Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಾರಂಪರಿಕ ಕಲೆಗಳ ಸಂರಕ್ಷಣೆಗೆ ಇಂತಹ ಕಾರ್ಯಕ್ರಮಗಳು ಅಗತ್ಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಈ ಕಾರ್ಯಕ್ರಮವು ಟಿ.ಜಿ.ಹಿರೇಮಠ ಅವರ ಸ್ಮರಣೆಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಸಿಂದಗಿ ನಗರದ ಸಾರಂಗಮಠದಲ್ಲಿ ಟಿ.ಜಿ.ಹಿರೇಮಠ ಸ್ಮೃತಿ ಸಮಾರೋಹದ ಅಂಗವಾಗಿ ಸ್ವರಾಂಜಲಿ ಶಾಸ್ತ್ರೀಯ ಗಾಯನ ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮವು ಶಾಸ್ತ್ರೀಯ ಸಂಗೀತ ಗಾಯನದೊಂದಿಗೆ ಪ್ರಾರಂಭವಾಯಿತು. ಗಾಯಕ ಮಾನ್ವಿಯ ಬಸವರಾಜ ವಂದಲಿ ಅವರ ಸುಶ್ರಾವ್ಯ ಧ್ವನಿಯಲ್ಲಿ ಮೂಡಿಬಂದ ರಾಗಗಳು ಎಲ್ಲರ ಗಮನ ಸೆಳೆದವು.ನಂತರ ನಡೆದ ಭರತನಾಟ್ಯ ಪ್ರದರ್ಶನದಲ್ಲಿ ರುಜುತಾ ಸೋಮನ್, ಪ್ರಾಚೀತಿ ಡಾಂಗೆ ತಂಡದವರು ಓಡಿಸಿ ನೃತ್ಯ, ಕಥಕ್, ಕಥಕನ್ ವೇಗದ ಹೆಜ್ಜೆಗಳು ಮತ್ತು ಹಸ್ತ ಮುದ್ರೆಗಳ ಮೂಲಕ ಭಾರತೀಯ ಕಲೆಗಳ ಶ್ರೀಮಂತಿಕೆಯನ್ನು ಪ್ರದರ್ಶಿಸಿದವು. ಅವರ ನೃತ್ಯದಲ್ಲಿ ತಾಂತ್ರಿಕ ನಿಖರತೆ ಮತ್ತು ಭಾವಪೂರ್ಣ ಅಭಿನಯ ಎದ್ದು ಕಾಣುತ್ತಿತ್ತು. ಭರತನಾಟ್ಯ, ಕಥಕ್, ಓಡಿಸಿನೃತ್ಯ ಮತ್ತು ಶಾಸ್ತ್ರೀಯ ಸಂಗೀತದ ಮೂಲಕ ಅಲ್ಲಿದ್ದ ಸಭೀಕರನ್ನು ಮಂತ್ರ ಮುಗ್ಧಗೊಳಿಸಿದರು.ಸಾರಂಗಮಠದಲ್ಲಿ ಟಿ.ಜಿ.ಹಿರೇಮಠ ಸ್ಮೃತಿ ಸಮಾರೋಹದ ಅಂಗವಾಗಿ ಸ್ವರಾಂಜಲಿ ಶಾಸ್ತಿçÃಯ ಗಾಯನ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಧರ್ಮೋಪದೇಶವು ಸತ್ಯ, ನೈತಿಕತೆ, ಕರ್ತವ್ಯ ಆಧ್ಯಾತ್ಮಿಕ ಮೌಲ್ಯಗಳನ್ನು ಜೀವನದ ಉನ್ನತ ಗುರಿಗಳನ್ನು ಸಾಧಿಸಲು ಮಾರ್ಗದರ್ಶನ ನೀಡುತ್ತದೆ ಎಂದು ಸಾರಂಗಮಠದ ಪೀಠಾಧಿಪತಿ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಶ್ರೀ ಹುಡೇದ ಲಕ್ಷ್ಮೀ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ನಾಲತ್ತವಾಡದ ಶ್ರೀ ವಿರೇಶ್ವರ ಶರಣರ ಮಹಾಪುರಾಣ ಹಾಗೂ ವಿರೇಶ್ವರ ಶರಣರ ತೊಟ್ಟಿಲು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ನೆಮ್ಮದಿಯ ಬದುಕಿಗೆ ಧರ್ಮ ಪಾಲನೆ ಮಾಡಲು ಮನುಷ್ಯ ಜನ್ಮ ತಾಳಿದ ಮೇಲೆ ಲಿಂಗ ಧರಿಸುವುದರಿಂದ ಬಾಳಿನ ಭಾಗ್ಯೋದಯಕ್ಕೆ ಗುರು ಕಾರುಣ್ಯದ ಬೆಳಕು ನೀಡಿ ಪರಿಶುದ್ಧ ಮತ್ತು ಪವಿತ್ರವಾದ ಜೀವನ ರೂಪಿಸುವುದೇ ಗುರುವಿನ ಪರಮ ಧರ್ಮವಾಗಿದೆ ಎಂದರು.ಈ ವೇಳೆ ಪುರಾಣ ಪ್ರವಚನಕಾರ ವೀರಯ್ಯ ಶಾಸ್ತ್ರೀಗಳು ಮಾತನಾಡಿದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಿಂಗನಗೌಡ ಬಿರಾದಾರ ಸ್ವಾಗತಿಸಿ ನಿರೂಪಿಸಿದರು. ವೇದಿಕೆಯ ಮೇಲೆ ದೇವಸ್ಥಾನದ ಅರ್ಚಕ ನಿಂಗಯ್ಯ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹಾಲಿ ಶಾಸಕರು ಮೂರು ವರ್ಷದ ಅವಧಿಯಲ್ಲಿ ಮೂರು ಕಿಮೀ ಡಾಂಬರ ರಸ್ತೆ ನಿರ್ಮಿಸಿ ಸಾಮಾಜಿಕ ಜಾಲತಾಣದಲ್ಲಿ ಏನೋ ಸಾಧನೆ ಮಾಡಿದ ಹಾಗೆ ಪ್ರಚಾರ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಪೋಸ್ಟ್ ಅಥವಾ ಏನಾದರೂ ಬರೆದರೆ ಅಂತಹವರ ವಿರುದ್ಧ ಪೊಲೀಸ್ ಇಲಾಖೆಯಿಂದ ಬೆದರಿಸುವ ಕಾರ್ಯ ಮಾಡುತ್ತಾ ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಕೀಲಿ ಕೈ ತರಹ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹರಿಹಾಯ್ದರು.ಸಿಂದಗಿಯ ಜ್ಯೋತಿ ನಗರದ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಂಡಲ ಕಾರ್ಯಕಾರಣಿ ಸಭೆ ಹಾಗೂ ಬಿಎಲ್ಎ-೨ ಸದಸ್ಯರ ಕಾರ್ಯಗಾರವನ್ನು ಮಾಜಿ ಶಾಸಕ ರಮೇಶ ಭೂಸನೂರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರದಿಂದ ತುಂಬಿದೆ. ಮುಂಬರುವ ದಿನಮಾನಗಳಲ್ಲಿ ಕಾಂಗ್ರೆಸ್ ಪಕ್ಷ ಅವನತಿ ದಾರಿ ಹಿಡಿಯಲಿದೆ. ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಕೇವಲ ಪ್ರಚಾರಕ್ಕೆ ಮಾತ್ರ ಸಿಮೀತವಾಗಿದೆ ಎಂದು ಆರೋಪಿಸಿದರು.ಈ ವೇಳೆ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ…
ಮುಂದಿನ ವರ್ಷವೂ ಬಜೆಟ್ ಮಂಡನೆ | ಸಿಎಲ್ಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸುಳಿವು ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯನ್ನು ಬಳಸಿಕೊಂಡು ತಾವು ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಸಂದೇಶ ರವಾನಿಸಿದ್ದಾರೆ.2027-28ರ ಆರ್ಥಿಕ ವರ್ಷದ 18ನೇ ಬಜೆಟ್ ಮಂಡಿಸುವುದಾಗಿ ಹೇಳಿಕೊಂಡರು.ನನ್ನ ಮುಂದಿನ ಬಜೆಟ್ನಲ್ಲಿ, ಪ್ರತಿಯೊಬ್ಬ ಸಚಿವರು ತಮ್ಮ ಇಲಾಖೆಗಳ ಬೇಡಿಕೆಗಳ ಕುರಿತು ಮಾತನಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾಗಿ ಶಾಸಕರೊಬ್ಬರು ತಿಳಿಸಿದ್ದಾರೆ.ಮಳವಳ್ಳಿ ಶಾಸಕ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರು ಎಸ್ಸಿಗಳಿಗೆ ಆಂತರಿಕ ಕೋಟಾ ಜಾರಿಗೆ ತರುವ ನಿರ್ಧಾರದಲ್ಲಿನ ವಿಳಂಬದ ವಿಷಯವನ್ನು ಎತ್ತಿದರು. ಏಕೆಂದರೆ ಇದು ಪಕ್ಷದ ಭವಿಷ್ಯಕ್ಕೆ ಹಾನಿ ಮಾಡುತ್ತದೆ. ಮಾರ್ಚ್ 27 ರಂದು ನಿರ್ಧಾರ ತೆಗೆದುಕೊಳ್ಳಲು ಕರೆಯಲಾದ ವಿಶೇಷ ಸಚಿವ ಸಂಪುಟ ಸಭೆಯ ಮೊದಲು ಎಸ್ಸಿ ಸಮುದಾಯಗಳಿಂದ ಬಂದ ಎಲ್ಲಾ ಶಾಸಕರ ಸಭೆಯನ್ನು ಕರೆಯುವಂತೆ ಸೂಚಿಸಿದರು.ಹಲವು ಶಾಸಕರು ಹೆಚ್ಚಿನ ಅನುದಾನಗಳನ್ನು ಕೋರಿದರು, ಸಾಕಷ್ಟು ಆದಾಯ ಬಂದರೆ ಪೂರಕ ಬಜೆಟ್ನಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಗೃಹಬಳಕೆ ಎಲ್ಪಿಜಿ (ಐPಉ) ಗ್ಯಾಸ್ ಸರಬರಾಜು ಸಮರ್ಪಕವಾಗಿ ನಡೆಯುತ್ತಿದೆ. ಗೃಹ ಬಳಕೆ ಸಿಲಿಂಡರನ್ನು ೨೫ ದಿನಗಳ ಬಳಿಕವೇ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಹಾಗಾಗಿ ಗ್ರಾಹಕರು ಅಡುಗೆ ಅನಿಲವನ್ನು ಮಿತಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ ಅವರು ಹೇಳಿದರು.ಸಮರ್ಪಕ ಪೂರೈಕೆಗಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಲ್ಪಿಜಿ ವಿತರಕರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದ್ದು, ಗೃಹಬಳಕೆ ಗ್ಯಾಸ್ ಸಿಲಿಂಡರ್ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್ಪಿಜಿ ವಿತರಕರು ಗ್ರಾಹಕರಿಗೆ ಮನೆಬಾಗಿಲಿಗೆ ಸರಬರಾಜು ಮಾಡಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಎಲ್ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಹಾಗಾಗಿ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ, ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ಗ್ಯಾಸ್ ಸಿಲಿಂಡರ್ ಪಡೆಯಬೇಕು. ಎಲ್ಪಿಜಿ ವಿತರಣೆಯಲ್ಲಿ ಏನಾದರೂ ಸಾರ್ವಜನಿಕ ಕುಂದುಕೊರತೆಗಳು ಕಂಡು ಬಂದಲ್ಲಿ,೭೦೨೨೦೨೬೫೬೯ ಅಥವಾ ೯೪೪೯೫೧೭೪೧೭ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.ಯಾವುದೇ ಅನಧಿಕೃತ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಿಡ್ನಿ ದಾನ ಮಾಡುವುದರಿಂದ ರೋಗಿಗಳಿಗೆ ಪುನರ್ಜನ್ಮ ನೀಡಬಹುದು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅರುಣ ಚಂ. ಇನಾಮದಾರ ಹೇಳಿದ್ದಾರೆ.ಗುರುವಾರ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ನಡೆದ ವಿಶ್ವ ಕಿಡ್ನಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಕಿಡ್ನಿ ದಾನ ಮಾಡಿರುವ ತಾಯಂದಿರು ಅವರಿಗೆ ಎರಡನೇ ಬಾರಿಗೆ ಜನ್ಮ ನೀಡಿದ್ದಾರೆ. ಕಿಡ್ನಿ ದಾನ ಮಾಡುವವರಲ್ಲಿ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಿದ ಅವರು ತಾಯಂದಿರ ಈ ತ್ಯಾಗ ಮತ್ತು ಸಮರ್ಪಣೆ ಮನೋಬಾವ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು. ಅಲ್ಲದೇ, ಮೂತ್ರಪಿಂಡ ಕಾಯಿಲೆ ತಡೆಗಟ್ಟಲು ಅನುಸರಿಸೇಬೇಕಾದ ಜೀವನಶೈಲಿ ಮತ್ತು ಕೈಗೊಳ್ಳಬೇಕಿರುವ ಮುನ್ನೇಚರಿಕೆ ಕ್ರಮಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.ಯೂರಾಲಜಿ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ ಪ್ರಾಸ್ತವಿಕವಾಗಿ ಮಾತನಾಡಿ, ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈವರೆಗೆ ನಡೆಸಲಾಗಿರುವ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳ ಕುರಿತು ವಿವರಿಸಿದರು. ಅಲ್ಲದೇ, ಡಯಾಲಯಿಸಿಸ್ ಪ್ರಯೋಜನಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದೆ ಎಂದು ರಾಷ್ಟ್ರೀಯ ಉಜ್ವಲಾ ಸಂಸ್ಥೆಯ ಮುಖ್ಯಸ್ಥೆ ಸುನಂದಾ ತೊಳಬಂದಿ ಹೇಳಿದರು. ನಗರದ ಕೃಷ್ಣ-ವಾದಿರಾಜ ಮಠದಲ್ಲಿ ಅಖಿಲ ಭಾರತ ಮಧ್ವ ಮಹಾ ಮಂಡಳ ಸಹಕಾರದೊಂದಿಗೆ ಹಮ್ಮಿಕೊಂಡ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂದು ಹೆಮ್ಮೆಯಿಂದ ಹೇಳುವ ಕಾಲ ಇದು. ದಶ ದಿಕ್ಕುಗಳಲ್ಲಿಯೂ ಮಹಿಳೆಯರ ಸಾಧನೆ ಕುರಿತು ಚರ್ಚೆ ನಡೆಯುತ್ತಿರುವುದೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ಅವರು ವಿವರಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಸಮೀತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಸುನಂದಾ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಅವುಗಳ ಮೂಲಕ ಪ್ರತಿಭೆಗಳು ಹೊರಬರಬೇಕೆಂದು ಕರೆ ನೀಡಿದರು.ಮಹಿಳೆಯರು ಸ್ವಯಂ ರಕ್ಷಣೆಗೆ ಕರಾಟೆಯಂತಹ ಸಾಧನೆಗಳನ್ನು ಅರಿಯಬೇಕೆಂದರು.ಚಿತ್ತಾ ಗೋಟೇಕರ ಮಾತನಾಡಿ ಮಹಿಳೆಯರು ಸಮಾಜದಲ್ಲಿ ತಲೆ ಎತ್ತಿ ನಡೆಯಲು ಧೈರ್ಯದಿಂದ ಮುನ್ನಗ್ಗಬೇಕೆಂದು ಕರೆ ನೀಡಿದರು. ಅತಿಥಿಗಳಾಗಿ ರುಕ್ಮಿಣಿ ಗೋಪಾಲ ನಾಯಕ, ಡಾ. ಜಯಶ್ರೀ ರಾಮರಾವ…
ಚಡಚಣದಲ್ಲಿ ಹಿಂದು ಸಮ್ಮೇಳನ | ಬೃಹತ್ ಶೋಭಾ ಯಾತ್ರೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಹಿಂದುತ್ವ ಎನ್ನುವುದು ಒಂದು ಸನಾತನ ಆಚರಣೆ. ಇದು ಎಲ್ಲ ಜಾತಿ ಮತಗಳನ್ನು ಒಳಗೊಂಡ ಒಂದು ರಾಷ್ಟ್ರೀಯತೆಯ ಸಂಕೇತ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತೀಯ ಕಾರ್ಯ ಕಾರಣಿ ಸದಸ್ಯ ರವೀಂದ್ರಜೀ ಹೇಳಿದರು.ಮಂಗಳವಾರ ಪಟ್ಟಣದಲ್ಲಿ ಆಯೋಜಿಸಿದ್ದ ಹಿಂದು ಸಮ್ಮೇಳನದಲ್ಲಿ ಅವರು ಮಾತನಾಡಿದರು.ಹಿಂದುತ್ವ ಎನ್ನುವುದು ಭಾರತೀಯತೆ, ದೇಶ ಭಕ್ತಿ. ಇದು ಯಾವುದೇ ಜಾತ ಮತವಲ್ಲ, ದೇಶದಲ್ಲಿನ ಎಲ್ಲ ಮುಸ್ಲಿಮರು ಮೂಲತಃ ಹಿಂದುಗಳೆ, ಅವರೆಲ್ಲ ಮತಾಂತರಗೊಂಡವರು. ಆರ್.ಎಸ್.ಎಸ್ ಕೆಲಸ ಮಾಡುವುದು ಹಿಂದುತ್ವಕ್ಕಾಗಿ, ಹಿಂದು ರಾಷ್ಟ್ರ ನಿರ್ಮಾಣದ ಉದ್ದೇಶ ಹೊಂದಿದೆ, ಈ ಸಂಘಟನೆ ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ಆರ್.ಎಸ್.ಎಸ್ ಒಂದು ಅಲಿಖಿತ ಸಂಘಟನೆ. ಈ ಸಂಘಟನೆ ಎಲ್ಲಿಯೂ ನೋಂದಾವಣೆಯಾಗಿಲ್ಲ. ನಾವುಗಳು ನಮ್ಮ ನಮ್ಮಲ್ಲಿಯ ಪಂಥಗಳನ್ನು ಬಿಟ್ಟು ನಾವೆಲ್ಲ ಹಿಂದೂ ಒಂದೇ ಎಂಬ ಧ್ಯೇಯದಿಂದ ನಡೆದಾಗ ಮಾತ್ರ ಹಿಂದೂ ರಾಷ್ಟ್ರ ಬಲಿಷ್ಠವಾಗಲು ಸಾಧ್ಯ ಎಂದರು.ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಯ ಅಭಿನವ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿದರೆ ಶಿಕ್ಷಣ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದು ಕಾಂಗ್ರೆಸ್ಸಿನ ಯುವ ಮುಖಂಡ ತಾನಾಜಿ ನಾಗರಾಳ ಹೇಳಿದರು.ತಾಲೂಕಿನ ಮಟ್ಟಿಹಾಳ ಕ್ರಾಸ್ನಲ್ಲಿ ನಡೆದ ಶ್ರೀ ಸದ್ಗುರು ಸದಾನಂದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ನಿರ್ಮಿಸಿ ನಡೆಸುವುದು ಸುಲಭದ ಕೆಲಸವಲ್ಲ. ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಆಡಳಿತ ಮಂಡಳಿ ಕೊಲ್ಹಾರ ಮತ್ತು ಬಸವನ ಬಾಗೇವಾಡಿ ನಡುವಿನ ಪ್ರದೇಶದಲ್ಲಿ ಸುಂದರ ಸಂಸ್ಥೆಯನ್ನು ನಿರ್ಮಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿರುವುದು ಸಂಸ್ಥೆಯ ಸಾಧನೆಯಾಗಿದೆ ಎಂದು ಹೇಳಿದರು.ಶಿಕ್ಷಕ ಜಿ.ಐ ಗೊಡ್ಯಾಳ ಮಾತನಾಡಿ, ಶಿಕ್ಷಕ, ಬಾಲಕ ಹಾಗೂ ಪಾಲಕರು ಶಿಕ್ಷಣದ ಮೂರು ಪ್ರಮುಖ ಸ್ತಂಭಗಳು. ಈ ವ್ಯವಸ್ಥೆಯಲ್ಲಿ ಮಕ್ಕಳು ಸಮಗ್ರವಾಗಿ ಬೆಳೆಯುತ್ತಾರೆ.…
40 ನೇ ಪುಣ್ಯಸ್ಮರಣೆಯ ಸಮಾರೋಪ | 7 ದಿನಗಳ ಜಾತ್ರೆ ಸಂಪನ್ನ ಉದಯರಶ್ಮಿ ದಿನಪತ್ರಿಕೆ ಚಡಚಣ: ಜೇವೂರಿನ ಹಠಯೋಗಿ ಪವಾಡ ಪುರುಷ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿಯ 40ನೇ ಪುಣ್ಯರಾಧನೆ ಪ್ರಯುಕ್ತ ಕೊನೆಯ ದಿನವಾದ ಬುಧವಾರ ರೇವಣಸಿದ್ಧೇಶ್ವರ ಸ್ವಾಮೀಜಿಯವರ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಮತ್ತು ನಂದಿಕೋಲ ಉತ್ಸವದೊಂದಿಗೆ ಆನೆ ಅಂಬಾರಿಯ ಮೇಲೆ ರೇವಣಸಿದ್ಧೇಶ್ವರ ಸ್ವಾಮೀಜಿಯವರ ಭಾವಚಿತ್ರ ಇಟ್ಟು ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.ಜೇವೂರಿನ ಹಠಯೋಗಿ ಶ್ರೀ ರೇವಣಸಿದ್ಧೇಶ್ವರರು ಬೇಡಿದ್ದನ್ನು ಕರುಣಿಸುವ ಕೃಪಾಮಯಿ ಪವಾಡ ಪುರುಷರಾಗಿದ್ದಾರೆ ಎಂದು ತಡವಲಗಾ ಅಭಿನವ ರಾಚೋಟೇಶ್ವರ ಶ್ರೀಗಳು ಹೇಳಿದರು.ಹಠಯೋಗಿ ಪವಾಡ ಪುರುಷ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ ಅವರ 40ನೇ ಪುಣ್ಯರಾಧನೆ ಪ್ರಯುಕ್ತ ಬುಧವಾರ ಜರುಗಿದ ಧರ್ಮ ಸಭೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಗದಗದ ಅಸುಂಡಿಯ ಮಾತೊಶ್ರೀ ಮೈತ್ರಾ ದೇವಿ ಅವರು ಮಾತನಾಡಿ ಮಹಾನ್ ತ್ಯಾಗಮಯಿ ಯೋಗಿಗಳ ಪುಣ್ಯರಾಧನೆಯ ಉತ್ಸವಗಳು ಭಕ್ತಿ ಭಾವದ ಸಂಕೇತವಾಗಿವೆ, ಈ ಮಠದಲ್ಲಿ ಪ್ರತಿ ವರ್ಷ ನಡೆಯುವ ಸಂತ ಮಹಾಂತರ ಅನುಭವಿಗಳಿಂದ ನಡೆಯುವ ಪ್ರವಚನಗಳು…
