Author: editor.udayarashmi@gmail.com

ನವದೆಹಲಿಯಲ್ಲಿ ನಡೆದ ಸಭೆ | ಖರ್ಗೆ ಹೆಸರು ಸೂಚಿಸಿದ ಮಮತಾ ಬ್ಯಾನರ್ಜಿ & ಕೇಜ್ರಿವಾಲ್ ನವದೆಹಲಿ: ಲೋಕಸಭೆ ಚುನಾವಣೆ ಮುಗಿಯುವವರೆಗೆ ಇಂಡಿಯಾ ಬಣವು ತನ್ನ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸುವುದಿಲ್ಲ ಎಂದು ಸೋಮವಾರ ಹೇಳಿದ್ದ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಾರನೇ ದಿನವೇ (ಮಂಗಳವಾರ) ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಅಧ್ಯಕ್ಷರು ಈ ಪ್ರಸ್ತಾಪವನ್ನು ನಯವಾಗಿ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿಯ ಕುರಿತು ಸೋಮವಾರ ಮಾತನಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘2024ರ ಲೋಕಸಭೆ ಚುನಾವಣೆಯ ನಂತರ ವಿರೋಧ ಪಕ್ಷಗಳ ಮೈತ್ರಿ ಕೂಟ ‘ಇಂಡಿಯಾ’ದ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದರು.ನಾಲ್ಕು ದಿನಗಳ ಭೇಟಿಗಾಗಿ ಮಮತಾ ಬ್ಯಾನರ್ಜಿ ದೆಹಲಿಯಲ್ಲಿದ್ದು, ವಿರೋಧ ಪಕ್ಷದ ಇಂಡಿಯಾ ಬಣದ ಸಭೆಯಲ್ಲಿ ಭಾಗವಹಿಸಿದ್ದಾರೆ.ಸೀಟು ಹಂಚಿಕೆ ಮತ್ತು ಜಂಟಿ ಸಮಾವೇಶಗಳು ಇಂದಿನ ಇಂಡಿಯಾ ಸಭೆಯ ಅಜೆಂಡಾ ಆಗಿತ್ತು ಎನ್ನಲಾಗಿದೆ.…

Read More

ಬ್ರಹ್ಮದೇವನಮಡು :ದೇವರಹಿಪ್ಪರಗಿ ತಾಲೂಕಿನ ಅಸಂತಾಪೂರ ಗ್ರಾಮದ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿ ನೂತನವಾಗಿ ರಚಿಸಲಾಯಿತು.ನೂತನ ಅಧ್ಶಕ್ಷರಾಗಿ ಬಸನಗೌಡ ನಾಗರಡ್ಡಿ, ಉಪಾಧ್ಶಕ್ಷರಾಗಿ ಶಿವಪ್ಪ ಮೋಪಗಾರ, ಸದಸ್ಶರಾಗಿ ಶಂಕ್ರೆಪ್ಪ ಹರಿಜನ, ಗೋಲ್ಲಾಳಪ್ಪ ಹರಿಜನ, ಅಮೀನಸಾಬ ನಾಯ್ಕೋಡಿ, ಖಾದರಸಾಬ ಉತ್ನಾಳ, ಅಲ್ಲಾಭಕ್ಷ ವಾಲಿಕಾರ, ಕಾಶಿಮಸಾಬ ಅರಬರ, ಮೈಬೂಬ ನಾಯ್ಕೋಡಿ, ಶರಣಪ್ಪ ಹರಿಜನ, ರಾಜು ಮನಿಯಾರ, ನಬಿಸಾಬ ನಾಯ್ಕೋಡಿ, ಮಹ್ಮದರಫೀಕ ಬ್ಶಾಲ್ಶಾಳ, ರಾಮನಗೌಡ ಬಿರಾದಾರ, ಸುರೇಶ ದೇಸಾಯಿ, ಬಸವರಾಜ ಸಜ್ಜನ, ಹಣಮಂತ್ರಾಯ ಪೂಜಾರಿ, ಗುರುಲಿಂಗಯ್ಶ ಹಿರೇಮಠ ಆಯ್ಕೆಯಾಗಿದ್ದಾರೆ ಎಂದು ಮುಖ್ಶಗುರು ಸಿ.ಬಿ.ಗಡಗಿ ತಿಳಿಸಿದ್ದಾರೆ.ಸಭೆಯಲ್ಲಿ ಗ್ರಾಮದ ಪ್ರಮುಖರಾದ ಸುಭಾಸ ದೇಸಾಯಿ, ಹಣಮಂತ್ರಾಯಗೌಡ ಪಾಟೀಲ, ಮಡಿವಾಳಯ್ಶ ಮಠ, ನಬಿಸಾಬ ಹೂನಳ್ಳಿ, ಭೀಮನಗೌಡ ಬಿರಾದಾರ, ಗ್ರಾಪಂ ಸದಸ್ಶರಾದ ಗುತ್ತಪ್ಪಗೌಡ ನಾಗರಡ್ಡಿ, ದಾವಲಸಾಬ ವಾಲಿಕಾರ ಇದ್ದರು.

Read More

ಹೊನವಾಡ: ನುಡಿಯಿಂದ ಜನರನ್ನು ಸೆಳೆಯುವ ಜನಕ್ಕೆ ಈ ಲೋಕದಲ್ಲಿ ಕೊರತೆ ಇಲ್ಲ. ಆದರೆ ಅದರ ಪರಿಣಾಮ ಕೇಳುಗನ ಆಳಕ್ಕಿಳಿಯುವುದಿಲ್ಲ ಎಂದು ಜ್ಞಾನಯೋಗಾಶ್ರಮದ ಶಂಕರಾನಂದ ಸ್ವಾಮೀಜಿ ಹೇಳಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ನಡೆದ ಸಿದ್ದೇಶ್ವರ ಮಹಾಸ್ವಾಮಿಗಳ ಗುರು ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾವು ಕಂಡಂತಹ ಸದ್ಗುರು ಶ್ರೇಷ್ಠರಲ್ಲಿ ನಮ್ಮದೇ ಜಲ ನೆಲ ಕಪ್ಪು ಮಣ್ಣಿನಲ್ಲಿ ಜನಿಸಿ ಎಲ್ಲರ ಅಂತ:ಕರಣಕ್ಕೆ ಪಾತ್ರರಾದ ಗುರುಗಳಿವರು ಎಂದು ರೇ ಸಿ ಪಾಟೀಲ ನುಡಿದರು.ಅರಳುವ ಪುಷ್ಪದಂತೆ ಇದ್ದು ಸುಗಂಧoತೆ ಜ್ಞಾನದ ಕಂಪನ್ನು ಹರವಿ ಬಾಡದೆ ಅಚ್ಚಳಿಯದೆ ಹೃದಯವಾಸಿ ಗುರುಗಳಿವರು. ಇವರನ್ನು ಹುಡುಕುವದಾದರೆ ತರು ಮರ ಲತೆಗಳಲ್ಲಿ ಪಕ್ಷಿ ಸಂಕುಲದಲ್ಲಿ ಜೀವಂತವಾಗಿದ್ದಾರೆ ಎಂದು ಬಾಬುರಾವ ಮಹಾರಾಜರು ಅಭಿಪ್ರಾಯಪಟ್ಟರು.ಬುದ್ಧನಂತೆ ಭುವಿಗೆ ಬಂದವರು ಬಸವಣ್ಣನಂತೆ ದಾಸೋಹ ನೆರವೇರಿಸಿದವರು ಅಲ್ಲಮ್ಮನಂತೆ ಜ್ಞಾನ ಬಿತ್ತಿದವರು ಸಂತ ಶ್ರೇಷ್ಠರನ್ನು ಕೊಂಡಾಡಿದವರು ಕವಿ ಸಾಹಿತಿಗಳನ್ನು ಹಾಡಿ ಹೊಗಳಿದವರು ಎಂದು ಅಡಾಳಟ್ಟಿಯ ಭೀಮಾಶಂಕರ ಶರಣರು ಹೇಳಿದರು.ಕೃಷಿಗೆ ಮೈಯೋಡ್ಡಿದವರನ್ನು ಗೋಪಾಲರನ್ನು ಪ್ರಾಣಿ ಹಿಂಸೆ ಮಾಡದವರನ್ನ ಪ್ರೀತಿಸುವವರು ಇವರು ಈ ಶತಮಾನದ ಮಾತೃ…

Read More

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗೋಲಗೇರಿಯ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಕಳೆದ ಎರಡು ತಿಂಗಳಿಂದ ವ್ಯವಸ್ಥಾಪಕರು ಮತ್ತು ಫೀಲ್ಡ್ ಆಫೀಸರ ಹುದ್ದೆ ಖಾಲಿ ಇರುವುದರಿಂದಾಗಿ ವಾಯ್ದೆ ಮುಗಿದಿರುವ ರೈತರು ಸಾಲ ತುಂಬಲು ಗ್ರಾಹಕರು ಬ್ಯಾಂಕಿಗೆ ಅಲೆದಾಡುತ್ತಿದ್ದಾರೆ. ವಿಜಯಪುರ ಮುಖ್ಶ ಕಛೇರಿಯ ಪ್ರಾದೇಶಿಕ ವ್ಶವಸ್ಥಾಪಕರ ಗಮನಕ್ಕೆ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಇದ್ದರೂ ಕೂಡ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ.ಆದ್ದರಿಂದ ರೈತರು ತಾವು ಪಡೆದ ಸಾಲ ತುಂಬಲು ತೊಂದರೆಯಿಂದಾಗಿ ಹೆಚ್ಚಿನ ಬಡ್ಡಿ ಆಕರಣೆ ಆಕರವಾದಲ್ಲಿ ಯಾರು ಜವಾಬ್ದಾರರು? ಎನ್ನುವುದಕ್ಕೆ ಸಂಬಂಧಿಸಿದವರು ಉತ್ತರ ಕೊಡಬೇಕು. ಗ್ರಾಹಕರಿಗೆ ಆಗುವಂತ ತೊಂದರೆಗೆ ಹೊಣೆ ಯಾರು? ಅತಿ ಶೀಘ್ರದಲ್ಲಿ ಖಾಲಿ ಇರುವ ಈ ಎರಡು ಹುದ್ದೆಗಳಿಗೆ ಸಿಬ್ಬಂದಿ ನಿಯೋಜನೆಗೊಳಿಸದೇ ಇದ್ದಲ್ಲಿ ಬ್ಯಾಂಕ್ ಗ್ರಾಹಕರು, ರೈತಪರ ಹೋರಾಟಗಾರರು ಬ್ಯಾಂಕ್ ಮುಂದೆ ಧರಣಿ ಮಾಡುವುದಾಗಿ ಭೂ ನ್ಶಾಯಮಂಡಳಿ ಸದಸ್ಶ ಮುದಿಗೌಡ ಬಿರಾದಾರ ಎಚ್ಚರಿಕೆ ನೀಡಿದ್ದಾರೆ.

Read More

ವಿಜಯಪುರ: ಇತ್ತೀಚೆಗಷ್ಟೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ಮುಂಬಡ್ತಿ ಪಡೆದು, ಕಾರ್ಯವ್ಯವಸ್ಥೆ ಹಂಚಿಕೆಯಡಿ ಬಾಗಲಕೊಟ ಸಹಾಯಕ ನಿರ್ದೇಶಕ ಹುದ್ದೆಯ ಪ್ರಭಾರದಲ್ಲಿದ್ದ ವಿನೋದಕುಮಾರ್ ಭಗವತಿ(೫೩) ಡಿ.೧೯ರಂದು ಬೆಳಿಗ್ಗೆ ವಿಜಯಪುರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ತೀವ್ರ ಅನಾರೋಗ್ಯದಿಂದ ಕಳೆದ ಸುಮಾರು ಒಂದು ತಿಂಗಳಿನಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹುಬ್ಬಳ್ಳಿ ರಾಜ್ಯ ಸಮಾಚಾರ ಕೇಂದ್ರದಲ್ಲಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಅವರು ಪತ್ನಿ, ಇಬ್ಬರು ಪುತ್ರಿಯರು,ಓರ್ವ ಪುತ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Read More

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಡಿ.೨೦ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೦-೩೦ಕ್ಕೆ ಸಮಾವೇಶವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ. ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್.ಪಾಟೀಲ (ಯತ್ನಾಳ) ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಪ್ರಕಾಶ ಹುಕ್ಕೇರಿ, ಸಂಸದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ, ಹಣಮಂತ ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಬಿ.ಪಾಟೀಲ, ಪಿ.ಎಚ್.ಪೂಜಾರ, ಅಪ್ಪಾಜಿ ಸಿ.ಎಸ್.ನಾಡಗೌಡ, ವಿಠ್ಠಲ ಕಟಕದೊಂಡ, ಭೀಮನಗೌಡ(ರಾಜುಗೌಡ) ಬಸನಗೌಡ ಪಾಟೀಲ, ಅಶೋಕ ಮಲ್ಲಪ್ಪ ಮನಗೂಳಿ ಸೇರಿದಂತೆ ಜಿಲ್ಲೆಯ ವಿವಿಧ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

Read More

ವಿಜಯಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ಹಾಗೂ ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟಂಗಿಹಾಳ ಗ್ರಾಮದ ತುಂಗಳ ಪಿಯು ಕಾಲೇಜ್‌ನಲ್ಲಿ ಡಿ.೧೬ ರಂದು ಮಾನವ ಹಕ್ಕುಗಳು ಮತ್ತು ಪೋಕ್ಸೊ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಅರಿವು ಕಾರ್ಯಕ್ರಮದಲ್ಲಿ ಕಾಲೇಜಿನ ೩೫೦ ವಿದ್ಯಾರ್ಥಿ-ವಿದ್ಯಾಥಿನಿಯರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಪೊಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಕಾನೂನಿನ ಅರಿವು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಕುಂದರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ, ಪೊಲೀಸ್ ಉಪಾಧೀಕ್ಷಕ ಗಿರಿಮಲ್ಲಪ್ಪ ತಳಕಟ್ಟಿ, ಪೊಲೀಸ್ ನಿರೀಕ್ಷಕ ರಾಯಗೊಂಡ ಜಾನರ್, ಉಪನ್ಯಾಸಕರಾಗಿ ಪ್ಯಾನಲ್ ವಕೀಲರಾದ ಜಿ.ವಿ.ಖುದಾನಪೂರ ಮತ್ತು ಕಾಲೇಜ್ ಪ್ರಾಂಶುಪಾಲರು ಭಾಗವಹಿಸಿದ್ದರು.

Read More

ಅಪರಾಧ ತಡೆ ಮಾಸಾಚರಣೆಯಲ್ಲಿ ಪಿಎಸ್‌ಐ ಗಂಗೂಬಾಯಿ ಬಿರಾದಾರ ಕರೆ ಕಲಕೇರಿ: ಆಧುನಿಕ ಜಗತ್ತಿನಲ್ಲಿ ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಯಾದಂತೆಲ್ಲ ಬದಲಾದ ಸ್ವರೂಪದಲ್ಲಿ ಹಲವು ರೀತಿಯ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಇದನ್ನು ಯುವಜನತೆ ಅರಿತುಕೊಂಡು ಜಾಗೃತರಾಗಿ ಎಚ್ಚರಿಕೆಯಿಂದ ಜೀವನ ನಡೆಸುವುದರ ಜೊತೆಗೆ ಎಲ್ಲರೂ ಕಾನೂನು ಪಾಲನೆಯನ್ನು ಮೈಗೂಡಿಸಿಕೊಂಡು ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಮುಂದಾಗಬೇಕು ಎಂದು ಕಲಕೇರಿ ಪೋಲಿಸ್ ಠಾಣಾಧಿಕಾರಿ ಗಂಗೂಬಾಯಿ ಬಿರಾದಾರ ಹೇಳಿದರು.ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ವಿಜಯಪುರ ಜಿಲ್ಲಾ ಪೋಲಿಸ್ ಇಲಾಖೆಯ ಇಂಡಿ ಉಪವಿಭಾಗ ಕಲಕೇರಿ ಠಾಣೆಯ ವತಿಯಿಂದ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಡಿಸೆಂಬರ್ ೨೦೨೩ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಖದೀಮರು ತಂತ್ರಜ್ಞಾನ ಬಳಸಿ ಬ್ಯಾಂಕ್ ಮತ್ತು ಎಟಿಎಂ ಕಳ್ಳತನ, ಸೈಬರ್ ಕ್ರೆöÊಮ್, ಫೋನ್ ಕಾಲ್ ಮೂಲಕ ದರೋಡೆ, ಫೇಸ್‌ಬುಕ್ ಫೇಕ್ ಐಡಿ ಮೂಲಕ ವಂಚನೆ ಸೇರಿದಂತೆ ಹಲವು ಕೃತ್ಯಗಳು ನಡೆಯುತ್ತಿದ್ದು, ಅಪರಿಚಿತರಿಗೆ ನಮ್ಮ ಓಟಿಪಿ ಮತ್ತಿತರೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದರು.೧೮ ವರ್ಷದೊಳಗಿನ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ…

Read More

ವಿಶ್ವ ಮಾನವ ಹಕ್ಕುಗಳ ಹಾಗೂ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ನ್ಯಾಯಾಧೀಶೆ ಲಕ್ಷ್ಮೀ ಗರಗ ಕಿವಿಮಾತು ಮುದ್ದೇಬಿಹಾಳ: ದಿನಾಚರಣೆಗಳ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಕಾನೂನುಗಳ ಅರಿವು ಮೂಡಿಸುವ ಉದ್ದೇಶವನ್ನು ಕಾನೂನು ಸೇವಾ ಸಮಿತಿ ಹೊಂದಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ನಿಂಗಪ್ಪ ಗರಗ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬ ಗ್ರಾಹಕ ಯಾವುದೇ ವಸ್ತುವನ್ನು ಖರೀದಿಸುವ ಮೊದಲು ಅದರ ಗುಣಮಟ್ಟ, ಸುರಕ್ಷತೆ, ವಸ್ತುವಿನ ಉತ್ಪಾದನೆ ಮತ್ತು ಅದರ ಕೊನೆಯ ಅವಧಿಯನ್ನು ಪರಿಶೀಲಿಸುವುದರ ಜೊತೆಗೆ ಕಡ್ಡಾಯವಾಗಿ ರಸೀದಿ ಪಡೆಯುವದನ್ನು ಮರೆಯಬಾರದು. ಒಂದು ವೇಳೆ ನೀವು ಖರೀದಿಸಿದ ವಸ್ತುಗಳಲ್ಲಿ ನಿಮಗೆ ಮೋಸವಾಗಿದ್ದರೆ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದಾಗಿದೆ. ಅದರಂತೆ ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು ಯಾರೊಬ್ಬರೂ ಉಲ್ಲಂಘಿಸಬಾರದು…

Read More