Author: editor.udayarashmi@gmail.com

ಕಲಕೇರಿ: ನವಜಾತ ಶಿಶುಗಳು,ಮಕ್ಕಳು ಹದಿಹರೆಯದವರು,ಗರ್ಭಿಣಿಯರು,ತಾಯಂದಿರಲ್ಲಿ ರಕ್ತಹೀನತೆ ಮತ್ತು ಅಪೌಷ್ಠಿಕತೆ ನಿವಾರಿಸಲು ‘ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ’ ಯೋಜನೆಗೆ ಸರ್ಕಾರ ಮತ್ತು ಆರೋಗ್ಯ ಇಲಾಕೆ ಮುಂದಾಗಿದ್ದು ಇದಕ್ಕೆ ಇದರ ಯಶಸ್ಸಿಗೆ ಪ್ರತಿಯೋಬ್ಬರು ಮುಂದಾಗಬೇಕು. ಅನೀಮಿಯಾ ಮುಕ್ತ ಕರ್ನಾಟಕ ಮಾಡಲು ಸಂಕಲ್ಪಮಾಡಬೇಕಿದೆ ಎಂದು ಸಿಂದಗಿಯ ಡಾ.ಶ್ವೇತಾ ಸ್ಥಾವರಮಠ ಹೇಳಿದರು.ಶುಕ್ರವಾರ ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳಿಗೆ ಹಮ್ಮಿಕೊಂಡ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.ಮಕ್ಕಳು,ವಿಧ್ಯಾರ್ಥಿ,ವಿಧ್ಯಾರ್ಥಿನಿಯರು,ಗರ್ಭಿಣಿಯರು,ಬಾಣಂತಿಯರು ಸಮಾಜದಲ್ಲಿ ಉತ್ತಮ ಆರೋಗ್ಯವಂತಯರಾಗಿ ಬದುಕಬೇಕು ಎನ್ನುವ ಸದುದ್ದೇಶದಿಂದ ಸರ್ಕಾರ ಮತ್ತು ಆರೋಗ್ಯ ಇಲಾಖೆ ನುರಿತ ವೈದ್ಯರಿಂದ ತಪಾಸಣೆ ನಡೆಸಿ ಅನೀಮಿಯಾದಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನಿಡಿ ಅವರಿಗೆ ಔಷದಿ ಮತ್ತು ಮಾತ್ರೆಗಳನ್ನು ನಿಡಲಾಗುತ್ತದೆ ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ಮಾಡಿದರು, ಈ ಸಂದರ್ಭದಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ಮಕ್ಕಳಿಗೆ ಹೆಮೋಗ್ಲೊಬಿನ್ ತಪಾಸಣೆ ಮಾಡಿ ರಕ್ತ ಹೀನತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮಾತ್ರೆಗಳನ್ನು ವಿತರಿಸಲಾಯಿತು,ಪ್ರಭಾರಿ ಪ್ರಾಚಾರ್ಯರಾದ ಬಿ ಜಿ ಚನಗೊಂಡ ಮಾತನಾಡಿದರು.ಡಾ.ಪ್ರೀಯಾಂಕಾ…

Read More

ಸಿಂದಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ೧೯೮೬ರಲ್ಲಿ ಸ್ಥಾಪನೆಗೊಂಡು, ಶರಣರ ವೈಚಾರಿಕತೆ, ಸಮಸಮಾಜಗಳ ನಿರ್ಮಾಣಕ್ಕಾಗಿ ನಡೆಸಿದ ಹೋರಾಟ ಮತ್ತು ಅವರ ವಚನಗಳಲ್ಲಿನ ಚಿಂತನೆಗಳಿಗೆ ಬೆಳಕು ಚೆಲ್ಲುವ ಮಹತ್ತರ ಕಾರ್ಯವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದು ಆರ್.ಡಿ.ಪಾಟೀಲ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಪಿ.ವ್ಹಿ.ಮಹಲಿನಮಠ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಇಂದು ಲಿಂ.ಚೆನ್ನಮ್ಮ ಚನ್ನಪ್ಪ ವಮ್ಮಾ ಇವರ ಸ್ಮರಣಾರ್ಥ ಡಾ.ಅಮಿತ್ ಆರ್.ವಾರದ ಹಾಗೂ ಲಿಂ.ಲಕ್ಕಮ್ಮ ಚಂದ್ರಾಮಪ್ಪ ಸಿಂದಗಿ ಅವರ ಸ್ಮರಣಾರ್ಥ ಗುತ್ತಿಗೆದಾರ ಮಹಾದೇವಪ್ಪ ಚಂದ್ರಾಮಪ್ಪ ಸಿಂದಗಿ ಅವರು ನೀಡಿದ ದತ್ತಿ ದಾನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ, ಮಕ್ಕಳು, ಯುವಕರಲ್ಲಿ ಶರಣ ಸಾಹಿತ್ಯದ ಜ್ಞಾನವನ್ನು ಮನೆಯಲ್ಲಿ ಮಹಾಮನೆ ಎಂಬ ವಚನ ದೀವಿಗೆಯನ್ನು ಮನೆ-ಮನೆ ಜಗುಲಿಗೆ ಕೊಂಡೊಯ್ದು ಶರಣರ ಸಂದೇಶಗಳನ್ನು ಬಿತ್ತರಿಸುತ್ತಿದೆ. ಇದರ ವ್ಯಾಪ್ತಿ ಅನ್ಯ ರಾಜ್ಯಗಳು ಸೇರಿದಂತೆ ವಿಶ್ವದೆಲ್ಲೆಡೆ ಪ್ರಚಲಿತದಲ್ಲಿರುವುದು ದೇಶವೇ ಹೆಮ್ಮೆ ಪಡುವ ಸಂಗತಿಯಾಗಿದ್ದು, ಶರಣರ ಜೀವನ ಮತ್ತು ಅವರು ನೀಡಿರುವ ವಚನಗಳು…

Read More

ಇಂಡಿ‌: ಪೌರಾಣಿಕ ನಾಟಕಗಳು ಮನುಷ್ಯನಿಗೆ ಸಂಸ್ಕಾರ ನೀಡುವ, ಸಮಾಜದ ಓರೆ ಕೊರೆ ತಿದ್ದುವ ಪ್ರಮುಖ‌ ಮಾದ್ಯಮ ವಾಗಿದೆ ಎಂದು ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ್ ಹೇಳಿದರು.ತಾಲೂಕಿನ ನಿಂಬಾಳ ಬಿ ಕೆ ಗ್ರಾಮದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ 536ನೆಯ ಜಯಂತಿಯ ಅಂಗವಾಗಿ ಶ್ರೀ ಬೀರಲಿಂಗೇಶ್ವರ ಮಹಾತ್ಮೆ ಯಂಬ ಸುಂದರ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತಾನಾಡಿದರು.ಇಂದಿನ ಆದುನಿಕ ಯುಗದಲ್ಲಿ ಜಾನಪದ, ಹಾಗೂ ಪೌರಾಣಿಕ ನಾಟಕಗಳು ನಶಿಸುತ್ತಿರುವ ಸಂದರ್ಭದಲ್ಲಿ, ನಿಂಬಾಳ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಮಹಾತ್ಮೆ ಯಂಬ ಪೌರಾಣಿಕ ನಾಟಕದ ಪ್ರದರ್ಶನ ನಡೆಯುತ್ತಿದ್ದು, ಸಂತಸದ ಮತ್ತು ಹೆಮ್ಮೆಯ ಪಡುವ ವಿಚಾರ. ನಾಟಕಗಳು ಪ್ರತಿಯೊಬ್ಬರಿಗೂ ಉತ್ತಮ ಸಂಸ್ಕಾರವನ್ನು ಕಲಿಸುವ ಮಾಧ್ಯಮವಾಗಿ ಸಮಾಜದಲ್ಲಿ ಸದ್ದು ಗದ್ದಲು ವಿಲ್ಲದೆ ಕಾರ್ಯಮಾಡುತ್ತಿರುವುದು ಶ್ಲಾಘನೀಯ‌‌. ಶಿಷ್ಯ ಮಹಿಮಾಂತಕ ಶ್ರೀ ಮಾಳಿಂಗರಾಯ ಹಾಗೂ ಗುರು ಶ್ರೀ ಬೀರಲಿಂಗೇಶ್ವರ ನಡುವೆ ನಡೆಯುವ ಸಂಭಾಷಣೆ ಒಬ್ಬ ಆದರ್ಶ ಗುರು ಶಿಷ್ಯರ ಸಂಬಂಧಗಳ ಬಗ್ಗೆ ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ, ಇಂತಹ ಭಕ್ತಿ ಪ್ರಧಾನ ನಾಟಕಗಳ ಸದುಪಯೋಗ ಪಡೆದುಕೊಳ್ಳಬೇಕು…

Read More

ಬಸವನಬಾಗೇವಾಡಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಶಿಕ್ಷಕರು, ಪಾಲಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತಾಗಬೇಕೆಂದು ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹೆಣ್ಣುಮಕ್ಕಲ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರಶಿಕ್ಷಣಾಽಕಾರಿಗಳ ಹಾಗೂ ಕ್ಷೇತ್ರಸಮನ್ವಯಾಽಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಪ್ರತಿಭಾ ಕಾರಂಜಿ ಕಲೋತ್ಸವದಂತಹ ಕಾರ್ಯಕ್ರಮಗಳು ಬೌದ್ಧಿಕ ಮಟ್ಟ ಬೆಳವಣಿಗೆಗೆ ತುಂಬಾ ಸಹಕಾರಿಯಾಗುತ್ತದೆ. ನಿರ್ಣಾಯಕರು ತಮ್ಮ ನಿರ್ಣಯವನ್ನು ಪಾರದರ್ಶಕವಾಗಿ ನೀಡುವ ಮೂಲಕ ಸೂಕ್ತ ಪ್ರತಿಭೆಯನ್ನು ಮುಂದಿನ ಹಂತಕ್ಕೆ ಕಳುಹಿಸಿದರೆ ತಾಲೂಕಿಗೆ ಕೀರ್ತಿ ಬರುತ್ತದೆ. ತಾಲೂಕಿನ ಪ್ರಿಯಾ ಲಮಾಣಿ ಅವಳು ಇನ್‌ಸ್ಪೈಯರ್ ಅವಾರ್ಡ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವದು ಪ್ರತಿಭಾವಂತ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ನೀಡಿದರೆ…

Read More

ಹೊನವಾಡ: ಅನಾದಿ ಕಾಲದಿಂದಲೂ ಸಮಾಜದಲ್ಲಿ ಅಂಟುಜಾಡ್ಯದಂತೆ ಹರಡಿಕೊಂಡಿರುವ ಮೇಲು ಕೀಳೆಂಬ ವ್ಯಾಧಿಯನ್ನು ಹೋಗಲಾಡಿಸುವಲ್ಲಿ ಹಲವು ಸಾಧು-ಸಂತರು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ಇಂತಹವರ ಪೈಕಿ ತಮ್ಮ ಕೀರ್ತನೆಗಳ ಮೂಲಕ ಸಮಾನತೆ ಸಾರಿದಲ್ಲದೆ, ಭಕ್ತಿಯ ಮೂಲಕವೇ ದೇವರನ್ನು ಕಂಡವರು ಕನಕದಾಸರು ಎಂದು ಪ್ರಾಚಾರ್ಯರಾದ ಎಂ ಎ ಹಿರೇಮಠ್ ಮಾತನಾಡಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವಿ ಎಸ್ ಪದವಿ ಪೂರ್ವ ಕಾಲೇಜು (ಹೈಸ್ಕೂಲ್) ನಲ್ಲಿ ನಡೆದ ದಾಸ ಪರಂಪರೆಯ ಸಂತ, ಭಕ್ತ ಕನಕದಾಸರ 536ನೇ ಜಯಂತಿಯನ್ನು ಆಚರಿಸಲಾಯಿತು.ನಮಗೆ ಇವತ್ತಿಗೂ ಭಕ್ತಿ ವಿಚಾರಕ್ಕೆ ಬಂದಾಗ ಕನಕದಾಸರ ಕಥೆಗಳು ನೆನಪಾಗುತ್ತವೆ. ಅವರು ಕೃಷ್ಣನನ್ನೇ ಜಪಿಸುತ್ತಾ ಊರೂರು ತಿರುಗಿ ಕೀರ್ತನೆಗಳ ಮೂಲಕ ಮೇಲು- ಕೀಳು ತೊಡೆದು ಮನುಷ್ಯರಾಗಿ ಬಾಳಿ ಎಂಬ ಸಂದೇಶ ಸಾರಿ ಈ ಭೂಮಿ ಮೇಲೆ ಚಿರಸ್ಥಾಯಿಯಾದವರು ಎಂದು ಸಹ ಶಿಕ್ಷಕರಾದ ಐ ಕೆ ನದಾಫ್ ಮಾತನಾಡಿದರು.ಕೃಷ್ಣನನ್ನೇ ಒಲಿಸಿಕೊಂಡ ಅವರ ಭಕ್ತಿಗೆ ಇವತ್ತಿಗೂ ನಾವು ಕೈಮುಗಿಯಲೇಬೇಕು. ಉಡುಪಿಯ ಕೃಷ್ಣನ ಜತೆಗೆ ಕನಕನೂ ಭಕ್ತರ ಮನದಲ್ಲಿ…

Read More

ರುದ್ರಮುನಿ ಮಹಾಸ್ವಾಮಿಗಳ ೧೭ನೇ ಪುಣ್ಶರಾಧನೆ | ಡಾ.ವಿಶ್ವರಾಧ್ಶ ಶಿವಾಚಾಯ೯ ಕರೆ ಬ್ರಹ್ಮದೇವನಮಡು: ನೂರಂದೇಶ್ವರ ಕಲ್ಶಾಣ ಮಠದ ಲಿಂಗೈಕ್ಶ ರುದ್ರಮುನಿ ಸ್ವಾಮಿಗಳ ನಡೆ ನುಡಿ ಹಾಗೂ ಭಕ್ತಿಯನ್ನು ಅಪ೯ಣೆ ಮಾಡಿಕೊಂಡವರಾಗಿದ್ದರು.ಅವರ ತತ್ವಾದಶ೯ಗಳು ಅಧ್ಶಾತ್ಮದ ಸಿದ್ಧಾಂತದಿಂದ ಕೂಡಿದ್ದವು ಎಂದು ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ಕ್ರತ ಮಾಗಣಗೇರಾದ ಬೃಹನ್ಮಠದ ಡಾ.ವಿಶ್ವರಾಧ್ಶ ಶಿವಾಚಾಯ೯ರು ಹೇಳಿದರು.ಸಮೀಪದ ಸುಕ್ಷೇತ್ರ ಹಿರೇಅಲ್ಲಾಪೂರ ಗ್ರಾಮದಲ್ಲಿ ಈಚೆಗೆ ನೂರಂದೇಶ್ವರ ಕಲ್ಶಾಣ ಮಠದ ಲಿಂಗೈಕ್ಶ ರುದ್ರಮುನಿ ಸ್ವಾಮಿಗಳ ೧೭ನೇ ಪುಣ್ಶಾರಾಧನೆ ಹಾಗೂ ದ್ವಾರಬಾಗಿಲು ಉದ್ಘಾಟನೆ,ಲಿಂಗೈಕ್ಶ ಶರಣಮ್ಮ ತಾಯಿಯವರ ಮೂತಿ೯ ಪ್ರತಿಷ್ಠಾಪನೆ ಕಾಯ೯ಕ್ರದ ಸಾನ್ನಿಧ್ಶವಹಿಸಿ ಆಶೀವ೯ಚನ ನೀಡಿದರು. ರುದ್ರಮುನಿ ಸ್ವಾಮಿಗಳು ಐಹಿಕ ಸುಖ ಜೀವನಕ್ಕಾಗಿ ಆಸ್ತಿಯನ್ನು ಸಂಪಾದಿಸದೆ ಭಕ್ತರನ್ನೇ ಸಮಾಜದ ಆಸ್ತಿಯನ್ನಾಗಿ ನಿಮಾ೯ಣ ಮಾಡುವ ಶಕ್ತಿಯನ್ನು ಹೊಂದಿದ್ದರು.ಸಮಾಜದಲ್ಲಿ ನಾವು ನಡೆಯುವ ನಡವಳಕೆ ಹಾಗೂ ಆಲೋಚನೆಗಳು ಸೂಕ್ಷ್ಶತೆಯಿಂದ ಕೂಡಿದಾಗ ಮಾತ್ರ ನಮ್ಮನ್ನು ಸಮಾಜ ಒಪ್ಪಿಕೊಳ್ಳಲು ಸಾಧ್ಶ.ತ್ಶಾಗ,ಸಧೃಢತೆ,ಸಂಯಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ವೇಳೆ ಚಿಟಗುಂಪುದ ಗುರುಲಿಂಗ ಶಿವಾಚಾಯ೯ರು,ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು,ಶ್ರೀಮಠದ ಒಡೆಯ ಮಲ್ಲಯ್ಶ ಸ್ವಾಮಿಜಿ,ಬಿಜೆಪಿ ಮುಖಂಡ…

Read More

ಮೋರಟಗಿಯಲ್ಲಿ ಧರ್ಮಸಭೆ | ಶಾಸಕ ಅಶೋಕ ಮನಗೂಳಿ ಅಭಿಮತ ಮೋರಟಗಿ: ಶಿಕ್ಷಣ ಶಾಲೆಯಲ್ಲಿ ಸಿಕ್ಕರೆ, ಸಂಸ್ಕಾರ ಎನ್ನುವುದು ಧರ್ಮಸಭೆಯಲ್ಲಿ ಸಿಗುತ್ತದೆ, ಗುಡಿ ಗೋಪುರ ಮಠಮಾನ್ಯಗಳು ಸಂತರು ಶರಣರು ಮಾನವ ಕುಲಕ್ಕೆ ಕೊಟ್ಟಂತ ಆದರ್ಶ ನಮ್ಮೇಲ್ಲರ ಬದುಕಿಗೆ ದಾರಿದೀಪ ಎಂದು ಶಾಸಕ ಅಶೋಕ ಮನಗೂಳಿ ಅಭಿಮತ ವ್ಯಕ್ತಪಡಿಸಿದರು.ಗ್ರಾಮದ ಆರಾದ್ಯದೇವ ಶ್ರೀ ಸಿದ್ದರಾಮೇಶ್ವರ ಜಾತ್ರಾ ಪ್ರಯುಕ್ತ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಕಂಪ್ಯೂಟರ ಯುಗದಲ್ಲಿ ಯವಕರು ಮುಬೈಲ ಗಿಳಯ ಹಿಂದೆ ಬಿದ್ದು ಸುಂದರ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದು ನೋಡಿದರೆ ಇತ್ತೀಚಿನ ದಿನಗಳಲ್ಲಿ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಸಂಸಾರಿಕ ಬಯಲಾಟ ನಾಟಕಗಳು ಮರೆತಂತಾಗಿದೆ ಆದರೆ ಮೋರಟಗಿ ಗ್ರಾಮದಲ್ಲಿ ಅಮವಾಸೆ ಹುಣ್ಣಿಗೆಗೊಂದು ದೇವರುಗಳ ಜಾತ್ರೆ ಮಾಡುವುದರ ಜೊತೆಗೆ ಧಾರ್ಮಿಕ ಸಭೆಗಳು ರಸಮಂಜರಿ ಕಾರ್ಯಲ್ರಮಗಳು ಜರುಗುತ್ತಿರುವುದು ಸಂತಸದ ಸಂಗತಿ ಯುವಕರು ಶಿಕ್ಷಣ ಪಡೆಯುದರ ಜೊತೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆದರ್ಶ ವ್ಯಕ್ತಿಗಳಾಗಿ ಬದುಕಿ ತಮ್ಮ ಪಾಲಕರು ಕಂಡ ಕನಸು ನನಸಾಗಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ. ಡಾ, ರುದ್ರಮುನಿ ಶಿವಾಚಾರ್ಯರು…

Read More

ಬಂಜಾರಾ ಪ್ರೌಢ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ ವಿಜಯಪುರ: ಕನಕ ಎಂಬುದು ಅಗಾಧಶಕ್ತಿ, ಅದಮ್ಯ ಚೇತನ. ಅವರು ಭಗವಂತನಿಗೆ ಹತ್ತಿರವಾಗಿದ್ದವರು. ಕನಕದಾಸರು ಭಕ್ತಿಯ ಶಕ್ತಿಯನ್ನು ತೋರಿಸಿಕೊಟ್ಟವರು. ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಸಮಾನತೆಯ ತತ್ತ÷್ವವನ್ನು ಸಾರಿದರು. ಸಮಾಜದ ಹಲವು ಲೋಪದೋಷಗಳನ್ನು ನಿವಾರಿಸಿ ಮಾನವೀಯತೆಗೆ ಮಹಾಬೆಳಕು ಹರಿಸಿದ ದಾರ್ಶನಿಕರು ಎಂದು ಬಂಜಾರಾ ಪ್ರೌಢ ಶಾಲೆ ಮುಖ್ಯ ಗುರುಗಳಾದ ಇ.ಡಿ.ಲಮಾಣಿಯವರು ಹೇಳಿದರು.ವಿಜಯಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ೧೫-೧೬ನೇ ಶತಮಾನದಲ್ಲಿ ಜಾತಿವ್ಯವಸ್ಥೆ ತುಂಬಿ ತುಳುಕುತ್ತಿತ್ತು. ಅದನ್ನು ಹೊಡೆದೊಡಿಸು ಛಲ ಇಟ್ಟುಕೊಂಡು ನಾಡಿನಾದ್ಯಂತ ಸಂಚರಿಸಿ ‘ಕುಲ ಕುಲ ಎಂದು ಹೊಡೆದಾಡದಿರಿ’.. ಎಂಬ ಸಂದೇಶ ಸಾರಿದರು ಎಂದು ಹೇಳಿದರು.ಈ ಸಂದರ್ಭದಲ್ಲಿ ಆರ್.ವ್ಹಿ. ಭುಜಂಗನವರ ಕನಕದಾಸರ ಜೀವನ ಸಾಧನೆಗಳ ಕುರಿತು ಮಾತನಾಡಿದರು. ಅಲ್ಲದೇ ವಿದ್ಯಾರ್ಥಿಗಳಾದ ಮಾಂತೇಶ ಕಿತ್ಲಿ ಮತ್ತು ಜಯಶ್ರೀ ರಾಠೋಡ ಕನಕದಾಸರ ಕುರಿತು…

Read More

ಇಂಡಿ: ಕನಕದಾಸರ ತ್ರಿಪದಿಗಳು, ಸಾಹಿತ್ಯ, ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ದಿನವಿದು ಎಂದು ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸಂತ ಕವಿ ಕನಕದಾಸ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚಾಣೆ ಮಾಡುವ ಮೂಲಕ ಗೌರವ ಸಲ್ಲಿಸಿ ಮಾತಾನಾಡಿದರು.ಕನಕದಾಸರ ಜೀವನ ಕುರಿತು ನೋಡುವುದಾದರೆ, ಅವರು ಗುರುಗಳು ಹೇಳುತ್ತಾರೆ. ಯಾರಿಗೆ ಕಾಣಿಸದಂತೆ ಬಾಳೆ ಹಣ್ಣು ತಿನ್ನಲು ಎಲ್ಲಾ ವಿಧ್ಯಾರ್ಥಿಗಳ ಜೊತೆಗೆ ಕನಕದಾಸರಿಗೂ ಹೇಳಿರುತ್ತಾರೆ. ಅದರಂತೆ ಕೆಲವು ವಿದ್ಯಾರ್ಥಿಗಳು ಎಲ್ಲೆಲ್ಲೂ ನಿಂತು ಬಾಳೆ ಹಣ್ಣು ತಿಂದು ಬರುತ್ತಾರೆ. ಅದರಂತೆ ಪ್ರತಿಯೊಬ್ಬ ವಿಧ್ಯಾರ್ಥಿಯೂ ಹಣ್ಣು ತಿಂದ ಬಗ್ಗೆ ವಿವರಣೆ ನೀಡುತ್ತಾರೆ. ಆದರೆ ಇದೆ ಸಂದರ್ಭದಲ್ಲಿ ಕನಕದಾಸರಿಗೆ ಪ್ರಶ್ನೆ ಮಾಡಿದಾಗ ಬಾಳೆ ಹಣ್ಣು ತಿನ್ನಲು ಹೋದಾಗ ಎಲ್ಲಾ ಕಡೆಯೂ ಭಗಂವತ ಕಾಣಿಸುವ ಬಗ್ಗೆ ನುಡಿಯುತ್ತಾರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಕೆಟ್ಟದ್ದು ಮತ್ತು ಒಳ್ಳೆಯದ್ದು ಒಬ್ಬರಿಲ್ಲ, ಒಬ್ಬರು ಗಮನಿಸುತ್ತಾರೆ. ಆದ್ದರಿಂದ ಸಮಾಜದಲ್ಲಿ ಜಾತಿ ಮತ ಪಂತ ಮರೆತು ಸೌಹಾರ್ದ ಜೀವನ ನಡೆಸಬೇಕು. ಅದಲ್ಲದೇ ಊರಿಯುವ ಜ್ಯೋತಿಗೆ…

Read More

ವಿಜಯಪುರ: ವಿಜಯನಗರ ಅರಸರ ಪರವಾಗಿ ಯುದ್ಧದಲ್ಲಿ ಭಾಗವಹಿಸಿ, ಸೋಲನ್ನು ಅನುಭವಿಸಿ, ಅನೇಕ ಸಾವು- ನೋವುಗಳನ್ನು ನೋಡಿದ ದಾಸ ಶ್ರೇಷ್ಠ ಕನಕದಾಸರು ವೈರಾಗ್ಯ ಹೊಂದಿ, ಸಂಸಾರವನ್ನು ತ್ಯಾಗ ಮಾಡಿದರು. ದೇಶ ಸಂಚಾರ ಮಾಡುತ್ತ, ತಮ್ಮ ಕೀರ್ತನೆಗಳ ಮೂಲಕ ಜಾತಿ, ಮತ, ಪಂಥ, ಅಸಮಾನತೆ, ಅನ್ಯಾಯ, ಮೌಡ್ಯತೆಗಳನ್ನು ಹೋಗಲಾಡಿಸಲು ನಿರಂತರ ಶ್ರಮಿಸಿದರು. ತಿಮ್ಮಪ್ಪ ನಾಯಕನೆಂದು ಕರೆಸಿಕೊಳ್ಳುತ್ತಿದ್ದ ಇವರು ಗುರುಗಳಾದ ವ್ಯಾಸರಾಯರಿಂದ ಕನಕದಾಸರೆಂದು ಮರುನಾಮಕರಣ ಹೊಂದಿದರು. ತಮ್ಮ ಆರಾಧ್ಯ ದೈವ ‘ಕಾಗಿನೆಲೆ ಆದಿ ಕೇಶವರಾಯ’ ಎಂಬ ಹೆಸರಿನಿಂದ ಹಲವಾರು ಕೀರ್ತನೆಗಳನ್ನು ರಚಿಸಿ, ಸಮಾಜವನ್ನು ಸುಧಾರಣೆ ಮಾಡಲು ಅವಿರತ ಪ್ರಯತ್ನ ಮಾಡಿದರು ಎಂದು ಕನ್ನಡ ಹಿರಿಯ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ತಮ್ಮ ಉಪನ್ಯಾಸ ನೀಡುತ್ತಾ ಹೇಳಿದರು.ಗುರುವಾರ ಕನಕದಾಸರ ಜಯಂತಿ ಪ್ರಯುಕ್ತ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹಾವೇರಿ ಜಿಲ್ಲೆಯ ಬಾಡ ಎನ್ನುವಂತ ಚಿಕ್ಕ ಗ್ರಾಮದಲ್ಲಿ ಕ್ರಿ.ಶ.೧೫೦೮ ರಲ್ಲಿ ಬೀರಪ್ಪ ನಾಯಕ ಹಾಗೂ ಬಚ್ಚಮ್ಮ ದಂಪತಿಗಳ ಮಗನಾಗಿ ಕನಕದಾಸರು…

Read More