ಸಿಂದಗಿ: ಮಡಿವಾಳ ಸಮುದಾಯದ ಮಹಾನ್ ಚೇತನ ಮಾಚಿದೇವರ ಮಾರ್ಗದರ್ಶನ ಸಮಾಜದ ಪ್ರತಿಯೊಂದು ವರ್ಗಕ್ಕೆ ಅವಶ್ಯಕವಾಗಿದೆ ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ವಚನಕಾರ ಮಡಿವಾಳ ಮಾಚಿದೇವರ ಜಯಂತಿ ನಿಮಿತ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಾಚಿದೇವರು ಅನುಭವ ಮಂಟಪದಲ್ಲಿ ತಮ್ಮ ಅಮೂಲ್ಯ ಸಾಹಿತ್ಯವನ್ನು ಸಮಾಜದ ಏಳ್ಗೆಗೆ ಶ್ರಮಿಸಿದವರು. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪ್ಪಿಟ್ಟಿದ್ದರು ಎಂದರು.
ಈ ವೇಳೆ ಮಡಿವಾಳ ಮಾಚಿದೇವರ ವೃತ್ತ ನಿರ್ಮಾಣ ಸಲುವಾಗಿ ಸಿಂದಗಿ ನಗರದಲ್ಲಿ ಜಾಗವನ್ನು ಒದಗಿಸಿ ಕೊಡುವಂತೆ ಸಮಾಜದ ಮುಖಂಡರು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಶೀಲ್ದಾರ್ ಐ.ಜೆ.ಬಳಗಾನೂರ, ಕಂದಾಯ ನಿರೀಕ್ಷಕ ಐ.ಎಂ. ಮಕಂದಾರ, ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಈರಣ್ಣ ಅಗಸರ, ಉಪಾಧ್ಯಕ್ಷ ಶಂಕರ ಅಗಸರ, ಗುರು ಅಗಸರ, ಡಿಎಸ್ಎಸ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ್, ಬಸವರಾಜ ಅಗಸರ, ದೊಡ್ಡಪ್ಪ ಅಗಸರ, ಸಿದ್ದು ಅಗಸರ, ಮಡಿವಾಳಪ್ಪ ಮಡಿವಾಳರ, ಮಹಾಂತೇಶ ಅಗಸರ, ಮಲ್ಲಿಕಾರ್ಜುನ ಅಗಸರ, ಅಶೋಕ ಅಗಸರ, ಪ್ರಜ್ವಲ ಅಗಸರ ಸೇರಿ ಉಪಸ್ಥಿತರಿದ್ದರು.
*ತಾಲೂಕು ಆಸ್ಪತ್ರೆ:* ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀ ಮಡಿವಾಳ ಮಾಚಿದೇವರ ಜನ್ಮ ದಿನವನ್ನು ಆಚರಣೆ ಮಾಡಲಾಯಿತು. ಈ ವೇಳೆ ದಂತ ವೈದ್ಯಾಧಿಕಾರಿ ಡಾ.ರಮೇಶ ರಾಠೋಡ್, ಡಾ.ಮಹಾಂತೇಶ ಹಿರೇಮಠ್, ಡಾ.ಮೌನೇಶ್ ಬಡಿಗೇರ್, ಆಪ್ತಸಮಾಲೋಚಕ ಎಂ.ಪಿ.ಸಾಗರ್, ರಾಜಶೇಖರ್ ನರಗೋದಿ, ವಿದ್ಯಾ ಹಿರೇಪಟ್, ದೇವಮ್ಮ ಕೊಣ್ಣೂರ್, ಲವ ಗಾಣಿಗೇರ, ಅಶೋಕ್ ಕಡಲಗೊಂಡ್, ಸುನೀಲ ನೇಮ್ಶೆಟ್ಟಿ, ನಿಂಗಣ್ಣ ಗೊರಗುಂಡಗಿ ಸೇರಿದಂತೆ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

