ಕಲಕೇರಿ: ಸುಮಾರು ೫೦೦ ವರ್ಷಗಳ ಹೋರಾಟದಲ್ಲಿ ವಿಶ್ವಹಿಂದೂ ಪರಿಷತ್ನ ಕಾರ್ಯಕರ್ತರು, ಸಾಧುಸಂತರು ಸೇರಿದಂತೆ ಸುಮಾರು ೨ ಲಕ್ಷ ಸ್ವಯಂ ಸೇವಕರ ತ್ಯಾಗದ ಪ್ರತಿಫಲವಾಗಿ ಇಂದು ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮನ ಆಗಮನಕ್ಕೆ ಶಬರಿಯಂತೆ ಕಾದಿದೆ ಈ ಧರೆ, ಮನೆ ಮನೆಗೂ ಮರ್ಯಾದಾ ಪುರುಷೋತ್ತಮನ ಆಗಮನದ ಆಮಂತ್ರಣ ತಲುಪುತ್ತಿದೆ, ಅದರ ನಿಮಿತ್ಯ ರಾಮಜನ್ಮಭೂಮಿ ಟ್ರಸ್ಟ್ ಕಳಿಸಿರುವ ಆರ್ಶಿವಾದದ ಮಂತ್ರಾಕ್ಷತೆಯನ್ನು ತಲುಪಿಸಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಳಿಕೋಟಿ ತಾಲೂಕಾ ಕಾರ್ಯಕಾರಣಿ ಸಂಗಮೇಶ ಪಾಲಕಿ ಅವರು ಮಾತನಾಡಿದರು.
ಕಲಕೇರಿ ಗ್ರಾಮದ ಯಲ್ಲಾಲಿಂಗ ಮಹಾರಾಜ ಮಠದಿಂದ ವಿವಿಧ ವಾಧ್ಯಗಳೊಂದಿಗೆ ಕೇಸರಿ ಶಾಲುಗಳೊಂದಿಗೆ ನೂರಾರು ಸ್ವಯಂ ಸೇವಕರೊಂದಿಗೆ ಶ್ರೀರಾಮನ ರಥದ ಭವ್ಯ ಮೆರವಣಿಗೆ ಮುಖ್ಯ ಭಜಾರದ ಮೂಲಕ ಗ್ರಾಮದ ಓಣಿಗಳಲ್ಲಿ ಸಂಚರಿಸಿ ಮನೆ ಮನೆಗೆ ಮಂತ್ರಾಕ್ಷತೆ ತಲುಪಿಸಲಾಯಿತು, ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮನ ವೇಷಭೂಷಣದಲ್ಲಿ ಮಕ್ಕಳು ಕಂಡರು,
ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದ ಪೀಠಾದಿಪತಿಗಳಾದ ಸಿದ್ದರಾಮ ಶಿವಾಚಾರ್ಯರು, ಪಂಚರಂಗ ಸಂಸ್ಥಾನ ಗದ್ದುಗೆ ಮಠದ ಪೀಠಾದಿಪತಿ ಮಡಿವಾಳೇಶ್ವರ ಶಿವಾಚಾರ್ಯರು, ಮುಖಂಡರಾದ ಸಿದ್ದು ಬುಳ್ಳಾ ಮಾತನಾಡಿದರು.
ಈ ಸಂದರ್ಭದಲ್ಲಿ ಯಮನೂರಿ ಕುಲಕರ್ಣಿ, ಹಣಮಂತ ವಡ್ಡರ, ನಾನಾಗೌಡ ಚೌಧರಿ, ಶಂಕರಗೌಡ ಬಿರಾದಾರ, ಪ್ರತೀಕ ಕುಲಕರ್ಣಿ, ಷಣ್ಮುಕಪ್ಪ ಝಳಕಿ, ಮಲ್ಲು ದೇಸಾಯಿ, ದೇವಿಂದ್ರ ಕಡಕೋಳ, ವಿಶ್ವನಾಥ ಸಬರದ, ಪ್ರಕಾಶ ಯರನಾಳ, ಸುರೇಶರಡ್ಡಿ ಪಾಟೀಲ, ಪ್ರವೀಣ ಜಗಶೆಟ್ಟಿ, ವಿರೇಶ ನೆಲ್ಲಗಿ, ಮಡಿವಾಳಪ್ಪ ಹೂಗಾರ, ವಿಶ್ವನಾಥ ರಾಠೋಡ, ಮಡು ಜಂಬಗಿ, ರಾಕೇಶ ಕೊಂಡಗೂಳಿ, ಈರಣ್ಣ ಗುಮಶಟ್ಟಿ, ಶ್ರೀಶೈಲ ಬೈಚಬಾಳ, ಅಭಿಷೇಕ ಗದ್ದಗೆಮಠ, ವಾಗೀಶ ನಾಗಠಾಣ, ಚೇತನ ಶಹಾಪುರ, ಪ್ರಮೋದ ಹೆಗ್ಗಣದೊಡ್ಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

