ್ತನೆ ತಂದುಕೊಂಡರು. ಇಂದಿಗೂ ಅಮೇರಿಕಾದ ೨೮ ಪ್ರತಿಶತ ಜನಗಳು ಭಾರತೀಯ ಸಂಸ್ಕೃತಿಯಂತೆ…

Read More

ವಿಜಯಪುರ: ಸಂಚಾರಿ ನಿಯಮಗಳ ಪಾಲನೆ ಮತ್ತು ಜಾಗರೂಕತೆಯಿಂದ ವಾಹನ ಚಲಾಯಿಸಿದರೆ ರಸ್ತೆ ಅಪಘಾತ ಹಾಗೂ ಜೀವಹಾನಿ ತಡೆಯಲು ಸಾಧ್ಯ ಎಂದು ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ ಹೇಳಿದ್ದಾರೆ.ನಗರದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಟ್ರಾಮಾ ಸೆಂಟರ್ ನಲ್ಲಿ ವಿವಿಯ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯೂಎಸಿ) ವತಿಯಿಂದ ಇಂದು ಬುಧವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ರಸ್ತೆ ಅಪಘಾತಗಳು ಮತ್ತು ಅವುಗಳಿಗೆ ಕಾರಣಗಳ ಕುರಿತು ಎಳೆಎಳೆಯಾಗಿ ಮಾಹಿತಿ ನೀಡಿದ ಅವರು, ರಸ್ತೆ ಅಪಘಾತ ಮತ್ತು ಜೀವಹಾನಿ ತಪ್ಪಿಸಲು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಸರಕಾರಗಳು ಸಂಚಾರಿ ನಿಯಮಗಳನ್ನು ರೂಪಿಸಿವೆ. ಆದರೆ, ಬಹಳಷ್ಟು ಚಾಲಕರು ವಾಹನಗಳ ಚಾಲನೆ ಸಂದರ್ಭದಲ್ಲಿ ಅವುಗಳ ಬಗ್ಗೆ ಗಮನ ಹರಿಸುವುದಿಲ್ಲ. ಅತೀ ವೇಗದ ಚಾಲನೆ, ಸಂಚಾರಿ ನಿಯಮಗಳ ಉಲ್ಲಂಘನೆ, ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸುವುದರಿಂದ ಹೆಚ್ಚು ಅಪಘಾತಗಳು ಉಂಟಾಗುತ್ತಿವೆ. ಚಾಲಕರು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದರೆ ಅದರಿಂದ ತಾವಷ್ಟೇ ಅಲ್ಲ,…

Read More

– ಜಯಶ್ರೀ.ಜೆ. ಅಬ್ಬಿಗೇರಿ*ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨ ದಿಂಬಿಗೆ ತಲೆಯನ್ನು ಕೊಟ್ಟು ಅದೆಷ್ಟು ಪ್ರೀತಿಯಿಂದ ಕರೆದರೂ ಬಳಿ ಬಾರದೇ ಕಾಡುವ ನಿದ್ರಾ ರಾಣಿಯನ್ನು ಒತ್ತಾಯ ಪೂರ್ವಕವಾಗಿ ಮಾತ್ರೆಗಳ ಮೂಲಕ ಆಮಂತ್ರಿಸಿ ಸ್ವಲ್ಪ ಹೊತ್ತು ಮಾತ್ರ ಅವಳ ಬಳಿಯಿದ್ದು ಉಳಿದ ಹೊತ್ತು ನರಕಯಾತನೆ ಅನುಭವಿಸುವಂತೆ ಮಾಡುತ್ತಾಳೆ. ಕೆಲವರ ಬಾಳನ್ನು ಅಲ್ಲೋಲ ಕಲ್ಲೋಲ ಮಾಡಿ, ನಿತ್ಯದ ಕೆಲಸಗಳಲ್ಲಿ ಸೊಗಸಿಲ್ಲದಂತೆ ಮಾಡುತ್ತಾಳೆ. ಇನ್ನೂ ಕೆಲವರು ಕೇಳುವ ಮುನ್ನವೇ ತಾನೇ ಬಳಿ ಹೋಗಿ ತನ್ನ ತೋಳ ತೆಕ್ಕೆಯಲ್ಲಿ ಬಂಧಿಸಿ ಸುಖವಾದ ನಿದ್ದೆ ಕರುಣಿಸುತ್ತಾಳೆ. ಹಲವರಿಗೆ ಎಲ್ಲಿ ಹೋದರೂ ಬೆನ್ನು ಹತ್ತಿ ಕಾಡಿ ನಿಂತಲ್ಲಿ ಕೂತಲ್ಲಿ ಆವರಿಸಿಕೊಂಡು ಜನರಿಂದ ನಿದ್ದೆ ಬಡುಕ/ಕಿ ಎಂಬ ಉಪಾದಿಯನ್ನು ಕೊಡಿಸುತ್ತಾಳೆ. ಇವಳು ಅತಿಯಾಗಿ ಬಳಿ ಬಂದರೂ ತೊಂದರೆ ಬಾರದಿದ್ದರೂ ತೊಂದರೆ. ಇಂದು ನಮಗೆಲ್ಲ ಜೀವನದಲ್ಲಿ ಒತ್ತಡ ಸಾಮಾನ್ಯವೆನಿಸುವಷ್ಟು ಸಾಮಾನ್ಯವಾಗಿದೆ.. ಹೀಗಾಗಿ ಅತೀ ಅವಶ್ಯವಾಗಿರುವ ನಿದ್ದೆಯೂ ಕಣ್ಣು ತುಂಬಿಕೊಳ್ಳದೇ ದುಬಾರಿಯಾಗುತ್ತಿದೆ. ಎಷ್ಟು ನಿದ್ದೆ ಮಾಡಿದರೂ ಸುಖ ನಿದ್ದೆ ಮಾಯವಾಗಿ  ಸಾಲುತ್ತಿಲ್ಲವೆ ನಿದ್ದೆ ಸಾಲುತಿಲ್ಲವೇ ಎನ್ನುವಂತಾಗಿದೆ. ಹಾಯಾದ…

Read More