ವಿಜಯಪುರ: ನಗರದ ನಾರಾಯಣ ಹುಂಡೈ ಷೋರೋಂನಲ್ಲಿ ನೂತನ ಕ್ರೇಟಾ ಎನ್ಲೈನ್ ಎಸ್ಯುವಿ ವಾಹನವನ್ನು ಅನಾವರಣಗೊಳಿಸಲಾಯಿತು.
ಆರ್ಟಿಓ ವಸಂತ ಚವ್ಹಾಣ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜಕುಮಾರ ಹಿರೇಮಠ ಜಂಟಿಯಾಗಿ ನೂತನ ಕಾರನ್ನು ಅನಾವರಣಗೊಳಿಸಿದರು.
ನೂತನ ಕಾರಿನ ವೈಶಿಷ್ಟ್ಯತೆ ಕುರಿತು ವಿವರಿಸಿದ ನಾರಾಯಣ ಹುಂಡೈ ಮುಖ್ಯಸ್ಥ ಗೋವಿಂದ ಜೋಶಿ ಮಾತನಾಡಿ, ಗ್ರಾಹಕರಿಗೆ ಅತ್ಯಾಧುನಿಕ ಸೌಕರ್ಯ ಒದಗಿಸಿ ಸುಖಕರ ಪ್ರಯಾಣಕ್ಕೆ ಹುಂಡೈ ಆದ್ಯತೆ ನೀಡಿದ್ದು, ಹೊಸ ಕ್ರೇಟಾ ಎನ್ಲೈನ್ ಅನೇಕ ವಿಶೇಷತೆಗಳನ್ನು ಹೊಂದಿದೆ, ಸ್ಪೋರ್ಟಿ ವಿನ್ಯಾಸ್, ಸ್ಪೀಡ್ ಮ್ಯಾನುವಲ್ ಗೇರಬಾಕ್ಸ್ ಹೀಗೆ ಅನೇಕ ರೀತಿಯ ಸೌಲಭ್ಯಗಳನ್ನು ಹೊಂದಿದೆ ಎಂದರು.
ನಾರಾಯಣ ಹುಂಡೈ ಮ್ಯಾನೇಜರ್ ಅಂಥೋನಿ, ಶಿವಕುಮಾರ ಕಮಲಾಕರ, ಸಂಜಯ ನಿಂಬಾಳಕರ, ವಿಜಯ ಜೋಶಿ ಮೊದಲಾದವರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

