Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ದೇಶವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಉನ್ನತೀಕರಿಸಲು ಭೂಮಿಕೆಯಾಗಿ ಮೂಡಿಬಂದಿರುವ ಕೃಷಿ ವಲಯದ ಆಧಾರ ಸ್ತಂಭದಂತಿರುವ ರೈತರು ತಮಗೆ ಒದಗಿ ಬಂದಿರುವ ಸಂಕಷ್ಟಗಳ ನಿವಾರಣೆಗೆ ನಮ್ಮ ಅಭಿವೃದ್ಧಿಗಾಗಿ ನಾವು ಎಂಬ ಕ್ರಿಯಾತ್ಮಕ ಹೆಜ್ಜೆ ಇಡಲು ರೈತರು ಮುಂದಾಗಬೇಕು ಎಂದು ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಹೇಳಿದರು.ತಾಲೂಕಿನ ಬಸರಕೋಡ ಗ್ರಾಮದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಏರ್ಪಡಿಸಲಾಗಿದ್ದ ಪ್ರಸಾದಿ ಆಹಾರ ಭದ್ರತಾ ಮಹಿಳಾ ಸ್ವ ಸಹಾಯ ಸಂಘದ ರಚನೆ, ಗುಂಪು ಕೌಶಲ್ಯ ತರಬೇತಿ ಹಾಗೂ ಬಲವರ್ಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬೇಕಿರುವ ಸಹಾಯಕ್ಕೆ ಯಾರನ್ನೂ ಎದುರು ನೋಡದೇ ಸ್ವ ಸಾಮರ್ಥ್ಯದ ಮೇಲೆ ಸ್ವಾವಲಂಬಿ ಬದುಕಿಗೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸಿ ರೈತರ ಸ್ವ ಅಭಿವೃದ್ಧಿಗೆ ರೈತ ಅಸಕ್ತ ಗುಂಪುಗಳು ಉತ್ತಮ ಭೂಮಿಕೆಯಾಗಿವೆ ಎಂದರು.ಸಂಪನ್ಮೂಲ ವ್ಯಕ್ತಿ ಎಸ್.ಎನ್.ದೇಸಾಯಿ ಮಾತನಾಡಿದರು.ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಂಗಮೇಶ ಸಜ್ಜನ ಮಾತನಾಡಿದರು.ತಾಂತ್ರಿಕ ಗೋಷ್ಠಿಯಲ್ಲಿ ಗುಂಪು ರಚನೆಯ ಉದ್ದೇಶ, ಕಾರ್ಯ ಯೋಜನೆಗಳು, ದಾಖಲೆಗಳ ನಿರ್ವಹಣೆ,…
ವಿಜಯಪುರ: ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕ ಬೆಂಗಳೂರು ಅವರು ಭಾರತದ ಮೊದಲ ಶಿಕ್ಷಕಿ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನದ ಪ್ರಯುಕ್ತ ಶಿಕ್ಷಣದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಕೊಡುವ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯಪ್ರಶಸ್ತಿಗೆ ವಿಜಯಪುರ ಜಿಲ್ಲೆಯಿಂದ ಶ್ರೀಮತಿ ಶರಣಮ್ಮ ಪಾಗಿ ಅವರು ಆಯ್ಕೆಯಾಗಿದ್ದಾರೆ,ಬುಧವಾರ ೩ನೇ ತಾರಿಖಿನಂದು ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನಡೆಯುವ ೧೯೩ನೇ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನದ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಕೊಟ್ಟು ಗೌರವಿಸಲಾಗುವುದು ಎಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ ಹಾಗೂ ಜಿಲ್ಲಾ ಸಂಚಾಲಕ ಅಕ್ಷಯ ಅಜಮನಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಆಲಮಟ್ಟಿ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಅಂತರ್ ಜಿಲ್ಲಾ ಗಾಂಜಾ ಮಾರಾಟಗಾರರು ಸೇರಿ ಮೂವರನ್ನು ನಿಡಗುಂದಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.ಧಾರವಾಡ ಜಿಲ್ಲೆಯ ವೆಂಕಟಪುರ ಗ್ರಾಮದ ಹಜರತಅಲಿ ಸಿಕಂದರ್ ಮುಲ್ಲಾ, ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಗಂಬ್ಯಾಪುರ ಗ್ರಾಮದ ಬಾಬಾಜಾನ್ ಅಲ್ಲಾಭಕ್ಷ ಕಿಲ್ಲೆದಾರ್ ಹಾಗೂ ನಿಡಗುಂದಿ ತಾಲ್ಲೂಕಿನ ಕಾಶೀನಕುಂಟಿ ಗ್ರಾಮದ ಉಹಲಮಹ್ಮದ್ ನಬೀಸಾಬ ಚಪ್ಪರಬಂದ್ ಅವರನ್ನು ಬಂಧಿಸಲಾಗಿದೆ.ನಿಖರ ಮಾಹಿತಿಯ ಮೇರೆಗೆ ಇಲ್ಲಿನ ಬೇನಾಳ ಬ್ರಿಜ್ ಹತ್ತಿರದ ಜಾಕವೆಲ್ ಬಳಿ ದಾಳಿ ನಡೆಸಿದ ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾಡಗಿ ಹಾಗೂ ಪಿಎಸ್ ಐ ಶಿವರಾಜ ಧರಿಗೋಣ ಜಂಟಿಯಾಗಿ ದಾಳಿ ನಡೆಸಿ ಆರೋಪಿತರನ್ನು ಬಂಧಿಸಿದ್ದಾರೆ.ಅವರಿಂದ ೮೧೯೦ ರೂ ಮೌಲ್ಯದ ೮೧೯ ಗ್ರಾಂ ಗಾಂಜಾ, ಬೈಕ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಲಮಟ್ಟಿಯ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಆಲಮಟ್ಟಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ. ಎಲ್ಲಾ ೨೮ ಕ್ಷೇತ್ರದಲ್ಲೂ ಗೆಲುವಿನ ಯಶಸ್ವಿಗಾಗಿ ಈಗಿನಿಂದಲೇ ತಮ್ಮ ಬಿಜೆಪಿ ಪಕ್ಷ ಅಗತ್ಯ ಕಾರ್ಯತಂತ್ರ ರೂಪಿಸುತ್ತಿದ್ದು ಆ ಗುರಿ ತಲುಪುವ ಆಚಲ ವಿಶ್ವಾಸ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನುಡಿದರು.ಆಲಮಟ್ಟಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉತ್ತರಕರ್ನಾಟಕ ಅಭಿವೃದ್ಧಿಗೆ ನಮ್ಮ ತಂದೆ ಯಡಿಯೂರಪ್ಪ ಹಾಗೂ ಬಿಜೆಪಿಯ ಕೊಡುಗೆ ಅಪಾರ ಎಂದರು.ಕಾಂಗ್ರೆಸ್ ಸರ್ಕಾರ ಕೇವಲ ಶಂಕುಸ್ಥಾಪನೆ ಮಾಡುತ್ತದೆ, ಆದರೆ ಆ ಕೆಲಸ ಪೂರ್ಣಗೊಳಿಸುವುದಿಲ್ಲ, ಆದರೆ ಬಿಜೆಪಿ ಶಂಕುಸ್ಥಾಪನೆ ಜತೆಗೆ ಕಾಮಗಾರಿ ಪೂರ್ಣಗೊಳಿಸಿ ಅದರ ಉದ್ಘಾಟನೆಯನ್ನು ಮಾಡುತ್ತದೆ, ಉತ್ತರಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ, ಬಸವಕಲ್ಯಾಣ ಅಭಿವೃದ್ಧಿ, ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಸೇರಿದಂತೆ ಪ್ರತಿಯೊಂದಕ್ಕೂ ಯಡಿಯೂರಪ್ಪನವರು ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿ ಮಾಡಿದ್ದಾರೆ ಎಂದರು.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ೨೮ ಕ್ಷೇತ್ರಗಳಲ್ಲಿ ಗೆಲ್ಲಲು ಅಗತ್ಯ ಕಾರ್ಯತಂತ್ರ…
ವಿಜಯಪುರ: ತಹಶೀಲ್ದಾರ್ ಗ್ರೇಡ್-೨ ಹುದ್ದೆಗಳನ್ನು ರದ್ದುಪಡಿಸಬಾರದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಂದಾಯ ಇಲಾಖೆ ನೌಕರರು ಸೋಮವಾರ ನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ರಾಜಾಪುರ, ಪ್ರಧಾನ ಕಾರ್ಯದರ್ಶಿ ಜಿ.ಪಿ.ದೋಬಳೆ, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಗಂಗಾಧರ ಜೂಲಗುಡ್ಡ, ದ್ವಿ.ದ.ಸ ಸಂಘದ ಅಧ್ಯಕ್ಷ ಪ್ರಕಾಶ ಮಸೂತಿ, ವಿಲಾಸ ಪವಾರ ಶಿರಸ್ತೇದಾರರರಾದ ಎಸ್.ಎಸ್.ತೇರದಾಳ, ದಯಾನಂದ ಕಟ್ಟಿಮನಿ ಮಹಿಪತಿ ದೇಸಾಯಿ ಸೇರಿದಂತೆ ಕಂದಾಯ ಇಲಾಖೆ ನೌಕರ ಸಿಬ್ಬಂದಿ ಹಾಜರಿದ್ದರು.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಎಂದರೇನು??!!ಡಿಸೆಂಬರ್ ನ ಕೊನೆಯ ದಿನವೇ,,,? ಜನವರಿಯ ಮೊದಲ ದಿನವೇ? ಹಳೆಯ ಕ್ಯಾಲೆಂಡರ್ ತನ್ನ ಅಸ್ಮಿತೆಯನ್ನು ಕಳೆದುಕೊಂಡು ರದ್ದಿ ಪುಸ್ತಕಗಳಲ್ಲಿ ಜಾಗೆ ಕಂಡುಕೊಂಡಿದ್ದೇ?? ಹೊಸ ಕ್ಯಾಲೆಂಡರ್ ನಡು ಮನೆಯ ಗೋಡೆಯನ್ನು ಅಲಂಕರಿಸಿದ್ದೇ?? ಅಥವಾ ಋತು ಬದಲಾವಣೆಯಾಗಿ ನಿಸರ್ಗ ಸಹಜವಾಗಿ ಮಾಮರದಲ್ಲಿ ಎಲೆ ಚಿಗುರಿ, ಕೋಗಿಲೆಗಳು ಕೂಗಿ, ವಸಂತನ ಆಗಮನವನ್ನು ಸಾರುವ ದಿನವೇ? ನಿಜವಾದ ಅರ್ಥದಲ್ಲಿ ಭಾರತೀಯರಾದ ನಮಗೆ ಋತುಮಾನಗಳ ಚರ್ಯೆಯ ಮೇಲೆ ಬದಲಾಗುವ ಮಾಸಗಳಲ್ಲಿ ವಸಂತ ಮಾಸ ಪ್ರಾರಂಭವಾಗುವ ಯುಗಾದಿಯ ದಿನವೇ ನಮ್ಮ ನಿಜವಾದ ಹೊಸ ವರುಷ. ಆದರೆ ಜಾಗತೀಕರಣದ ಈ ಪ್ರವಾಹದಲ್ಲಿ ನಾವು ಕೂಡ ತೇಲುತ್ತಿದ್ದೇವೆ ಆದ್ದರಿಂದ ಇಡೀ ವಿಶ್ವದಲ್ಲಿ ಆಚರಿಸುವ ಡಿಸೆಂಬರ್ 31ರ ರಾತ್ರಿ 12 ಗಂಟೆಗೆ ಹಳೆ ವರ್ಷವನ್ನು ಹಿಂದಟ್ಟಿ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. . ನಿನ್ನೆ ಎಂಬುದು ಕಳೆದು ಹೋಗಿದೆ. ನಾಳೆಯನ್ನು ಕಂಡವರಾರು?? ಇಂದಿನ ದಿನ ನಮ್ಮ ಕಣ್ಣ ಮುಂದೆ…
Udayarashmi kannada daily newspaper
ವಿಜಯಪುರ: ಶ್ರೇಷ್ಠ ಸಂತ ಸಿದ್ದೇಶ್ವರ ಸ್ವಾಮೀಜಿಯವರ ಜೀವನವೇ ಒಂದು ಮಾದರಿಯಾಗಿದ್ದು, ನುಡಿದಂತೆ ನಡೆದ ಮಹಾನುಭವಿಯಾಗಿದ್ದಾರೆ. ಇಂತಹ ಮಹಾನ್ ಚೇತನರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಪಾವನಗೊಳಿಸಿಕೊಳ್ಳೊಣ ಎಂದು ಶ್ರೇಷ್ಠ ವಾಗ್ಮಿ, ಉಪನ್ಯಾಸಕ, ಸಾಹಿತಿ ಮಂಜುನಾಥ ಜುನಗೊಂಡ ಹೇಳಿದರು.ಶನಿವಾರ ನಗರದ ಜಲನಗರ ಸರಕಾರಿ ಪ್ರೌಡಶಾಲಾ ಆವರಣದಲ್ಲಿ ಅಮ್ಮ ಫೌಂಡೇಶನ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ಅವರು, ಸಿದ್ದೇಶ್ವರ ಶ್ರೀಗಳು ಶ್ರೇಷ್ಠ ತತ್ವಜ್ಞಾನಿಯಾಗಿದ್ದು, ಆಡಂಬರ ಜೀವನಕ್ಕೆ ತಿಲಾಂಜಲಿ ನೀಡಿದ್ದರು. ಎಲ್ಲವೂ ಬೇಡ ಎನ್ನುತ್ತಲೇ ಅತ್ಯಂತ ಸಾದಾ ಜೀವನ ಸಾಗಿಸಿ ಮಾದರಿಯಾಗಿದ್ದಾರೆ. ಅವರ ಪ್ರತಿಯೊಂದು ಆಚಾರ ವಿಚಾರ, ನಡೆ ನುಡಿ, ತತ್ವಗಳ ಮಾನವಕುಲಕ್ಕೆ ಮಾದರಿಯಾಗಿವೆ. ಪ್ರಮುಖವಾಗಿ ಹೇಳಿದ, ನಿಸರ್ಗಪ್ರೀತಿ, ತತ್ವಜ್ಞಾನ, ರೈತ, ಸೈನಿಕ, ಶಿಕ್ಷಕ ಇವರನ್ನು ಗೌರವಿಸಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವೂ ನೀಡಬೇಕು. ಭಾವಿ ಭವಿಷ್ಯತ್ತು ಸುಂದರವಾಗಿರಲು ಶ್ರೀಗಳ ವಾಣಿ ಅಳವಡಿಸಿಕೊಳ್ಳಬೇಕು. ಶ್ರೀಗಳಿಗೆ ಗುರುನಮನ ಸಲ್ಲಿಸುವುದರ ಜೊತೆಗೆ ನುಡಿದಂತೆ ನಡೆಯೋಣ, ಶ್ರೀಗಳ ವಾಣಿ ಜೀವಂತವಾಗಿರಿಸೋಣ…
*- ಮ.ನಾ.ಉಡುಪ, ಮಂಡ್ಯ ಕುರಿಗಳನ್ನು ಕಾಯಲು ದೊಡ್ಡಿಯ ಬಳಿ ಮಲಗುತ್ತಿದ್ದ ನಾಯಿ ಬಲು ಚುರುಕಾಗಿತ್ತು. ಎಡೆಬಿಡದೆ ಕಾವಲು ಕಾಯುತ್ತಿತ್ತು. ಇದು ತೋಳಲ್ಲಿ ಬಹಳ ಕಷ್ಟಕ್ಕಿಟ್ಟುಕೊಂಡಿತು. ಹೇಗಾದರೂ ಮಾಡಿ ನಾಯಿಯ ಲಕ್ಷವನ್ನು ಬೇರೆಡೆ ಎಳೆದು ತಾನು ದೊಡ್ಡಿಯನ್ನು ಪ್ರವೇಶಿಸಿ ಕೆಲವಾದರೂ ಕುರಿಗಳನ್ನು ಕಬಳಿಸಬೇಕು ಎಂದದರ ಯೋಚನೆಯಾಗಿತ್ತು. ಹೀಗೆ ಯೋಚನೆ ಮಾಡುತ್ತಿದ್ದಂತೆ ತೋಳಕ್ಕೆ ಫಕ್ಕನೆ ನೆನಪಾಯಿತು..’ನಿಜ, ನಾಯಿಗೆ ಎಲುಬು ಚೀಪುವುದೆಂದರೆ ಬಹಳ ಆಸೆ.’ ಅಂತಲೇ ತೋಳ ಪ್ರತಿದಿನ ಎಲ್ಲಿಂದಲಾದರೂ ಒಂದು ಎಲುಬು ಸಂಪಾದಿಸಿ ತಂದು ದೊಡ್ಡಿಯ ಅಕ್ಕಪಕ್ಕದಲ್ಲೆಲ್ಲಾದರೂ ಇಡುತ್ತಿತ್ತು. ನಾಯಿಗೆ ಎಲುಬು ಸಿಕ್ಕಿದರೂಅದು ಯಾರು ತಂದಿಟ್ಟಿದ್ದು ಎಂದು ಗೊತ್ತಾಗಲಿಲ್ಲ.ಒಂದು ದಿನ ತೋಳ ಎಲುಬು ತರುವುದನ್ನೂ, ಅದನ್ನು ತನ್ನ ದೊಡ್ಡಿಯ ಸಮೀಪದಲ್ಲಿ ಇಟ್ಟು ಹೋಗುವುದನ್ನು ನಾಯಿ ನೋಡಿತು. ತೋಳನ ಮೇಲೆ ಅದಕ್ಕೆ ಇದ್ದ ವೈಮನಸ್ಯ ಅಂದಿನಿಂದ ದೂರವಾಯಿತು.ಹೀಗೆ ತೋಳ ಮತ್ತು ನಾಯಿ ಇಬ್ಬರೂ ಸಂಜೆಯ ಹೊತ್ತಿಗೆ ಸೇರಿ ಅದೂ ಇದೂ ಮಾತನಾಡಿಕೊಳ್ಳುತ್ತಿದ್ದುವು. ಒಂದು ದಿನ ತೋಳ ನಾಯಿಗೆ ಕುರಿಯ ಎಲುಬು ತುಂಬ ರುಚಿಕಟ್ಟಾಗಿರುವುದರಿಂದ ಅದನ್ನು ದಿನವೂ…
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಠನೆ | ಬಿಎಸ್ವೈ ಮೇಲಿನ ಆರೋಪಕ್ಕೆ ದಾಖಲೆ ಕೊಡಲಿ | ರಾಜ್ಯಾಧ್ಯಕ್ಷ ಮಾಡಿದವರು ಬಿಎಸ್ವೈ ಅಲ್ಲ ವಿಜಯಪುರ: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಗ್ಗೆ ಯಾರೂ ಯಾವುದೇ ಅನುಕಂಪ ತೋರಿಸುವ ಅಗತ್ಯವಿಲ್ಲ, ಆರೋಪ ಮಾಡಿದವರು ದಾಖಲೆ ಇದ್ರೆ ಸರ್ಕಾರಕ್ಕೆ ಕೊಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.ಮಾಜಿ ಸಿಎಂ ಬಿ ಎಸ್ ವೈ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೌನ ವಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಶನಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ ಅವರು, ಆರೋಪದಲ್ಲಿ ಸತ್ಯಾಂಶ ಇದ್ರೆ ಪ್ರತಿಕ್ರಿಯೆ ಬರ್ತದೆ. ಹುಡುಗಾಟಿಕೆಯ ಹೇಳಿಕೆ ಇದ್ರೆ ಬರೊಲ್ಲ ಎಂದು ಶಾಸಕ ಯತ್ನಾಳ ಆರೋಪಕ್ಕೆ ಟಾಂಗ್ ನೀಡಿದರು.ನಾನು ರಾಜ್ಯಾಧ್ಯಕ್ಷನಾಗಿ ಮೊದಲ ಭಾರಿಗೆ ಇಲ್ಲಿಗೆ ಭೇಟಿ ಕೊಟ್ಟಿದ್ದೇನೆ, ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿಯಡಿಯೂರಪ್ಪನವರು ಮಾಡಿಲ್ಲ, ಪ್ರಧಾನಿ ಮೊದಿ, ಜೆ ಪಿ ನಡ್ಡಾ, ಸೇರಿದಂತೆ ರಾಷ್ಟ್ರೀಯ ನಾಯಕರು…
