Author: editor.udayarashmi@gmail.com

ಹೆಚ್ ಡಿ ಕೋಟೆಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಡಿಪಿಒ ದೀಪಾ ಬೇಸರ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಮಹಿಳೆಯರು ಸಾಧನೆ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸಮಾನವಾಗಿ ಕೆಲಸಮಾಡುತ್ತಿದ್ದಾರೆ. ಆದರೂ ಮಹಿಳೆಯರ ಮೇಲೆ ಶೋಷಣೆ, ದಬ್ಬಾಳಿಕೆ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ದೀಪಾ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಇವರ ಸಹಯೋಗದೊಂದಿಗೆ ಮಹಿಳೆಯರಿಗೆ ಪಂಚ ಗ್ಯಾರಂಟಿ ಯೋಜನೆಗಳ ಅರಿವು ಮತ್ತು ಅಂತರರಾಷ್ಟ್ರಿಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮಹಿಳೆಯರು ಶೋಷಣೆಯ ವಿರುದ್ಧ ಹೋರಾಡಲು ಎಚ್ಚರಗೊಳ್ಳುವಂತೆ ಮಾಡುವುದಕ್ಕೆ ಇಲಾಖೆಯ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಮಾಡುತ್ತೇವೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಷ್ಟೇ ಸಮಾನವಾಗಿದ್ದರೆ. ಈ ದೇಶದ ಪ್ರಥಮ ಪ್ರಜೆ ಮಹಿಳೆ, ಭಾರತದ ಪ್ರಥಮ ಪ್ರಧಾನಿ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲ್ಲೂಕಿನ ಕೆಡಿ ಜಂಬಗಿ ಗ್ರಾಮದಲ್ಲಿ ಚಿರತೆ ತಡರಾತ್ರಿಯಲ್ಲಿ ಬೊನಿನೊಳಗೆ ಬಿದ್ದು ಘರ್ಜಿಸುತ್ತಿದೆ.ಕಳೆದ ಎರಡು ಮೂರು ತಿಂಗಳ ಕೆ.ಡಿ.ಜಂಬಗಿ ಗ್ರಾಮದಲ್ಲಿ ಚಿರತೆಯ ಕಾಟಕ್ಕೆ ಬೇಸತ್ತ ಗ್ರಾಮಸ್ಥರು ಸಾಕಷ್ಟು ಬಾರಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಚಿರತೆ ಹಿಡಿಯಲು ಪ್ರಯತ್ನಿಸಿದರೂ ಚಿರತೆ ಸಿಗದ ಕಾರಣ ಅರಣ್ಯ ಇಲಾಖೆಯವರು ಬೇಸತ್ತು ಹೋಗಿದ್ದರು. ಆದರೆ ಚಿರತೆ ಸಿಗದೆ ತನ್ನ ಓಡಾಟವನ್ನು ನಡೆಸಿತ್ತು. ಚಿರತೆಯ ದಾಳಿಯಿಂದ ದನ ಕರುಗಳಿಗೆ ಹಾನಿಯುಂಟು ಮಾಡುತ್ತದೆ ಎಂಬ ಭಯದ ವಾತಾವರಣದಲ್ಲಿ ತಿರುಗಾಡುತ್ತಿದ್ದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸುವುದು ಕಷ್ಟಕರವಾಗಿತ್ತು.ಆಹಾರ ಅರಸಿಕೊಂಡು ತಡರಾತ್ರಿಯಲ್ಲಿ ಚಿರತೆ ಬೋನಿನೊಳಗೆ ಬಿದ್ದಿದೆ. ಹೊಲದಲ್ಲಿ ಇಟ್ಟಿರುವ ಬೋನಿನಲ್ಲಿ ಚಿರತೆ ಸೆರೆಯಾಗಿದೆ.ಸ್ಥಳಕ್ಕೆ ಜಮಖಂಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಚಿರತೆಯು ಬೋನಿನಲ್ಲಿ ಬಿದ್ದಿದನ್ನು ಕಂಡುಸುರಕ್ಷಿತವಾಗಿ ಬೋನಿನ ಸುತ್ತ ಪ್ಲಾಸ್ಟಿಕ್ ಹಾಳೆಯನ್ನು ಹೊದಿಸಿ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಬೇರೆ ಅರಣ್ಯಕ್ಕೆ ಬಿಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.ಕೆ.ಡಿ.ಜಂಬಗಿ…

Read More

ವಿಜಯಪುರದಲ್ಲಿ ಭೀಮ ಗಾಯನಕ್ಕೆ ಜನರಿಂದ ಭಾರೀ ಸ್ಪಂದನೆ | ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಪವಿತ್ರ‌ ಜಿಲ್ಲೆ.‌ ಸಂವಿಧಾನ ಶಿಲ್ಪಿ ಡಾ. ‌ಅಂಬೇಡ್ಕರ್ ಅವರು ನಮ್ಮ‌ ಈ ನೆಲಕ್ಕೆ ಆಗಮಿಸಿ, ಈ ನೆಲವನ್ನು ಪವಿತ್ರಗೊಳಿಸಿದ್ದಾರೆ. ಹಾಗಾಗಿ‌ ರಾಜ್ಯ ಸರ್ಕಾರ ಈ‌ ಭೀಮ ಗಾಯನ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು‌ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಅಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಸೋಮವಾರ ಸಂಜೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ‌ ಹಮ್ಮಿಕೊಂಡಿದ್ದ ಭೀಮ ಗಾಯನ ಕಾರ್ಯಕ್ರಮವನ್ನು ದೀಪ ಬೆಳಗಿಸುವ‌‌ ಮೂಲಕ ಉದ್ಘಾಟಿಸಿ‌ ಅವರು ಮಾತನಾಡಿದರು.ಈ‌ ಕಾರ್ಯಕ್ರಮದಲ್ಲಿ ಕಲಾವಿದರು‌ ಪ್ರಸ್ತುತ ಪಡಿಸುವ ಭೀಮ ಗೀತೆಗಳ ಗುಚ್ಛ ಕಾರ್ಯಕ್ರಮದ‌ ಮೂಲಕ‌ ಡಾ. ಅಂಬೇಡ್ಕರ್ ಜೀವನ ಹಾಗೂ ಅವರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.‌ಈ ಕಾರ್ಯಕ್ರಮ‌ ಪ್ರಸ್ತುತಿಯೊಂದಿಗೆ‌ ಹರಿದು‌ ಬರಲಿರುವ ಗಾನ ಸುಧೆಯೊಂದಿಗೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನ ಮುಂಭಾಗದಲ್ಲಿ ಮಾ.10 ಮಂಗಳವಾರ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ಬೃಹತ್ ಹಿಂದೂ ಸಮ್ಮೇಳನವನ್ನು ಆಯೋಜಿಸಲಾಗಿದೆ.ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಮುಳವಾಡ–ಕೊಣ್ಣೂರು ಹಿರೇಮಠದ ಪೂಜ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಾನಿಧ್ಯವನ್ನು ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಯೋಗಿ ಕಲ್ಲಿನಾಥ ದೇವರು, ವರ್ಚಗಲ್ ಶ್ರದ್ಧಾನಂದ ಆಶ್ರಮದ ಪರಮಪೂಜ್ಯ ಜಗದೀಶಾನಂದ ಮಹಾಸ್ವಾಮಿಗಳು ಹಾಗೂ ಶೀಲವಂತ ಹಿರೇಮಠದ ಡಾ. ಕೈಲಾಸನಾಥ ಮಹಾಸ್ವಾಮಿಗಳು ವಹಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕರು ಹಾಗೂ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯ ಐ.ಜಿ. ಬಿರಾದಾರ ವಹಿಸಲಿದ್ದಾರೆ. ವಕ್ತಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಹಾಗೂ ಬಳ್ಳಾರಿ ಕೇಂದ್ರ ಗ್ರಾಮ ವಿಕಾಸ ಪ್ರಾಂತ ಟೋಳಿ ಸದಸ್ಯರಾದ ದಾಮೋದರ ಜಿ ಭಾಗವಹಿಸಲಿದ್ದಾರೆ. ಮಹಿಳಾ ಪ್ರತಿನಿಧಿಯಾಗಿ ಸಾಹಿತಿ ಗಾಯತ್ರಿ ಪತ್ತಾರ ಉಪಸ್ಥಿತರಿರುತ್ತಾರೆ ಎಂದು ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ತಿಳಿಸಿದೆ.

Read More

ಪುರಾಣ ಮಹಾಮಂಗಲ | ಧರ್ಮಸಭೆ | ಕೃತಿ ಬಿಡುಗಡೆ | ಪ್ರಶಸ್ತಿ ಪ್ರಧಾನ ಸಮಾರಂಭ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗುರು ತೋರಿದ ದಾರಿಯಲ್ಲಿ ಅಚಲ ಶ್ರದ್ಧಾ ಭಕ್ತಿಯನ್ನಿಟ್ಟು ನಡೆದರೆ ಶಿಷ್ಯನಾದವನು ತಾನೇ ಗುರುವಾಗಲು ಸಾಧ್ಯ ಎಂಬುದನ್ನು ಕಲಕೇರಿ ಗುರುಮರುಳಾರಾಧ್ಯರಿಂದ ಲಿಂಗದೀಕ್ಷೆ ಪಡೆದ ಕಲಬುರಗಿ ಶರಣಬಸವೇಶ್ವರರು ಇಂದು ನಾಡಿನಾದ್ಯಂತ ದಾಸೋಹಮೂರ್ತಿಯಾಗಿ ಪೂಜಿಸಲ್ಪಡುತ್ತಿದ್ದು, ಅದು ಒಬ್ಬ ಶ್ರೇಷ್ಟ ಗುರುವಿನಲ್ಲಿರುವ ಶಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ತಮ್ಮ ಆಶಿರ್ವಚನದಲ್ಲಿ ಹೇಳಿದರು.ಗ್ರಾಮದ ಗುರುಮರುಳಾರಾಧ್ಯರ ಸಂಸ್ಥಾನ ಹಿರೇಮಠದಲ್ಲಿ ಲಿಂ.ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ೨೩ನೇ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಫೆ.೧೮ ರಿಂದ ಪ್ರಾರಂಭವಾದ ಉಪ್ಪಲದಿನ್ನಿಯ ಮುಗ್ಧ ಸಂಗಮೇಶ್ವರರ ಮಹಾಪುರಾಣ ಮಹಾಮಂಗಲದ ಪ್ರಯುಕ್ತ ನಡೆದ ಧರ್ಮಸಭೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಆಶಿರ್ವಚನ ನೀಡಿದರು.ಜಗತ್ತಿನಲ್ಲಿ ಅತಿ ವೇಗವಾಗಿ ಚಲಿಸುವ ವಸ್ತು ಎಂದರೆ ಮನಸ್ಸು, ಅಂತಹ ಮನಸ್ಸನ್ನು ನಿಯಂತ್ರಣದಲ್ಲಿರಿಸಿ ಗುರುವಿನ ಮಾರ್ಗದರ್ಶನದಲ್ಲಿ ಇಂತಹ ಧಾರ್ಮಿಕ ಕಾರ್ಯಗಳಲ್ಲಿ, ದೇವರ ಪ್ರಾರ್ಥನೆಯಲ್ಲಿ, ಪುರಾಣ, ಪ್ರವಚನಗಳಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪವಿತ್ರ ರಮಝಾನ್ ಮಾಸದಲ್ಲಿ ನಗರದ ನಾಲ್ಕು ವರ್ಷದ ಮುದ್ದಾದ ಬಾಲಕಿ ಉಮ್ಮೇ ಐಮನ ಸದ್ದಾಂಹುಸೇನ್‌ ಜಮಾದಾರ ತನ್ನ ಜೀವನದ ಮೊದಲ ರೋಜಾವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.ಇಷ್ಟು ಕಿರಿಯ ವಯಸ್ಸಿನಲ್ಲೇ ಉಪವಾಸದ ಮಹತ್ವವನ್ನು ಅರಿತು ದಿನಪೂರ್ತಿ ಸಹನಶೀಲತೆಯಿಂದ ರೋಜಾ ಆಚರಿಸಿದ ಈ ಬಾಲಕಿಯ ಧೈರ್ಯ ಮತ್ತು ಮನೋಬಲವನ್ನು ನೋಡಿದ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಸಂತೋಷ ವ್ಯಕ್ತಪಡಿಸಿದ್ದಾರೆ.ಇಸ್ಲಾಂ ಧರ್ಮದಲ್ಲಿ ರಮಝಾನ್ ಮಾಸವು ಅತ್ಯಂತ ಪವಿತ್ರವಾದ ತಿಂಗಳೆಂದು ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ಮುಸ್ಲಿಮರು ಪ್ರಾತಃಕಾಲದಿಂದ ಸೂರ್ಯಾಸ್ತದವರೆಗೆ ಉಪವಾಸವಿದ್ದು, ಪ್ರಾರ್ಥನೆ, ದಾನಧರ್ಮ, ಸಹನಶೀಲತೆ ಹಾಗೂ ಆತ್ಮಶುದ್ಧಿಗೆ ಮಹತ್ವ ನೀಡುತ್ತಾರೆ. ರೋಜಾ ಮಾನವನಲ್ಲಿ ಶಿಸ್ತಿನ ಜೀವನ, ತಾಳ್ಮೆ ಮತ್ತು ಪರರ ನೋವನ್ನು ಅರ್ಥಮಾಡಿಕೊಳ್ಳುವ ಗುಣಗಳನ್ನು ಬೆಳೆಸುತ್ತದೆ. ಇಂತಹ ಪವಿತ್ರ ತಿಂಗಳಲ್ಲಿ ನಾಲ್ಕು ವರ್ಷದ ಬಾಲಕಿ ತನ್ನ ಮೊದಲ ರೋಜಾವನ್ನು ಆಚರಿಸಿರುವುದು ಹೆಮ್ಮೆಯ ವಿಷಯವಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಮಹಿಳಾ ಸಬಲೀಕರಣ, ಶಿಕ್ಷಣ ಸಮಾಜ ಸೇವೆಯನ್ನು ಗುರುತಿಸಿ ಪಟ್ಟಣದ ರಾಜೇಶ್ವರಿ ಕ್ಷತ್ರಿ ಅವರಿಗೆ ಈ ವರ್ಷದ ಮಹಿಳಾ ಸಾಧಕಿ ಮತ್ತು ಸಾಲೋಟಗಿ ಗ್ರಾಮದ ಸವಿತಾಬಾಯಿ ಸೋಮಣ್ಣ ಕರೂರ ಇವರಿಗೆ ಕೃಷಿ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ ಎಂದು ಐಡಿಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ತೆಲ್ಲೂರ ಹೇಳಿದರು.ನಗರದ ಐಡಿಯಾ ಪಿಯು ಮಹಾವಿದ್ಯಾಲಯದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪ್ರಶಸ್ತಿ ನೀಡಿ ಮಾತನಾಡಿದರು.ಪೂಜಾ ಏಳಗಿ, ಪ್ರತಿಭಾ ಬುರಕುಲೆ, ವಿದ್ಯಾಶ್ರೀ ಪಾಟೀಲ, ಶ್ಯಾಮಲಾ ಬಗಲಿ, ಮಹಾದೇವಿ ಸಂಖ, ಸಂಪದಾ ದೇಶಪಾಂಡೆ, ಪುನಮ ಕಟ್ಟಿಮನಿ, ಸವಿತಾ ರೂಪನೂರ, ಕವಿತಾ ಮಹೀಂದ್ರಕರ, ಪ್ರತಿಭಾ, ಅಸುಷಾ, ಶೋಭಾ ಹಿರೇಮಠ, ಶಕುಂತಲಾ ಐಡಿಯಾ ಸಂಸ್ಥೆಯ ಅಧ್ಯಕ್ಷ ಸಿದ್ದಪ್ಪ ಖೇಡ, ಅನೀಲ ಪ್ರಸಾದ ಏಳಗಿ, ಪ್ರಭು ಹೊಸಮನಿ, ಶ್ರೀಶೈಲ ಅರ್ಜುಣಗಿ ಕಾಲೇಜಿನ ಆಡಳಿತ ಮಂಡಳಿ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಮಾ.೮ ರಿಂದ೧೦ ರವರೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಎರಡನೇ ದಿನವಾದ ಸೋಮವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಹಾಗೂ ಶ್ರೀ ಸಿದ್ದೇಶ್ವರ ರಕ್ತ ನಿಧಿ ಸಂಸ್ಥೆ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಿರುವ ಸ್ವ-ಸಹಾಯ ಗುಂಪುಗಳ ಮಹಿಳೆಯರು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಅಂದಾಜು ೨೫ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.ಇದೇ ವೇಳೆ ಸುಮಾರು ೮೦ಕ್ಕೂ ಹೆಚ್ಚು ಜನ ಸ್ವ-ಸಹಾಯ ಸಂಘದ ಮಹಿಳೆಯರು, ಸಾರ್ವಜನಿಕರು ಹಾಗೂ ಸಿಬ್ಬಂದಿ ಸೇರಿದಂತೆ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ರಕ್ತದ ಗುಂಪು, ರಕ್ತದೊತ್ತಡ, ಸಕ್ಕರೆ ಪ್ರಮಾಣ ಹಾಗೂ ವಿವಿಧ ತಪಾಸಣೆಗಳಿಗೊಳಪಟ್ಟರು. ಸಾರ್ವಜನಿಕರಿಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಪ್ರಿಲ್ ೫ರಂದು ಬಾಬು ಜಗಜೀವನ ರಾಮ ಅವರ ಜಯಂತಿ ಹಾಗೂ ಏಪ್ರಿಲ್ ೧೪ರಂದು ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತಿ ಪ್ರಯುಕ್ತ ೨೦೨೬-೨೭ನೇ ಸಾಲಿನ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನದ ಅವಧಿಯನ್ನು ಮಾ.೧೨ರವರೆಗೆ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಜನಾಂಗದವರ ಶ್ರೇಯಸ್ಸಿಗಾಗಿ, ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳು, ಪ್ರೋತ್ಸಾಹಿಸಿ, ಗುರುತಿಸಿ ಗೌರವಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿ ನಮೂನೆಯನ್ನು ಸಮಾಜ ಕಲ್ಯಾಣ ಇಲಾಖೆಯ ವಿಜಯಪುರ ಉಪ ನಿರ್ದೇಶಕರ ಕಚೇರಿ ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು. ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್೧೨-೨೦೨೬ರೊಳಗಾಗಿ ಕಚೇರಿ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರ ಸೇರಿದಂತೆ ಎಲ್ಲ ಗ್ರಾಮಗಳಲ್ಲೂ ರಂಗ ಪಂಚಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಬೆಳಿಗೆ ೮ ಗಂಟೆಯಿಂದಲೇ ಬಾಲಕರು ಯುವಕರು ಬಣ್ಣ ಆಡಲು ಪ್ರಾರಂಭಿಸಿದರು.ನಂತರ ೧೧ ಗಂಟೆಗೆ ಹಿರಿಯರು ಕಿರಿಯರು ಎಲ್ಲರೂ ಸೇರಿ ಬಣ್ಣವನ್ನು ಆಡ ತೊಡಗಿದರು.ಅಣುಕು ಶವ ಯಾತ್ರೆ, ಜಾನಪದ ಹೋಳಿ ಹಾಡುಗಳು ಹಲಗೆ ಕುಣಿತ ಸೇರಿ ಅನೇಕ ಮನರಂಜನೆ ನಡೆದವು.ನಗರದ ಕೃಷಿ ಮಾರುಕಟ್ಟೆ, ಬಸ್ ನಿಲ್ದಾಣ, ಸಿಂದಗಿ ವಿಜಯಪುರ ರಸ್ತೆ ಸೇರಿದಂತೆ ನಗರದ ಎಲ್ಲ ಕಡೆ ಬಣ್ಣ ಎರಚುವದು ಸಾಮಾನ್ಯವಾಗಿತ್ತು.ಅನೇಕ ಕಡೆ ಬ್ಯಾರೆಲು ಬಕೇಟುಗಳಲ್ಲಿ ಬಣ್ಣ ಎರಚಿಸಿದರು. ಯುವಕರು ಮಕ್ಕಳು ಪಿಚಕಾರಿ ಮೂಲಕ ಬಣ್ಣ ಎರಚಿದರು. ಮುಖಕ್ಕೆ ಬಣ್ಣ ಹಚ್ಚುವದು ಎಲ್ಲ ಕಡೆ ಸಾಮಾನ್ಯವಾಗಿತ್ತು.ಗಣ್ಯರಾದ ಕಾಸುಗೌಡ ಬಿರಾದಾರ, ಬಾಳು ಮುಳಜಿ, ಅನೇಕ ವೈದ್ಯರು, ವ್ಯಾಪಾರಿಗಳು ರೈತರು ಬಣ್ಣ ಆಡಿ ಸಂತೋಷ ಪಟ್ಟರು.

Read More