ಚಡಚಣದಲ್ಲಿ ಹಿಂದು ಸಮ್ಮೇಳನ | ಬೃಹತ್ ಶೋಭಾ ಯಾತ್ರೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಹಿಂದುತ್ವ ಎನ್ನುವುದು ಒಂದು ಸನಾತನ ಆಚರಣೆ. ಇದು ಎಲ್ಲ ಜಾತಿ ಮತಗಳನ್ನು ಒಳಗೊಂಡ ಒಂದು ರಾಷ್ಟ್ರೀಯತೆಯ ಸಂಕೇತ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತೀಯ ಕಾರ್ಯ ಕಾರಣಿ ಸದಸ್ಯ ರವೀಂದ್ರಜೀ ಹೇಳಿದರು.
ಮಂಗಳವಾರ ಪಟ್ಟಣದಲ್ಲಿ ಆಯೋಜಿಸಿದ್ದ ಹಿಂದು ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಹಿಂದುತ್ವ ಎನ್ನುವುದು ಭಾರತೀಯತೆ, ದೇಶ ಭಕ್ತಿ. ಇದು ಯಾವುದೇ ಜಾತ ಮತವಲ್ಲ, ದೇಶದಲ್ಲಿನ ಎಲ್ಲ ಮುಸ್ಲಿಮರು ಮೂಲತಃ ಹಿಂದುಗಳೆ, ಅವರೆಲ್ಲ ಮತಾಂತರಗೊಂಡವರು. ಆರ್.ಎಸ್.ಎಸ್ ಕೆಲಸ ಮಾಡುವುದು ಹಿಂದುತ್ವಕ್ಕಾಗಿ, ಹಿಂದು ರಾಷ್ಟ್ರ ನಿರ್ಮಾಣದ ಉದ್ದೇಶ ಹೊಂದಿದೆ, ಈ ಸಂಘಟನೆ ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ಆರ್.ಎಸ್.ಎಸ್ ಒಂದು ಅಲಿಖಿತ ಸಂಘಟನೆ. ಈ ಸಂಘಟನೆ ಎಲ್ಲಿಯೂ ನೋಂದಾವಣೆಯಾಗಿಲ್ಲ. ನಾವುಗಳು ನಮ್ಮ ನಮ್ಮಲ್ಲಿಯ ಪಂಥಗಳನ್ನು ಬಿಟ್ಟು ನಾವೆಲ್ಲ ಹಿಂದೂ ಒಂದೇ ಎಂಬ ಧ್ಯೇಯದಿಂದ ನಡೆದಾಗ ಮಾತ್ರ ಹಿಂದೂ ರಾಷ್ಟ್ರ ಬಲಿಷ್ಠವಾಗಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಯ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ಮೊದಲು ನಾವೆಲ್ಲರೂ ನಮ್ಮಲ್ಲಿಯ ಬೇಧ ಭಾವವನ್ನು ಮರೆತು ಒಗ್ಗೂಡಿಕೊಂಡಿದಾಗ ಮಾತ್ರ ಹಿಂದುತ್ವ ಉಳಯಲು ಸಾಧ್ಯ. ನಾವೆಲ್ಲ ಮಠಾಧೀಶರು ಎಲ್ಲರೂ ಹಿಂದು ಎಂದು ಭಾವಿಸ, ದೇಶದ ಪ್ರಜೆಗಳಲ್ಲಿ ಹಿಂದುತ್ವದ ಅರಿವನ್ನು ಮೂಡಿಸಬೇಕು. ಯಾವಾಗ ಹಿಂದುಗಳು ಮೈಮರೆತು ಮಲಗಿದಾಗ ಬೇರೆ ಬೇರೆಯವರು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ನಾವು ಹಿಂದುಗಳು ಎಲ್ಲ ಸಮಯದಲ್ಲೂ ಎಚ್ಚರಿಕೆಯಿಂದ ಇದ್ದಾಗ ಮಾತ್ರ ನಮ್ಮ ದೇಶ ಭದ್ರವಾಗಿ, ಹಿಂದೂಗಳು ಸ್ವತಂತ್ರರಾಗಿರುತ್ತಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ವಿರಕ್ತ ಮಠದ ಷಡಕ್ಷರ ಸ್ವಾಮೀಜಿ, ಹಾವಿನಾಳದ ವಿಜಯ ಮಹಾಂತೇಶ ಸ್ವಾಮೀಜಿ, ಓಂ ಶಾಂತಿ ಕೇಂದ್ರದ ಶ್ರೀದೇವಿ ಅಕ್ಕನವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಂದು ಸಮ್ಮೇಳನ ಸಂಚಲನಾ ಸಮಿತಿ ಅಧ್ಯಕ್ಷ ಶಾಂತುಗೌಡ ಬಿರಾದಾರ ಮಾತನಾಡಿದರು.
ಚೇತನ ನಿರಾಳೆ ನಿರೂಪಿಸಿದರು. ರಾಜುಗೌಡ ಝಳಕಿ ಸ್ವಾಗತಿಸಿದರು.

ಬೃಹತ್ ಶೋಭಾ ಯಾತ್ರೆ
ಸಮ್ಮೇಳನಕ್ಕೂ ಮೊದಲು ಪಟ್ಟಣದ ವಿದ್ಯಾನಗರದ ಹನುಮಾನ ಮಂದಿರದಿಂದ ಬೃಹತ್ ಶೋಭಾ ಯಾತ್ರೆ ಜರುಗಿತು.
ಈ ಯಾತ್ರೆಯಲ್ಲಿ ಗೊಂಬೆ ಕುಣಿತ, ವಿವಿಧ ವಾದ್ಯ ಮೇಳಗಳು ಹಾಗೂ ಹಲವಾರು ರಾಷ್ಟ್ರೀಯ ನಾಯಕರ ಭಾವಚಿತ್ರಗಳ ಮೆರವಣಿಗೆ ಸುಮಾರು ಕಿ.ಮೀ. ನಡೆಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಚಿದಾನಂದ ಚಲವಾದಿ, ಭೀಮಾ ಶಂಕರ ಬಿರಾದಾರ, ಸಂಜು ಐಹೊಳ್ಳಿ, ಕಾಂತುಗೌಡ ಪಾಟೀಲ, ರಾಮ ಅವಟಿ, ಚಂದು ನಿರಾಳೆ. ಪಟ್ಟಣ ಪಂಚಾಯಿತಿ ಸದಸ್ಯರು. ಗ್ರಾಮಸ್ಥರು ಪಾಲ್ಗೊಂಡಿದ್ದರು.

