Author: editor.udayarashmi@gmail.com

ಢವಳಗಿ: ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯಿಂದ ಅಖಿಲ ಭಾರತ ಸೇವಾ ಅಡಿಯಲ್ಲಿ ಅಕ್ಟೋಬರ್ 16ರಿಂದ 20 ರವರಿಗೆ ಹೊಸ ದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬ್ಬಡ್ಡಿ ಕ್ರೀಡಾಕೂಟದಲ್ಲಿ ಆರ್‌.ಡಿ. ಪಿ.ಆರ್ ಇಲಾಖೆಯಿಂದ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯತಿ ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಮಡಿವಾಳಪ್ಪ ಕಲ್ಲಪ್ಪ ಗುಡಿಮನಿ ಅವರು ಆಯ್ಕೆ ಆಗಿದ್ದಾರೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಮ್ ಬಿ ಲಾವಣ್ಯ ಅವರು ಆದೇಶ ಹೊರಡಿಸಿದ್ದಾರೆ.

Read More

ಕಲಕೇರಿ: ಪ್ರವಾದಿ ಮಹ್ಮದರ ವಾಣಿಯಂತೆ ಮನುಷ್ಯನ ಶ್ರೇಷ್ಟತೆ ಅವನ ನಡತೆಯಲ್ಲಿ ಅಡಗಿದ್ದು, ನನ್ನ ಕೈಯಿಂದ ಮತ್ತು ನಾಲಿಗೆಯಿಂದ ಇನ್ನೊಬ್ಬರಿಗೆ ನೋವುಂಟಾಗಬಾರದು ಈ ನಿಟ್ಟಿನಲ್ಲಿ ಪ್ರವಾದಿ ಮಹ್ಮದರ ಜನ್ಮದಿನದ ಅದ್ದೂರಿ ಆಚರಣೆಗಿಂತ ಅವರ ಅನುಸರಣೆ ಬಹಳ ಮುಖ್ಯ ಎಂಬುದನ್ನು ನಾವು ಅರಿಯಬೇಕು ಹಾಗೂ ತಾಯಿಯ ಸೇವೆ ಮಾಡಿದಾಗ ಮಾತ್ರ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಪ್ರವಚನಕಾರ ಜನಾಬ ಲಾಲಹುಸೇನಸಾಹೇಬ ಕಂದಗಲ್ ಇಲಕಲ್ ಹೇಳಿದರು.ಗ್ರಾಮದ ಗುರುವೀರಘಂಟೈ ಮಡಿವಾಳೇಶ್ವರರ ದೇವಸ್ಥಾನದ ಮುಂಭಾಗ ಆಯೋಜಿಸಲಾದ ಪ್ರವಾದಿ ಮಹಮ್ಮದರ ಜೀವನ ಚರಿತ್ರೆಯ ಸೀರತ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ತಾರತಮ್ಯ ಭಾವನೆ ತೊರೆದು ನಯವಿನಯದಿಂದ ವರ್ತಿಸಬೇಕು. ಮನುಷ್ಯ ಎಂಬ ನೆಲೆಯಲ್ಲಿ ಎಲ್ಲರನ್ನೂ ಪ್ರೀತಿಸುವಂತ ಔದಾರ್ಯತೆ ನಮ್ಮಲ್ಲಿ ಬರಬೇಕು, ಹೃದಯವಿದ್ದರೆ ಸಾಲದು, ಪ್ರತಿಯೊಬ್ಬರಲ್ಲಿಯೂ ಹೃದಯವಂತಿಕೆ ಇರಬೇಕು ಎಂದು ಹೇಳಿದರು.ಇಂದು ನಾವೆಲ್ಲ ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ಮಹಾತ್ಮರನ್ನು ಮತ್ತು ಅವರ ಸಂದೇಶಗಳನ್ನು ಸಂಕುಚಿತಗೊಳಿಸುತ್ತಿದ್ದೇವೆ. ದೇವರು ಸರ್ವವ್ಯಾಪಿಯಾಗಿದ್ದು, ದೇವರಿದ್ದಾನೆ ಎಂಬ ವಿಶ್ವಾಸ ಮತ್ತು ದೇವರ ಬಗ್ಗೆ ಭಯ ಭಕ್ತಿಯಿಂದ…

Read More

ಮುದ್ದೇಬಿಹಾಳ: ಡೆಂಗ್ಯೂ ತಡೆಗೆ ವ್ಯಾಪಕವಾಗಿ ಮಾಹಿತಿ ನೀಡುವ ಅಗತ್ಯವಿದೆ. ಡೆಂಗ್ಯೂ ಜ್ವರ ವೈರಸ್‌ನಿಂದ ಉಂಟಾಗುವ ಖಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಈಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ ಹೇಳಿದರು.ಪಟ್ಟಣದ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಎದುರು ಡೆಂಗ್ಯು ಜಾಗೃತಿ ರಥ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.ಡಂಗ್ಯೂ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ದಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ. ಈ ಸೊಳ್ಳೆ ಕಚ್ಚಿದ ನಂತರ ಜ್ವರ, ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವುಕಾಣಿಸುವದು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುವದು ಹೀಗೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇಂತಹ ಯಾವುದೇ ಲಕ್ಷಣಗಳು ಗೋಚರಿಸಿದಾಗ ಮೊದಲು ವೈದ್ಯರನ್ನು ಕಾಣಬೇಕು ಎಂದರು.ಡೆಂಗಿ ಜ್ವರದ ಬಗ್ಗೆ ಜನರಲ್ಲಿ ಅರಿವು…

Read More

ಮುದ್ದೇಬಿಹಾಳ: ಚಾಲಕ ನಿಯಂತ್ರಣ ತಪ್ಪಿ ನಾಲ್ಕು ಚಕ್ರದ ಆಟೋ (ಟಾಟಾಏಸ್) ಪಲ್ಟಿಯಾಗಿ ನಾಲ್ವರ ಗಂಭೀರವಾಗಿ ಮತ್ತು ಸುಮಾರು ೧೨ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ತಾಲೂಕಿನ ಜಂಗಮುರಾಳ ಗ್ರಾಮದ ಬಳಿ ನಡೆದಿದೆ.ಗಾಯಾಳುಗಳೆಲ್ಲರೂ ಹೊಲಗಳಲ್ಲಿ ಕೆಲಸ ಮಾಡಲು ಟಾಟಾಏಸ್ ನಲ್ಲಿ ಪ್ರಯಾಣಿಸುತ್ತಿದ್ದು ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು ನಾಲ್ಕು ಜನ ಗಂಭೀರ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.ಘಟನೆ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ದೌಡಾಯಿಸಿದ ಕುಂಟೋಜಿಯ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಯುವ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ ರಫೀಕ ಶಿರೋಳ ಗಾಯಾಳುಗಳ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.

Read More

ಮುದ್ದೇಬಿಹಾಳ: ಪಟ್ಟಣ ಹಾಗೂ ನಾಲತವಾಡ ಗ್ರಾಮದಲ್ಲಿನ ಅಂಬೇಡ್ಕರ್ ವೃತ್ತವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು, ಮುದ್ದೇಬಿಹಾಳ ಪಟ್ಟಣದ ಪುರಸಭೆ ಎದುರು ಕಾಯ್ದಿರಿಸಿದ ಜಾಗೆಯನ್ನು ದಲಿತರಿಗೆ ಮೀಸಲಿಡಬೇಕು, ಮೀನುಗಾರರ ಸಾಲ ಮನ್ನಾ ಮಾಡಬೇಕು, ಬಾರ್ ಮಾಲೀಕರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಕಾರಣಕ್ಕಾಗಿ ಅಮಾನತ್ತುಗೊಂಡಿದ್ದ ಅಬಕಾರಿ ನಿರೀಕ್ಷಕಿ ಜ್ಯೋತಿಬಾಯಿ ಮೇತ್ರಿ ಅವರು ಮರಳಿ ಇಲ್ಲಿಗೆ ವರ್ಗಾವಣೆಯಾಗಿ ಬಂದಿರುವದು ಕಾನೂನು ಬಾಹಿರವಾಗಿದ್ದು ಇವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕು, ತಾಲೂಕಿನ ಗಂಗೂರ ಗ್ರಾಮದ ರಿ.ಸ.ನಂ ೧೧/೨, ೧೧/೩, ೧೧/೪ ಈ ಜಮೀನುಗಳನ್ನು ಮಾದಿಗ ಸಮಾಜದ ಸ್ಮಶಾನಕ್ಕೆ ಸರ್ಕಾರ ಶೀಘ್ರವಾಗಿ ಖರೀದಿಸಿ ಕೊಡಬೇಕು, ಪಟ್ಟಣದಲ್ಲಿ ಡಾ|| ಬಾಬು ಜಗಜೀವನರಾಂ ಮೂರ್ತಿ ಪ್ರತಿಷ್ಠಾಪಿಸಬೇಕೆನ್ನುವ ಹಕ್ಕೊತ್ತಾಯಗಳನ್ನು ಮುಂದಿಟ್ಟು ವಿವಿಧ ದಲಿತಪರ ಸಂಘಟನೆಗಳ ವತಿಯಿಂದ ಅ.೧೧ ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಡಿಎಸ್‌ಎಸ್ ಮುಖಂಡ ಡಿ.ಬಿ.ಮುದೂರ ಮಾತನಾಡಿ, ತಾಲೂಕಿನ ಗಂಗೂರ ಗ್ರಾಮದ ಮಾದಿಗ ಸಮಾಜದ ಸ್ಮಶಾನ ಭೂಮಿಯನ್ನು ಕೂಡಲೇ ಖರೀದಿಸಿ ಸಮಾಜಕ್ಕೆ ಕೊಡಬೇಕು. ಪಟ್ಟಣದ ಪುರಭೆ ಎದುರು ಇರುವ ಜಾಗೆಯಲ್ಲಿ…

Read More

ಸಿಂದಗಿ: ಕರ್ನಾಟಕ ಮಹಿಳಾ ಪರ ಜನ ಜಾಗೃತಿ ಸಮಿತಿಯು ಸಂವಿಧಾನ ಬದ್ದವಾಗಿ ರಾಜ್ಯದ ಮಹಿಳೆಯರ ಮೇಲೆ ನಡೆಯುವ ಅನ್ಯಾಯ ಮತ್ತು ಅತ್ಯಾಚಾರಗಳ ಶೋಷಣೆ ದೌರ್ಜನ್ಯ ವಿರುದ್ದ ಹೋರಾಟದ ಮೂಲಕ ನ್ಯಾಯ ದೊರಕಿಸಿಕೊಡುವುದರೊಂದಿಗೆ ಸಂಘಟನೆಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ನೀಲಮ್ಮ ಯಡ್ರಾಮಿ, ಉಪಾಧ್ಯಕ್ಷರನ್ನಾಗಿ ಸುಷ್ಮಿತಾ ವಾಂಡಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಸುಭದ್ರ ಮೇಲಿನಮನಿ, ಸಂ.ಕಾರ್ಯದರ್ಶಿಯನ್ನಾಗಿ ಶಾರದಾ ಮಂಗಳೂರ, ಖಜಾಂಚಿಯಾಗಿ ಅನುಸೂಯಾ ಪರಗೊಂಡ, ಜಯಶ್ರಿ ನಾಟೀಕಾರ, ಪುಷ್ಪಾ ಹಿರೇಮಠ, ಅನ್ನಪೂರ್ಣಾ ದೇವಕರ್, ಗೌಶಿಯಾ ಸಿಕ್ಕಲಗಾಋ ಅವರನ್ನು ಕಾರ್ಯಕಾರಿ ಮತ್ತು ಜಿಲ್ಲಾ ಸದಸ್ಯರಾಗಿ ಆಯ್ಕೆಮಾಡಲಾಗಿದೆ.ರಾಜ್ಯಾಧ್ಯಕ್ಷೆ ಜಗದೇವಿ ಹೆಗಡೆ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಬಾಯಿ ಕಟ್ಟಿಮನಿ ಆದೇಶದ ಮೇರೆಗೆ ಈ ನೇಮಕ ಮಾಡಲಾಗಿದೆ.

Read More

ಸಿಂದಗಿ: ಪ್ರತಿಭೋತ್ಸವ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಸಾಧ್ಯ ಎಂದು ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಜಿಲಾನಿ ನದಾಫ್ ಹೇಳಿದರು.ಪಟ್ಟಣದ ಹೊರವಲಯದ ಕಲಬುರಗಿ ರಸ್ತೆಯಲ್ಲಿರುವ ಲೊಯೋಲ ಶಾಲೆಯಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೊಯೋಲ ಶಾಲೆಯು ಇಂತಹ ಕಾರ್ಯಕ್ರಮದ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿಭೋತ್ಸವದಲ್ಲಿ ಪ್ರಾಥಮಿಕ ವಿಭಾಗದ ಹಲವಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿ ಬಹುಮಾನವನ್ನು ಗಿಟ್ಟಿಸಿಕೊಂಡಿದ್ದು ಸಂತಸ ತಂದಿದೆ ಎಂದರು.ಇದೇ ಸಂದರ್ಭದಲ್ಲಿ ಸಿದ್ದು ಕರಿಗೊಂಡ, ಲೊಯೋಲ ಶಾಲೆಯು ಇಂತಹ ವೇದಿಕೆಗಳನ್ನು ಒದಗಿಸಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಅನುಕೂಲ ಮಾಡಿದೆ ಎಂದು ಹೇಳಿದರು.ಸಮಾರಂಭದಲ್ಲಿ ಫಾದರ್ ಜೀವನ್ ಡಿಸೋಜಾ, ಪ್ರಾಚಾರ್ಯ ಫಾದರ್ ಲ್ಯಾನ್ಸಿ ಫರ್ನಾಂಡಿಸ್, ಸಿಸ್ಟರ್ ಸೋಫಿಯಾ, ರೇಷ್ಮಾ, ವಿದ್ಯಾ, ಸಿದ್ದಪ್ಪ ಎಂ, ಮಂಜುಳಾ, ಪುಷ್ಪಾ, ಲಕ್ಷ್ಮಿ, ಅನಿತಾ, ಸೀಮಾ, ಶಿಲ್ಪಾ ನಿರ್ಣಯಕರಾಗಿ ಕಾರ್ಯ ನಿರ್ವಹಿಸಿದರು.

Read More

ಸಿಂದಗಿ: ಪುರುಷರಿಗೆ ಮತ್ತು ಮಹಿಳೆಯರಿಗೆ ೩ ತಿಂಗಳಿಗೊಮ್ಮೆ ಬಿಪಿ ಮತ್ತು ಶುಗರ್ ತಪಾಸಣೆ ಮಾಡಬೇಕು. ಇತ್ತಿಚಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯದ ಸಮಸ್ಯೆಗಳಾಗುತ್ತಿವೆ. ಕಾರಣ ದೇಹಕ್ಕೆ ಸಾಕಷ್ಟು ವ್ಯಾಯಾಮ ಸಿಗದೇ ಇರುವುದೇ ಕಾರಣ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಕುಲಕರ್ಣಿ ಹೇಳಿದರು.ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೊಂಡ ಮಾಜಿ ದೇವದಾಸಿ ಮಹಿಳೆಯರಿಗೆ ಆರೋಗ್ಯದ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಮಾನಗಳಲ್ಲಿ ಸಣ್ಣ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಬಹಳ ಆಗುತ್ತಿದೆ. ಆದ್ದರಿಂದ ಮನೆಯಲ್ಲಿ ತಯ್ಯಾರಿ ಮಾಡಿದ ಆಹಾರವನ್ನು ಮಕ್ಕಳಿಗೆ ಕೊಡಬೇಕು. ಸ್ತನ ಕ್ಯಾನ್ಸರ್ ಮತ್ತು ಗರ್ಭಕ್ಯಾನ್ಸರ್ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಿದರು. ಮಕ್ಕಳಿಗೆ ಕೊಡುವ ಚುಚ್ಚುಮದ್ದನ್ನು ಸರಿಯಾದ ಸಮಯಕ್ಕೆ ಕೊಡಿಸಬೇಕು ಎಂದು ತಿಳಿಸಿದರು.ಈ ವೇಳೆ ಸಂಸ್ಥೆಯ ಸಹನಿರ್ದೇಶಕ ಸಿಂತಿಯಾ ಡಿ,ಮೆಲ್ಲೊರ, ಹಣಮಂತ ಕಲಾಲ ಮಾತನಾಡಿದರು.ಇದೇ ಸಂದರ್ಭದಲ್ಲಿ ಬೌರವ್ವ ನಾಯ್ಕೋಡಿ, ಇಂದ್ರಾಬಾಯಿ ಮಾದರ್, ತೇಜಸ್ವಿನಿ ಹಳ್ಳದಕೆರಿ, ಬಸವರಾಜ್ ಬಿಸನಾಳ್, ಬಸಮ್ಮ ಅಲ್ಲಾಪುರ ಸೇರಿದಂತೆ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮತ್ತು…

Read More

ಸಿಂದಗಿ: ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು. ಮುಸ್ಲಿಮರ ಮೀಸಲಾತಿ ೨ಬಿ ಪ್ರಮಾಣವನ್ನು ಶೇ. ೮ಕ್ಕೆರಿಸಬೇಕು ಎಂದು ಎಸ್‌ಡಿಪಿಐ ತಾಲೂಕಾಧ್ಯಕ್ಷ ಮೊಹ್ಮದ ಜಾಫರ್ ಇನಾಮದಾರ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ೨ಬಿ ಮೀಸಲಾತಿ ಹೆಚ್ಚಳ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಅ.೧೩ರಂದು ರಾಜ್ಯಾದ್ಯಂತ ಜಿಲ್ಲೆ, ತಾಲೂಕು ಮತ್ತ ಹೋಬಳಿ ಮಟ್ಟದಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ತಾಲೂಕಾ ಉಪಾಧ್ಯಕ್ಷ ಸಯ್ಯದ್ ನಾಗಾವಿ, ಸಾಮಾಜಿಕ ಹೋರಾಟಗಾರ ಸಲೀಂ ಅಲ್ದಿ, ಮಾಜಿ ಸೈನಿಕ ಸಂಘದ ಮುಖಂಡರ ಶಬ್ಬೀರಪಟೇಲ ಬಿರಾದಾರ, ಮೊಹಮ್ಮದ್ ಜಕರಿಯಾ, ಮೊಹಮ್ಮದ್‌ಹನೀಫ ಅಳ್ಳೋಳ್ಳಿ, ಮಶ್ಯಾಕ್ ವಡ್ಡಳ್ಳಿ, ತೌಸೀಫ್ ಭಾಗೇವಾಡಿ, ಜುಬೇರ ಮುರಡಿ, ಇರ್ಫಾನ ಅತ್ತಾರ ಸೇರಿದಂತೆ ಅನೇಕರು ಇದ್ದರು.

Read More

ಸಿಂದಗಿ: ರೈತನ ಮುಖದ ಮೇಲಿನ ನಗು ಅಳಿಸಿ ಕಣ್ಣೀರು ಹಾಕಿಸುತ್ತಿರುವ ಮಳೆರಾಯ. ಮುಂಗಾರು ಶುರುವಾಗಿ ಬಿತ್ತನೆ ಮಾಡಿದ ನಂತರ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಇರುವುದರಿಂದ ಬೆಳೆಗಳು ಸಂಪೂರ್ಣ ನಾಶವಾಗಿ ರೈತರ ಕಂಗಾಲಾಗುತ್ತಿದ್ದಾರೆ. ಇದನ್ನು ಗಮನಿಸಿ ರೈತರ ಉಳಿವಿಗಾಗಿ ಮೋರಟಗಿ ಗ್ರಾಮದ ಹತ್ತಿರದ ಹಂಚಿನಾಳ ಗ್ರಾಮದಲ್ಲಿ ಶ್ರೀ ಅಮೋಘಸಿದ್ದೇಶ್ವರ ಪರಮ ಭಕ್ತ ಭೂತಾಳಿಸಿದ್ದ ವಡೆಯರ ೧೧ ದಿನಗಳ ಕಾಲ ಉಪವಾಸ ಅನುಷ್ಠಾನಕ್ಕೆ ಕುಳಿತಿದ್ದಾರೆ.ಇವರು ಸೋಮವಾರದಿಂದ ಉಪವಾಸ ಕುಳಿತಿದ್ದು ಇಂದಿಗೆ ಐದು ದಿನಗಳು ಕಳೆದಿವೆ. ಶ್ರೀಗುರು ಸೋಮಲಿಂಗ, ಶ್ರೀ ಅಮೋಘಸಿದ್ಧ, ಶ್ರೀ ಶಾರಸಿದ್ದೇಶ್ವರ,ಶ್ರೀ ಗುರುಸಿದ್ದೇಶ್ವರ, ಶ್ರೀ ಭೂತಾಳಿಸಿದ್ದೇಶ್ವರ ಐದು ದೇವರುಗಳ ಮೇಲೆ ಹರಕೆ ಹೊತ್ತು ೧೧ ದಿನಗಳ ಯಾವುದೇ ರೀತಿಯ ಆಹಾರ ಸೇವನೆ ಮಾಡದೇ ಕೇವಲ ನೀರಿನ ಮೇಲೆ ಉಪವಾಸ ಮಾಡುತಿದ್ದೇನೆ. ಮಳೆ ಖಂಡಿತ ಬರುತ್ತೆ ದೇವರು ಒಳ್ಳೆಯದು ಮಾಡುತ್ತಾನೆ ಎಂದು ಮಾತನಾಡದೆ ಬಂದಂತ ಭಕ್ತರಿಗೆ ಬಿಳಿ ಹಾಳೆಯ ಮೇಲೆ ಬರೆಯುವ ಮೂಲಕ ಸಂದೇಶ ತಿಳಿಸುತಿದ್ದಾರೆ.ಹಂಚಿನಾಳ ಗ್ರಾಮದಲ್ಲಿ ಮಳೆಗಾಗಿ ಅನುಷ್ಠಾನ ಕುಳಿತಿರುವ ಸುದ್ದಿ…

Read More