Author: editor.udayarashmi@gmail.com

ಮುದ್ದೇಬಿಹಾಳ: ಹಾಲುಮತ ಸಮಾಜ ೧೦೯ ನೇ ಇಸ್ವಿ ಪೂರ್ವ ಗುರುಪೀಠ ಹೊಂದಿತ್ತು ಎನ್ನುವುದಕ್ಕೆ ಕಂಚಿನ ಆದೇಶಪತ್ರವೊಂದು ಸಾಕ್ಷಿಯಾಗಿದೆ ಎಂದು ಎಸ್.ಆರ್.ಜೋಗಿ ವಕೀಲರು ಹೇಳಿದರು.ಈ ಕುರಿತು ಕಂಚಿನ ಆದೇಶಪತ್ರದ ಜೊತೆಗೆ ಹೇಳಿಕೆ ನೀಡಿರುವ ಅವರು, ಅಂದಿನ ಮೈಸೂರ ದೇಶದ ವ್ಯಾಪ್ತಿಯ ಇಂದಿನ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ(ಸರವೂರ) ಗ್ರಾಮದಲ್ಲಿರುವ ಹಾಲುಮತದ ಮೂಲ ಗುರೂಪೀಠ ಶ್ರೀ ಶಾಂತಮುತ್ತಯ್ಯ ನವರಿಂದ ಸ್ಥಾಪಿತವಾಗಿದ್ದು, ಭಕ್ತರ ಅನುಕೂಲಕ್ಕಾಗಿ ಕೊಪ್ಪಳದ ಕೇಂಡದಮಠ, ಬಂಕಾಪುರಮಠ, ಹಾಸನದ ಅಣತಿ ಮಠ ಹೀಗೆ ಹಲವಾರು ತನ್ನ ಅಧೀನ ಶಾಖಾ ಮಠಗಳನ್ನು ಹೊಂದಿದ ಉದಾಹರಣೆಗಳಿವೆ. ಸುಮಾರು ೨ ಸಾವಿರ ವರ್ಷಕಿಂತ ಹೆಚ್ಚು ತನ್ನ ಅಸ್ತಿತ್ವ ಉಳಿಸಿ ಕೊಂಡು ಬಂದ ಶ್ರೀಮಠಕ್ಕೆ ಫೆ.೦೨ ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರು ರೇವಣಸಿದ್ದೇಶ್ವರರ ದರ್ಶನಕ್ಕಾಗಿ ಬೇಟಿ ನೀಡುತ್ತಿರುವುದು ಸ್ವಾಗತಾರ್ಹ. ಮುಖ್ಯ ಮಂತ್ರಿಗಳು ಮುಂಬರುವ ದಿನಗಳಲ್ಲಿ ಸುಕ್ಷೇತ್ರ ಸರೂರ ಗ್ರಾಮವನ್ನು ಅಭಿವೃದ್ಧಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Read More

ದೇವರಹಿಪ್ಪರಗಿ: ಮಾಚಿದೇವನ ಜನ್ಮಭೂಮಿಯಲ್ಲಿ ಜನಿಸಿದ ನಾವೆಲ್ಲ ಮಾಚಿದೇವ, ಬಸವಣ್ಣ ಸೇರಿದಂತೆ ಎಲ್ಲ ಶರಣರ ಕಾಯಕ ತತ್ವವನ್ನು ತನು, ಮನದಿಂದ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಜೀವನದಲ್ಲಿ ಶರಣರ ನಡೆ,ನುಡಿ ಇಂದಿಗೂ ಪ್ರಸ್ತುತ. ಅವರನ್ನು ಕೇವಲ ಜಯಂತಿಗಳಿಗೆ ಸೀಮಿತಗೊಳಿಸದೇ ಅವರ ನಡೆದ ಮಾರ್ಗ, ಕಾಯಕ ತತ್ವಗಳನ್ನು ಅರಿತು ಪಾಲಿಸಬೇಕಾಗಿದೆ ಎಂದರು.ಶ್ರೀಬಸವ ಶರಣ ಸಂಗಮ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ತಡವಲ್, ನಿವೃತ್ತ ಶಿಕ್ಷಕರುಗಳಾದ ಪಂಚಾಕ್ಷರಿ ಮಿಂಚನಾಳ, ಬಿ.ಆಯ್.ಹೊಸಳ್ಳಿ ಮಾತನಾಡಿದರು.ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಆಹಾರ ನಿರೀಕ್ಷಕ ದಳವಾಯಿ, ಗೊಲ್ಲಾಳ ಬಿರಾದಾರ, ರಾಮಯ್ಯ ನಾಶೀಮಠ, ಗುರುಪಾದ ಬುದ್ನಿ, ಮಲ್ಲಪ್ಪ ಭತಗುಣಕಿ. ಶ್ರೀಶೈಲ ಅಗಸರ, ಕಾಶೀನಾಥ ಅಗಸರ, ರಮೇಶ ಹಡಪದ, ಮಡಿವಾಳಪ್ಪ ಹಡಪದ, ದುಂಡೇಶ ಅಗಸರ, ಸುರೇಶ ಅಗಸರ ಸಿಬ್ಬಂದಿ ರಾಜು ಕಂಠಿ, ಇತರರು ಇದ್ದರು.

Read More

ಸಿಂದಗಿ: ಬಸವಣ್ಣನವರ ವಚನ ತತ್ವಗಳನ್ನು ಅಳವಡಿಸಿಕೊಂಡರೆ ಜಗತ್ತಿನಲ್ಲಿ ಅಸಾದ್ಯ ಎನ್ನುವುದು ಯಾವದು ಇಲ್ಲಾ ಎಂದು ನಿವೃತ್ತ ಪ್ರಾಚಾರ್ಯ ಬಿ.ಪಿಕರ್ಜಗಿ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಜ್ಯ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ನಿಮಿತ್ಯ ಜಾಗತಿಕ ಬಸವ ಶಾಂತಿ ಸಂಸ್ಥೆ, ಕತಾರ್ ವತಿಯಿಂದ ಸಚಿವ ಸಂಪುಟದ ಸಚಿವರಿಗೆ, ಶ್ರಮಿಸಿದ ಮಠಾಧೀಶರಿಗೆ, ಬಸವ ಅನುಯಾಯಿಗಳಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಜಗತ್ತಿಗೆ ಸರಳ ವಚನಗಳ ಮೂಲಕ ಅಂಧಕಾರ ಕಳೆಯುವ ಗುರುವಾಗಿದ್ದಾರೆ ಎಂದರು.ಈ ವೇಳೆ ಹಿಕ್ಕಣಗುತ್ತಿ ಲಿಂಗಾಯತ ಮಹಾಮಠದ ಪ್ರಭುಲಿಂಗದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಇದೇ ಸಂದರ್ಭದಲ್ಲಿ ಶಶಿಕಾಂತಗೌಡ ಪಾಟೀಲ, ರವಿ ರಾಥೋಡ್, ಎಂ.ಆರ್.ಡೋಣಿ, ಶಶಿಧರ್ ಹೆಬ್ಬಾಳ, ಶಿವಾನಂದ ಕಲಬುರ್ಗಿ, ಗುರು ತಾರಾಪೂರ, ಆರ್,ಆರ್.ಪಾಟೀಲ, ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಆನಂದ ಶಾಬಾದಿ, ಚಂದ್ರಶೇಖರ ನಾಗರಬೆಟ್ಟ, ಎಂ.ಎಂ,ಹಂಗರಗಿ, ಶ್ರೀಶೈಲ ಯಳಮೇಲಿ ಸೇರಿದಂತೆ ಬಸವ ದಳದ ಸದಸ್ಯರು, ಬಸವಣ್ಣನವರ ಅನುಯಾಯಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು

Read More

ಸಿಂದಗಿ: ಕೇಂದ್ರ ಸರ್ಕಾರವು ಭಾರತದ ಏಳಿಗೆಗೆ ಪೂರಕವಾದ ಬಜೆಟ್ ಮಂಡಿಸಿದ್ದು ಬಡವರು, ಮಹಿಳೆಯರು, ರೈತರು ಹಾಗೂ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಅಭಿವೃದ್ಧಿ ಪರವಾದ ಉತ್ತಮ ಬಜೆಟ್ ಇದಾಗಿದೆ ಎಂದು ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ ಅಭಿಪ್ರಾಯಿಸಿದ್ದಾರೆ.

Read More

ಸಿಂದಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಚ್ರದ ಹಿತಾಸಕ್ತಿಯನ್ನು ಗಮದಲ್ಲಿಟ್ಟುಕೊಂಡು ಜನಪರ ಬಜೆಟ್ ಮಂಡನೆ ಮಾಡಿದ್ದಾರೆ. ಇದು ಅಭಿವೃದ್ಧಿ ಪರವಾದ ಬಜೆಟ್ ಆಗಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಬಣ್ಣಿಸಿದ್ದಾರೆ.

Read More

ಸಿಂದಗಿ: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಿರಾಶದಾಯಕವಾಗಿದೆ. ರೈತರಿಗೆ ಬಡವರಿಗೆ ಮಹಿಳೆಯರಿಗೆ ಮತ್ತು ಯುವಕರಿಗೆ ಹೊಸ ಯೋಜನೆಗಳು ಮತ್ತು ಹೊಸ ಕಾರ್ಯಕ್ರಮಗಳು ಇಲ್ಲದ ಬಜೆಟ್ ಇದಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಟೀಕಿಸಿದ್ದಾರೆ.ಇದು ಒಂದು ದೇಶದ ಭರವಸೆಯ ಬಜೆಟ್ ಆಗಬೇಕಾಗಿತ್ತು. ಆದರೆ ಇದು ಚುನಾವಣಾ ಬಜೆಟ್ ಆಗಿರುವುದರಿಂದ ಇದರಲ್ಲಿ ಯಾವುದೇ ರೀತಿಯ ಪರಿಣಾಮಕಾರಿಯಾಗಿರುವ ಹೊಸ ಯೋಜನೆಗಳನ್ನ ಕಾಣುತ್ತಿಲ್ಲ ಎಂದು ಶಾಸಕ ಅಶೋಕ್ ಮನಗೂಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read More

ಸಿಂದಗಿ: ಮಡಿವಾಳ ಸಮುದಾಯದ ಮಹಾನ್ ಚೇತನ ಮಾಚಿದೇವರ ಮಾರ್ಗದರ್ಶನ ಸಮಾಜದ ಪ್ರತಿಯೊಂದು ವರ್ಗಕ್ಕೆ ಅವಶ್ಯಕವಾಗಿದೆ ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ವಚನಕಾರ ಮಡಿವಾಳ ಮಾಚಿದೇವರ ಜಯಂತಿ ನಿಮಿತ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಾಚಿದೇವರು ಅನುಭವ ಮಂಟಪದಲ್ಲಿ ತಮ್ಮ ಅಮೂಲ್ಯ ಸಾಹಿತ್ಯವನ್ನು ಸಮಾಜದ ಏಳ್ಗೆಗೆ ಶ್ರಮಿಸಿದವರು. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪ್ಪಿಟ್ಟಿದ್ದರು ಎಂದರು.ಈ ವೇಳೆ ಮಡಿವಾಳ ಮಾಚಿದೇವರ ವೃತ್ತ ನಿರ್ಮಾಣ ಸಲುವಾಗಿ ಸಿಂದಗಿ ನಗರದಲ್ಲಿ ಜಾಗವನ್ನು ಒದಗಿಸಿ ಕೊಡುವಂತೆ ಸಮಾಜದ ಮುಖಂಡರು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಶೀಲ್ದಾರ್ ಐ.ಜೆ.ಬಳಗಾನೂರ, ಕಂದಾಯ ನಿರೀಕ್ಷಕ ಐ.ಎಂ. ಮಕಂದಾರ, ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಈರಣ್ಣ ಅಗಸರ, ಉಪಾಧ್ಯಕ್ಷ ಶಂಕರ ಅಗಸರ, ಗುರು ಅಗಸರ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ್, ಬಸವರಾಜ ಅಗಸರ, ದೊಡ್ಡಪ್ಪ ಅಗಸರ, ಸಿದ್ದು ಅಗಸರ, ಮಡಿವಾಳಪ್ಪ ಮಡಿವಾಳರ, ಮಹಾಂತೇಶ ಅಗಸರ, ಮಲ್ಲಿಕಾರ್ಜುನ ಅಗಸರ, ಅಶೋಕ ಅಗಸರ, ಪ್ರಜ್ವಲ ಅಗಸರ…

Read More

ಫೆ.೫ರಂದು ಸಿಂದಗಿಯಲ್ಲಿ ಜರುಗಲಿರುವ ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಿಂದಗಿ: ಪಟ್ಟಣದ ಎಚ್.ಜಿ ಪ್ರೌಢಶಾಲೆ ಆವರಣದಲ್ಲಿ ಫೆ.೫ರಂದು ಜರುಗಲಿರುವ ಸಿಂದಗಿ ತಾಲೂಕು ೬ನೇ ಕನ್ನಡ ಸಾಹಿತ್ಯಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಶ್ರಾಂತ ಉಪನ್ಯಾಸಕ, ಮಕ್ಕಳ ಸಾಹಿತಿ ರಾ.ಸಿ, ವಾಡೇದ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಮಕ್ಕಳ ಸಾಹಿತಿ ರಾ.ಸಿ, ವಾಡೇದ ಕನ್ನಡ ವಿಷಯದಲ್ಲಿ ಎಂಎ ಪದವೀಧರರು. ಅವರು ಸ್ಥಳೀಯ ಅಂಜುಮನ್ ಪಿಯು ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೩೨ ವರ್ಷ ಸೇವೆ ಸಲ್ಲಿಸಿದ್ದಾರೆ. ವೃತ್ತಿ ಉಪನ್ಯಾಸವಾದರೇ ಪ್ರವೃತ್ತಿ ಮಕ್ಕಳ ಸಾಹಿತ್ಯ ರಚನೆಯಾಗಿದೆ. ಅವರು ಸುಂದರ ಚಂದಿರ, ಮಾಯದ ಕುದರೆ ಮತ್ತು ಇತರ ನಾಟಕಗಳು, ಕೈ ತೋಟ, ಚಿಣ್ಣರ ಆಟ, ಬೆಳಕು, ಧಡಂ ಧುಡಕಿ, ತುತ್ತೂರಿ, ಸ್ನೇಹ ಸಿರಿ, ಅಜ್ಜಿಯ ಆಸೆ, ಟಂಟಂ ಗಾಡಿ, ಜಾನಪದ ಕಥೆಗಳು ಹೀಗೆ ಮಕ್ಕಳ ಕೃತಿಗಳು ಸೇರಿದಂತೆ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಮಕ್ಕಳ ಸಾಹಿತ್ಯ ಚಿಂತನ ವೇದಿಕೆ ಅಧ್ಯಕ್ಷರಾಗಿ, ಚಲನಚಿತ್ರ ಬೆಳ್ಳಿ ಅಡಾಡೆಮಿ ವಿಜಯಪುರದ ಸದಸ್ಯರಾಗಿ, ಚುಟುಕು ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷರಾಗಿ,…

Read More

ವಿಜಯಪುರ: ಕಲ್ಯಾಣ ಕರ್ನಾಟಕದ ಬಸವ ಕಲ್ಯಾಣದ ಅನುಭವ ಮಂಟಪದ ೧೨ನೇ ಶತಮಾನದಲ್ಲಿ ಸಮ ಸಮಾಜದ ಕನಸು ಕಂಡು ಆದಿಸೆಯಲ್ಲಿ ತಮ್ಮ ವಚನಗಳ ಮೂಲಕ ಪ್ರತಿಪಾದಿಸಿದ ಮಡಿವಾಳ ಮಾಚಿದೇವ ಶರಣರು ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು.ಗುರುವಾರ ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶರಣರು ಅಂದು ಹಾಕಿಕೊಟ್ಟ ಹಾಗೂ ತಿಳಿಸಿದ ವಿಚಾರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ಅಂದಿನ ಬಸವಾದಿ ಶರಣರು ಕಾಯಕ ತತ್ವವನ್ನು ಅನುಸರಿಸಬೇಕು ಹಾಗೂ ಅವರ ಜೀವನ ಆದರ್ಶಗಳನ್ನು ಅಳವಡಿಕೊಳ್ಳಬೇಕು ಎಂದು ಅವರು ಹೇಳಿದರು.ಅಪರ ಪೊಲೀಸ್ ವರಿಷ್ಟಾಧಿಕಾರಿ ರಾಮನಗೌಡ ಹಟ್ಟಿ ಮಾತನಾಡಿ, ಶರಣರು ೧೨ ನೇ ಶತಮಾನದಲ್ಲಿ ಸುಮರು ೭೭೦ ಶಿವಶರಣರು ಒಂದೆಡೆ ಸೇರಿ ಅನುಭವ ಮಂಟಪದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಏಕತೆಗಾಗಿ ಚಿಂತನ-ಮಂಥನ ಹಾಗೂ ಗೋಷ್ಠಿಗಳನ್ನು ನಡೆಸುತ್ತಿದ್ದರು. ಅಂದಿನ ವಚನಗಳು ಇಂದು ನಮ್ಮ ಜೀವನೋಪಾಯ ನಡೆಸಲು ಒಂದು…

Read More

ವಿಜಯಪುರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಸರ್ವೇ ಜನ ಸುಖಿನೋ ಭವಂತು: ಎಂಬ ಉಕ್ತಿಗೆ ಉದಾಹರಣೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ರೈತ ಕಲ್ಯಾಣ, ಕಾರ್ಮಿಕ ಸಬಲೀಕರಣ, ಮಹಿಳಾ ಸಬಲೀಕರಣ ಹೀಗೆ ಎಲ್ಲರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆಯಾಗಿದೆ‌. ಜನಪ್ರೀಯತೆಗಿಂತ ಜನಪರಕ್ಕೆ ಆದ್ಯತೆ ದೊರಕಿದೆ.ಜನಸಾಮಾನ್ಯರಿಗೆ ಯಾವುದೇ ಆದಾಯ ತೆರಿಗೆ ಹೊರೆ ಇಲ್ಲ,ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ ವಿಸ್ತರಣೆ ಮಾಡುವ ನಿರ್ಧಾರ, ಲಕ್ಷಾಧಿಪತಿ ದೀದಿ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಒತ್ತು ಹೀಗೆ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹೊಂದಿರುವ ಬಜೆಟ್ ಇದಾಗಿದೆ ಎಂದು ಕಾರಜೋಳ ಹೇಳಿದ್ದಾರೆ.

Read More